AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England: 3ನೇ ಟೆಸ್ಟ್ ಗೆದ್ದ ಭಾರತ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಕನಸು​ ಇನ್ನೂ ಜೀವಂತ

India vs England: ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಎರಡನೇ ದಿನದಂದು ಟೀಂ ಇಂಡಿಯಾ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

India vs England: 3ನೇ ಟೆಸ್ಟ್ ಗೆದ್ದ ಭಾರತ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಕನಸು​ ಇನ್ನೂ ಜೀವಂತ
ಟೀಂ ಇಂಡಿಯಾ​
ಪೃಥ್ವಿಶಂಕರ
| Edited By: |

Updated on:Feb 25, 2021 | 8:50 PM

Share

ಅಹಮದಾಬಾದ್‌: ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಎರಡನೇ ದಿನದಂದು ಟೀಂ ಇಂಡಿಯಾ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಟೀಂ ಇಂಡಿಯಾ ಪರ ಬೌಲಿಂಗ್​ನಲ್ಲಿ ಮಿಂಚಿದ ಅಕ್ಷರ್​ ಪಟೇಲ್​ 2 ಇನ್ನಿಂಗ್ಸ್​ ಸೇರಿ 11 ವಿಕೆಟ್ ಪಡೆದರೆ, ಅಶ್ವಿನ್ 7 ವಿಕೆಟ್ ಪಡೆದು ಮಿಂಚಿದರು. ಇಂಗ್ಲೆಂಡ್​ ನೀಡಿದ 49 ರನ್​ಗಳ ಸುಲಭ ಗುರಿಯನ್ನು ಟೀಂ ಇಂಡಿಯಾ ಯಾವುದೇ ವಿಕೆಟ್​ ನಷ್ಟವಿಲ್ಲದೆ ಮುಟ್ಟಿತು. ರೂಟ್ ಅವರ​ ಓವರ್​ನಲ್ಲಿ 2 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್​ನೊಂದಿಗೆ ರೋಹಿತ್​ ಶರ್ಮಾ ಭಾರತಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಫೈನಲ್​ ಪ್ರವೇಶದ ಸಾಧ್ಯತೆ ಭಾರತ ಉಳಿಯಿತು. ಇಂಗ್ಲೆಂಡ್​ ತಂಡಕ್ಕೆ ಅವಕಾಶದ ಬಾಗಿಲು ಮುಚ್ಚಿದಂತಾಯಿತು.

ಇಂಗ್ಲೆಂಡ್‌ ದಾಂಡಿಗರ ಪೆವಿಲಿಯನ್ ಪರೇಡ್ ಟಾಸ್​ ಗೆದ್ದು ಬ್ಯಾಟಿಂಗ್​ ಮಾಡಲು ನಿರ್ಧರಿಸಿದ ಇಂಗ್ಲೆಂಡ್​ಗೆ ಆರಂಭದಿಂದಲೇ ಆಘಾತ ಎದುರಾಯಿತು. ಆರಂಭಿಕನಾಗಿ ಕಣಕ್ಕಿಳಿದ ಸಿಬ್ಲಿ ಶೂನ್ಯಕ್ಕೆ ಔಟಾದರೆ ನಂತರ ಬಂದ ಬೈರ್​ಸ್ಟೋವ್​ ಸಹ ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಶೂನ್ಯಕ್ಕೆ ಪೆವಿಲಿಯನ್​ಗೆ ಮರಳಿದರು. ನಾಯಕ ರೂಟ್​ ಸಹ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ. 17 ರನ್​ಗಳಿಸಿ ರೂಟ್​ ಪೆವಿಲಿಯನ್​ ಸೇರಿದರೆ, ರೂಟ್​ ನಂತರ ಬಂದ ಯಾವೊಬ್ಬ ಆಟಗಾರನೂ ನಿಂತು ಆಡುವ ಗೋಜಿಗೆ ಹೋಗಲಿಲ್ಲ. ಆದರೆ ಆರಂಭಿಕನಾಗಿ ಕಣಕ್ಕಿಳಿದ ಕ್ರಾವ್ಲೆ 53 ರನ್​ ಸಿಡಿಸಿ ತಂಡಕ್ಕೆ ನೆರವಾದರು. ಉಳಿದಂತೆ ಎಲ್ಲರೂ ಪೆವಿಲಿಯನ್​ ಪರೇಡ್​ ನಡೆಸಿದರು. ಇದರ ಫಲವಾಗಿ ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್‌ 112 ರನ್​ಗಳಿಗೆ ಸರ್ವಪತನವಾಯಿತು.

ಮಿಂಚಿದ ಅಕ್ಷರ್, ಅಶ್ವಿನ್ ಟಾಸ್​ ಸೋತು ಬೌಲಿಂಗ್​ಗೆ ಇಳಿದ ಭಾರತಕ್ಕೆ ಆರಂಭದಲ್ಲೇ ಇಶಾಂತ್​ ಶರ್ಮಾ ಯಶಸ್ಸು ತಂದುಕೊಟ್ಟರು. ಶೂನ್ಯಕ್ಕೆ ಸಿಬ್ಲಿ ವಿಕೆಟ್​ ತೆಗೆಯುವ ಮೂಲಕ ತಂಡಕ್ಕೆ ನೆರವಾದರು. ಉಳಿದಂತೆ ಬೌಲಿಂಗ್​ನಲ್ಲಿ ಮೆರೆದಿದ್ದು ಅಕ್ಷರ್​ ಪಟೇಲ್​ ಹಾಗೂ ಅಶ್ವಿನ್​. ತಾನು ಎಸೆದ ಮೊದಲ ಓವರ್​ನ ಮೊದಲ ಎಸೆತದಲ್ಲೇ ವಿಕೆಟ್​ ಪಡೆಯುವಲ್ಲಿ ಅಕ್ಷರ್​ ಯಶಸ್ವಿಯಾದರು. ಆರಂಭದಿಂದಲೂ ಇಂಗ್ಲೆಂಡ್‌ ಬ್ಯಾಟ್ಸ್​ಮನ್​ಗಳ ಮೇಲೆ ಸವಾರಿ ಮಾಡಿದ ಅಕ್ಷರ್​ ಪಟೇಲ್​ ಪ್ರಮುಖ 6 ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದರು. ಇನ್ನೊಂದೆಡೆ ಇಂಗ್ಲೆಂಡ್‌ ದಾಂಡಿಗರನ್ನು ಇನ್ನಿಲ್ಲದಂತೆ ಕಾಡಿದ ಅಶ್ವಿನ್​ ಪ್ರಮುಖ 3 ವಿಕೆಟ್​ ಪಡೆದು ಮಿಂಚಿದರು.

ಭಾರತಕ್ಕೆ ಮೊದಲ ಇನ್ನಿಂಗ್ಸ್​ ಮುನ್ನಡೆ ಇಂಗ್ಲೆಂಡ್‌ ನೀಡಿದ 112 ರನ್​ಗಳ ಅಲ್ಪ ಮೊತ್ತವನ್ನು ಬೆನ್ನತ್ತಿದ ಭಾರತದ ಆರಂಭವೂ ಅಷ್ಟೇನೂ ಉತ್ತಮವಾಗಿರಲಿಲ್ಲ. ಶುಭಮನ್ ಗಿಲ್​ 11 ರನ್​ ಗಳಿಸಿ ಔಟಾದರೆ, ನಂತರ ಬಂದ ಪೂಜಾರ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ರೋಹಿತ್​ ಜೊತೆಯಾದ ನಾಯಕ ಕೊಹ್ಲಿ 27 ರನ್​ ಸಿಡಿಸಿ ಔಟಾದರು. ಕೊಹ್ಲಿ ಬಳಿಕ ಬಂದ ಉಳಿದ ಆಟಗಾರರು ಹೆಚ್ಚು ಪ್ರತಿರೋಧ ತೋರದೆ ಬೇಗನೆ ಪೆವಿಲಿಯನ್​ ಸೇರಿದರು. ಅಂತಿಮವಾಗಿ ರೋಹಿತ್ ಶರ್ಮಾ​ ಅವರ ಅಮೋಘ 66 ರನ್​ಗಳ ಕೊಡುಗೆಯಿಂದಾಗಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 32 ರನ್​ಗಳ ಮುನ್ನಡೆ ಪಡೆಯಿತು.

ಇಂಗ್ಲೆಂಡ್​ಗೆ‌ 2ನೇ ಇನ್ನಿಂಗ್ಸ್​ನಲ್ಲಿಯೂ ಆಘಾತ ಟೀಂ ಇಂಡಿಯಾದ 32 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್​ಗೆ ಆರಂಭದಿಂದಲೇ ಆಘಾತ ಎದುರಾಯಿತು. ಶೂನ್ಯಕ್ಕೆ ಇಬ್ಬರು ಆಟಗಾರರು ಔಟಾದರು. ನಂತರ ಜೊತೆಯಾದ ರೂಟ್​ ಹಾಗೂ ಸ್ಟೋಕ್ಸ್​ ಕೊಂಚ ಪ್ರತಿರೋಧ ತೋರಿದರಾದರೂ ತಂಡಕ್ಕೆ ಯಾವುದೇ ಪ್ರಯೋಜನವಾಗಲಿಲ್ಲ. ರೂಟ್​ 17 ರನ್​ಗಳಿಸಿ ಔಟಾದರೆ, ಸ್ಟೋಕ್ಸ್​ 25 ರನ್​ಗಳಿಸಿದರು. ಸ್ಟೋಕ್ಸ್​ ಗಳಿಸಿದ 25 ರನ್​ಗಳೇ ತಂಡದ ಆಟಗಾರನೊಬ್ಬ ಗಳಿಸಿದ ಅತ್ಯಧಿಕ ರನ್​ ಆಯಿತು. ಉಳಿದಂತೆ ಎಲ್ಲಾ ಆಟಗಾರರು ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿಕೊಂಡರು. ಅಂತಿಮವಾಗಿ ಇಂಗ್ಲೆಂಡ್ 81 ರನ್‌ಗಳಿಗೆ 2ನೇ ಇನ್ನಿಂಗ್ಸ್ ಮುಗಿಸಿತು.

2ನೇ ಇನ್ನಿಂಗ್ಸ್​ನಲ್ಲೂ ಮಿಂಚಿದ್ದು ಅಕ್ಷರ್ ಮೊದಲನೇ ಇನ್ನಿಂಗ್ಸ್​ನಂತೆ 2ನೇ ಇನ್ನಿಂಗ್ಸ್​ನಲ್ಲೂ ಅಬ್ಬರಿಸಿದ ಅಕ್ಷರ್​ ಎಸೆದ ಮೊದಲ ಓವರ್​ನಲ್ಲಿಯೇ 2 ವಿಕೆಟ್​ ತೆಗೆಯುವುದರಲ್ಲಿ ಯಶಸ್ವಿಯಾದರು. ಆರಂಭದಲ್ಲೇ 2 ವಿಕೆಟ್​ ಕಳೆದುಕೊಂಡ ಇಂಗ್ಲೆಂಡ್ ಚೇತರಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಅಕ್ಷರ್​ ಹಾಗೂ ಅಶ್ವಿನ್​ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ದಾಂಡಿಗರು ಪೆವಿಲಿಯನ್ ಪರೇಡ್  ನಡೆಸಿದರು. 2ನೇ ಇನ್ನಿಂಗ್ಸ್ ಬರಿ ಸ್ಪಿನ್ನರ್​ಗಳ ಅಬ್ಬರದಲ್ಲೇ ಮುಗಿದು ಹೋಯಿತು. ಅಕ್ಷರ್​ 5 ವಿಕೆಟ್‌ ಪಡೆದರೆ, ಅಶ್ವಿನ್​ 4 ವಿಕೆಟ್​, ಹಾಗೂ ಸುಂದರ್​ 1 ವಿಕೆಟ್​ ಪಡೆದು ಮಿಂಚಿದರು.

ಭಾರತಕ್ಕೆ ಸುಲಭದ ಜಯ ಕೇವಲ 49 ರನ್​ಗಳ ಅಲ್ಪ ಮೊತ್ತದ ಸವಾಲು ಪಡೆದ ಟೀಂ ಇಂಡಿಯಾ ಸುಲಭವಾಗಿ ಜಯ ಸಾಧಿಸಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್​ ಹಾಗೂ ಗಿಲ್​ ಅಬ್ಬರದ ಬ್ಯಾಟಿಂಗ್​ ಮಾಡಿ ಭಾರತಕ್ಕೆ ಇಂದೇ ಗೆಲುವಿನ ಮಾಲೆ ತೋಡಿಸಿದರು. ರೋಹಿತ್​ ಭರ್ಜರಿ ಬೌಂಡರಿ ಹಾಗೂ ಸಿಕ್ಸರ್​ ಸಿಡಿಸಿ 25 ರನ್​ಗಳಿಸಿದರೆ, ಗಿಲ್​ 15 ರನ್​ಗಳಿಸಿ ಅಜೇಯರಾಗಿ ಉಳಿದರು. 2 ಇನ್ನಿಂಗ್ಸ್​ನ ಬೌಲಿಂಗ್​ನಲ್ಲಿ ಮಿಂಚಿದ ಅಕ್ಷರ್​ ಪಟೇಲ್​ ಪಂದ್ಯಪುರುಷ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ:India vs England Test Series: ಪಟೇಲ್, ಅಶ್ವಿನ್ ಸ್ಪಿನ್ ಮೋಡಿಗೆ ತರಗೆಲೆಗಳಂತೆ ಉದುರಿದ ಇಂಗ್ಲೆಂಡ್ 112ಕ್ಕೆ ಆಲೌಟ್!

Published On - 8:48 pm, Thu, 25 February 21

Follow Us
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ