AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Turmeric and Vastu Tips: ಮನೆಯಲ್ಲಿ ವಾಸ್ತು ದೋಷ ಮತ್ತು ಗ್ರಹ ದೋಷಗಳನ್ನು ನಿವಾರಣೆ ಮಾಡಲು ಅರಿಶಿನದೊಂದಿಗೆ ಈ ಪರಿಹಾರವನ್ನು ಕಂಡುಕೊಳ್ಳಿ

ವಾಸ್ತು ಸಲಹೆಗಳು: ವಾಸ್ತು ಮತ್ತು ಗ್ರಹ ದೋಷಗಳನ್ನು ತೊಡೆದುಹಾಕಲು ಮತ್ತು ಅದೃಷ್ಟವನ್ನು ಮನೆಯೊಳಕ್ಕೆ ತರಲು, ಅರಿಶಿನದಿಂದ ಹೀಗೆ ಮಾಡಿ

Turmeric and Vastu Tips: ಮನೆಯಲ್ಲಿ ವಾಸ್ತು ದೋಷ ಮತ್ತು ಗ್ರಹ ದೋಷಗಳನ್ನು ನಿವಾರಣೆ ಮಾಡಲು ಅರಿಶಿನದೊಂದಿಗೆ ಈ ಪರಿಹಾರವನ್ನು ಕಂಡುಕೊಳ್ಳಿ
ವಾಸ್ತು ದೋಷ ಮತ್ತು ಅರಿಶಿನದಿಂದ ಮಾಡುವ ಪರಿಹಾರ
TV9 Web
| Edited By: |

Updated on: Apr 18, 2023 | 6:06 AM

Share

ನಿಮ್ಮ ಮನೆಯಲ್ಲಿ ಉದ್ಭವವಾಗಿರುವ ವಾಸ್ತು ದೋಷಗಳನ್ನು (Vastu Tips) ಅರಿಶಿನದೊಂದಿಗೆ ನಿವಾರಿಸಿಕೊಳ್ಳಬಹುದು (Turmeric Remedy). ಇದು ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಸುಲಭವಾಗಿ ತೆಗೆದುಹಾಕುತ್ತದೆ. ಮನೆಯಲ್ಲಿ ವಾಸಿಸುವ ಎಲ್ಲಾ ಕುಟುಂಬ ಸದಸ್ಯರ ನಡುವೆ ಪರಸ್ಪರ ಭಿನ್ನಾಭಿಪ್ರಾಯಗಳು ಆಗಾಗ ಮೂಡುತ್ತಿರುತ್ತವೆ. ಜಗಳಗಳು ದೈನಂದಿನ ಜೀವನದ ಒಂದು ಭಾಗವಾಗಿದೆ. ವಾಸ್ತು ದೋಷಗಳು ಅಥವಾ ಮನೆಯಲ್ಲಿನ ಇಂತಹ ನಕಾರಾತ್ಮಕ ಶಕ್ತಿಯು ಇಂತಹ ಕಸಿವಿಸಿ ಸ್ಥಿತಿಗೆ ಮುಖ್ಯ ಕಾರಣವಾಗಿರಬಹುದು (Vastu Tips in Kannada).

ವಾಸ್ತು ಪಂಡಿತರ ಪ್ರಕಾರ ಅರಿಶಿನದ ಸಹಾಯದಿಂದ ನಿಮ್ಮ ಮನೆಯಲ್ಲಿ ಸೃಷ್ಟಿಯಾಗಿರುವ ವಾಸ್ತು ದೋಷಗಳನ್ನು ತೆಗೆದುಹಾಕಬಹುದು. ಅಷ್ಟೇ ಅಲ್ಲ. ಈ ಪರಿಹಾರವು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಸಹ ಸುಲಭವಾಗಿ ತೆಗೆದುಹಾಕುತ್ತದೆ. ಅರಿಶಿನದಿಂದ ಏನು ಮಾಡಬೇಕೆಂದು ಕಂಡುಹಿಡಿಯೋಣ.

– ಪಾರ್ವತಿ ದೇವಿಯನ್ನು ಪೂಜಿಸುವಾಗ ಅರಿಶಿನವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಈ ಅರಿಶಿನವನ್ನು ನೀರಿನಲ್ಲಿ ಕರಗಿಸಿ ಮನೆಯ ಸುತ್ತಲೂ ಚಿಮುಕಿಸಿದರೆ ನಿಮ್ಮ ಎಲ್ಲಾ ತೊಂದರೆಗಳು ಪರಿಹಾರವಾಗುತ್ತವೆ. ಈ ಪರಿಹಾರವು ದೆವ್ವ ಇತ್ಯಾದಿಗಳ ವಿರುದ್ಧವೂ ರಕ್ಷಿಸುತ್ತದೆ.

– ಅರಿಶಿನವನ್ನು ಮನೆಯಲ್ಲಿನ ವಾಸ್ತು ದೋಷಗಳನ್ನು ಹೋಗಲಾಡಿಸುವ ಔಷಧಿ ಎಂದೂ ವಿವರಿಸಲಾಗಿದೆ. ಗುರು ಪುಷ್ಯ ನಕ್ಷತ್ರ ಅಥವಾ ಗುರುವಾರದ ಯಾವುದೇ ಶುಭ ಮುಹೂರ್ತದಲ್ಲಿ ಮನೆಯ ಮುಖ್ಯ ಬಾಗಿಲಿನ ಎರಡೂ ಬದಿಯಲ್ಲಿ ಹಳದಿ ಬಣ್ಣದಿಂದ ಸ್ವಸ್ತಿಕ್ ಚಿಹ್ನೆಯನ್ನು ಮಾಡಿ. ಇದರಿಂದ ಮನೆಯಲ್ಲಿ ವಾಸಿಸುವ ಜನರು ಸಮೃದ್ಧಿ ಹೊಂದುತ್ತಾರೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ.

– ಜಾತಕದಲ್ಲಿ ಮಂಗಳವು ಅಶುಭವಾಗಿದ್ದರೆ, ಹಳದಿ ವಸ್ತುಗಳನ್ನು ದಾನ ಮಾಡಲಾಗುತ್ತದೆ. ಜ್ಯೋತಿಷಿಗಳ ಸಲಹೆಯೊಂದಿಗೆ ಅರಿಶಿನವನ್ನು ದಾನ ಮಾಡುವುದರಿಂದ ನೀವು ತೊಂದರೆಗಳಿಂದ ಹೊರಬರುತ್ತೀರಿ.

– ಮನೆಯಲ್ಲಿ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು, ನೀವು ನಿಮ್ಮ ಹಣವನ್ನು ಇರಿಸುವ ಮನೆಯ ಬೀರು ಅಥವಾ ಕಮಾನುಗಳಲ್ಲಿ ಅರಿಶಿನದ ಉಂಡೆಯನ್ನು ಇಡಬೇಕು.

Also read:

Shiva Mahamrityunjaya Mantra: ಶಿವನ ಆರಾಧಿಸುವ ಮಹಾಮೃತ್ಯುಂಜಯ ಮಂತ್ರದ ಮಹತ್ವ ಏನು?

ಈ ಪರಿಹಾರವು ಮನೆಯಲ್ಲಿ ಹಣವನ್ನು ಸ್ಥಿರವಾಗಿರಿಸುತ್ತದೆ. ಆರ್ಥಿಕ ಯಶಸ್ಸನ್ನು ನೀಡುತ್ತದೆ. ಅಲ್ಲದೆ, ಕುಬೇರ ಯಂತ್ರ ಅಥವಾ ಶ್ರೀ ಯಂತ್ರವನ್ನು ಖಜಾನೆಯಲ್ಲಿ ಇಡುವುದರಿಂದ ಆರ್ಥಿಕ ಸ್ಥಿರತೆ ಕೂಡ ಬರುತ್ತದೆ.

-ವಾರಕ್ಕೊಮ್ಮೆಯಾದರೂ ಮನೆಯಲ್ಲಿ ಕರ್ಪೂರವನ್ನು ಉರಿಸುವುದರಿಂದ ಎಲ್ಲಾ ದೋಷಗಳು ದೂರವಾಗುತ್ತವೆ. ಅಲ್ಲದೆ ಮನೆಯ ಸದಸ್ಯರ ಆದಾಯವೂ ಹೆಚ್ಚುತ್ತಲೇ ಇರುತ್ತದೆ.

– ವಾಸ್ತು ಶಾಸ್ತ್ರದ ಪ್ರಕಾರ, ಪಕ್ಷಿಗಳಿಗೆ ಆಹಾರ ಮತ್ತು ನೀರು ಹಾಕುವುದರಿಂದ ಪ್ರಯೋಜನವಾಗಿ, ವೈಯಕ್ತಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ