AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ತಿಕ ಮಾಸದಲ್ಲಿ ನಡೆಯಿತು ದೊಡ್ಡ ಪವಾಡ! ತೆಂಗಿನ ಮರದ ಬೇರುಗಳ ನಡುವೆ ಶಿವಲಿಂಗ ಉದ್ಭವ

ಈಗ ಕಲಿಗಾಲವಾದ್ದರಿಂದ ಕಟುಕರು ಹೆಚ್ಚಾಗಿ ಒಳ್ಳೆಯತನ ಇಲ್ಲದಂತಾಗಿದೆ ಎಂದು ಹಳೆಯವರು ಹೇಳುವಾಗ ಪವಾಡಗಳು ಈಗಲೂ ಆಗುತ್ತಾ ಎನ್ನುವ ಅನುಮಾನ ಹುಟ್ಟುತ್ತದೆ. ಆದರೆ ಭಕ್ತಿ, ನಂಬಿಕೆ ಇದ್ದಾಗ ಊಹಿಸಲೂ ಸಾಧ್ಯವಾಗದ ಘಟನೆಗಳು ನಡೆಯುತ್ತವೆ ಎಂಬುದಕ್ಕೆ ತೆಂಗಿನ ಮರದ ಬಳಿ ಶಿವಲಿಂಗ ಪತ್ತೆಯಾಗಿರುವ ಘಟನೆಯೇ ಸಾಕ್ಷಿ. ಇದರಲ್ಲಿ ಏನಿದೆ ವಿಶೇಷತೆ? ಕಂಡು ಬಂದಿದ್ದು ಹೇಗೆ ಎಂಬ ಪ್ರಶ್ನೆ ಹುಟ್ಟಬಹುದು? ಅವುಗಳಿಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಾರ್ತಿಕ ಮಾಸದಲ್ಲಿ ನಡೆಯಿತು ದೊಡ್ಡ ಪವಾಡ! ತೆಂಗಿನ ಮರದ ಬೇರುಗಳ ನಡುವೆ ಶಿವಲಿಂಗ ಉದ್ಭವ
ವೈರಲ್​​ ಫೋಟೋ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Nov 14, 2024 | 4:25 PM

Share

ನಮ್ಮ ಸುತ್ತ ಮುತ್ತ ಅನೇಕ ರೀತಿಯ ಪವಾಡಗಳು ನಡೆಯುತ್ತಿರುತ್ತವೆ. ಕೆಲವನ್ನು ಕಣ್ಣಾರೆ ಕಂಡರೆ ಇನ್ನು ಹಲವನ್ನು ನಾನಾ ರೀತಿಯಲ್ಲಿ ಕೇಳಿ ತಿಳಿದುಕೊಂಡಿರುತ್ತೇವೆ. ಈಗ ಕಲಿಗಾಲವಾದ್ದರಿಂದ ಕಟುಕರು ಹೆಚ್ಚಾಗಿ ಒಳ್ಳೆಯತನ ಇಲ್ಲದಂತಾಗಿದೆ ಎಂದು ಹಳೆಯವರು ಹೇಳುವಾಗ ಪವಾಡಗಳು ಈಗಲೂ ಆಗುತ್ತಾ ಎನ್ನುವ ಅನುಮಾನ ಹುಟ್ಟುತ್ತದೆ. ಆದರೆ ಭಕ್ತಿ, ನಂಬಿಕೆ ಇದ್ದಾಗ ಊಹಿಸಲೂ ಸಾಧ್ಯವಾಗದ ಘಟನೆಗಳು ನಡೆಯುತ್ತವೆ ಎಂಬುದಕ್ಕೆ ತೆಂಗಿನ ಮರದ ಬಳಿ ಶಿವಲಿಂಗ ಪತ್ತೆಯಾಗಿರುವ ಘಟನೆಯೇ ಸಾಕ್ಷಿ. ಇದರಲ್ಲಿ ಏನಿದೆ ವಿಶೇಷತೆ? ಕಂಡು ಬಂದಿದ್ದು ಹೇಗೆ ಎಂಬ ಪ್ರಶ್ನೆ ಹುಟ್ಟಬಹುದು? ಅವುಗಳಿಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಆಂಧ್ರಪ್ರದೇಶದ ಆರ್. ಅಂಬೇಡ್ಕರ್ ಕೋನಸೀಮಾ ಜಿಲ್ಲೆ (ಕರಾವಳಿ ಆಂಧ್ರದ ಕೋನಸೀಮಾ ಪ್ರದೇಶದಲ್ಲಿ ಗೋದಾವರಿ ನದಿಯ ಉಪನದಿಗಳ ನಡುವೆ ಇದೆ) ಪಿ.ಗನ್ನವರಂ ಬೋಡಪತಿವಾರಿಪಲೆಂನ ಮುಖ್ಯ ರಸ್ತೆಯ ಬಳಿ ಇರುವ ಕೊಂಡಲಮ್ಮ ಮತ್ತು ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಗಳ ಹಿಂಭಾಗದಲ್ಲಿ ಒಂದು ತೆಂಗಿನ ಮರವಿದ್ದು ಆ ಮರದ ಬೇರುಗಳ ನಡುವೆ ಶಿವಲಿಂಗ ಪತ್ತೆಯಾಗಿದೆ. ಕಾರ್ತಿಕ ಮಾಸದ ಸೋಮವಾರದಂದು ಈ ಶಿವಲಿಂಗ ಭಕ್ತರಿಗೆ ಗೋಚರಿಸಿದೆ ಎನ್ನಲಾಗಿದೆ. ಶಿವನ ಪವಿತ್ರ ದಿನದಂದು ಪಂಚಲೋಹದ ಶಿವಲಿಂಗ ಉದ್ಭವವಾಗಿದ್ದು ಸ್ಥಳೀಯರು ಶಿವಲಿಂಗಕ್ಕೆ ವಿಶೇಷ ಪೂಜೆಗಳನ್ನು ಮಾಡುತ್ತಿದ್ದಾರೆ.

ಶಿವಲಿಂಗ ಗೋಚರಿಸಿದ್ದು ಹೇಗೆ?

ಸ್ವಪ್ನಾ ಎಂಬ ಭಕ್ತೆ, ವೆಂಕಟೇಶ್ವರ ದೇವಸ್ಥಾನದಿಂದ ದೇವರ ಪ್ರಸಾದ ತೆಗೆದುಕೊಂಡು ಹೊರಬರುತ್ತಿದ್ದಾಗ ಅಚಾನಕ್ಕಾಗಿ ಒಂದು ಹಾವನ್ನು ನೋಡುತ್ತಾಳೆ. ಅದು ಎಲ್ಲಿಗೆ ಹೋಗುತ್ತಿದೆ ಎಂದು ನೋಡಿದಾಗ ಹಾವು ತೆಂಗಿನ ಮರದ ಬಳಿಗೆ ಹೋಗಿ ಕಣ್ಮರೆಯಾದದ್ದನ್ನು ಕಂಡು ಹೆದರಿ ಸುತ್ತಮುತ್ತಲಿನವರಿಗೆ ಈ ಅಚ್ಚರಿಯ ವಿಷಯವನ್ನು ತಿಳಿಸುತ್ತಾಳೆ. ಇದು ಒಬ್ಬರ ಬಾಯಿಯಿಂದ ಇನ್ನೊಬ್ಬರಿಗೆ ತಲುಪಿ ಪಟ್ಟಣದಾದ್ಯಂತ ಈ ವಿಷಯ ಸುದ್ದಿಯಾಗುತ್ತದೆ. ಇದನ್ನು ಕೇಳಿದ ಅಲ್ಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಬಂದು ನೋಡಿದಾಗ ಆ ಸ್ಥಳದಲ್ಲಿ ಪಂಚಲೋಹಗಳಿಂದ ಕೂಡಿದ ಶಿವಲಿಂಗ ಕಂಡು, ಕಾರ್ತಿಕ ಮಾಸದ ಸೋಮವಾರ ಶಿವನೇ ಪ್ರತ್ಯಕ್ಷನಾಗಿದ್ದಾನೆ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೀಗ ಸ್ಥಳೀಯರು ಶಿವಲಿಂಗಕ್ಕೆ ವಿಶೇಷ ಪೂಜೆಗಳನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: ಏಕಲವ್ಯ ಕ್ಷತ್ರಿಯ ಎಂಬ ಕಾರಣಕ್ಕೆ ದ್ರೋಣಾಚಾರ್ಯರು ವಿದ್ಯೆ ಹೇಳಿಕೊಟ್ಟಿಲ್ಲವೇ? ಇದು ನಿಜವಲ್ಲ ಎನ್ನುತ್ತಾರೆ ಬಿಬೇಕ್ ಡೆಬ್ರಾಯ್

ವಿಷಯ ತಿಳಿದು ದೂರದ ಊರುಗಳಿಂದ ಶಿವನ ದರ್ಶನ ಪಡೆಯಲು ಭಕ್ತರು ಬರುತ್ತಿದ್ದಾರೆ. ಶಿವಲಿಂಗಕ್ಕೆ ನಮಸ್ಕರಿಸಿ ಹೂವು, ಹಣ್ಣುಗಳನ್ನು ಇರಿಸಿ ಬಾಲಾಭಿಷೇಕ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಆದರೆ ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆಯೇ ಅಥವಾ ನಿಜವಾಗಿಯೂ ನಡೆದಿದೆಯೇ ಎಂಬುದು ತಿಳಿದು ಬಂದಿಲ್ಲ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?