AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಳೆಯೇ ಅಂಗಾರಕ ಸಂಕಷ್ಟ ಚತುರ್ಥಿ; ಪೂಜಾ ವಿಧಿ-ವಿಧಾನಗಳ ಜತೆಗೆ ಶ್ರೇಷ್ಠ ದಿನದ ಮಹತ್ವ ತಿಳಿಯಿರಿ

Sankashti Chaturthi 2021: ಅಂಗಾರಕ ಸಂಕಷ್ಟ ಚತುರ್ಥಿ ನಾಳೆ (ಜುಲೈ 27)ರಂದು ಬಂದಿದೆ. ಈ ದಿನದ ಮಹತ್ವದ ಜತೆಗೆ ಗಣೇಶನ ಆರಾಧನೆಯ ಮುಹೂರ್ತ ತಿಳಿಯಿರಿ.

ನಾಳೆಯೇ ಅಂಗಾರಕ ಸಂಕಷ್ಟ ಚತುರ್ಥಿ; ಪೂಜಾ ವಿಧಿ-ವಿಧಾನಗಳ ಜತೆಗೆ ಶ್ರೇಷ್ಠ ದಿನದ ಮಹತ್ವ ತಿಳಿಯಿರಿ
ಅಂಗಾರಕ ಸಂಕಷ್ಟ ಚತುರ್ಥಿ
TV9 Web
| Updated By: shruti hegde|

Updated on:Jul 26, 2021 | 9:51 AM

Share

ಸಾಮಾನ್ಯವಾಗಿ ಸಂಕಷ್ಟ ಚತುರ್ಥಿ ದಿನದಂದು ವಿಘ್ನ ನಿವಾರಕನನ್ನು ಭಕ್ತಿಯಿಂದ ಬೇಡಿಕೊಳ್ಳುತ್ತೇವೆ. ನಮ್ಮೆಲ್ಲಾ ಕಷ್ಟಗಳನ್ನು ದೂರ ಮಾಡುವ, ವಿಘ್ನ ನಿವಾರಕನೆಂದೇ ಹೆಸರು ಪಡೆದಿರುವ ಗಣೇಶನ ಮೊರೆ ಹೋಗುವ ಪದ್ಧತಿ ಮೊದಲಿನಿಂದಲೂ ಬಂದಿದೆ. ಅದರಲ್ಲಿಯೂ ವಿಶೇಷವಾಗಿ ಅಂಗಾರಕ ಸಂಕಷ್ಟ ಚತುರ್ಥಿ ನಾಳೆ (ಜುಲೈ 27)ರಂದು ಬಂದಿದೆ. ಮಂಗಳವಾರದಂದು ಸಂಕಷ್ಟ ಚತುರ್ಥಿ ಆಚರಿಸುತ್ತಿರುವುದರಿಮದ ಅಂಗಾರಕ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ಶ್ರೇಷ್ಠ ದಿನದಂದು ವಿನಾಯಕ ಧ್ಯಾನ ಮಾಡಿದರೆ ಸಂಕಷ್ಟಗಳೆಲ್ಲಾ ಪರಿಹಾರವಾಗುವುದು ಎಂಬ ನಂಬಿಕೆಯ ಜತೆಗೆ ಆಚರಣೆ ಮೊದಲಿನಿಂದಲೂ ಬಂದಂಥದ್ದು.

ಸಂಕಷ್ಟ ಚತುರ್ಥಿ ದಿನದಂದು ಬೆಳಿಗ್ಗೆ ಬೇಗನೆ ಇದ್ದು, ಶುಭ್ರ ವಸ್ತ್ರದಲ್ಲಿ ಗಣೇಶನ ಅರಾಧನೆ ಮಾಡಬೇಕು. ಈ ದಿನ ಉಪವಾಸವಿದ್ದು ಗಣೇಶನ ಸ್ತುತಿ, ಪ್ರಾರ್ಥನೆ ಮಾಡಲಾಗುವುದು. ವಿನಾಯಕನಿಗೆ ಇಷ್ಟವಾದ ಮೋದಕ ತಯಾರಿಸಿ ನೈವೇದ್ಯ ನೀಡಲಾಗುವುದು. ಸಾಮಾನ್ಯವಾಗಿ ಭಕ್ತರು ಇಡೀ ದಿನ ಉಪವಾಸ ಕೈಗೊಳ್ಳುತ್ತಾರೆ. ಅನಾರೋಗ್ಯ ಸಮಸ್ಯೆ ಇರುವವರು ಹಾಲು, ಹಣ್ಣುಗಳನ್ನು ಸೇವಿಸಿ. ತಂಬಾಕು, ಎಲೆ, ಅಡಿಕೆ, ಸುಣ್ಣದಿಂದ ದೂರವಿರಿ. ಗಣೇಶನ ಭಜನೆ ಜತೆಗೆ ಮಂತ್ರಗಳನ್ನು ಪಠಿಸಿ. ಓಂ ಗಣೇಶಾಯ ನಮಃ ಮಂತ್ರವನ್ನು ಪಠಿಸಬಹುದು.

ಮುಹೂರ್ತ: ಚತುರ್ಥಿ ತಿಥಿ ಆರಂಭ: ಜುಲೈ 26 ರಾತ್ರಿ 2:54 ಚತುರ್ಥಿ ತಿಥಿ ಮುಕ್ತಾಯ: ಜುಲೈ 28, ಮಧ್ಯಾಹ್ನ 2:28

ಸಾಮಾನ್ಯವಾದ ಎಲ್ಲಾ ಸಂಕಷ್ಟ ಚತುರ್ಥಿಗಿಂತ ಅಂಗಾರಕ ಸಂಕಷ್ಟ ಚತುರ್ಥಿ ಅತ್ಯಂತ ಪವಿತ್ರ ದಿನವೆಂದು ಹೇಳಲಾಗುತ್ತದೆ. ಗಣೇಶನ ದೇವಾಲಯಗಳಲ್ಲಿ ವಿಶೇಷ ಪೂಜೆ ಕೈಗೊಳ್ಳಲಾಗುತ್ತದೆ. ಈ ದಿನ ಕಟ್ಟುನಿಟ್ಟಾದ ವ್ರತ ಕೈಗೊಂಡು ಭಕ್ತಿಯಿಂದ ವಿನಾಯಕನನ್ನು ಆರಾಧಿಸಲಾಗುತ್ತದೆ. ಈ ದಿನ ವಿಘ್ನ ನಿವಾರಕ ವಿನಾಯಕನ ಧ್ಯಾನ ಮಾಡಿದರೆ ಸಕಲ ಸಂಕಷ್ಟಗಳೆಲ್ಲವೂ ಪರಿಹಾರವಾಗುತ್ತದೆ. ಆದ್ದರಿಂದ ಭಕ್ತರು ಈ ದಿನ ವಿಶೇಷವಾಗಿ ಗಣೇಶನಿಗೆ ಪೂಜೆ ಸಲ್ಲಿಸುವುದರ ಜತೆಗೆ ತಮ್ಮ ಬೇಡಿಕೆಗಳನ್ನು ವಿನಾಯಕನ ಮುಂದಿಡುತ್ತಾರೆ.

ಇದನ್ನೂ ಓದಿ:

ಇಂದು ಅಂಗಾರಕ ಸಂಕಷ್ಟ ಚತುರ್ಥಿ; ಈ ಪವಿತ್ರ ದಿನದ ಮಹತ್ವ ನೀವು ತಿಳಿಯಲೇ ಬೇಕು

Sankashti Chaturthi 2021: ಇಂದು ಸಂಕಷ್ಟ ಚತುರ್ಥಿ; ಈ ದಿನದ ವಿಶೇಷತೆ ಜತೆಗೆ ಪೂಜಾ ವಿಧಿ-ವಿಧಾನ ತಿಳಿಯಿರಿ

Published On - 9:42 am, Mon, 26 July 21

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ