Sankashta Chaturthi 2024: ಅಕ್ಟೋಬರ್ ತಿಂಗಳಲ್ಲಿ ಸಂಕಷ್ಟ ಚತುರ್ಥಿ ಯಾವಾಗ? ಈ ಬಾರಿ ಯಾವೆಲ್ಲಾ ಯೋಗಗಳು ಕಂಡುಬರುತ್ತವೆ?

|

Updated on: Oct 16, 2024 | 2:35 PM

ವಕ್ರತುಂಡ ಸಂಕಷ್ಟಿ ಚತುರ್ಥಿಯ ದಿನಾಂಕದ ಬಗ್ಗೆ ಹೇಳುವುದಾದರೆ ವಕ್ರತುಂಡ ಸಂಕಷ್ಟಿ ಚತುರ್ಥಿಯನ್ನು 20 ಅಕ್ಟೋಬರ್ 2024 ರಂದು ಆಚರಿಸಲಾಗುತ್ತದೆ. ವಿಶೇಷವೆಂದರೆ 2024 ರಲ್ಲಿ ಕರ್ವಾ ಚೌತ್ ಉಪವಾಸದ ದಿನದಂದೇ ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತದೆ.

Sankashta Chaturthi 2024: ಅಕ್ಟೋಬರ್ ತಿಂಗಳಲ್ಲಿ ಸಂಕಷ್ಟ ಚತುರ್ಥಿ ಯಾವಾಗ? ಈ ಬಾರಿ ಯಾವೆಲ್ಲಾ ಯೋಗಗಳು ಕಂಡುಬರುತ್ತವೆ?
ವಕ್ರತುಂಡ ಸಂಕಷ್ಟ ಚತುರ್ಥಿ ಯಾವಾಗ
Follow us on

Sankashta Chaturthi 2024: ಸಂಕಷ್ಟ ಚತುರ್ಥಿ 2024 – ಕೃಷ್ಣ ಮತ್ತು ಶುಕ್ಲ ಪಕ್ಷದ ಚತುರ್ಥಿಯನ್ನು ಗಣೇಶನ ಪೂಜೆಗೆ ವಿಶೇಷವೆಂದು ಪರಿಗಣಿಸಲಾಗಿದೆ. ಈ ದಿನಾಂಕದಂದು ಭಕ್ತರು ಗಣಪನನ್ನು ಪೂಜಿಸುವುದರಿಂದ ಒಳ್ಳೆಯ ಫಲಿತಗಳನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ವಕ್ರತುಂಡ ಸಂಕಷ್ಟ ಚತುರ್ಥಿಯ ದಿನಾಂಕ ಸಮೀಪಿಸುತ್ತಿದೆ. ಹೀಗೆ ಒಂದು ವರ್ಷದಲ್ಲಿ 12 ವಿನಾಯಕ ಚತುರ್ಥಿ ಮತ್ತು 12 ಸಂಕಷ್ಟ ಚತುರ್ಥಿಗಳು ಬರುತ್ತವೆ. ಆದರೆ ಕಾರ್ತಿಕ ಮಾಸದಲ್ಲಿ ಬರುವ ಚತುರ್ಥಿಯನ್ನು ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿದೆ. 2024 ರ ವಕ್ರತುಂಡ ಸಂಕಷ್ಟ ಚತುರ್ಥಿ ಯಾವಾಗ ಮತ್ತು ಈ ದಿನದ ಪೂಜಾ ವಿಧಿವಿಧಾನಗಳ ಜೊತೆಗೆ ಮಂಗಳಕರ ಸಮಯಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯೋಣ.

ವಕ್ರತುಂಡ ಸಂಕಷ್ಟ ಚತುರ್ಥಿ ಯಾವಾಗ:

ಹಿಂದೂ ಕ್ಯಾಲೆಂಡರ್ ಪ್ರಕಾರ ಪ್ರತಿ ತಿಂಗಳ ನಾಲ್ಕನೇ ದಿನಾಂಕವನ್ನು ಗಣೇಶನಿಗೆ ಸಮರ್ಪಿತವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಗಣಪತಿಯನ್ನು ಪೂಜಿಸುವುದರಿಂದ ಭಕ್ತರು ತುಂಬಾ ಶುಭ ಫಲಗಳನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಈ ದಿನ ಜನರು ಗಣೇಶನ ಹೆಸರಿನಲ್ಲಿ ಉಪವಾಸವನ್ನು ಸಹ ಆಚರಿಸುತ್ತಾರೆ. ವಕ್ರತುಂಡ ಸಂಕಷ್ಟಿ ಚತುರ್ಥಿಯ ದಿನಾಂಕದ ಬಗ್ಗೆ ಹೇಳುವುದಾದರೆ ವಕ್ರತುಂಡ ಸಂಕಷ್ಟಿ ಚತುರ್ಥಿಯನ್ನು 20 ಅಕ್ಟೋಬರ್ 2024 ರಂದು ಆಚರಿಸಲಾಗುತ್ತದೆ. ವಿಶೇಷವೆಂದರೆ 2024 ರಲ್ಲಿ ಕರ್ವಾ ಚೌತ್ ಉಪವಾಸದ ದಿನದಂದೇ ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತದೆ.

ಸಂಕಷ್ಟ ಚತುರ್ಥಿಗೆ ಪರಿಹಾರಗಳು:

ಸಂಕಷ್ಟಿ ಚತುರ್ಥಿಯ ದಿನದಂದು ಗಣೇಶನ ಪೂಜೆ ಮತ್ತು ಗಣೇಶ ಚಾಲೀಸವನ್ನು ಪಠಿಸುವುದರಿಂದ ವ್ಯಕ್ತಿಯ ದುಃಖ ಮತ್ತು ನೋವುಗಳು ದೂರವಾಗುತ್ತವೆ. ಈ ದಿನ ಬೆಳಿಗ್ಗೆ ಸ್ನಾನ ಮಾಡಿ ದೇವರ ಪೂಜೆ ಮಾಡುವುದು ಮುಖ್ಯ. ಗಣಪನಿಗೆ ಚೆಂಡು ಹೂ/ ಅಥವಾ ಶಾವಂತಿಗೆ/ ಮಲ್ಲಿಗೆ ಹೂಗಳನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದಲ್ಲದೆ, ಈ ದಿನದಂದು ಪೂಜೆಯ ಸಮಯದಲ್ಲಿ ಗಣಪತಿಗೆ ಸಿಂಧೂರವನ್ನು ಅರ್ಪಿಸಿದರೆ, ಅದನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಸಿಂಧೂರ ಯಾವಾಗಲೂ ಗಣೇಶನಿಗೆ ಪ್ರಿಯವಾದದ್ದು.

ಇದನ್ನೂ ಓದಿ: ವಾಸ್ತು ಟಿಪ್ಸ್ – ಅಡುಗೆ ಮನೆ ಪಶ್ಚಿಮ ದಿಕ್ಕಿಗೆ ಇದ್ದರೆ ಏನಾಗುತ್ತದೆ, ಈ ಪರಿಹಾರ ಮಾಡಿ

ಇದಲ್ಲದೇ ಈ ದಿನ ಶಮೀ ವೃಕ್ಷವನ್ನು ಪೂಜಿಸುವುದರಿಂದ ವಿಶೇಷ ಲಾಭವಿದೆ. ಶಮಿ ವೃಕ್ಷವು ಗಣೇಶನಿಗೆ ಪ್ರಿಯವಾದದ್ದು ಎಂದು ಹೇಳಲಾಗುತ್ತದೆ. ಈ ದಿನ ಶಮಿ ವೃಕ್ಷದ ಎಲೆಗಳನ್ನು ಅರ್ಪಿಸಿದರೆ ದೇವರು ಸಂತುಷ್ಟನಾಗಿ ಭಕ್ತರ ಕಷ್ಟಗಳನ್ನು ದೂರ ಮಾಡುತ್ತಾನೆ.

ಇದನ್ನೂ ಓದಿ: ಇಡೀ ವಿಶ್ವಕ್ಕೆ ಅತಿದೊಡ್ಡ ದಾನಿಯಾಗಿರುವ ಭಾರತೀಯ ವ್ಯಕ್ತಿಯ ಪರಿಚಯ ಇಲ್ಲಿದೆ

ಸಂಕಷ್ಟ ಚತುರ್ಥಿಯ ಮಹತ್ವ ಮತ್ತು ಸಮಯ: 20 ಅಕ್ಟೋಬರ್ 2024 ರಂದು 06:46 AM ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ 21 ಅಕ್ಟೋಬರ್ 2024 ರಂದು 04:16 AM ಕ್ಕೆ ಕೊನೆಗೊಳ್ಳುತ್ತದೆ. ಈ ಅವಧಿಯಲ್ಲಿ ನಾವು ಚಂದ್ರೋದಯದ ಸಮಯದ ಬಗ್ಗೆ ಹೇಳುವುದಾದರೆ ಆ ಸಮಯವು ರಾತ್ರಿ 07:54 ಆಗಿದೆ.

Karva Chauth Mahatva- samay: ಕರ್ವಾ ಚೌತ್‌ನ ಪ್ರಾಮುಖ್ಯತೆ ಮತ್ತು ಸಮಯ: ಕರ್ವಾ ಚೌತ್ ಯಾವಾಗ?
ಈ ಬಾರಿ ವಕ್ರತುಂಡ ಸಂಕಷ್ಟಿ 20ನೇ ಅಕ್ಟೋಬರ್ 2024 ರಂದು ಬಂದಿದೆ. ಕರ್ವಾ ಚೌತ್ ಉಪವಾಸವನ್ನು ಈ ದಿನಾಂಕದಂದು ಮಾತ್ರ ಆಚರಿಸಲಾಗುತ್ತದೆ. ಕರ್ವಾ ಚೌತ್‌ನಲ್ಲಿ, ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ಉಪವಾಸ ಮಾಡುತ್ತಾರೆ. ಇದನ್ನು ಅಖಂಡ ಸೌಭಾಗ್ಯವತಿ ವ್ರತ ಎಂದೂ ಕರೆಯುತ್ತಾರೆ. ಶಿವನಿಗೆ ಕರ್ವ ಚೌತ್ ಉಪವಾಸವನ್ನು ಮೊದಲು ಆಚರಿಸಿದವಳು ತಾಯಿ ಪಾರ್ವತಿ ಎಂದು ಹೇಳಲಾಗುತ್ತದೆ. ಈ ದಿನ, ಮಹಿಳೆಯರು ಚಂದ್ರನನ್ನು ನೋಡಿದ ನಂತರ ತಮ್ಮ ಉಪವಾಸವನ್ನು ಮುಗಿಸುತ್ತಾರೆ. 2024 ರಲ್ಲಿ ಕರ್ವ ಚೌತ್ ಪೂಜೆಯ ಶುಭ ಸಮಯದ ಬಗ್ಗೆ ಹೇಳುವುದಾದರೆ ಇದು ಸಂಜೆ 05:46 ಕ್ಕೆ ಪ್ರಾರಂಭವಾಗಿ ರಾತ್ರಿ 07:02 ರವರೆಗೆ ಮುಂದುವರಿಯುತ್ತದೆ. ಚಂದ್ರ ದರ್ಶನವಾದ ನಂತರ ಕರ್ವಾ ಚೌತ್ ಆಚರಿಸಲಾಗುವುದು.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)

Published On - 2:36 am, Wed, 16 October 24