AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vinayak Chaturthi 2024: ಈ ತಿಂಗಳ ವಿನಾಯಕ ಚತುರ್ಥಿ ಯಾವಾಗ? ವಿನಾಯಕ ಹಾಗೂ ಸಂಕಷ್ಟ ಚತುರ್ಥಿಗಿರುವ ವ್ಯತ್ಯಾಸವೇನು?

ವಿನಾಯಕ ಚತುರ್ಥಿ ಹಬ್ಬವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ತಿಂಗಳು ಇದನ್ನು ಫೆ. 13 ರಂದು ಆಚರಿಸಲಾಗುವುದು. ಇದು ಹಿಂದೂ ಧರ್ಮದ ಅತ್ಯಂತ ಪ್ರಸಿದ್ಧ ಹಬ್ಬಗಳಲ್ಲಿ ಒಂದಾಗಿದೆ. ಹಾಗಾಗಿ ಈ ದಿನದಂದು ಜನರು ಗಣೇಶನನ್ನು ಮೆಚ್ಚಿಸಲು ಉಪವಾಸ ಮಾಡುತ್ತಾರೆ ಬಳಿಕ ರಾತ್ರಿ ಅದನ್ನು ಮುರಿಯುತ್ತಾರೆ. ಆದರೆ ಇತರ ಉಪವಾಸಗಳಂತೆ ಈ ಉಪವಾಸದಲ್ಲಿ ಚಂದ್ರ ದರ್ಶನ ಮಾಡುವುದಿಲ್ಲ. ಈ ದಿನದ ಮಹತ್ವ, ಪೂಜಾ ವಿಧಾನಗಳ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

Vinayak Chaturthi 2024: ಈ ತಿಂಗಳ ವಿನಾಯಕ ಚತುರ್ಥಿ ಯಾವಾಗ? ವಿನಾಯಕ ಹಾಗೂ ಸಂಕಷ್ಟ ಚತುರ್ಥಿಗಿರುವ ವ್ಯತ್ಯಾಸವೇನು?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Feb 09, 2024 | 3:42 PM

Share

ಹಿಂದೂ ಕ್ಯಾಲೆಂಡರ್ ಪ್ರಕಾರ, ಮಾಸಿಕ ವಿನಾಯಕ ಚತುರ್ಥಿಯ ಹಬ್ಬವನ್ನು ಪ್ರತಿ ತಿಂಗಳು ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಆಚರಿಸಲಾಗುತ್ತದೆ. ವಿನಾಯಕ ಚತುರ್ಥಿಯನ್ನು ಗಣೇಶ ಜಯಂತಿ ಎಂದೂ ಕೂಡ ಕರೆಯಲಾಗುತ್ತದೆ. ಇದು ಹಿಂದೂ ಧರ್ಮದ ಅತ್ಯಂತ ಪ್ರಸಿದ್ಧ ಹಬ್ಬಗಳಲ್ಲಿ ಒಂದಾಗಿದೆ. ಹಾಗಾಗಿ ಈ ದಿನದಂದು ಜನರು ಗಣೇಶನನ್ನು ಮೆಚ್ಚಿಸಲು ಉಪವಾಸ ಮಾಡುತ್ತಾರೆ ಬಳಿಕ ರಾತ್ರಿ ಅದನ್ನು ಮುರಿಯುತ್ತಾರೆ. ಆದರೆ ಇತರ ಉಪವಾಸಗಳಂತೆ ಈ ಉಪವಾಸದಲ್ಲಿ ಚಂದ್ರ ದರ್ಶನ ಮಾಡುವುದಿಲ್ಲ. ಗಣೇಶ ಜಯಂತಿಯ ದಿನದಂದು ಚಂದ್ರನ ದರ್ಶನವನ್ನು ನಿಷೇಧಿಸಲಾಗಿದೆ. ಈ ಬಾರಿ ಗಣೇಶ ಜಯಂತಿ ಅಥವಾ ವಿನಾಯಕ ಚತುರ್ಥಿಯನ್ನು ಫೆ. 13 ರಂದು ಮಂಗಳವಾರ ಆಚರಿಸಲಾಗುತ್ತದೆ. ಈ ದಿನದ ಮಹತ್ವ, ಪೂಜಾ ವಿಧಾನಗಳ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿನಾಯಕ ಚತುರ್ಥಿಯ ಮಹತ್ವವೇನು?

ಹಿಂದೂ ಧರ್ಮದಲ್ಲಿ ವಿನಾಯಕ ಚತುರ್ಥಿಗೆ ವಿಶೇಷ ಮಹತ್ವವಿದೆ. ಈ ದಿನವನ್ನು ಸಂಪೂರ್ಣವಾಗಿ ಗಣೇಶನ ಆರಾಧನೆಗೆ ಅರ್ಪಿಸಲಾಗಿದೆ. ಗಣಪತಿಯನ್ನು ವಿಘ್ನವಿನಾಶಕ ಎಂದೂ ಕರೆಯುತ್ತಾರೆ, ಅದೇ ರೀತಿಯಾಗಿ ತನ್ನ ನಂಬಿ ಬಂದ ಭಕ್ತರನ್ನು ಎಂದಿಗೂ ನಿರಾಸೆಗೊಳಿಸದೆ ಅವರ ಜೀವನದ ಎಲ್ಲಾ ಕಷ್ಟಗಳನ್ನು ನಿವಾರಣೆ ಮಾಡುತ್ತಾನೆ. ನೀವು ಯಾವುದೋ ಕಷ್ಟದ ಪರಿಸ್ಥಿತಿ ಅಥವಾ ಸಮಸ್ಯೆಯಿಂದ ಬಳಲುತ್ತಿದ್ದರೆ, ಅದರಿಂದ ಹೊರಬರಲು ಯಾವುದೇ ಮಾರ್ಗವಿಲ್ಲ ಎಂದು ನಿಮಗೆ ಅನಿಸಿದರೆ, ನೀವು ವಿನಾಯಕ ಚತುರ್ಥಿ ದಿನವನ್ನು ಆಚರಣೆ ಮಾಡಿ ಗಣೇಶನನ್ನು ಭಕ್ತಿಯಿಂದ ಪೂಜಿಸಿ, ಆಶೀರ್ವಾದವನ್ನು ಪಡೆಯಬೇಕು. ಹೀಗೆ ಮಾಡುವುದರಿಂದ ಲೌಕಿಕ ಸುಖ ಮತ್ತು ಶಾಶ್ವತ ಫಲ ಪ್ರಾಪ್ತಿಯಾಗುತ್ತದೆ.

ಇದನ್ನೂ ಓದಿ: ಮಹಾ ಶಿವರಾತ್ರಿ ಯಾವಾಗ? ಈ ದಿನದ ಮಹತ್ವ ಏನು?

ವಿನಾಯಕ ಚತುರ್ಥಿಯ ಪೂಜಾ ವಿಧಾನಗಳೇನು?

-ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ.

-ಮರದ ಪೀಠದ ಮೇಲೆ ಗಣೇಶನ ವಿಗ್ರಹ ಅಥವಾ ಫೋಟೋವನ್ನು ಕೂರಿಸಿ.

-ಆ ವಿಗ್ರಹ ಅಥವಾ ಫೋಟೋ ಮೇಲೆ ಕುಂಕುಮ ಹಚ್ಚಿ.

-ದುರ್ವೆ, ಹಳದಿ, ಕೆಂಪು ಅಥವಾ ಕೇಸರಿ ಹೂವುಗಳಿಂದ ಅಲಂಕಾರ ಮಾಡಿ.

-ಗಣೇಶನ ವಿಗ್ರಹದ ಮುಂದೆ ತುಪ್ಪದ ದೀಪವನ್ನು ಹಚ್ಚಿ.

-ಮೋದಕ ಅಥವಾ ಲಡ್ಡುಗಳನ್ನು ನೈವೇದ್ಯವಾಗಿ ಅರ್ಪಿಸಿ.

-ಸಾಧ್ಯವಾದಲ್ಲಿ ಈ ದಿನ ವಿನಾಯಕ ಕಥೆ, ಗಣೇಶನ ಮಂತ್ರಗಳನ್ನು ಪಠಿಸಿ.

-ಅಲಂಕಾರ, ನೈವೇದ್ಯ ಮುಗಿದ ಬಳಿಕ ಭಕ್ತಿಯಿಂದ ಆರತಿ ಮಾಡಿ.

-ಸಾತ್ವಿಕ ಆಹಾರದೊಂದಿಗೆ ಉಪವಾಸವನ್ನು ಮುರಿಯಿರಿ.

ವಿನಾಯಕ ಚತುರ್ಥಿ ಮತ್ತು ಸಂಕಷ್ಟ ಚತುರ್ಥಿಗಿರುವ ವ್ಯತ್ಯಾಸವೇನು?

ವಿನಾಯಕ ಚತುರ್ಥಿಯು ಅಮವಾಸ್ಯೆಯ ನಂತರ ಬರುತ್ತದೆ. ಅಂದರೆ ಅಮವಾಸ್ಯೆ ಆಗಿ ನಾಲ್ಕು ದಿನದ ನಂತರ ಆಚರಣೆ ಮಾಡಲಾಗುತ್ತದೆ, ಈ ದಿನವನ್ನು ವಿನಾಯಕನಿಗೆ ಅರ್ಪಿಸಲಾಗಿದೆ. ಇನ್ನು ಸಂಕಷ್ಟ ಚತುರ್ಥಿಯನ್ನು ಕೃಷ್ಣ ಪಕ್ಷದ ಹುಣ್ಣಿಮೆಯ ನಂತರ ಆಚರಿಸಲಾಗುತ್ತದೆ. ಅದರಲ್ಲಿಯೂ, ಈ ದಿನ ಮಂಗಳವಾರದಂದು ಬಂದರೆ ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಹಾಗಾಗಿ ಇದನ್ನು ಅಂಗಾರಕ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ಎರಡು ದಿನಗಳನ್ನು ಪ್ರತಿ ತಿಂಗಳು ಕೂಡ ಆಚರಿಸಲಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!