AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ನಿಮ್ಮಲ್ಲಿ ಈ 4 ಗುಣಗಳಿದೆಯೇ? ಹಾಗಿದ್ದರೆ ನೀವು ನಿಜವಾಗಿಯೂ ನಂಬಿಕಸ್ಥರು – ಚಾಣಕ್ಯ ನೀತಿ

ಚಾಣಕ್ಯ ನೀತಿ: ನಂಬಿಕಸ್ಥನಲ್ಲಿರುವ ಕೆಲವು ಗುಣಗಳನ್ನು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಈ ಕೆಲವು ಗುಣಗಳಿರುವ ವ್ಯಕ್ತಿ ನಿಜವಾಗಿಯೂ ನಂಬಿಕಸ್ಥನಾಗಿರುತ್ತಾನೆ. ನೀವು ನಿಜವಾಗಿಯೂ ನಂಬಿಕಸ್ಥರಾಗಿದ್ದರೆ ಈ 4 ಗುಣಗಳಿದೆಯೇ ಪರೀಕ್ಷಿಸಿಕೊಳ್ಳಿ.

Chanakya Niti: ನಿಮ್ಮಲ್ಲಿ ಈ 4 ಗುಣಗಳಿದೆಯೇ? ಹಾಗಿದ್ದರೆ ನೀವು ನಿಜವಾಗಿಯೂ ನಂಬಿಕಸ್ಥರು – ಚಾಣಕ್ಯ ನೀತಿ
ಚಾಣಕ್ಯ ನೀತಿ
TV9 Web
| Updated By: shruti hegde|

Updated on: Jul 25, 2021 | 11:05 AM

Share

ಕೆಲವರು ಹೆಚ್ಚು ಪ್ರೀತಿಯಿಂದ ಜನರೊಡನೆ ಬೆರೆಯುತ್ತಾರೆ. ಅಷ್ಟೇ ಬೇಗ ಜನರನ್ನು ಹಚ್ಚಿಕೊಳ್ಳುತ್ತಾರೆ. ಕೆಲವು ಬಾರಿ ಮಾತಿನಲ್ಲಿ ಸಿಲುಕಿಕೊಳ್ಳುತ್ತಾರೆ. ಇನ್ನು ಕೆಲವು ಜನರು ರಹಸ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ನಂತರ ಅವರು ಮೋಸ ಹೋದಾಗ ಪಶ್ಚಾತ್ತಾಪ ಪಡುತ್ತಾರೆ. ಹೀಗಿರುವಾಗ ಯಾವ ಜನರನ್ನು ನಂಬಬೇಕು ಎಂಬುದೇ ಕೆಲವು ಬಾರಿ ಗೊಂದಲವಾಗುತ್ತದೆ. ನಂಬಿಕಸ್ಥನಲ್ಲಿರುವ ಕೆಲವು ಗುಣಗಳನ್ನು ಆಚಾರ್ಯ ಚಾಣಕ್ಯರು(Acharya Chanakya) ಹೇಳಿದ್ದಾರೆ. ಈ ಕೆಲವು ಗುಣಗಳಿರುವ ವ್ಯಕ್ತಿ ನಿಜವಾಗಿಯೂ ನಂಬಿಕಸ್ಥನಾಗಿರುತ್ತಾನೆ.

ಯಾರೇ ಆಗಲಿ ಅವರನ್ನು ನಂಬುವ ಮೊದಲು ಪರೀಕ್ಷಿಸಿ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಅವರು ತಮ್ಮ ಚಾಣಕ್ಯ ನೀತಿಯಲ್ಲಿ ವಿಶ್ವಾಸಾರ್ಹ ವ್ಯಕ್ತಿಗೆ ಇರುವ ಗುಣಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಕೆಲವು ಮಾನದಂಡಗಳನ್ನು ಪೂರೈಸುವ ವ್ಯಕ್ತಿ ನಂಬಿಕಸ್ಥನಾಗಿರುತ್ತಾನೆ. ನಿಮ್ಮ ಸ್ನೇಹಿತ ನಿಮಗೆ ಎಷ್ಟು ಹತ್ತಿರದವನಾಗಿದ್ದರೂ ನಿಮ್ಮ ಕೆಲವು ರಹಸ್ಯ ವಿಚಾರಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ. ಕೆಲವು ಬಾರಿ ನಿಮ್ಮ ಸ್ನೇಹದ ನಡುವೆ ಬಿರುಕು ಬಿಟ್ಟಾಗ ಆತ ನಿಮ್ಮೆಲ್ಲಾ ರಹಸ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಸಾಧ್ಯತೆಗಳಿರುತ್ತವೆ ಎಂದು ಚಾಣಕ್ಯರು ಹೇಳುತ್ತಾರೆ.

ಒಳ್ಳೆಯ ಗುಣಮಟ್ಟದ ಚಿನ್ನವನ್ನು ಗುರುತಿಸಲು ಚಿನ್ನವನ್ನು ಉಜ್ಜುತ್ತಾರೆ, ಬೆಂಕಿಯಲ್ಲಿ ಬಿಸಿ ಮಾಡುತ್ತಾರೆ, ಇಷ್ಟೆಲ್ಲಾ ಆದ ಬಳಿಕ ಚಿನ್ನದ ಗುಣಮಟ್ಟವನ್ನು ಗುರುತಿಸಲಾಗುತ್ತದೆ. ಬಳಿಕ ಚಿನ್ನವು ನಿಜವಾದದ್ದೋ ಇಲ್ಲವೋ ಗೊತ್ತಾಗುತ್ತದೆ. ಅದೇ ರೀತಿಯಲ್ಲಿ ವ್ಯಕ್ತಿಯನ್ನು ಪರೀಕ್ಷಿಸಲು 4 ವಿಷಯಗಳನ್ನು ನೆನಪಿಟ್ಟುಕೊಳ್ಳಿ.

ಒಬ್ಬ ವ್ಯಕ್ತಿಯನ್ನು ನಂಬುವ ಮೊದಲು ಆತ ಇತರರ ಬಗ್ಗೆ ಎಷ್ಟು ಯೋಚಿಸುತ್ತಾನೆ ಎಂಬುದನ್ನು ಪರಿಶೀಲಿಸಿ. ತ್ಯಾಗ ಪ್ರಜ್ಞೆ ಇದೆಯೋ ಇಲ್ಲವೋ, ಇತರರ ಜೀವನವನ್ನು ಸಂತೋಷದಿಂದ ಇಡಲು ತನ್ನ ಖುಷಿಯನ್ನು ತ್ಯಾಗ ಮಾಡಲು ಸಿದ್ಧನಿದ್ದಾನೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ.

ಇತರರ ಬಗ್ಗೆ ಕಾಳಜಿಯೂ ಇಲ್ಲದೇ ತನ್ನ ಸ್ವಂತ ಜೀವನದ ಬಗ್ಗೆ ಮಾತ್ರ ಚಿಂತಿಸುವ ವ್ಯಕ್ತಿಯನ್ನು ಎಂದಿಗೂ ನಂಬಬೇಡಿ. ಆತ ಯಾವಾಗಲೂ ಇತರರಿಗೆ ಕಷ್ಟ ಸಮಯದಲ್ಲಿ ಸಹಾಯ ಮಾಡಲು ಮುಂದಾಗುವುದಿಲ್ಲ.

ಶಾಂತಿಯಿಂದ, ಸತ್ಯವನ್ನು ಮಾತನಾಡುವ ಜನರು ಎಂದಿಗೂ ಒಳ್ಳೆಯವರಾಗಿರುತ್ತಾರೆ. ಧರ್ಮಮಾರ್ಗವನ್ನು ಅನುಸರಿಸುವ ಜನರು ಹೆಚ್ಚಾಗಿ ಒಳ್ಳೆಯವರಾಗಿರುತ್ತಾರೆ. ಅಂತಹ ಜನರನ್ನು ನೀವು ನಂಬಬಹುದು. ನಿಮ್ಮಲ್ಲಿಯೂ ಇಂತಹ ಗುಣಗಳಿದ್ದರೆ ನೀವು ನಿಜವಾಗಿಯೂ ನಂಬಿಕಸ್ಥರು.

ಸದಾಚಾರ ಮತ್ತು ಪ್ರಾಮಾಣಿಕತೆಯ ಮಾರ್ಗವನ್ನು ಅನುಸರಿಸಿ ಹಣ ಸಂಪಾದಿಸುವ ಜನರು ನಂಬಿಕ ಸ್ಥಾನಕ್ಕೆ ಅರ್ಹರಾಗಿರುತ್ತಾರೆ. ಹಾಗಾಗಿ ನಿಮ್ಮಲ್ಲಿಯೂ ಸಹ ಇಂತಹ ಗುಣಗಳಿರಲಿ. ಜನರು ನಿಮ್ಮನ್ನು ಹೆಚ್ಚು ಪ್ರೀತಿಸುವುದರ ಜತೆಗೆ ಹೆಚ್ಚು ನಂಬಿಕೆಯನ್ನು ಇಟ್ಟುಕೊಳ್ಳುತ್ತಾರೆ. ಆದರೆ ಅಧರ್ಮದ ಹಾದಿಯನ್ನು ಅನುಸರಿಸುವ ಜನರು, ತಪ್ಪು ದಾರಿಯಲ್ಲಿ ಹಣವನ್ನು ಸಂಪಾದಿಸುವ ವ್ಯಕ್ತಿಯನ್ನು ಎಂದಿಗೂ ನಂಬಿಕ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಸಾಧ್ಯವೇ ಇಲ್ಲ.

ಇದನ್ನೂ ಓದಿ:

Chanakya Niti: ನಿಮ್ಮ ಈ ತಪ್ಪು ಜೀವನಪೂರ್ತಿ ಪಾಪದಲ್ಲಿ ಕೈ ತೊಳೆಯುವಂತೆ ಮಾಡಬಹುದು ಎಚ್ಚರ!- ಚಾಣಕ್ಯ ನೀತಿ

Chanakya Niti: ಯಾವ ವಿಷಯಗಳಲ್ಲಿ ಪುರುಷರಿಗಿಂತ ಮಹಿಳೆಯರು ಮುಂದಿದ್ದಾರೆ ಎಂಬುದು ಗೊತ್ತಾ? – ಚಾಣಕ್ಯ ನೀತಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ