AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಡ್ಗಿಚ್ಚಿನ ಸಂತ್ರಸ್ತರಿಗಾಗಿ ಶೇನ್ ವಾರ್ನ್​ ಬ್ಯಾಗಿ ಗ್ರೀನ್ ಕ್ಯಾಪ್ ಹರಾಜಿಗೆ!

ಆಸ್ಟ್ರೇಲಿಯಾ ಸ್ಪಿನ್ ದಿಗ್ಗಜ ಶೇನ್ ವಾರ್ನ್​ರ ಬ್ಯಾಗಿ ಗ್ರೀನ್ ಕ್ಯಾಪ್ ಬರೋಬ್ಬರಿ 7.16ಕೋಟಿಗೆ ಮಾರಾಟವಾಗಿ ಆಶ್ಚರ್ಯ ಮೂಡಿಸಿದೆ. ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚಿನ ಸಂತ್ರಸ್ತರಿಗೆ ಪರಿಹಾರ ನೀಡುವ ಸಲುವಾಗಿ ವಾರ್ನ್ ಕ್ಯಾಪ್ ಹರಾಜಿಗೆ ಇಟ್ಟಿದ್ದರು. ಕ್ಯಾಪ್ 7.16ಕೋಟಿಗೆ ಮಾರಾಟವಾಗಿದ್ದಕ್ಕೆ ವಾರ್ನ್ ಸಂತಸಗೊಂಡಿದ್ದಾರೆ. 45ವರ್ಷವಾದ್ರೂ ಕ್ರಿಕೆಟ್ ಬಿಡಲ್ಲ! ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್​ಮನ್ ಕ್ರಿಸ್ ಗೇಲ್, 45ನೇ ವಯಸ್ಸಿನಲ್ಲೂ ಕ್ರಿಕೆಟ್ ಆಡುವ ಬಯಕೆಯನ್ನ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಆಡಲು ನನ್ನ ದೇಹ ಸ್ಪಂದಿಸುತ್ತೆ. ನಾನಿನ್ನೂ ಯುವಕನಂತಿದ್ದೇನೆ. 45ಕೇವಲ ನಂಬರ್ ಅಷ್ಟೇ ಅಂತ ಹೇಳಿರೋ […]

ಕಾಡ್ಗಿಚ್ಚಿನ ಸಂತ್ರಸ್ತರಿಗಾಗಿ ಶೇನ್ ವಾರ್ನ್​ ಬ್ಯಾಗಿ ಗ್ರೀನ್ ಕ್ಯಾಪ್ ಹರಾಜಿಗೆ!
ಸಾಧು ಶ್ರೀನಾಥ್​
|

Updated on:Jan 11, 2020 | 11:18 AM

Share

ಆಸ್ಟ್ರೇಲಿಯಾ ಸ್ಪಿನ್ ದಿಗ್ಗಜ ಶೇನ್ ವಾರ್ನ್​ರ ಬ್ಯಾಗಿ ಗ್ರೀನ್ ಕ್ಯಾಪ್ ಬರೋಬ್ಬರಿ 7.16ಕೋಟಿಗೆ ಮಾರಾಟವಾಗಿ ಆಶ್ಚರ್ಯ ಮೂಡಿಸಿದೆ. ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚಿನ ಸಂತ್ರಸ್ತರಿಗೆ ಪರಿಹಾರ ನೀಡುವ ಸಲುವಾಗಿ ವಾರ್ನ್ ಕ್ಯಾಪ್ ಹರಾಜಿಗೆ ಇಟ್ಟಿದ್ದರು. ಕ್ಯಾಪ್ 7.16ಕೋಟಿಗೆ ಮಾರಾಟವಾಗಿದ್ದಕ್ಕೆ ವಾರ್ನ್ ಸಂತಸಗೊಂಡಿದ್ದಾರೆ.

45ವರ್ಷವಾದ್ರೂ ಕ್ರಿಕೆಟ್ ಬಿಡಲ್ಲ! ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್​ಮನ್ ಕ್ರಿಸ್ ಗೇಲ್, 45ನೇ ವಯಸ್ಸಿನಲ್ಲೂ ಕ್ರಿಕೆಟ್ ಆಡುವ ಬಯಕೆಯನ್ನ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಆಡಲು ನನ್ನ ದೇಹ ಸ್ಪಂದಿಸುತ್ತೆ. ನಾನಿನ್ನೂ ಯುವಕನಂತಿದ್ದೇನೆ. 45ಕೇವಲ ನಂಬರ್ ಅಷ್ಟೇ ಅಂತ ಹೇಳಿರೋ ಗೇಲ್, 2020ರ ಟಿ-ಟ್ವೆಂಟಿ ವಿಶ್ವಕಪ್​ನಲ್ಲಿ ಭಾಗವಹಿಸೋದಾಗಿ ಹೇಳಿದ್ದಾರೆ.

ಭಾರತ-ಸಿ ತಂಡ ಚಾಂಪಿಯನ್: ಮಹಿಳಾ ಟಿ-ಟ್ವೆಂಟಿ ಚಾಲೆಂಜರ್ಸ್ ಟ್ರೋಫಿಯಲ್ಲಿ ಭಾರತ ಸಿ ತಂಡ ಚಾಂಪಿಯನ್ ಆಗಿದೆ. ಶಾಫಲಿ ವರ್ಮಾರ 89ರನ್​ಗಳ ನೆರವಿನಿಂದ ಭಾರತ ಸಿ ತಂಡ, ಬಿ ತಂಡದ ವಿರುದ್ಧ ವಿಕೆಟ್​ಗಳ ಗೆಲುವು ಸಾಧಿಸ್ತು. 15ಬೌಂಡರಿ, 2ಸಿಕ್ಸರ್​ಗಳನ್ನ ನೆರವಿನಿಂದ ಶಾಫಲಿ ಅಜೇಯ 89ರನ್ ಗಳಿಸಿ, ತಂಡಕ್ಕೆ ಗೆಲುವು ತಂದುಕೊಟ್ರು.

ಸಚಿನ್ ಗ್ಲೋಬಲ್ ಅಕಾಡೆಮಿಗೆ ಚಾಲನೆ: ತೆಂಡುಲ್ಕರ್ ಮಿಡಲ್​ಸೆಕ್ಸ್ ಗ್ಲೋಬರ್ ಅಕಾಡೆಮಿಗೆ, ನವಿ ಮುಂಬೈನ ಡಾ.ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ಸಚಿನ್ ಚಾಲನೆ ನೀಡಿದ್ರು. ಇಂಗ್ಲಿಷ್ ಕೌಂಟಿ ಮಿಡಲ್​ಸೆಕ್ಸ್ ತಂಡದ ಜೊತೆ ಒಪ್ಪಂದ ಮಾಡಿಕೊಂಡಿರೊ ಸಚಿನ್, 9ರಿಂದ 14ವರ್ಷದ ಮಕ್ಕಳಿಗೆ ಕ್ರಿಕೆಟ್ ಪಾಠವನ್ನ ಹೇಳಿಕೊಡಲಾಗುತ್ತೆ.

Published On - 9:55 am, Sat, 11 January 20

ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ