AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ದೇವಸ್ಥಾನದಲ್ಲಿ ಭಕ್ತರು ಗಂಟೆ ಬಾರಿಸುವಂತಿಲ್ಲ, ಹಾಡುವಂತಿಲ್ಲ, ಆಡುವಂತಿಲ್ಲ! ಎಲ್ಲವೂ ನಿಷಿದ್ಧ -ಯಾಕೆ ಗೊತ್ತಾ?

Ringing bells and Banke Bihari Temple: ಬೃಂದಾವನದ ಈ ಧಾಮದಲ್ಲಿ ಕೃಷ್ಣನು ಬಾಲಗೋಪಾಲನ ರೂಪದಲ್ಲಿ ನೆಲೆಸಿದ್ದಾನೆ. ಗಂಟೆಯ ನಿನಾದವು ಆತನಿಗೆ ನಿದ್ರಾಘಾತವನ್ನು ಉಂಟುಮಾಡಬಹುದು ಎಂಬ ಭಕ್ತಿ ಪ್ರಧಾನ ಎಚ್ಚರಿಕೆ ಇಲ್ಲಿ ಕೆಲಸ ಮಾಡುತ್ತದೆ. ಇದರಿಂದಾಗಿ ಈ ಧಾಮದಲ್ಲಿ ಗಂಟೆಗಳನ್ನು ಸ್ಥಾಪಿಸಿಲ್ಲ. ಇಲ್ಲಿ ಸ್ವೇಚ್ಛೆಯಿಂದ ಆಟಾಡುವಂತೆಯೂ ಇಲ್ಲ. ಆರತಿಯನ್ನು ಎತ್ತಲು ದೊಡ್ಡ ಧ್ವನಿಯಲ್ಲಿ ಹಾಡುವಂತೆಯೂ ಇಲ್ಲ.

ಈ ದೇವಸ್ಥಾನದಲ್ಲಿ ಭಕ್ತರು ಗಂಟೆ ಬಾರಿಸುವಂತಿಲ್ಲ, ಹಾಡುವಂತಿಲ್ಲ, ಆಡುವಂತಿಲ್ಲ! ಎಲ್ಲವೂ ನಿಷಿದ್ಧ -ಯಾಕೆ ಗೊತ್ತಾ?
ಈ ದೇವಸ್ಥಾನದಲ್ಲಿ ಭಕ್ತರು ಗಂಟೆ ಬಾರಿಸುವಂತಿಲ್ಲ! ಯಾಕೆ ಗೊತ್ತಾ?
ಸಾಧು ಶ್ರೀನಾಥ್​
|

Updated on: Aug 07, 2024 | 6:06 AM

Share

ಬಂಕೆ ಬಿಹಾರಿ ದೇವಾಲಯವು ಅನೇಕ ರಹಸ್ಯಗಳು ಮತ್ತು ಸಂಪ್ರದಾಯ ಆಚರಣೆಗಳಿದ ಕೂಡಿದೆ. ಈ ಪವಿತ್ರ ದೇವಾಲಯದಲ್ಲಿ (ಶ್ರೀ ಬಂಕೆ ಬಿಹಾರಿ ಸ್ವಾಮಿ ದೇವಸ್ಥಾನ) ಭಗವಾನ್ ಕೃಷ್ಣನು ಮಗುವಿನ ರೂಪದಲ್ಲಿ ಇರುತ್ತಾನೆ. ಶ್ರದ್ಧಾ ಭಕ್ತಿಯಿಂದ ಬಾಲಕ ಕೃಷ್ಣನ ಸೇವೆ ಮಾಡಲು ಇಲ್ಲಿಗೆ ಬರುವ ಭಕ್ತರ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ. ಅಲ್ಲದೆ, ಜೀವನವು ಕಲ್ಯಾಣಾರ್ಥ ಚಲಿಸುತ್ತದೆ.

ಮಥುರಾ ವೃಂದಾವನದ ಪುರಾತನ ಬಂಕೆ ಬಿಹಾರಿ ದೇವಾಲಯವು ವಿವಿಧ ರೀತಿಯ ರಹಸ್ಯಗಳಿಂದ ಕೂಡಿದೆ. ದೂರದೂರುಗಳಿಂದ ಭಕ್ತರು ಈ ಧಾಮಕ್ಕೆ ಬಾಲ ದೇವನ ದರ್ಶನ ಪಡೆಯುವ ಆಸೆಯಿಂದ ಬರುತ್ತಾರೆ. ಪುರಾಣ ಮತ್ತು ಧರ್ಮಗ್ರಂಥಗಳ ಪ್ರಕಾರ, ಈ ಧಾಮದಲ್ಲಿ ಭಗವಾನ್ ಕೃಷ್ಣನು ಮಗುವಿನ ರೂಪದಲ್ಲಿ ಇರುತ್ತಾನೆ. ವೃಂದಾವನದಲ್ಲಿ ಶ್ರೀಕೃಷ್ಣನಿಗೆ ಸಮರ್ಪಿತವಾಗಿರುವ ಒಂದಲ್ಲ ಒಂದು ದೇವಾಲಯವಿದೆ. ಅಂತಹ ಪರಿಸ್ಥಿತಿಯಲ್ಲಿ, ಇಂದು ನಾವು ಬಂಕೆ ಬಿಹಾರಿ ದೇವಾಲಯದ ಆಸಕ್ತಿದಾಯಕ ರಹಸ್ಯಗಳ ಬಗ್ಗೆ ಹೇಳುತ್ತೇವೆ, ಅದನ್ನು ತಿಳಿದರೆ ನೀವು ಆಶ್ಚರ್ಯಪಡುತ್ತೀರಿ.

ವಿಶಿಷ್ಟ ಬಂಕೆ ಬಿಹಾರಿ ದೇವಾಲಯದ ಸಂಪ್ರದಾಯಗಳ ಪೈಕಿ ಒಂದೆಂದರೆ ಗಂಟೆಗಳು ಇಲ್ಲದಿರುವುದು. ಆದರೆ ದೇವಾಲಯದ ಒಳಗೆ ನಿರಂತರ ಭಜನೆ-ಕೀರ್ತನೆಗಳು ಕೇಳಿಬರುತ್ತದೆ. ಇದಲ್ಲದೆ, ಈ ಅದ್ಭುತ ಸ್ಥಳದಲ್ಲಿ ಗಟ್ಟಿಯಾದ ಧ್ವನಿಯಲ್ಲಿ ಹಾಡು ಹೇಳಿ ಆರತಿಯನ್ನು ಸಹ ಮಾಡುವಂತಿಲ್ಲ. ಆದರೆ ಗಮನಿಸಿ ಇದಕ್ಕೆ ಸೂಕ್ತ ಕಾರಣವಿದ್ದು, ಅದು ಪ್ರೀತಿ ಮತ್ತು ಭಕ್ತಿ ಭಾವನೆಗಳಿಂದ ಕೂಡಿದೆ.

ಇಲ್ಲೊಂದು ಚಿತ್ರಣ ಊಹಿಸಿಕೊಳ್ಳಿ – ಚಿಕ್ಕ ಮಗು ನಿದ್ದೆ ಮಾಡುತ್ತಿದ್ದಾಗ ನೀವು ಅದರ ಬಳಿ ಹೋಗಿ ಇದ್ದಕ್ಕಿದ್ದಂತೆ ಗಂಟೆ ಬಾರಿಸಲು ಪ್ರಾರಂಭಿಸಿದರೆ ಅಥವಾ ಭಜನೆ, ಕೀರ್ತನೆಗಳು ಹಾಡತೊಡಗಿದರೆ ಮತ್ತು ಆರತಿಯನ್ನು ಎತ್ತಲು ದೊಡ್ಡ ಧ್ವನಿಯಲ್ಲಿ ಹಾಡಲು ಪ್ರಾರಂಭಿಸಿದರೆ ಏನಾಗುತ್ತದೆ? ಹೀಗೆ ಮಾಡಿದರೆ ಮುಂದಿನದು ಏನಾಗುತ್ತದೆ ಎಂಬುದನ್ನು ನೀವು ಊಹಿಸಬಹುದು- ಆ ಮಗು ಅರೆ ನಿದ್ರೆಯಲ್ಲೆದ್ದು ಇಡೀ ಆವರಣವನ್ನು ಅಳುವಿನಿಂದ ತುಂಬಿಸುತ್ತಾನೆ/ತುಂಬಾ ಅಸಮಾಧಾನಗೊಳ್ಳುತ್ತಾನೆ. ವಾಸ್ತವವಾಗಿ, ಬಂಕೆ ಬಿಹಾರಿ ದೇವಸ್ಥಾನದಲ್ಲಿ ಗಂಟೆಗಳು ಇಲ್ಲದಿರುವುದಕ್ಕೆ ಇದು ಮುಖ್ಯ ಕಾರಣವಾಗಿದೆ.

Also Read: Nag Panchami 2024 Story – ನಾಗ ಪಂಚಮಿಯನ್ನು ಏಕೆ ಆಚರಿಸಲಾಗುತ್ತದೆ, ಅದು ಯಾವಾಗ ಪ್ರಾರಂಭವಾಯಿತು, ಅದರ ಕಥೆ ಏನು?

ಈ ಧಾಮದಲ್ಲಿ ಭಗವಾನ್ ಕೃಷ್ಣನು ಬಾಲಗೋಪಾಲನ ರೂಪದಲ್ಲಿ ನೆಲೆಸಿದ್ದಾನೆ ಮತ್ತು ಘಂಟೆಗಳ ಬಾರಿಸುವಿಕೆಯು ಆತನಿಗೆ ನಿದ್ರಾಘಾತವನ್ನು ಉಂಟುಮಾಡಬಹುದು. ಅದು ಆತನನ್ನು ಅಸಮಾಧಾನಗೊಳಿಸಬಹುದು ಎಂಬ ಭಕ್ತಿ ಪ್ರಧಾನ ಎಚ್ಚರಿಕೆ ಇಲ್ಲಿ ಕೆಲಸ ಮಾಡುತ್ತದೆ. ಇದರಿಂದಾಗಿ ಈ ಧಾಮದಲ್ಲಿ ಗಂಟೆಗಳನ್ನು ಸ್ಥಾಪಿಸಲಾಗಿಲ್ಲ, ಅದನ್ನು ಬಾರಿಸುವಂತಿಲ್ಲ. ಈ ದೀರ್ಘಕಾಲದ ಸಂಪ್ರದಾಯವು ಭಕ್ತರ ಹೃದಯದಲ್ಲಿ ದೇವರ ಮೇಲಿನ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ. ಅಷ್ಟೇ ಅಲ್ಲ – ಇಲ್ಲಿ ಇಷ್ಟಾನುಸಾರ ಸ್ವೇಚ್ಛೆಯಿಂದ ಆಟಾಡುವಂತೆಯೂ ಇಲ್ಲ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ) 

Follow Us
20ಕ್ಕೂ ಹೆಚ್ಚು ‘ಕೈ’ ಶಾಸಕರ ದೆಹಲಿ ಟೂರ್ ಸೀಕ್ರೆಟ್ ಬಿಚ್ಚಿಟ್ಟ ಜಯಚಂದ್ರ
20ಕ್ಕೂ ಹೆಚ್ಚು ‘ಕೈ’ ಶಾಸಕರ ದೆಹಲಿ ಟೂರ್ ಸೀಕ್ರೆಟ್ ಬಿಚ್ಚಿಟ್ಟ ಜಯಚಂದ್ರ
'ಅವನ ದೋಸ್ತನೇ ಮನೆಗೆ ನುಗ್ಗಿ ಕೊಂದಿದ್ದು!': ಫೈರೋಜ್ ತಾಯಿ
'ಅವನ ದೋಸ್ತನೇ ಮನೆಗೆ ನುಗ್ಗಿ ಕೊಂದಿದ್ದು!': ಫೈರೋಜ್ ತಾಯಿ
PSL 2026: ಪಿಎಸ್​ಎಲ್​ನಲ್ಲಿ ಹಿಂದೆಂದೂ ಕಂಡರಿಯದ ಗೆಲುವು
PSL 2026: ಪಿಎಸ್​ಎಲ್​ನಲ್ಲಿ ಹಿಂದೆಂದೂ ಕಂಡರಿಯದ ಗೆಲುವು
ಯೂತ್ ಕಾಂಗ್ರೆಸ್​ನ ಫೈರೋಜ್ ಪಠಾಣ್​ ಕೊಲೆ ಬಗ್ಗೆ ಸ್ಫೋಟಕ ಮಾಹಿತಿ ಬಯಲು!
ಯೂತ್ ಕಾಂಗ್ರೆಸ್​ನ ಫೈರೋಜ್ ಪಠಾಣ್​ ಕೊಲೆ ಬಗ್ಗೆ ಸ್ಫೋಟಕ ಮಾಹಿತಿ ಬಯಲು!
ಅನನ್ಯಾಗಾಗಿ ಅದ್ಭುತವಾಗಿ ಹಾಡು ಹೇಳಿದ ಅಂಕಿತಾ ಅಮರ್
ಅನನ್ಯಾಗಾಗಿ ಅದ್ಭುತವಾಗಿ ಹಾಡು ಹೇಳಿದ ಅಂಕಿತಾ ಅಮರ್
ಇಂಜಿನಿಯರ್ ಮನೇಲಿತ್ತು 6 ಕೆಜಿ ಚಿನ್ನ, 5 ಕೆಜಿ ಬೆಳ್ಳಿ, 14 ಕೋಟಿ ಆಸ್ತಿ!
ಇಂಜಿನಿಯರ್ ಮನೇಲಿತ್ತು 6 ಕೆಜಿ ಚಿನ್ನ, 5 ಕೆಜಿ ಬೆಳ್ಳಿ, 14 ಕೋಟಿ ಆಸ್ತಿ!
2nd PUCಯಲ್ಲಿ 6ನೇ ರ‍್ಯಾಂಕ್ ಗಳಿಸಿದ ವಿಕಾಸ್ ಹೇಳಿದ್ದೇನು ನೋಡಿ!
2nd PUCಯಲ್ಲಿ 6ನೇ ರ‍್ಯಾಂಕ್ ಗಳಿಸಿದ ವಿಕಾಸ್ ಹೇಳಿದ್ದೇನು ನೋಡಿ!
25 ವರ್ಷಗಳ ಬಳಿಕ ರೀ-ರಿಲೀಸ್ ಆದ ಕೋಟಿಗೊಬ್ಬ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್
25 ವರ್ಷಗಳ ಬಳಿಕ ರೀ-ರಿಲೀಸ್ ಆದ ಕೋಟಿಗೊಬ್ಬ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್
ಚಂದ್ರನ ಅಂಗಳ ಸುತ್ತಿ ಭೂಮಿಗೆ ಸುರಕ್ಷಿತವಾಗಿ ವಾಪಸಾದ ನಾಸಾ ತಂಡ
ಚಂದ್ರನ ಅಂಗಳ ಸುತ್ತಿ ಭೂಮಿಗೆ ಸುರಕ್ಷಿತವಾಗಿ ವಾಪಸಾದ ನಾಸಾ ತಂಡ
ಪಾಕಿಸ್ತಾನದಲ್ಲಿಂದು ಶಾಂತಿ ಮಾತುಕತೆ: ಇಸ್ಲಾಮಾಬಾದ್ ಕಂಪ್ಲೀಟ್ ಲಾಕ್​ಡೌನ್!
ಪಾಕಿಸ್ತಾನದಲ್ಲಿಂದು ಶಾಂತಿ ಮಾತುಕತೆ: ಇಸ್ಲಾಮಾಬಾದ್ ಕಂಪ್ಲೀಟ್ ಲಾಕ್​ಡೌನ್!