AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಮಕ್ಕಳನ್ನು ಅಥವಾ ಆತ್ಮೀಯರನ್ನು ನಿಕ್ ನೇಮ್​​ನಿಂದ ಕರೆಯುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಈ ಕೂಡಲೇ ಬಿಟ್ಟು ಬಿಡಿ

ಮಕ್ಕಳನ್ನು ಅಥವಾ ಆತ್ಮೀಯರನ್ನು ಅವರ ಪೂರ್ಣ ಹೆಸರಿನಿಂದ ಕರೆಯದೇ ಅರ್ಧಂಬರ್ಧ ಹೆಸರುಗಳಿಂದ ಕರೆಯುವುದು ಶುಭವಲ್ಲ ಎಂದು ಡಾ. ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ. ಪೂರ್ಣ ಹೆಸರಿನಿಂದ ಕರೆಯುವುದು ಅವರ ಪ್ರಗತಿ ಮತ್ತು ಧನಾತ್ಮಕ ಶಕ್ತಿಗೆ ಸಹಕಾರಿ. ನಾಮಬಲವು ವ್ಯಕ್ತಿಯ ಜೀವನದ ಮೇಲೆ ಆಳವಾದ ಪ್ರಭಾವ ಬೀರುತ್ತದೆ. ಆದ್ದರಿಂದ ಈ ಅಭ್ಯಾಸವನ್ನು ಇಂದೇ ಬಿಟ್ಟುಬಿಡಿ.

Daily Devotional: ಮಕ್ಕಳನ್ನು ಅಥವಾ ಆತ್ಮೀಯರನ್ನು ನಿಕ್ ನೇಮ್​​ನಿಂದ ಕರೆಯುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಈ ಕೂಡಲೇ ಬಿಟ್ಟು ಬಿಡಿ
ಅಡ್ಡ ಹೆಸರುImage Credit source: Wikimedia Commons
ಅಕ್ಷತಾ ವರ್ಕಾಡಿ
|

Updated on: Nov 27, 2025 | 10:13 AM

Share

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ದಿನನಿತ್ಯದ ಜೀವನದಲ್ಲಿ ನಾವು ಸಾಮಾನ್ಯವಾಗಿ ಮಾಡುವ ಒಂದು ಪ್ರಮುಖ ತಪ್ಪಿನ ಬಗ್ಗೆ ವಿವರಿಸಿದ್ದಾರೆ. ಅದು ನಮ್ಮ ಮನೆಯ ಸದಸ್ಯರನ್ನು, ಮಕ್ಕಳನ್ನು, ಒಡಹುಟ್ಟಿದವರನ್ನು ಅಥವಾ ಯಾವುದೇ ವ್ಯಕ್ತಿಯನ್ನು ಅವರ ಪೂರ್ಣ ಹೆಸರಿನಿಂದ ಕರೆಯದೆ, ಅಡ್ಡ ಹೆಸರುಗಳಿಂದ (Nickname) ಕರೆಯುವ ಅಭ್ಯಾಸ. ಇದು ಸಣ್ಣ ವಿಷಯವೆಂದು ತೋರಿದರೂ, ಇದು ವ್ಯಕ್ತಿಯ ಜೀವನದ ಪ್ರಗತಿ ಮತ್ತು ಧನಾತ್ಮಕ ಶಕ್ತಿಯ ಮೇಲೆ ಗಣನೀಯ ಪರಿಣಾಮ ಬೀರಬಹುದು ಎಂದು ಗುರೂಜಿ ಹೇಳುತ್ತಾರೆ.

ಮನೆದೇವರ ಹೆಸರಾಗಿರಲಿ, ಪೂರ್ವಿಕರ ಹೆಸರಾಗಿರಲಿ, ಪ್ರಕೃತಿಯ ಹೆಸರಾಗಿರಲಿ ಅಥವಾ ಯಾವುದೇ ಅರ್ಥಗರ್ಭಿತ ಹೆಸರಾಗಿರಲಿ, ಮಕ್ಕಳಿಗೆ ಒಳ್ಳೆಯ ಉದ್ದೇಶದಿಂದ ಹೆಸರನ್ನು ಇಡಲಾಗುತ್ತದೆ. ಆದರೆ, ನಾವು ಅವರನ್ನು ಪೂರ್ಣವಾಗಿ ಕರೆಯದೆ “ರಾಮಕೃಷ್ಣ” ಎನ್ನುವುದನ್ನು “ರಾಮು” ಎಂದೋ, “ಶಿವಕುಮಾರ” ಎನ್ನುವುದನ್ನು “ಶಿವು” ಎಂದೋ, “ಶ್ರೀನಿವಾಸ” ಎನ್ನುವುದನ್ನು “ಸೀನು” ಎಂದೋ, “ಮಂಜುಳ” ಎನ್ನುವುದನ್ನು “ಮಂಜು” ಎಂದೋ, “ಬಾಲಕೃಷ್ಣ” ಎನ್ನುವುದನ್ನು “ಬಾಲು” ಎಂದೋ ಕರೆಯುವುದು ನಮ್ಮ ಸಮಾಜದಲ್ಲಿ ಸಾಮಾನ್ಯವಾಗಿದೆ. ಈ ರೀತಿ ಅರ್ಧಂಬರ್ಧ ಹೆಸರನ್ನು ಕರೆಯುವುದು ವ್ಯಕ್ತಿಯ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ ಮತ್ತು ಋಣಾತ್ಮಕ ಶಕ್ತಿಗಳು ಅವರ ಸುತ್ತ ಆವರಿಸಿಕೊಳ್ಳಲು ಕಾರಣವಾಗಬಹುದು ಎಂದು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ.

ಪ್ರತಿ ಹೆಸರಿಗೂ ಅದರದೇ ಆದ ಶಕ್ತಿ ಮತ್ತು ಮಹತ್ವವಿದೆ. ಇದನ್ನು “ನಾಮಬಲ” ಎಂದು ಕರೆಯಲಾಗುತ್ತದೆ. ಒಬ್ಬ ವ್ಯಕ್ತಿಯನ್ನು ಪೂರ್ಣ ಹೆಸರಿನಿಂದ ಕರೆದಾಗ, ಆ ಹೆಸರಿನೊಂದಿಗೆ ಸಂಬಂಧಿಸಿದ ಧನಾತ್ಮಕ ಕಂಪನಗಳು ಮತ್ತು ಶಕ್ತಿಗಳು ಆ ವ್ಯಕ್ತಿಗೆ ವರ್ಗಾಯಿಸಲ್ಪಡುತ್ತವೆ. ಇದು ಸೂರ್ಯ ಹುಟ್ಟಿದಾಗ ನಮಗೆ ಹೊಸ ಶಕ್ತಿ ಬರುವಂತೆ, ಪ್ರತಿದಿನವೂ ಧನಾತ್ಮಕ ಶಕ್ತಿಯನ್ನು ವ್ಯಕ್ತಿಗೆ ತಂದುಕೊಡುತ್ತದೆ. ಉದಾಹರಣೆಗೆ, ದೇವರ ಹೆಸರಿಟ್ಟಿದ್ದರೆ, ಆ ದೈವಿಕ ಅಂಶಗಳು ವ್ಯಕ್ತಿಯಲ್ಲಿ ನೆಲೆಸುತ್ತವೆ. ಹಿರಿಯರ ಹೆಸರಿಟ್ಟಿದ್ದರೆ, ಅವರ ಸದ್ಗುಣಗಳು ಮತ್ತು ಶಕ್ತಿಗಳು ಅವರಲ್ಲಿ ಹರಿಯುತ್ತವೆ. ನಾಮಬಲವು ವ್ಯಕ್ತಿಯ ಜೀವನದ ಪ್ರತಿಯೊಂದು ಕೆಲಸ ಕಾರ್ಯಗಳಲ್ಲೂ ಸಕಾರಾತ್ಮಕ ಪ್ರಭಾವ ಬೀರಲು ನೆರವಾಗುತ್ತದೆ.

ಇದನ್ನೂ ಓದಿ: ಮನೆಗೆ ಹೊಸ ವರ್ಷದ ಕ್ಯಾಲೆಂಡರ್ ತರುತ್ತಿದ್ದೀರಾ? ಹಾಗಿದ್ರೆ ಈ ವಿಷ್ಯ ತಿಳಿದುಕೊಳ್ಳಿ

ಈ ಅಭ್ಯಾಸವನ್ನು ತಕ್ಷಣವೇ ಬದಲಾಯಿಸಿಕೊಳ್ಳಬೇಕು. ವಯಸ್ಸಾದ ಮೇಲೆ ಪೂರ್ಣ ಹೆಸರಿನಿಂದ ಕರೆಯಲು ಪ್ರಾರಂಭಿಸುವುದು ಪ್ರಯೋಜನಕಾರಿಯಲ್ಲ. ಚಿಕ್ಕ ವಯಸ್ಸಿನಿಂದಲೇ ಪೂರ್ಣ ಹೆಸರಿನಿಂದ ಕರೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. “ನಿನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮಬಲವೊಂದಿದ್ದರೆ ಸಾಕು” ಎಂದು ಭಗವಂತನನ್ನು ಕುರಿತು ಹೇಳುವಂತೆ, ವ್ಯಕ್ತಿಗಳ ಹೆಸರುಗಳಿಗೂ ಅಂತಹದೇ ಅತಿಮಹತ್ವದ ನಾಮಬಲವಿರುತ್ತದೆ. ಈ ನಾಮಬಲವು ಪ್ರತಿ ವ್ಯಕ್ತಿಗೂ, ಪ್ರತಿ ಜೀವಿಯಲ್ಲೂ ಇರುತ್ತದೆ. ಪೂರ್ಣ ಹೆಸರಿನಿಂದ ಕರೆಯುವುದರಿಂದ ವ್ಯಕ್ತಿಗೆ ಅಪಾರವಾದ ಒಳಿತಾಗುತ್ತದೆ. ಪ್ರತಿಯೊಬ್ಬರೂ ಈ ಸಕಾರಾತ್ಮಕ ಅಭ್ಯಾಸವನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!