AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಮನೆಯಲ್ಲಿ ಪುರುಷರು ಕಸ ಗುಡಿಸುವುದರಿಂದ ಇದೆ ಅಪಾರ ಲಾಭ; ಜ್ಯೋತಿಷ್ಯ ಸಲಹೆ ಇಲ್ಲಿದೆ

ಪುರುಷರು ಮನೆಯನ್ನು ಗುಡಿಸುವುದು ಕೇವಲ ಸ್ವಚ್ಛತೆಯಲ್ಲ, ಬದಲಾಗಿ ಆಧ್ಯಾತ್ಮಿಕವಾಗಿ ಮಹತ್ತರ ಫಲಗಳನ್ನು ನೀಡುತ್ತದೆ. ಇದರಿಂದ ಬಡತನ ನಿವಾರಣೆಯಾಗಿ ಸಂಪತ್ತು ವೃದ್ಧಿಯಾಗುತ್ತದೆ, ಮನೆಯಲ್ಲಿ ಶಾಂತಿ ನೆಲೆಸುತ್ತದೆ ಹಾಗೂ ಮಹಾಲಕ್ಷ್ಮಿಯ ಕೃಪೆ ದೊರೆಯುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ಕುಟುಂಬ ಸದಸ್ಯರ ಸಂಬಂಧಗಳೂ ಸುಧಾರಿಸುತ್ತವೆ.

Daily Devotional: ಮನೆಯಲ್ಲಿ ಪುರುಷರು ಕಸ ಗುಡಿಸುವುದರಿಂದ ಇದೆ ಅಪಾರ ಲಾಭ; ಜ್ಯೋತಿಷ್ಯ ಸಲಹೆ ಇಲ್ಲಿದೆ
ಪುರುಷರು ಕಸ ಗುಡಿಸುವುದು
ಅಕ್ಷತಾ ವರ್ಕಾಡಿ
|

Updated on: Dec 25, 2025 | 7:29 AM

Share

ಪುರುಷರು ಮನೆಯಲ್ಲಿ ಕಸ ಗುಡಿಸುವುದರ ಹಿಂದಿನ ಆಧ್ಯಾತ್ಮಿಕ ಮಹತ್ವದ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ಸಾಮಾನ್ಯವಾಗಿ ಗೃಹಿಣಿಯನ್ನು ಮನೆಯ ಮಹಾಲಕ್ಷ್ಮಿ ಎಂದು ಪರಿಗಣಿಸಲಾಗುತ್ತದೆ. ಸಮಾಜದಲ್ಲಿ ಒಂದು ಕುಟುಂಬಕ್ಕೆ ಗಂಡು ಮತ್ತು ಹೆಣ್ಣು ಇಬ್ಬರೂ ಸಮಾನವಾಗಿ ಮುಖ್ಯರು, ಹೇಗೆ ಸೂರ್ಯ-ಚಂದ್ರರು ಅಥವಾ ಎರಡು ಕಣ್ಣುಗಳು ಮುಖ್ಯವೋ ಹಾಗೆಯೇ. ಒಬ್ಬರು ಸಂಪಾದನೆಯ ಜವಾಬ್ದಾರಿ ಹೊತ್ತರೆ, ಮತ್ತೊಬ್ಬರು ಮನೆಯ ನಿರ್ವಹಣೆಯ ಜವಾಬ್ದಾರಿ ಹೊತ್ತಿರುತ್ತಾರೆ. ಆದರೆ, ಮನೆಯ ಸ್ವಚ್ಛತೆ ಕೇವಲ ಹೆಣ್ಣು ಮಕ್ಕಳ ಕರ್ತವ್ಯ ಎಂದು ಭಾವಿಸುವುದು ಸರಿಯಲ್ಲ. ಮನೆಯನ್ನು ಸ್ವಚ್ಛವಾಗಿಡುವುದು ಪುರುಷರ ಜವಾಬ್ದಾರಿಯ ಭಾಗವೂ ಹೌದು.

ಮನೆಯಲ್ಲಿ ಪುರುಷರು ಕಸ ಗುಡಿಸುವುದರಿಂದ ಶುಭ ಫಲಗಳು ಉಂಟಾಗುತ್ತವೆಯೇ ಎಂಬ ಪ್ರಶ್ನೆಗೆ ಶಾಸ್ತ್ರಗಳು ಸಕಾರಾತ್ಮಕ ಉತ್ತರ ನೀಡುತ್ತವೆ. ಪುರುಷರು ಬೆಳಗಿನ ಜಾವದಲ್ಲಿ ಅಥವಾ ಸೂರ್ಯೋದಯದ ಸಮಯದಲ್ಲಿ ಮನೆಯ ಒಳಗಾಗಲಿ ಅಥವಾ ಹೊರಗಾಗಲಿ ಕಸ ಗುಡಿಸುವುದರಿಂದ ಅಪಾರ ಶುಭ ಫಲಗಳು ದೊರೆಯುತ್ತವೆ. ಮನೆಯ ಮುಖ್ಯಸ್ಥರು ಅಥವಾ ಪುರುಷರು ಸ್ವತಃ ಮನೆಯನ್ನು ಸ್ವಚ್ಛಗೊಳಿಸುವುದರಿಂದ ಬಡತನ ಬರುವುದಿಲ್ಲ ಎಂದು ನಂಬಲಾಗಿದೆ.

ಇದರ ಜೊತೆಗೆ, ಪುರುಷರು ಮನೆಯಲ್ಲಿ ಕಸ ಗುಡಿಸುವಾಗ, ಕುಟುಂಬದ ಇತರ ಸದಸ್ಯರಾದ ಪತ್ನಿ, ಮಕ್ಕಳು ಮತ್ತು ತಾಯಿಯೊಂದಿಗೆ ಉತ್ತಮ ಬಾಂಧವ್ಯ ಬೆಳೆಯುತ್ತದೆ. ವಿಶೇಷವಾಗಿ ಪತ್ನಿಗೆ ತನ್ನ ಪತಿಯ ಬಗ್ಗೆ ಪ್ರೀತಿ ಮತ್ತು ಮಮತೆ ಹೆಚ್ಚುತ್ತದೆ. ಜ್ಯೋತಿಷ್ಯದ ಪ್ರಕಾರ, ಈ ಕಾರ್ಯವು ಕುಟುಂಬಕ್ಕೆ ಬಹಳಷ್ಟು ಶ್ರೇಯಸ್ಸನ್ನು ತರುತ್ತದೆ. ಬಡತನ ನಿವಾರಣೆಯಾಗಿ ಸಂಪತ್ತು ವೃದ್ಧಿಯಾಗುತ್ತದೆ. ಮನೆಯಲ್ಲಿ ಶಾಂತಿ ಬೆಳೆದು, ಕೋಪ ಮತ್ತು ಮನಸ್ತಾಪಗಳು ಕಡಿಮೆಯಾಗುತ್ತವೆ. ಮಹಾಲಕ್ಷ್ಮಿಯ ಕೃಪೆ ಸದಾ ಮನೆಗೆ ಇರುತ್ತದೆ.

ಇದನ್ನೂ ಓದಿ: ಮನಿ ಪ್ಲಾಂಟ್‌ನ ಬುಡದಲ್ಲಿ ಒಂದು ನಾಣ್ಯ ಹೂತಿಡಿ; ಪ್ರಯೋಜನ ಸಾಕಷ್ಟಿವೆ

ಒಬ್ಬ ಪುರುಷನು ಮನೆಯನ್ನು ನಿರ್ಲಕ್ಷಿಸಿ, ಎಲ್ಲಿ ಬೇಕೆಂದರಲ್ಲಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಸ್ವಚ್ಛತೆ ಕಾಪಾಡದಿದ್ದರೆ, ಆ ಮನೆಗೆ ದಾರಿದ್ರ್ಯ ದೇವತೆ ಆವರಿಸುತ್ತದೆ ಎಂದು ನಂಬಲಾಗಿದೆ. ಹಿಂದೂ ಸನಾತನ ಸಂಸ್ಕೃತಿಯಲ್ಲಿ ಹೇಳಿರುವ ಕೆಲವು ವಿಧಿವಿಧಾನಗಳನ್ನು ಪಾಲಿಸುವುದರಿಂದ ಬಹಳಷ್ಟು ಶುಭ ಫಲಗಳು ದೊರೆಯುತ್ತವೆ. ಮನೆಯ ಸ್ವಚ್ಛತೆಯನ್ನು ಕಾಪಾಡುವುದರಲ್ಲಿ ಪುರುಷರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ. ಈ ಕಾರ್ಯದಿಂದ ಕರ್ಮಗಳು ಸಹ ಕಡಿಮೆಯಾಗುತ್ತವೆ. ಪ್ರತಿದಿನ ಸಾಧ್ಯವಾಗದಿದ್ದರೂ, ಕನಿಷ್ಠ ವಾರಕ್ಕೊಮ್ಮೆಯಾದರೂ ಪುರುಷರು ಮನೆಯಲ್ಲಿ ಕಸ ಗುಡಿಸುವುದು ಆ ಮನೆಗೆ ಅದೃಷ್ಟವನ್ನು ತರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ