AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England Test Series: ಮೊಟೆರಾ ಕ್ರೀಡಾಂಗಣದಲ್ಲಿ ದಾಖಲೆಗಳ ಸರಮಾಲೆಯೊಂದಿಗೆ ಜಡೇಜಾಗೆ ಆತಂಕ ಹುಟ್ಟಿಸಿದ ಅಕ್ಷರ್ ಪಟೇಲ್!

ಮೊಟೆರಾದಲ್ಲಿ ಪಟೇಲ್ ಒಂದು ವಿಶೇಷವಾದ ದಾಖಲೆಯನ್ನು ನಿರ್ಮಿಸಿದ್ದಾರೆ. ಎರಡೂ ಇನ್ನಿಂಗ್ಸ್​ಗಳಲ್ಲಿ ಅವರು ತಮ್ಮ ಮೊದಲ ಎಸೆತದಲ್ಲೇ ವಿಕೆಟ್ ಪಡೆದಿರುವುದು ಒಂದು ಅಪೂರ್ವ ದಾಖಲೆಯೇ ಸರಿ.

India vs England Test Series: ಮೊಟೆರಾ ಕ್ರೀಡಾಂಗಣದಲ್ಲಿ ದಾಖಲೆಗಳ ಸರಮಾಲೆಯೊಂದಿಗೆ ಜಡೇಜಾಗೆ ಆತಂಕ ಹುಟ್ಟಿಸಿದ ಅಕ್ಷರ್ ಪಟೇಲ್!
ಅಕ್ಷರ್ ಪಟೇಲ್
ಅರುಣ್​ ಕುಮಾರ್​ ಬೆಳ್ಳಿ
|

Updated on:Feb 25, 2021 | 10:47 PM

Share

ಅಹಮದಾಬಾದ್: ಅಕ್ಷರ್​ ಪಟೇಲ್ ಅವರನ್ನು ಕೇವಲ ಟಿ-20 ಸ್ಪೆಷಲಿಸ್ಟ್ ಅಂತ ಕೆಲವರು ಜರಿದರು, ಇನ್ನೂ ಕೆಲವರು ಟೀಮಿನ ಪ್ರಮುಖ ಸ್ಪಿನ್ನರ್ ರವೀಂದ್ರ ಜಡೇಜಾ ಗಾಯಗೊಂಡ ಕಾರಣ ಅವರಂತೆಯೇ ಎಡಗೈ ಸ್ಪಿನ್ನರ್ ಆಗಿರುವ ಪಟೇಲ್​ಗೆ ಅವಕಾಶ ಸಿಕ್ಕಿದೆ ಅಂದರು. ಯಾರು ಏನಾದರೂ ಅಂದುಕೊಳ್ಳಲಿ ನನ್ನ ಪ್ರತಿಭೆ ನನ್ನೊಂದಿಗಿರಲಿದೆ, ನನಗೆ ಟೆಸ್ಟ್​ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದೆ, ಈ ಅವಕಾಶವನ್ನು ನಾನು ವ್ಯರ್ಥ ಹೋಗಲು ಬಿಡಲಾರೆ ಎಂಬ ಸಂಕಲ್ಪದೊಂದಿಗೆ ಸಾಂಪ್ರದಾಯಿಕ ಕ್ರಿಕೆಟ್​ಗೆ ಚೆನೈಯಲ್ಲಿ ಪದಾರ್ಪಣೆ ಮಾಡಿದ ಪಟೇಲ್ ಕೇವಲ 2 ಟೆಸ್ಟ್​ಗಳಲ್ಲಿ ಮಾಡಿರುವ ಕರಾಮತ್ತು ನೋಡಿದರೆ ಇವರನ್ನು ನಖಶಿಖಾಂತ ದ್ವೇಷಿಸುವ ವೈರಿಯೂ ‘ಭಲೇ ಪಟೇಲ್!’ ಎನ್ನದಿರಲಾರ. ಹೌದು, ಗುಜರಾತಿನ ನೀಳಕಾಯದ ಅಕ್ಷರ್ ಪಟೇಲ್ ಟೆಸ್ಟ್​ ಕ್ರಿಕೆಟ್ ತಮ್ಮ ಆಗಮನವನ್ನು ಯಾರೂ ಊಹಿಸದ ರೀತಿಯಲ್ಲಿ ಘೋಷಿಸಿದ್ದಾರೆ.

ನಮಗೆಲ್ಲ ಗೊತ್ತಿದೆ. ಇಂಗ್ಲೆಂಡ್​ ವಿರುದ್ಧ ಈಗ ಜಾರಿಯಲ್ಲಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆಡುವ ಅವಕಾಶ ಗಿಟ್ಟಿಸಿದ ಪಟೇಲ್, ಚೆನೈ ಮತ್ತು ಇಂದು ಎರಡೇ ದಿನಗಳಲ್ಲಿ ಮೊಟೆರಾ ಸ್ಟೇಡಿಯಂನಲ್ಲಿ ಕೊನೆಗೊಂಡ ಮೂರನೇ ಟೆಸ್ಟ್ ಪಂದ್ಯದಲ್ಲಿ ನೀಡಿರುವ ಪ್ರದರ್ಶನಗಳಾದರೂ ಎಂಥವು! ಚೆನ್ನೈನಲ್ಲಿ 2/40 ಮತ್ತು 5/60 ಹಾಗೂ ಮೊಟೆರಾದಲ್ಲಿ 6/38 ಮತ್ತು 5/32. ವಿಶ್ವದ ಯಾವುದೇ ಬೌಲರ್ ಇಂಥ ಪ್ರದರ್ಶನಗಳನ್ನು ತನ್ನ ಮೊದಲ ಎರಡು ಟೆಸ್ಟ್​ಗಳಲ್ಲಿ ನೀಡುತ್ತೇನೆಂದು ಕನಸು ಕಂಡಿರಲಾರ.

ಮೊಟೆರಾದಲ್ಲಿ ಪಟೇಲ್ ಒಂದು ವಿಶೇಷವಾದ ದಾಖಲೆಯನ್ನು ನಿರ್ಮಿಸಿದ್ದಾರೆ. ಎರಡೂ ಇನ್ನಿಂಗ್ಸ್​ಗಳಲ್ಲಿ ಅವರು ತಮ್ಮ ಮೊದಲ ಎಸೆತದಲ್ಲೇ ವಿಕೆಟ್ ಪಡೆದಿರುವುದು ಒಂದು ಅಪೂರ್ವ ದಾಖಲೆಯೇ. ಪಿಂಕ್-ಬಾಲ್ ಟೆಸ್ಟ್​ ಪಂದ್ಯವೊಂದರಲ್ಲಿ ಅತಿಹೆಚ್ಚು ವಿಕೆಟ್​ಗಳನ್ನು ಪಡೆದ ದಾಖಲೆಯನ್ನೂ ಪಟೇಲ್ ಗುರುವಾರದಂದು ತಮ್ಮ ಹೆಸರಿಗೆ ಬರೆದುಕೊಂಡರು. ಈ ಟೆಸ್ಟ್​ನಲ್ಲಿ ಅವರು 70 ರನ್​ಗಳಿಗೆ 11 ವಿಕೆಟ್ ಪಡೆದರು. ಮೂರನೇ ಟೆಸ್ಟ್​ನ ಎರಡನೇ ಇನ್ನಿಂಗ್ಸ್​ನಲ್ಲಿ 5 ವಿಕೆಟ್ ಪಡೆಯುವ ಮೂಲಕ ಅವರು ಸತತವಾಗಿ ಮೂರು ಬಾರಿ ಈ ಸಾಧನೆ ಮಾಡಿದಂತಾಗಿದೆ.

Axar Patel

ಜೊತೆ ಆಟಗಾರರಿಂದ ಅಕ್ಷರ್​ಗೆ ಅಭಿನಂದನೆ.

ತಮ್ಮ ಸಾಧನೆಯ ಮೂಲಕ ಪಟೇಲ್ ಟ್ವಿಟ್ಟರ್​ಗೆ ಬಿಡುವಿಲ್ಲದ ಕೆಲಸ ನೀಡಿದ್ದಾರೆ. ಖ್ಯಾತ ಕಾಮೆಂಟೇಟರ್ ಹರ್ಷ ಭೋಗ್ಲೆ, ‘ಅಕ್ಷರ್ ಪಟೇಲ್ ಅವರಿಂದ ಅಮೋಘ ಸಾಧನೆ. ಕಂಡೀಷನ್​ಗಳನ್ನು ಅದ್ಭುತವಾಗಿ ಬಳಸಿಕೊಂಡರು. ಚೆಂಡು ಸ್ಪಿನ್​ ಅಗುತ್ತಿರುವುದನ್ನು ಕೂಡಲೇ ಕಂಡುಕೊಂಡ ಅವರ ಸ್ಕಿಡ್​ ಅಗುವ ಎಸೆತಗಳು ಅಪಾಯಕಾರಿಯಾಗಲಿವೆ ಎನ್ನುವುದು ವಿದಿತವಾಗಿತ್ತು’ ಎಂದಿದ್ದಾರೆ.

ಶ್ರೇಯಾ ಹೆಸರಿನ ಅಭಿಮಾನಿಯೊಬ್ಬರು, ‘ಟೀಮನ್ನು ಅಕ್ಷರ್ ಪಟೇಲ್ ಡ್ರೆಸಿಂಗ್​ ರೂಮಿಗೆ ಲೀಡ್​ ಮಾಡಿದ ದೃಶ್ಯ ಕ್ರಿಕೆಟ್​ನ ಅದ್ಭುತ ಸನ್ನಿವೇಶಗಳಲ್ಲಿ ಒಂದಾಗಿತ್ತು, ನಾಯಕ ಕೊಹ್ಲಿ ಮತ್ತು ಟೀಮಿನ ಸದಸ್ಯರು ಅವರನ್ನು ಬೆಂಬಲಿಸಿದ ರೀತಿ ಮನಸ್ಸಿಗೆ ಉಲ್ಲಾಸವನ್ನು ನೀಡಿತು’ ಎಂದು ಹೇಳಿ ಆ ದೃಶ್ಯದ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಮೊಟೆರಾ ಕ್ರೀಡಾಂಗಣದಲ್ಲಿ ಅಕ್ಷರ್ ಪಟೇಲ್​ ಮತ್ತೂ ಕೆಲ ದಾಖಲೆಗಳನ್ನು ಸೃಷ್ಟಿಸಿದರು. ಟೆಸ್ಟ್ ಪಂದ್ಯವೊಂದರಲ್ಲಿ 10 ವಿಕೆಟ್​ಗಳನ್ನು ಪಡೆದ ಭಾರತದ 28 ನೇ ಬೌಲರ್ ಮತ್ತು ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ ಭಾರತದ 8ನೇ ಬೌಲರ್ ಎನಿಸಿಕೊಂಡರು. ಹಾಗೆಯೇ, ಮೊಟರಾ ಮೈದಾನದಲ್ಲಿ 10 ವಿಕೆಟ್ ಪಡೆದ 5ನೇ ಬೌಲರ್ ಮತ್ತು ಅನಿಲ್ ಕುಂಬ್ಳೆ ನಂತರ ಈ ಸಾಧನೆಯನ್ನು ಪುನರಾವರ್ತಿಸಿದ ಭಾರತದ 2ನೇ ಬೌಲರ್ ಪಟೇಲ್ ಆಗಿರುತ್ತಾರೆ. ಹಾಗೆಯೇ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಪಡೆದ 9ನೇ ಎಡಗೈ ಸ್ಪಿನ್ನರ್ ಎನಿಸಿಕೊಂಡರು.

ಮೊಟೆರಾ ಮೈದಾನದಲ್ಲಿ ಗುರುವಾರದಂದು ಮೂರು ಎಸೆತಗಳಲ್ಲಿ 2 ವಿಕೆಟ್ ಪಡೆದ ಅಕ್ಷರ್ ಪಟೆಲ್ ಕೊಂಚದರಲ್ಲೇ ಹ್ಯಾಟ್ರಿಕ್ ಮಾಡುವ ಸಾಧನೆಯನ್ನು ತಪ್ಪಿಸಿಕೊಂಡರು. ಎರಡನೇ ಇನ್ನಿಂಗ್ಸ್​ನಲ್ಲಿ ಅವರು ಜಕ್ ಕ್ರಾಲೀ (0), ಜಾನಿ ಬೇರ್​ಸ್ಟೋ (0) ಡಾಮ್ ಸಿಬ್ಲೀ (7), ಜೋ ರೂಟ್ (19) ಮತ್ತು ಬೆನ್ ಫೋಕ್ಸ್ (7) ಅವರ ವಿಕೆಟ್​ಗಳನ್ನು ಪಡೆದರು.

ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರವೀಂದ್ರ ಜಡೇಜಾ ಅವರು ಪಟೇಲ್ ಅವರ ಬೌಲಿಂಗ್ ಪರಾಕ್ರಮವನ್ನು ಮೆಚ್ಚಿದರೂ ತಮ್ಮ ಸ್ಥಾನದ ಬಗ್ಗೆ ಯೋಚಿಸಿ ಬೆಚ್ಚಿರಬಹುದು! ಆದರೆ, ತಂಡದಲ್ಲಿ ಸ್ಥಾನ ಗಿಟ್ಟಿಸಲು ಆರಂಭವಾಗಿರುವ ಆರೋಗ್ಯಕರ ಸ್ಪರ್ಧೆ ಕ್ರಿಕೆಟ್​ ಪ್ರೇಮಿಗಳನ್ನಂತೂ ಖುಷಿಪಡಿಸಿದೆ.

ಇದನ್ನೂ ಓದಿIndia vs England: 3ನೇ ಟೆಸ್ಟ್ ಗೆದ್ದ ಭಾರತ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಕನಸು​ ಇನ್ನೂ ಜೀವಂತ

Published On - 10:46 pm, Thu, 25 February 21

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್