AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ಯಾಟ್​ ಕಮ್ಮಿನ್ಸ್ ನಂತರ ಸೋಂಕಿತರ ನೆರವಿಗೆ ಧಾವಿಸಿರುವ ರಾಜಸ್ತಾನ್ ರಾಯಲ್ಸ್ ಫ್ರಾಂಚೈಸಿಯಿಂದ ರೂ 7.5 ಕೋಟಿ ನೆರವು

ಕೊಲ್ಕತಾ ನೈಟ್​ ರೈಡರ್ಸ್​ ಪರ ಆಡುವ ಪ್ಯಾಟ್​ ಕಮ್ಮಿನ್ಸ್ ಅವರು ಪಿ ಎಮ್​ ಕೇರ್ಸ್ ನಿಧಿಗೆ 50,000 ಡಾಲರ್​ಗಳ ದೇಣಿಗೆ ನೀಡಿದ ಒಂದು ದಿನದ ನಂತರ ರಾಜಸ್ತಾನ ರಾಯಲ್ಸ್​ ತನ್ನ ದೇಣಿಗೆಯನ್ನು ಪ್ರಕಟಿಸಿದೆ.

ಪ್ಯಾಟ್​ ಕಮ್ಮಿನ್ಸ್ ನಂತರ ಸೋಂಕಿತರ ನೆರವಿಗೆ ಧಾವಿಸಿರುವ ರಾಜಸ್ತಾನ್ ರಾಯಲ್ಸ್ ಫ್ರಾಂಚೈಸಿಯಿಂದ ರೂ 7.5 ಕೋಟಿ ನೆರವು
ರಾಜಸ್ತಾನ ರಾಯಲ್ಸ್
ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on: Apr 29, 2021 | 9:28 PM

Share

ಇಂಡಿಯನ್ ಪ್ರಿಮೀಯರ್ ಲೀಗ್​ನ ಫ್ರಾಂಚೈಸಿಯಾಗಿರುವ ರಾಜಸ್ತಾನ್ ರಾಯಲ್ಸ್ ಒಂದು ರಾಯಲ್ ಧೋರಣೆಯನ್ನು ಪ್ರದರ್ಶಿಸಿ ಭಾರತದಲ್ಲಿ ಕೊವಿಡ್​ ಸೋಂಕಿನಿಂದ ನರಳುತ್ತಿರುವ ಜನರ ಚಿಕಿತ್ಸೆಗೆ 7.5 ಕೋಟಿ ರೂಪಾಯಿಗಳ ದೇಣಿಗೆಯನ್ನು ನೀಡಿದೆ. ‘ಭಾರತದಲ್ಲಿ ಕೊವಿಡ್​-19 ಸೋಂಕು ಭಯಾನಕವಾಗಿ ಹೆಚ್ಚಿದ್ದು ಅದರಿಂದ ಪೀಡಿತರಾಗಿರುವ ಜನರ ಚಿಕಿತ್ಸೆಗೆ 7.5 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಲು ರಾಜಸ್ತಾನ್ ರಾಯಲ್ಸ್​ಗೆ ತುಂಬಾ ಸಂತೋಷವೆನಿಸುತ್ತಿದೆ,’ ಎಂದು ಫ್ರಾಂಚೈಸಿ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆ ತಿಳಿಸುತ್ತದೆ. ರಾಯಲ್ಸ್ ಫ್ರಾಂಚೈಸಿಯು ತನ್ನ ಚಾರಿಟಿ ಸಂಸ್ಥೆಯಾಗಿರುವ ರಾಜಸ್ತಾನ್ ರಾಯಲ್ಸ್ ಫೌಂಡೇಶನ್ ಮತ್ತು ದಿ ಬ್ರಿಟಿಷ್ ಏಷ್ಯನ್ ಟ್ರಸ್ಟ್​ ಮೂಲಕ ಸಹಾಯವನ್ನು ಒದಗಿಸುತ್ತಿದೆ.

‘ಮೊದಲ ಫೋಕಸ್ ರಾಜಸ್ತಾನ್​ನಲ್ಲಿ ಸೋಂಕಿತರಿಗೆ ಅನೇಕ ಕಾರ್ಯಕ್ರಮಗಳ ಮೂಲಕ ನೆರವಾಗುತ್ತಿರುವ ರಂಜಿತ್ ಬರ್​ಠಾಕುರ್ ಅವರು ನಡೆಸುತ್ತಿರುವ ಆರ್​ಆರ್​ಎಫ್ ಸಂಸ್ಥೆಯ ಮೇಲಿರುವುದಾದರೂ ರಾಜಸ್ತಾನ್ ರಾಯಲ್ಸ್ ನೀಡುವ ದೇಣಿಗೆಯು ಭಾರತದೆಲ್ಲೆಡೆ ಉಪಯೋಗವಾಗಲಿದೆ’ ಎಂದು ಫ್ರಾಂಚೈಸಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ರಾಯಲ್ಸ್ ಟೀಮಿನ ಮಾಲೀಕರು ಮತ್ತು ಅದರ ಆಟಗಾರರು ಈ ಕೆಲಸಕ್ಕಾಗಿ ಕೈಜೋಡಿಸಿದ್ದಾರೆ. ಭಾರತದಲ್ಲಿ ಈ ತಲೆದೋರಿರುವ ಕೊವಿಡ್​ ಬಿಕ್ಕಟ್ಟಿನಲ್ಲಿ ಅತ್ಯಂತ ಅವಶ್ಯಕವಾಗಿರುವ ಆಕ್ಸಿಜನ್ ಅನ್ನು ಜನ ಪಡೆದುಕೊಳ್ಳುವಂತಾಗಲು ಈ ಹಣ ನೆರವಾಗುತ್ತದೆ,’ ಎಂದು ಹೇಳಿಕೆ ತಿಳಿಸುತ್ತದೆ. ಕೊಲ್ಕತಾ ನೈಟ್​ ರೈಡರ್ಸ್​ ಪರ ಆಡುವ ಪ್ಯಾಟ್​ ಕಮ್ಮಿನ್ಸ್ ಅವರು ಪಿ ಎಮ್​ ಕೇರ್ಸ್ ನಿಧಿಗೆ 50,000 ಡಾಲರ್​ಗಳ ದೇಣಿಗೆ ನೀಡಿದ ಒಂದು ದಿನದ ನಂತರ ರಾಜಸ್ತಾನ ರಾಯಲ್ಸ್​ ತನ್ನ ದೇಣಿಗೆಯನ್ನು ಪ್ರಕಟಿಸಿದೆ. ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಸಹ ಈ ನಿಧಿಗೆ ಒಂದು ಬಿಟ್​ಕಾಯಿನ್ (ಸುಮಾರು 50,000 ಅಮೇರಿಕನ್ ಡಾಲರ್) ದೇಣಿಗೆಯಾಗಿ ನೀಡಿದ್ದಾರೆ.

ಇದನ್ನೂ ಓದಿ: ಭಾರತ ಕಷ್ಟದಲ್ಲಿದೆ ಕ್ರಿಕೆಟಿಗರು ನೆರವಿಗೆ ಬನ್ನಿ! ಪಿಎಂ ಕೇರ್ಸ್ ಫಂಡ್‌ಗೆ 50,000 ಡಾಲರ್ ಹಣ​ ದೇಣಿಗೆ ನೀಡಿದ ಆಸಿಸ್ ಕ್ರಿಕೆಟಿಗ​ ಪ್ಯಾಟ್ ಕಮ್ಮಿನ್ಸ್

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್