AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಹಣ ನಿರ್ವಹಣೆಯ 5 ವಿಷಯಗಳನ್ನು ತಿಳಿದವರು ಎಂದಿಗೂ ಆರ್ಥಿಕ ಬಿಕ್ಕಟ್ಟು ಎದುರಿಸುವುದಿಲ್ಲ – ಚಾಣಕ್ಯ ನೀತಿ

ಚಾಣಕ್ಯ ನೀತಿ: ಆಚಾರ್ಯ ಚಾಣಕ್ಯರ ಪ್ರಕಾರ ಹಣವನ್ನು ಖರ್ಚು ಮಾಡುವಾಗ ಯೋಚಿಸಬೇಕು. ಯಾರು ಅನಗತ್ಯವಾಗಿ ಹಣವನ್ನು ಖರ್ಚು ಮಾಡುತ್ತಾರೋ ಅವರಲ್ಲಿ ದೀರ್ಘಕಾಲದವರೆಗೆ ಹಣ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ಸಾಧ್ಯವಾದಾಗ ಹಣವನ್ನು ಉಳಿಸಿ.

Chanakya Niti: ಹಣ ನಿರ್ವಹಣೆಯ 5 ವಿಷಯಗಳನ್ನು ತಿಳಿದವರು ಎಂದಿಗೂ ಆರ್ಥಿಕ ಬಿಕ್ಕಟ್ಟು ಎದುರಿಸುವುದಿಲ್ಲ – ಚಾಣಕ್ಯ ನೀತಿ
ಚಾಣಕ್ಯ
TV9 Web
| Edited By: |

Updated on:Jul 31, 2021 | 8:10 AM

Share

ಆಚಾರ್ಯ ಚಾಣಕ್ಯರು ತಮ್ಮ ಅನುಭದ ಮೂಲಕ ಚಾಣಕ್ಯ ನೀತಿಯಲ್ಲಿ ಕೆಲವು ಸಮಹೆಗಳನ್ನು ನೀಡಿದ್ದಾರೆ. ಅವರು ಮಾತುಗಳು ಈಗಿನ ಕಾಲದಲ್ಲಿಯೂ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಒಳ್ಳೆಯ ಸಂದೇಶವಾಗಿದೆ. ಚಾಣಕ್ಯರು(Acharya Chanakya) ಹಣ ನಿರ್ವಹಣೆಯ ಬಗೆಗೆ ಹೇಳಿದ್ದಾರೆ. ಹಣ(Money) ಅಥವಾ ಸಂಪತ್ತು ವ್ಯಕ್ತಿಯ ನಿಜವಾದ ಸ್ನೇಹಿತ ಎಂದು ಹೇಳಿದ್ದಾರೆ. ಹಣದ ಕುರಿತಾಗಿ ಈ ಕೆಲವು ವಿಷಯಗಳನ್ನು ತಿಳಿದರೆ ಎಂದಿಗೂ ಆರ್ಥಿಕ ಬಿಕ್ಕಟ್ಟು ಬರುವುದಿಲ್ಲ ಎಂದು ಹೇಳಿದ್ದಾರೆ.

ಆಚಾರ್ಯ ಚಾಣಕ್ಯರ ಪ್ರಕಾರ ಹಣವನ್ನು ಖರ್ಚು ಮಾಡುವಾಗ ಯೋಚಿಸಬೇಕು. ಯಾರು ಅನಗತ್ಯವಾಗಿ ಹಣವನ್ನು ಖರ್ಚು ಮಾಡುತ್ತಾರೋ ಅವರಲ್ಲಿ ದೀರ್ಘಕಾಲದವರೆಗೆ ಹಣ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ಸಾಧ್ಯವಾದಾಗ ಹಣವನ್ನು ಉಳಿಸಿ. ಇದರಿಂದ ಕಷ್ಟದ ಸಮಯದಲ್ಲಿ ನಿಮಗೆ ಸಹಾಯವಾಗುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ.

ನೀವು ಜೀವನದಲ್ಲಿ ಹಣ ಗಳಿಸಲು ಬಯಸಿದರೆ ಯಾವಾಗಲೂ ನಿಮ್ಮ ಗುರಿಯ ಬಗ್ಗೆ ಗಮನವಿರಲಿ. ನಿಮ್ಮ ಗುರಿಯು ನಿಮ್ಮ ಸಂಪತ್ತಿನ ಸಾಧನವಾಗಿರಲಿ. ಹಾಗಿರುವಾಗ ನೀವು ಏನನ್ನು ಸಾಧಿಸಲು ಹೊರಟಿದ್ದೀರಿ ಎಂಬುದರ ಕುರಿತಾದ ಸಂಪೂರ್ಣ ತಿಳುವಳಿಕೆಯಿರಲಿ. ಆ ಮೂಲಕ ನೀವು ಶ್ರದ್ಧೆಯಿಂದ ಕೆಲಸ ಮಾಡಬಹುದು.

ಉದ್ಯೋಗದ ಹಾದಿ ಹಿಡಿದರೆ ಮಾತ್ರ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಆದ್ದರಿಂದ ನೀವು ಉದ್ಯೋಗದ ಬಗ್ಗೆ ಚಿಂತಿಸಬೇಕು. ನಿಮ್ಮ ಸಾಧನೆಯ ಬಗ್ಗೆ ಯೋಚಿಸಿದರೆ ಎಂದಿಗೂ ಹಣದ ಕುರಿತಾಗಿ ಚಿಂತಿಸುವುದಿಲ್ಲ. ಸಾಧನೆಯ ಗುರಿ ತಲುಪಿದರೆ ಹಣವೇ ನಿಮ್ಮನ್ನು ಅರಸಿ ಬರುತ್ತದೆ.

ಚಾಣಕ್ಯರ ಪ್ರಕಾರ ವ್ಯಕ್ತಿಯು ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಹಣವನ್ನು ಸಂಪಾದಿಸಬೇಕು. ತಪ್ಪು ಹಾದಿ ಹಿಡಿದು ಗಳಿಸುವ ಹಣ ಎಂದಿಗೂ ಶ್ರೇಯಸ್ಸು ತರುವುದಿಲ್ಲ. ಹೆಚ್ಚು ತೊಂದರೆಗೆ ಸಿಲುಕುವಂತೆ ಮಾಡುತ್ತದೆ. ಹಾಗಿರುವಾಗ ಸತ್ಯದ ಹಾದಿಯಲ್ಲಿ, ಶ್ರಮವಹಿಸಿ ಕೆಲಸ ಮಾಡಿದೆ ಸದಾ ಕಾಲ ಹಣ ನಿಮ್ಮ ಕೈಯಲ್ಲಿರುತ್ತದೆ.

ನಿಮ್ಮ ಹಣ ಯಾವಾಗಲು ಒಂದು ನಿರ್ದಿಷ್ಟ ವ್ಯಾಪ್ತಿಯಲ್ಲಿರಬೇಕು. ಇತರರ ವಶದಲ್ಲಿರುವ ಹಣ ಎಂದಿಗೂ ನಿಮ್ಮದಲ್ಲ. ಅಂತಹ ಪರಿಸ್ಥಿತಿ ಎದುರಾದರೆ ಪಶ್ಚಾತ್ತಾಪ ಪಡುವುದನ್ನು ಬಿಟ್ಟರೆ ಬೇರೆ ದಾರಿ ಇರುವುದಿಲ್ಲ. ಹಾಗಾಗಿ ನೀವು ಸಂಪಾದಿಸುವ ಹಣ ಪ್ರಾಮಾಣಿಕವಾಗಿರಲಿ.

ಇದನ್ನೂ ಓದಿ:

Chanakya Niti: ಪದೇ ಪದೇ ಅಪಹಾಸ್ಯಕ್ಕೆ ಗುರಿಯಾಗಿತ್ತಿದ್ದೀರಾ? ಆಚಾರ್ಯ ಚಾಣಕ್ಯ ಹೇಳಿರುವ ಈ 3 ವಿಷಯಗಳನ್ನು ಎಂದಿಗೂ ಮರೆಯದಿರಿ

Chanakya Niti: ನಿಮ್ಮಲ್ಲಿ ಈ 4 ಗುಣಗಳಿದೆಯೇ? ಹಾಗಿದ್ದರೆ ನೀವು ನಿಜವಾಗಿಯೂ ನಂಬಿಕಸ್ಥರು – ಚಾಣಕ್ಯ ನೀತಿ

(People are these 5 things about money they will be not have crisis of finance in life)

Published On - 8:07 am, Sat, 31 July 21

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್