AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ಯಾಟ್​ ಕಮ್ಮಿನ್ಸ್ ನಂತರ ಸೋಂಕಿತರ ನೆರವಿಗೆ ಧಾವಿಸಿರುವ ರಾಜಸ್ತಾನ್ ರಾಯಲ್ಸ್ ಫ್ರಾಂಚೈಸಿಯಿಂದ ರೂ 7.5 ಕೋಟಿ ನೆರವು

ಕೊಲ್ಕತಾ ನೈಟ್​ ರೈಡರ್ಸ್​ ಪರ ಆಡುವ ಪ್ಯಾಟ್​ ಕಮ್ಮಿನ್ಸ್ ಅವರು ಪಿ ಎಮ್​ ಕೇರ್ಸ್ ನಿಧಿಗೆ 50,000 ಡಾಲರ್​ಗಳ ದೇಣಿಗೆ ನೀಡಿದ ಒಂದು ದಿನದ ನಂತರ ರಾಜಸ್ತಾನ ರಾಯಲ್ಸ್​ ತನ್ನ ದೇಣಿಗೆಯನ್ನು ಪ್ರಕಟಿಸಿದೆ.

ಪ್ಯಾಟ್​ ಕಮ್ಮಿನ್ಸ್ ನಂತರ ಸೋಂಕಿತರ ನೆರವಿಗೆ ಧಾವಿಸಿರುವ ರಾಜಸ್ತಾನ್ ರಾಯಲ್ಸ್ ಫ್ರಾಂಚೈಸಿಯಿಂದ ರೂ 7.5 ಕೋಟಿ ನೆರವು
ರಾಜಸ್ತಾನ ರಾಯಲ್ಸ್
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ| Edited By: |

Updated on: Apr 29, 2021 | 9:28 PM

Share

ಇಂಡಿಯನ್ ಪ್ರಿಮೀಯರ್ ಲೀಗ್​ನ ಫ್ರಾಂಚೈಸಿಯಾಗಿರುವ ರಾಜಸ್ತಾನ್ ರಾಯಲ್ಸ್ ಒಂದು ರಾಯಲ್ ಧೋರಣೆಯನ್ನು ಪ್ರದರ್ಶಿಸಿ ಭಾರತದಲ್ಲಿ ಕೊವಿಡ್​ ಸೋಂಕಿನಿಂದ ನರಳುತ್ತಿರುವ ಜನರ ಚಿಕಿತ್ಸೆಗೆ 7.5 ಕೋಟಿ ರೂಪಾಯಿಗಳ ದೇಣಿಗೆಯನ್ನು ನೀಡಿದೆ. ‘ಭಾರತದಲ್ಲಿ ಕೊವಿಡ್​-19 ಸೋಂಕು ಭಯಾನಕವಾಗಿ ಹೆಚ್ಚಿದ್ದು ಅದರಿಂದ ಪೀಡಿತರಾಗಿರುವ ಜನರ ಚಿಕಿತ್ಸೆಗೆ 7.5 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಲು ರಾಜಸ್ತಾನ್ ರಾಯಲ್ಸ್​ಗೆ ತುಂಬಾ ಸಂತೋಷವೆನಿಸುತ್ತಿದೆ,’ ಎಂದು ಫ್ರಾಂಚೈಸಿ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆ ತಿಳಿಸುತ್ತದೆ. ರಾಯಲ್ಸ್ ಫ್ರಾಂಚೈಸಿಯು ತನ್ನ ಚಾರಿಟಿ ಸಂಸ್ಥೆಯಾಗಿರುವ ರಾಜಸ್ತಾನ್ ರಾಯಲ್ಸ್ ಫೌಂಡೇಶನ್ ಮತ್ತು ದಿ ಬ್ರಿಟಿಷ್ ಏಷ್ಯನ್ ಟ್ರಸ್ಟ್​ ಮೂಲಕ ಸಹಾಯವನ್ನು ಒದಗಿಸುತ್ತಿದೆ.

‘ಮೊದಲ ಫೋಕಸ್ ರಾಜಸ್ತಾನ್​ನಲ್ಲಿ ಸೋಂಕಿತರಿಗೆ ಅನೇಕ ಕಾರ್ಯಕ್ರಮಗಳ ಮೂಲಕ ನೆರವಾಗುತ್ತಿರುವ ರಂಜಿತ್ ಬರ್​ಠಾಕುರ್ ಅವರು ನಡೆಸುತ್ತಿರುವ ಆರ್​ಆರ್​ಎಫ್ ಸಂಸ್ಥೆಯ ಮೇಲಿರುವುದಾದರೂ ರಾಜಸ್ತಾನ್ ರಾಯಲ್ಸ್ ನೀಡುವ ದೇಣಿಗೆಯು ಭಾರತದೆಲ್ಲೆಡೆ ಉಪಯೋಗವಾಗಲಿದೆ’ ಎಂದು ಫ್ರಾಂಚೈಸಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ರಾಯಲ್ಸ್ ಟೀಮಿನ ಮಾಲೀಕರು ಮತ್ತು ಅದರ ಆಟಗಾರರು ಈ ಕೆಲಸಕ್ಕಾಗಿ ಕೈಜೋಡಿಸಿದ್ದಾರೆ. ಭಾರತದಲ್ಲಿ ಈ ತಲೆದೋರಿರುವ ಕೊವಿಡ್​ ಬಿಕ್ಕಟ್ಟಿನಲ್ಲಿ ಅತ್ಯಂತ ಅವಶ್ಯಕವಾಗಿರುವ ಆಕ್ಸಿಜನ್ ಅನ್ನು ಜನ ಪಡೆದುಕೊಳ್ಳುವಂತಾಗಲು ಈ ಹಣ ನೆರವಾಗುತ್ತದೆ,’ ಎಂದು ಹೇಳಿಕೆ ತಿಳಿಸುತ್ತದೆ. ಕೊಲ್ಕತಾ ನೈಟ್​ ರೈಡರ್ಸ್​ ಪರ ಆಡುವ ಪ್ಯಾಟ್​ ಕಮ್ಮಿನ್ಸ್ ಅವರು ಪಿ ಎಮ್​ ಕೇರ್ಸ್ ನಿಧಿಗೆ 50,000 ಡಾಲರ್​ಗಳ ದೇಣಿಗೆ ನೀಡಿದ ಒಂದು ದಿನದ ನಂತರ ರಾಜಸ್ತಾನ ರಾಯಲ್ಸ್​ ತನ್ನ ದೇಣಿಗೆಯನ್ನು ಪ್ರಕಟಿಸಿದೆ. ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಸಹ ಈ ನಿಧಿಗೆ ಒಂದು ಬಿಟ್​ಕಾಯಿನ್ (ಸುಮಾರು 50,000 ಅಮೇರಿಕನ್ ಡಾಲರ್) ದೇಣಿಗೆಯಾಗಿ ನೀಡಿದ್ದಾರೆ.

ಇದನ್ನೂ ಓದಿ: ಭಾರತ ಕಷ್ಟದಲ್ಲಿದೆ ಕ್ರಿಕೆಟಿಗರು ನೆರವಿಗೆ ಬನ್ನಿ! ಪಿಎಂ ಕೇರ್ಸ್ ಫಂಡ್‌ಗೆ 50,000 ಡಾಲರ್ ಹಣ​ ದೇಣಿಗೆ ನೀಡಿದ ಆಸಿಸ್ ಕ್ರಿಕೆಟಿಗ​ ಪ್ಯಾಟ್ ಕಮ್ಮಿನ್ಸ್

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!