AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನು11 ಅಲ್ಲ, 15 ಆಟಗಾರರು: ಬಿಸಿಸಿಐ T20 ರೂಲ್ಸ್ ಬದಲು?

ಕಾಲ ಕಾಲಕ್ಕೆ ಕ್ರಿಕೆಟ್ ಸ್ವರೂಪ ಬದಲಾಗ್ತಾನೇ ಇದೆ. ಹಾಗೇ ಕ್ರಿಕೆಟ್​ನ ನಿಯಮಗಳು ಬದಲಾಗ್ತಾನೇ ಇರುತ್ತೆ. ಆದ್ರೀಗ ಟಿಟ್ವೆಂಟಿ ಕ್ರಿಕೆಟ್​ಗೆ ಹೊಸ ಟಚ್ ನೀಡೋದಕ್ಕೆ ಬಿಸಿಸಿಐ ಹೆಜ್ಜೆಯಿಟ್ಟಿದೆ. ಅದು ಕೂಡ ಮುಂಬರೋ ಐಪಿಎಲ್​ನಿಂದಲೇ ಆ ಹೊಸ ರೂಲ್ ಅನ್ನ ಕ್ರಿಕೆಟ್ ಜಗತ್ತಿಗೆ ಪರಿಚಯಿಸೋದಕ್ಕೆ ರೆಡಿಯಾಗಿದೆ. ಹನ್ನೊಂದು ಮಂದಿಯಲ್ಲ.. 15 ಆಟಗಾರರೂ ಆಡ್ಬಹುದು! ಬಿಸಿಸಿಐ ಐಪಿಎಲ್​ನಲ್ಲಿ ಪರಿಚಯಿಸುತ್ತಿರೋ ಹೊಸ ನಿಯಮವೇ ಇದು. ಅಂದ್ರೆ ಕ್ರಿಕೆಟ್​ ಅನ್ನೋ ಜಂಟಲ್​ಮೆನ್ ಗೇಮ್​ನಲ್ಲಿ ಆಡೋದು ಹನ್ನೊಂದು ಮಂದಿ. ಆದ್ರೆ ಮುಂದಿನ ಐಪಿಎಲ್​ನಲ್ಲಿ ಒಟ್ಟು ಹದಿನೈದು […]

ಇನ್ನು11 ಅಲ್ಲ, 15 ಆಟಗಾರರು: ಬಿಸಿಸಿಐ T20 ರೂಲ್ಸ್ ಬದಲು?
ಸಾಧು ಶ್ರೀನಾಥ್​
|

Updated on:Nov 06, 2019 | 4:39 PM

Share

ಕಾಲ ಕಾಲಕ್ಕೆ ಕ್ರಿಕೆಟ್ ಸ್ವರೂಪ ಬದಲಾಗ್ತಾನೇ ಇದೆ. ಹಾಗೇ ಕ್ರಿಕೆಟ್​ನ ನಿಯಮಗಳು ಬದಲಾಗ್ತಾನೇ ಇರುತ್ತೆ. ಆದ್ರೀಗ ಟಿಟ್ವೆಂಟಿ ಕ್ರಿಕೆಟ್​ಗೆ ಹೊಸ ಟಚ್ ನೀಡೋದಕ್ಕೆ ಬಿಸಿಸಿಐ ಹೆಜ್ಜೆಯಿಟ್ಟಿದೆ. ಅದು ಕೂಡ ಮುಂಬರೋ ಐಪಿಎಲ್​ನಿಂದಲೇ ಆ ಹೊಸ ರೂಲ್ ಅನ್ನ ಕ್ರಿಕೆಟ್ ಜಗತ್ತಿಗೆ ಪರಿಚಯಿಸೋದಕ್ಕೆ ರೆಡಿಯಾಗಿದೆ.

ಹನ್ನೊಂದು ಮಂದಿಯಲ್ಲ.. 15 ಆಟಗಾರರೂ ಆಡ್ಬಹುದು! ಬಿಸಿಸಿಐ ಐಪಿಎಲ್​ನಲ್ಲಿ ಪರಿಚಯಿಸುತ್ತಿರೋ ಹೊಸ ನಿಯಮವೇ ಇದು. ಅಂದ್ರೆ ಕ್ರಿಕೆಟ್​ ಅನ್ನೋ ಜಂಟಲ್​ಮೆನ್ ಗೇಮ್​ನಲ್ಲಿ ಆಡೋದು ಹನ್ನೊಂದು ಮಂದಿ. ಆದ್ರೆ ಮುಂದಿನ ಐಪಿಎಲ್​ನಲ್ಲಿ ಒಟ್ಟು ಹದಿನೈದು ಮಂದಿ ಆಟಗಾರರಿಗೆ ತಂಡದಲ್ಲಿ ಆಡೋದಕ್ಕೆ ಅವಕಾಶ ನೀಡಲಾಗಿದೆ. ಇದಕ್ಕೆ ಬಿಸಿಸಿಐ ಗೇಮ್ ಚೇಂಜರ್. ಪವರ್ ಪ್ಲೇಯರ್ ಅಂತಾ ಹೆಸರು ಕೊಟ್ಟಿದೆ.

ಏನಿದು ಗೇಮ್ ಚೇಂಜರ್. ಪವರ್ ಪ್ಲೇಯರ್ ರೂಲ್? ಗೇಮ್ ಚೇಂಜರ್.. ಪವರ್ ಪ್ಲೇಯರ್ ರೂಲ್ ಅಂದ್ರೆ ಪ್ರತಿ ತಂಡವೂ ಆಯ್ಕೆ ಮಾಡಿರೋ 15 ಮಂದಿ ಆಟಗಾರರ ಪೈಕಿ, 11 ಮಂದಿ ಆಟಗಾರರು ಮೈದಾನದಲ್ಲಿ ಆಡ್ತಿರ್ತಾರೆ. ಆದ್ರೆ ತಂಡದ ಗೆಲುವಿಗೆ ತಂಡದಲ್ಲಿರದ ಆಟಗಾರನ ಅವಶ್ಯಕತೆ ಬಿದ್ರೆ, ಅಂದ್ರೆ 12,13,14 ಮತ್ತು 15ನೇ ಆಟಗಾರ ಬಂದು ಆಡ್ಬಹುದಾಗಿದೆ. 15 ಮಂದಿ ಆಟಗಾರರ ಪೈಕಿ ಯಾವುದಾದ್ರೂ ಒಬ್ಬ ಆಟಗಾರನಿಂದ ಪಂದ್ಯದ ದಿಕ್ಕನ್ನ ಆ ಫ್ರಾಂಚೈಸಿ ಬದಲಿಸಿಕೊಳ್ಳಬಹುದು. ಇದಕ್ಕೆ ಬಿಸಿಸಿಐ ಗೇಮ್ ಚೇಂಜರ್. ಪವರ್ ಪ್ಲೇಯರ್ ರೂಲ್ ಅಂತಾ ಹೆಸರಿಟ್ಟಿದೆ. ಅಂದ್ರೆ ಗೇಮ್ ಚೇಂಜ್ ಮಾಡೋಕೆ ಒಬ್ಬ ಆಟಗಾರನ ಪವರ್ ಅನ್ನ ಉಪಯೋಗಿಸಿಕೊಳ್ಳಬಹುದಾಗಿದೆ.

ಬೂಮ್ರಾಗೆ ಲಾಸ್ಟ್ ಓವರ್ ನೀಡಿ: ‘‘ ಇನ್ನು ವಿವರವಾಗಿ ಹೇಳಬೇಕು ಅಂದ್ರೆ, ನೀವು ಗೆಲ್ಲೋದಕ್ಕೆ ಕೊನೆ ಓವರ್​ನಲ್ಲಿ ಆರು ರನ್​ಗಳನ್ನ ಕಾಪಾಡಿಕೊಳ್ಳಬೇಕು. ಆಗ ಮೈದಾನದಲ್ಲಿ ಆಡುತ್ತಿರೋ 11 ಆಟಗಾರರ ಪೈಕಿ ನಿಮಗೆ ಯಾರೂ ಲಾಸ್ಟ್ ಓವರ್ ಮಾಡೋದಕ್ಕೆ ಸೂಕ್ತ ಅನ್ನಿಸೋದಿಲ್ಲ. ಆಗ ನೀವು 15 ಮಂದಿ ಆಟಗಾರರ ಪಟ್ಟಿಯಲ್ಲಿರೋ ಇನ್ನೂ ಕಣಕ್ಕೆ ಇಳಿಯದ ಜಸ್ಪ್ರೀತ್ ಬೂಮ್ರಾರನ್ನ ಕರೆದು ಕೊನೆ ಓವರ್ ಬೌಲಿಂಗ್ ಮಾಡಿಸಬಹುದು.’’

ಇಂದು ಅಂತಿಮ ನಿರ್ಧಾರ: ‘‘ಇನ್ಮುಂದೆ ಐಪಿಎಲ್​ನಲ್ಲಿ ತಂಡ ಹನ್ನೊಂದು ಮಂದಿ ಆಟಗಾರರನ್ನಲ್ಲ. 15 ಮಂದಿ ಆಟಗಾರರ ಪಟ್ಟಿ ಮಾಡಬೇಕಾಗುತ್ತೆ. ಅಂದ್ರೆ ಮೈದಾನದಲ್ಲಿ ಆಡುತ್ತಿರೋ ಹನ್ನೊಂದು ಆಟಗಾರರಲ್ಲದೇ, ಇನ್ನುಳಿದ ನಾಲ್ವರು ಆಟಗಾರರನ್ನ ಅಗತ್ಯಕ್ಕೆ ತಕ್ಕಂತೆ ಆ ತಂಡ ಬಳಸಿಕೊಳ್ಳಬಹುದು.’’ ಎಂದು ಬಿಸಿಸಿಐ ಹೇಳಿದೆ.

ಈ ನಿಯದಮ ಬಗ್ಗೆ ಬಿಸಿಸಿಐನಲ್ಲಿ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಎಲ್ರೂ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇಂದು ಬಿಸಿಸಿಐ ಕಚೇರಿಯಲ್ಲಿ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಸಭೆ ನಡೆಯಲಿದೆ. ಈ ಸಭೆಯಲ್ಲಿ ಗೇಮ್ ಚೇಂಜರ್. ಪವರ್ ಪ್ಲೇಯರ್ ರೂಲ್​ಗೆ ಅಂಕಿತ ಬೀಳೋ ಎಲ್ಲಾ ಸಾಧ್ಯತೆಯೂ ಇದೆ. ಹೀಗಾಗಿ ಮುಂದಿನ ಐಪಿಎಲ್ ಸೀಸನ್ ಅಭಿಮಾನಿಗಳಿಗೆ ಇನ್ನಷ್ಟು ಕಿಕ್ ಕೊಡೋದ್ರಲ್ಲಿ ಅನುಮಾನವೇ ಇಲ್ಲ. ಇನ್ನು ಬದಲಾದ ಕಾಲಕ್ಕೆ ತಕ್ಕಂತೆ ಕ್ರಿಕೆಟ್​ನ ನಿಯಮಗಳು ಬದಲಾಗ್ತಾನೇ ಇರುತ್ತೆ. ನಿಮಗೆ ಗೊತ್ತಿರೋ ಹಾಗೇ ಈ ಬಾರಿ ವಿಶ್ವಕಪ್​ನಲ್ಲಿ ಸೂಪರ್ ಓವರ್ ಬೌಂಡರಿ ನಿಯಮ ಇಂಗ್ಲೆಂಡ್ ತಂಡಕ್ಕೆ ಚಾಂಪಿಯನ್ ಪಟ್ಟವನ್ನ ತಂದುಕೊಟ್ಟಿತ್ತು.

ಆದ್ರೆ ಈ ನಿಯಮದ ಬಗ್ಗೆ ಎಲ್ಲೆಡೆಯಿಂದ ಟೀಕೆಗಳು ಬರತೊಡಗಿದ್ವು. ಬಳಿಕ ಇದರ ಬಗ್ಗೆ ಸಭೆ ನಡೆಸಿದ ಐಸಿಸಿ, ಈ ನಿಯಮವನ್ನೇ ಬದಲಾಯಿಸಿತು. ಇನ್ಮುಂದೆ ಸೂಪರ್ ಓವರ್ ಪಂದ್ಯ ಟೈ ಆದ್ರೆ, ಬೌಂಡರಿ ಲೆಕ್ಕಾಚಾರದ ಮೂಲಕ ಗೆಲುವು ನೀಡೋದಿಲ್ಲ. ಗೆಲ್ಲೋವರೆಗೂ ಸೂಪರ್ ಓವರ್ ನಡೆಸೋದಾಗಿ ಘೊಷಿಸಿತು.

Published On - 4:14 pm, Wed, 6 November 19

ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ವ್ಯಕ್ತಿಯಿಂದ ಏಕಾಏಕಿ ಹಲ್ಲೆ
ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ವ್ಯಕ್ತಿಯಿಂದ ಏಕಾಏಕಿ ಹಲ್ಲೆ
Daily Devotional: ಶ್ರೀ ಸೂಕ್ತದ ಮಹತ್ವ ಹಾಗೂ ಯಾವಾಗ ಪಠಿಸಬೇಕು ತಿಳಿಯಿರಿ
Daily Devotional: ಶ್ರೀ ಸೂಕ್ತದ ಮಹತ್ವ ಹಾಗೂ ಯಾವಾಗ ಪಠಿಸಬೇಕು ತಿಳಿಯಿರಿ
Daily horoscope: ಗಂಡ-ಹೆಂಡತಿಯ ನಡುವೆ ಸಣ್ಣಪುಟ್ಟ ಕಲಹಗಳಾಗುವ ಸಾಧ್ಯತೆ
Daily horoscope: ಗಂಡ-ಹೆಂಡತಿಯ ನಡುವೆ ಸಣ್ಣಪುಟ್ಟ ಕಲಹಗಳಾಗುವ ಸಾಧ್ಯತೆ
ಡಾ. ರಾಜ್​ಕುಮಾರ್ ಅಪಹರಣಕ್ಕೂ ಮುನ್ನ ಏನೆಲ್ಲ ನಡೆದಿತ್ತು? ವಿವರಿಸಿದ ಅಳಿಯ
ಡಾ. ರಾಜ್​ಕುಮಾರ್ ಅಪಹರಣಕ್ಕೂ ಮುನ್ನ ಏನೆಲ್ಲ ನಡೆದಿತ್ತು? ವಿವರಿಸಿದ ಅಳಿಯ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ