Vaikuntha Ekadashi 2025: ವೈಕುಂಠ ಏಕಾದಶಿಯಂದು ಈ ತಪ್ಪುಗಳನ್ನು ಮಾಡಬೇಡಿ
ಈ ವರ್ಷದ ವೈಕುಂಠ ಏಕಾದಶಿ ಜನವರಿ 10 ರಂದು ಆಚರಿಸಲಾಗುತ್ತದೆ. ಈ ಪವಿತ್ರ ದಿನದಂದು ಶ್ರೀ ವಿಷ್ಣುವಿನ ಪೂಜೆ, ಉಪವಾಸ, ಮತ್ತು ದಾನ ಮಾಡುವುದು ಬಹಳ ಮುಖ್ಯ. ಅನ್ನ, ವಸ್ತ್ರ, ಧನ, ತುಳಸಿ ಗಿಡ, ಕಂಬಳಿ, ಧಾನ್ಯಗಳ ದಾನ ಪುಣ್ಯಕರ. ಋಣಾತ್ಮಕ ಆಲೋಚನೆಗಳು, ಸುಳ್ಳು, ಕೋಪ, ಮಾಂಸಾಹಾರ ಮತ್ತು ಈರುಳ್ಳಿ-ಬೆಳ್ಳುಳ್ಳಿ ಸೇವನೆಯನ್ನು ತಪ್ಪಿಸಬೇಕು. ಈ ದಿನದ ಆಚರಣೆಯಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ ಈ ವರ್ಷದ ವೈಕುಂಠ ಏಕಾದಶಿ ಜನವರಿ 9 ರಂದು ಮಧ್ಯಾಹ್ನ 12:22 ಕ್ಕೆ ಪ್ರಾರಂಭವಾಗುತ್ತದೆ. ಈ ತಿಥಿ ಮರುದಿನ ಅಂದರೆ ಜನವರಿ 10 ರಂದು ಬೆಳಗ್ಗೆ 10:19 ಕ್ಕೆ ಕೊನೆಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜನವರಿ 10 ರಂದು ಉದಯ ತಿಥಿಯಂತೆ ವೈಕುಂಠ ಏಕಾದಶಿ ಉಪವಾಸವನ್ನು ಆಚರಿಸಬೇಕು. ಈ ದಿನ ಶ್ರೀ ವಿಷ್ಣುವನ್ನು ಪೂಜಿಸುವುದು, ಉಪವಾಸ ಮಾಡುವುದು ಮತ್ತು ದಾನ ಮಾಡುವುದು ಸಹ ಬಹಳ ಪುಣ್ಯವೆಂದು ಪರಿಗಣಿಸಲಾಗಿದೆ. ಹಾಗಾದರೆ ವೈಕುಂಠ ಏಕಾದಶಿಯಂದು ಯಾವ ಯಾವ ವಸ್ತುಗಳನ್ನು ದಾನ ಮಾಡುವುದು ಶುಭ ಮತ್ತು ಯಾವ ಕೆಲಸಗಳನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.
ಯಾವ ವಸ್ತುಗಳನ್ನು ದಾನ ಮಾಡಬೇಕು?
- ವೈಕುಂಠ ಏಕಾದಶಿಯಂದು ಬಡವರಿಗೆ ಅನ್ನ, ವಸ್ತ್ರ, ಧನ ದಾನ ಮಾಡಿದರೆ ಶ್ರೇಯಸ್ಕರ ಎಂಬ ನಂಬಿಕೆ ಇದೆ. ಹೀಗೆ ಮಾಡುವುದರಿಂದ ಪುಣ್ಯ ಫಲ ಸಿಗುತ್ತದೆ.
- ಈ ದಿನ ತುಳಸಿ ಗಿಡ, ಕಂಬಳಿ, ಧಾನ್ಯ ದಾನ ಮಾಡುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಪುಣ್ಯ ಬರುತ್ತದೆ ಎಂಬ ನಂಬಿಕೆ ಇದೆ.
- ಈ ದಿನ ಗೋವನ್ನು ದಾನ ಮಾಡುವ ಸಂಪ್ರದಾಯವೂ ಇದೆ. ಹೀಗೆ ಮಾಡುವುದರಿಂದ ಸಕಲ ಸಂಪತ್ತು ಸಿಗುತ್ತದೆ.. ಸಮಾಜದಲ್ಲಿ ಗೌರವ ಸಿಗುತ್ತದೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ: ವೈಕುಂಠ ಏಕಾದಶಿಗೆ ಉಪವಾಸ ಮಾಡುವುದೇಕೆ? ಅದರ ಹಿಂದಿನ ಧಾರ್ಮಿಕ ಮಹತ್ವ ತಿಳಿಯಿರಿ
ವೈಕುಂಠ ಏಕಾದಶಿಯಂದು ಏನು ಮಾಡಬಾರದು?
- ವೈಕುಂಠ ಏಕಾದಶಿಯಂದು ಕೆಟ್ಟ ಆಲೋಚನೆಗಳನ್ನು ಮಾಡಬೇಡಿ.
- ಇಂದು ಸುಳ್ಳು ಹೇಳಬೇಡಿ, ಕೋಪಗೊಳ್ಳಬೇಡಿ.
- ಈ ದಿನ ಮಾಂಸಾಹಾರ ಸೇವಿಸಬೇಡಿ.
- ಈ ದಿನ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇವಿಸಬೇಡಿ.
ವೈಕುಂಠ ಏಕಾದಶಿಯ ಮಹತ್ವ:
ವೈಕುಂಠ ಏಕಾದಶಿ ದಿನವನ್ನು ಧಾರ್ಮಿಕವಾಗಿ ಬಹಳ ಮಹತ್ವದ್ದಾಗಿದೆ. ಈ ದಿನದಂದು ಶ್ರೀ ಮಹಾವಿಷ್ಣುವಿನ ಆರಾಧನೆ ಮತ್ತು ಉಪವಾಸ ಮಾಡುವುದರಿಂದ ಮನಸ್ಸಿನಲ್ಲಿರುವ ಕಲ್ಮಶಗಳು ದೂರವಾಗುತ್ತವೆ. ಮನಸ್ಸು ಶುದ್ಧ ಮತ್ತು ಪವಿತ್ರವಾಗುತ್ತದೆ. ಈ ದಿನ ವಿಷ್ಣುವನ್ನು ಪೂಜಿಸುವುದು ಮತ್ತು ಉಪವಾಸ ಮಾಡುವುದರಿಂದ ಮನೆಯಲ್ಲಿನ ತೊಂದರೆಗಳು ದೂರವಾಗುತ್ತವೆ. ಅಷ್ಟೇ ಅಲ್ಲ ಮನೆಯಲ್ಲಿ ಸುಖ ಸಂತೋಷ ಸದಾ ಇರುತ್ತದೆ. ಈ ದಿನದಂದು ಪೂಜೆ ಮತ್ತು ಉಪವಾಸ ಮಾಡುವವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಮತ್ತು ಸ್ವರ್ಗವನ್ನು ತಲುಪುತ್ತದೆ ಎಂದು ನಂಬಲಾಗಿದೆ. ಮರಣದ ನಂತರ ಮರುಜನ್ಮವಿಲ್ಲದೆ ಮೋಕ್ಷವನ್ನು ಪಡೆಯುತ್ತಾನೆ ಮತ್ತು ವೈಕುಂಠ ಧಾಮದಲ್ಲಿ ಸ್ಥಾನವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:31 am, Wed, 8 January 25