AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vastu Tips: ಮನೆಯಲ್ಲಿ ಆರ್ಥಿಕ ಸಮಸ್ಯೆ ಇದೆಯಾ? ಮನೆಯಂಗಳದಲ್ಲಿ ತುಳಸಿ ಗಿಡ ನೆಡುವುದರಿಂದ ಲಕ್ಷ್ಮಿಕಟಾಕ್ಷ ಖಚಿತ

Tulsi plant: ತುಳಸಿ ಗಿಡ ಮನೆಯೊಳಕ್ಕೆ ಅದೃಷ್ಟವನ್ನು ಹೊತ್ತುತರುತ್ತದೆ. ಧನ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ತುಳಸಿ ಗಿಡವು ಕೆಟ್ಟ ದೃಷ್ಟಿಯಿಂದ ರಕ್ಷಣೆ ನೀಡುತ್ತದೆ. ಕುಟುಂಬದಲ್ಲಿ ಸಂಬಂಧಗಳನ್ನು ಬಲಪಡಿಸುತ್ತದೆ.

Vastu Tips: ಮನೆಯಲ್ಲಿ ಆರ್ಥಿಕ ಸಮಸ್ಯೆ ಇದೆಯಾ? ಮನೆಯಂಗಳದಲ್ಲಿ ತುಳಸಿ ಗಿಡ ನೆಡುವುದರಿಂದ ಲಕ್ಷ್ಮಿಕಟಾಕ್ಷ ಖಚಿತ
ಮನೆಯಲ್ಲಿ ಆರ್ಥಿಕ ಸಮಸ್ಯೆ ಇದೆಯಾ? ಮನೆಯಂಗಳದಲ್ಲಿ ತುಳಸಿ ಗಿಡ ನೆಡುವುದರಿಂದ ಲಕ್ಷ್ಮಿಕಟಾಕ್ಷ ಖಚಿತ
TV9 Web
| Edited By: |

Updated on: May 13, 2022 | 6:06 AM

Share

Vastu Tips: ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಭಾರೀ ಮಹತ್ವ ಇದೆ. ಇದು ನಿತ್ಯನೂತನ, ನಿತ್ಯಪೂಜಿತ. ಈ ಗಿಡವನ್ನು ತುಂಬಾ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ತುಳಸಿ ಮಹಾವಿಷ್ಣುವಿಗೆ ತುಂಬಾ ಪ್ರೀತಿಪಾತ್ರ. ತುಳಸಿ ಗಿಡ (Basil Plant) ಎಲ್ಲ ಹಿಂದೂಗಳ ಮನೆಯಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಇಂತಹ ತುಳಸಿ ಗಿಡ ಅನೇಕ ಔಷಧೀಯ ಗುಣಗಳನ್ನೂ ಹೊಂದಿರುತ್ತದೆ. ಸಾಧಾರಣ ಜ್ವರ, ಫ್ಲೂ, ಕೆಮ್ಮು ಬಾಧೆಗಳಿಂದ ಉಪಶನ ಪಡೆಯಲು ಇದನ್ನು ಬಳಸುತ್ತಾರೆ. ಅಷ್ಟೇ ಅಲ್ಲ ಋತುಮಾನಗಳಲ್ಲಿ ಕಾಣಬರುವ ರೋಗರುಜಿನಗಳಿಂದಲೂ ಮುಕ್ತಿ ಪಡೆಯಬಹುದು. ಹಾಗಾಗಿ ಹಿಂದೂಗಳ ಮೈ-ಮನ-ಮನೆಗಳಲ್ಲಿ ಇದು ಕಾಯಂ ಸ್ಥಾನ ಪಡೆದಿದೆ. ಆದರೆ ಮನೆಯಂಗಳದಲ್ಲಿ ತುಳಸಿಯ (tulsi plant) ಸ್ಥಾನಮಾನ ಆಯಕಟ್ಟಿನ ಜಾಗದಲ್ಲಿ ಇರಬೇಕು. ಎಲ್ಲೆಂದರಲ್ಲಿ ಗಿಡ ನೆಡುವುದು ಸಂಜಸವಲ್ಲ. ಅದಕ್ಕೆ ವಾಸ್ತು ಪ್ರಕಾರವೇ ಆಗಬೇಕು (spiritual).

ವಾಸ್ತು ಪ್ರಕಾರ ಮನೆಯಂಗಳದಲ್ಲಿ ತುಳಸಿ ನೆಲೆಸಿದರೆ ಮನೆಯಲ್ಲಿ ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿದೆ. ಅಷ್ಟೇ ಅಲ್ಲ, ಆರ್ಥಿಕ ಪರಿಸ್ಥಿತಿಯನ್ನೂ ಅದು ಸಮೃದ್ಧಗೊಳಿಸುತ್ತದೆ. ವಾಸ್ತು ಪ್ರಕಾರದ ತುಳಸಿ ಗಿಡದಿಂದ ಯಾವೆಲ್ಲ ಪ್ರಯಫಜನಗಳು ಪ್ರಾಪ್ತಿಯಾಗಲಿವೆ… ಯಾವ ದಿಕ್ಕಿನಲ್ಲಿ ಗಿಡ ನೆಟ್ಟರೆ ಶ್ರೇಯಸ್ಕರ ಎಂಬುದನ್ನು ಈಗ ತಿಳಿಯೋಣ.

ಸ್ವಚ್ಛವಾದ ವಾತಾವರಣದಲ್ಲಿ ಮನೆಯಂಗಳದಲ್ಲಿ ತುಳಸಿ ಗಿಡವನ್ನು ಪೋಷಿಸುವುದರಿಂದ ಉತ್ತಮ, ಆರೋಗ್ಯಕರ ಗಾಳಿ ಸೂಸಲಿದೆ. ತುಳಸಿ ಎಲೆಗಳು ಗಾಳಿಯಲ್ಲಿನ ವಿಷ ರಾಸಾಯನಿಕಗಳನ್ನು ಹೀರಿಕೊಳ್ಳುತ್ತದೆ ಎಂಬ ನಂಬಿಕೆಯಿದೆ. ಇದು ತನ್ನ ಸುವಾಸನೆಯನ್ನು ನಾಲ್ಕೂ ದಿಕ್ಕುಗಳಿಗೆ ಹರಡುತ್ತದೆ.

ದುರಾದೃಷ್ಟ ತಡೆಯುತ್ತದೆ – ಅದೃಷ್ಟ ತರುತ್ತದೆ: ಋಣಾತ್ಮಕ ಶಕ್ತಿಯನ್ನು ಹೀರಿಕೊಂಡು ವಾತಾವರಣದಲ್ಲಿ ಧನಾತ್ಮಕೆತೆಯನ್ನು ಹೆಚ್ಚಿಸುತ್ತದೆ. ಇದು ಔಷಧೀಯ ಗುಣ ಬೀರುವುದರ ಜೊತೆಗೆ ಮನೆ ಮಂದಿಯ ಒತ್ತಡವನ್ನು ತಗ್ಗಿಸುತ್ತದೆ. ದುರಾದೃಷ್ಟ ಮನೆಯೊಳಕ್ಕೆ ಪ್ರವೇಶಿಸದಂತೆ ಇದು ತಡೆಯುತ್ತದೆ. ತುಳಸಿ ಗಿಡ ಮನೆಯೊಳಕ್ಕೆ ಅದೃಷ್ಟವನ್ನು ಹೊತ್ತುತರುತ್ತದೆ. ಧನ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ತುಳಸಿ ಗಿಡವು ಕೆಟ್ಟ ದೃಷ್ಟಿಯಿಂದ ರಕ್ಷಣೆ ನೀಡುತ್ತದೆ. ಕುಟುಂಬದಲ್ಲಿ ಸಂಬಂಧಗಳನ್ನು ಬಲಪಡಿಸುತ್ತದೆ. (Source)

ಆಧ್ಯಾತ್ಮ ಕುರಿತು ಹೆಚ್ಚು ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ