ಗೋಕುಲಾಷ್ಟಮಿಯ ಪೂರ್ಣ ಫಲ ಪ್ರಾಪ್ತಿಯಾಗಲು ರಾಧಾ ಜನ್ಮಾಷ್ಟಮಿ ಆಚರಿಸಬೇಕು; ರಾಧಾ ಅಷ್ಟಮಿ ಸಿದ್ಧತೆ, ಆಚರಣೆ ಹೇಗೆ?

Radha Ashtami 2021 Date: ಗೋಕುಲಾಷ್ಟಮಿಯ ಪೂರ್ಣ ಫಲ ಪ್ರಾಪ್ತಿಯಾಗಲು ರಾಧಾ ಜನ್ಮಾಷ್ಟಮಿ ಆಚರಿಸಬೇಕು; ರಾಧಾ ಅಷ್ಟಮಿ ಸಿದ್ಧತೆ, ಆಚರಣೆ ಹೇಗೆ? ಗೋಕುಲಾಷ್ಟಮಿ ಬಳಿಕ ರಾಧಾ ಅಷ್ಟಮಿ ಆಚರಿಸಿದರೆ ಕೃಷ್ಣ ಜನ್ಮಾಷ್ಟಮಿಯ ಪೂರ್ಣ ಫಲ ಸಿಗುತ್ತದೆ; ರಾಧಾ ಅಷ್ಟಮಿ ಸಿದ್ಧತೆ ಹೇಗೆ? ಶುಭ ಮುಹೂರ್ತ ಯಾವಾಗ? ಶ್ರೀ ಕೃಷ್ಣ ಜನ್ಮಾಷ್ಟಮಿಯ ಬಳಿಕ ಶ್ರೀಕೃಷ್ಣನ ಆಪ್ತ ಸಖಿ ರಾಧಾ ಅಷ್ಟಮಿ ಆಚರಿಸುವ ಸಂಪ್ರದಾಯವಿದೆ.

ಗೋಕುಲಾಷ್ಟಮಿಯ ಪೂರ್ಣ ಫಲ ಪ್ರಾಪ್ತಿಯಾಗಲು ರಾಧಾ ಜನ್ಮಾಷ್ಟಮಿ ಆಚರಿಸಬೇಕು; ರಾಧಾ ಅಷ್ಟಮಿ ಸಿದ್ಧತೆ, ಆಚರಣೆ ಹೇಗೆ?
ಗೋಕುಲಾಷ್ಟಮಿಯ ಪೂರ್ಣ ಫಲ ಪ್ರಾಪ್ತಿಯಾಗಲು ರಾಧಾ ಜನ್ಮಾಷ್ಟಮಿ ಆಚರಿಸಬೇಕು; ರಾಧಾ ಅಷ್ಟಮಿ ಸಿದ್ಧತೆ, ಆಚರಣೆ ಹೇಗೆ?
Follow us
| Updated By: ಸಾಧು ಶ್ರೀನಾಥ್​

Updated on: Sep 04, 2021 | 6:22 AM

ಗೋಕುಲಾಷ್ಟಮಿ ಬಳಿಕ ರಾಧಾ ಅಷ್ಟಮಿ ಆಚರಿಸಿದರೆ ಕೃಷ್ಣ ಜನ್ಮಾಷ್ಟಮಿಯ ಪೂರ್ಣ ಫಲ ಸಿಗುತ್ತದೆ; ರಾಧಾ ಅಷ್ಟಮಿ ಸಿದ್ಧತೆ ಹೇಗೆ? ಶುಭ ಮುಹೂರ್ತ ಯಾವಾಗ? ಶ್ರೀ ಕೃಷ್ಣ ಜನ್ಮಾಷ್ಟಮಿಯ ಬಳಿಕ ಶ್ರೀಕೃಷ್ಣನ ಆಪ್ತ ಸಖಿ ರಾಧಾ ಅಷ್ಟಮಿ ಆಚರಿಸುವ ಸಂಪ್ರದಾಯವಿದೆ. ಹಾಗಾದರೆ ಬನ್ನೀ ರಾಧಾ ಅಷ್ಟಮಿ ವ್ರತಾಚರಣೆಗೆ ಸಿದ್ಧತೆ ಹೇಗೆ ಮಾಡಿಕೊಳ್ಳಬೇಕು? ಶುಭ ಮುಹೂರ್ತ ಯಾವಾಗ? ರಾಧಾ ಅಷ್ಟಮಿಯ ಮಹತ್ವ ಏನು? ತಿಳಿದುಕೊಳ್ಳೋಣ.

ಪ್ರತಿ ಸಂವತ್ಸರ ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ರಾಧಾ ಅಷ್ಟಮಿ ಆಚರಿಸಲಾಗುತ್ತದೆ. ಗೋಕುಲಾಷ್ಟಮಿ ಬಳಿಕ ರಾಧಾ ಅಷ್ಟಮಿ ಆಚರಿಸಿದರೆ ಶ್ರೀ ಕೃಷ್ಣ ಜನ್ಮಾಷ್ಟಮಿ ಫಲ ಹೆಚ್ಚಾಗುತ್ತದೆ. ರಾಧಾ ರಾಣಿ ಮತ್ತು ಶ್ರೀ ಕೃಷ್ಣ ಇಬ್ಬರ ಕೃಪಾಕಟಾಕ್ಷ ಭಕ್ತರಿಗೆ ಲಭಿಸುತ್ತದೆ. ವೇದ ಮತ್ತು ಪುರಾಣಗಳಲ್ಲಿ ರಾಧೆಯನ್ನು ಕೃಷ್ಣ ವಲ್ಲಭೆ ಎಂದು ಕರೆಯುತ್ತಾರೆ. ಕೃಷ್ಣ ಪ್ರಿಯೆ ಶ್ರೀ ಕೃಷ್ಣನ ಪ್ರಾಣಶಕ್ತಿ. ಈ ವರ್ಷ ರಾಧಾ ಅಷ್ಟಮಿ ಸೆಪ್ಟೆಂಬರ್​ 14 ಮಂಗಳವಾರ ಆಚರಿಸಲ್ಪಡುತ್ತದೆ.

ಜಗನ್ನಿಯಾಮಕ ಶ್ರೀ ಕೃಷ್ಣ ಭಕ್ತರಿಗೆ ರಾಧಾ ಅಷ್ಟಮಿ ಬಹಳ ಮಹತ್ವದ್ದಾಗಿರುತ್ತದೆ. ಏಕೆಂದರೆ ರಾಧೆ ಇಲ್ಲದೆ ಶ್ರೀ ಕೃಷ್ಣ ಅಪೂರ್ಣನಾಗುತ್ತಾನೆ, ಅಲ್ಲವಾ? ಅದೇ ಧಾಟಿಯಲ್ಲಿ ಹೇಳುವುದಾದರೆ ಶ್ರೀ ಕೃಷ್ಣನನ್ನು ರಾಧೆ ತನ್ನ ಶಕ್ತಿ ಎಂದು ಪರಿಭಾವಿಸುತ್ತಾಳೆ. ಹಾಗಾಗಿ ನೀವು ಸಮರ್ಪಣಾ ಭಾವದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಿದರೆ ರಾಧಾ ಅಷ್ಟಮಿ ಆಚರಿಸುವುದೂ ಸಹ ಮುಖ್ಯವಾಗುತ್ತದೆ.

ಪ್ರತಿ ವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿ ಸರಿಯಾಗಿ 15 ದಿನಗಳ ಬಳಿಕ ಭಾದ್ರಪದ ಮಾಸದ ಶುಕ್ಲ ಪಕ್ಷದ ಅಷ್ಟಮಿ ದಿನ ರಾಧಾಷ್ಟಮಿ ಆಚರಿಸಲಾಗುತ್ತದೆ. ರಾಧಾಷ್ಟಮಿಯ ದಿನ ಶ್ರೀ ಕೃಷ್ಣ ಮತ್ತು ರಾಧೆಯನ್ನು ಜೋಡಿಯಾಗಿ ಆರಾಧಿಸಬೇಕು. ದಿವ್ಯವಾದ, ಭವ್ಯವಾದ ರಾಧೆಯ ಉಪಾಸನೆ ಮಾಡಿದರೆ ಸರ್ವಶಕ್ತ ಶ್ರೀ ಕೃಷ್ಣನೂ ಸಂತೃಪ್ತನಾಗಿ ಆರಾಧಕರ ಶ್ರೇಯೋಭಿವೃದ್ಧಿಗೆ ಕಾರಣವಾಗುತ್ತದೆ. ಗೋಕುಲಾಷ್ಟಮಿ ಮತ್ತು ರಾಧಾಷ್ಟಮಿ ಎರಡನ್ನೂ ಆಚರಿಸುವವರ ಮನೆಯಲ್ಲಿ ಧನ ಧಾನ್ಯಕ್ಕೆ ಯಾವುದೇ ಕೊರತೆ ಬಾಧಿಸದು. ರಾಧಾ ಅಷ್ಟಮಿ ಆಚರಿಸುತ್ತಾ ಏನೇ ಮನೋಕಾಮನೆಗಳು ಇದ್ದರೂ ಜೋಡಿಗೆ ನಿವೇದಿಸಿಕೊಂಡರೆ ಅದು ಸಿದ್ಧಿರಸ್ತು ಆಗುತ್ತದೆ.

radha ashtami 2021 date after janmashtami auspicious time and importance vrat significance 12

ವೇದ ಮತ್ತು ಪುರಾಣಗಳಲ್ಲಿ ರಾಧೆಯನ್ನು ಕೃಷ್ಣ ವಲ್ಲಭೆ ಎಂದು ಕರೆಯುತ್ತಾರೆ.  ಈ ವರ್ಷ ರಾಧಾ ಅಷ್ಟಮಿ ಸೆ. 14 ಮಂಗಳವಾರ

ಈ ವರ್ಷ ರಾಧಾ ಅಷ್ಟಮಿ ಸೆಪ್ಟೆಂಬರ್​ 14 ಮಂಗಳವಾರ ಆಚರಿಸಲ್ಪಡುತ್ತದೆ. ಶುಭ ಮುಹೂರ್ತ ಯಾವಾಗ?

ರಾಧಾ ಜನ್ಮಾಷ್ಟಮಿ ಶುಭ ಮುಹೂರ್ತ: 2021 ಸೆಪ್ಟೆಂಬರ್​ 14 ಮಂಗಳವಾರ

ಅಷ್ಟಮಿ ತಿಥಿ ಆರಂಭ – ಸೆಪ್ಟೆಂಬರ್​ 13 ಸೋಮವಾರ ಮಧ್ಯಾಹ್ನ 03:10 ಕ್ಕೆ ಅಷ್ಟಮಿ ತಿಥಿ ಸಮಾಪ್ತಿ – ಸೆಪ್ಟೆಂಬರ್​ 14 ಮಂಗಳವಾರ ಮಧ್ಯಾಹ್ನ 01:09 ಕ್ಕೆ

ಪೂಜಾ ವಿಧಿ ಹೇಗೆ: ರಾಧಾ ಜನ್ಮಾಷ್ಟಮಿ ಶುಭ ದಿನ ಪ್ರಾತಃಕಾಲದಲ್ಲಿ ಸ್ನಾನ ಮಾಡಿ, ಶುಭ್ರ ವಸ್ತ್ರ ತೊಡಬೇಕು. ರಾಧಾ ರಾಣಿ ಅಥವಾ ಶ್ರೀ ಕೃಷ್ಣನ ಸಮ್ಮುಖದಲ್ಲಿ ಸಂಕಲ್ಪ ಮಾಡಬೇಕು. ಅಥವಾ ಇಬ್ಬರೂ ಸಮ್ಮುಖದಲ್ಲಿ ಇಬ್ಬರನ್ನೂ ಅರಾಧಿಸಬೇಕು. ಗೋಕುಲಾಷ್ಠಮಿಯ ದಿನ ಪೂಜೆ ನೆರವೇರಿಸಿದಂತೆ ರಾಧಾ ಜನ್ಮಾಷ್ಟಮಿಯ ದಿನವೂ ವ್ರತಾಚರಣೆ ಮಾಡಬೇಕು.

(radha ashtami 2021 date after janmashtami auspicious time and importance vrat significance)

ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್
ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್
ಯಲಾ ಕುನ್ನಿ ಚಿತ್ರದಲ್ಲಿ ಕೋಮಲ್ ಜತೆ ಮಿತ್ರಾಗೆ ಸಿಕ್ಕಿದೆ ಡಿಫರೆಂಟ್ ಪಾತ್ರ
ಯಲಾ ಕುನ್ನಿ ಚಿತ್ರದಲ್ಲಿ ಕೋಮಲ್ ಜತೆ ಮಿತ್ರಾಗೆ ಸಿಕ್ಕಿದೆ ಡಿಫರೆಂಟ್ ಪಾತ್ರ
'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ