AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bhuvneshwar Kumar IPL 2021 SRH Team Player: ತೆಂಡೂಲ್ಕರ್​ರನ್ನು ಮೊಟ್ಟ ಮೊದಲ ಬಾರಿಗೆ ಸೊನ್ನೆಗೆ ಔಟ್ ಮಾಡಿದ ಭುವನೇಶ್ವರ್ ಹೈದರಾಬಾದ್​ನ ಪ್ರಮುಖ ಬೌಲಿಂಗ್ ಅಸ್ತ್ರ

ಉತ್ತರ ಪ್ರದೇಶದ ಕೆಲ ವೇಗದ ಬೌಲರ್​ಗಳು ರಾಷ್ಟ್ರೀಯ ತಂಡಕ್ಕೆ ಅಡಿದ್ದಾರೆ. ಭುವಿ 2008ರಲ್ಲೇ ತೆಂಡೂಲ್ಕರ್ ವಿಕೆಟ್ ಪಡೆದರೂ ರಾಷ್ಟ್ರೀಯ ತಂಡದಿಂದ ಬುಲಾವ್​​ಗಾಗಿ ಮೂರು ವರ್ಷ ಕಾಯಬೇಕಾಯಿತು.

Bhuvneshwar Kumar IPL 2021 SRH Team Player: ತೆಂಡೂಲ್ಕರ್​ರನ್ನು ಮೊಟ್ಟ ಮೊದಲ ಬಾರಿಗೆ ಸೊನ್ನೆಗೆ ಔಟ್ ಮಾಡಿದ ಭುವನೇಶ್ವರ್ ಹೈದರಾಬಾದ್​ನ ಪ್ರಮುಖ ಬೌಲಿಂಗ್ ಅಸ್ತ್ರ
ಭುವನೇಶ್ವರ್ ಕುಮಾರ್
ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on:Apr 11, 2021 | 10:49 AM

Share

ಭಾರತದ ಲೆಜೆಂಡರಿ ಬ್ಯಾಟ್ಸ್​ಮನ್ ಸಚಿನ್ ತೆಂಡೂಲ್ಕರ್ ಅವರ ಆಡುವ ದಿನಗಳಲ್ಲಿ ವಿಶ್ವದ ಪ್ರತಿಯೊಬ್ಬ ಬೌಲರ್​ನ ಆಸೆ ಅಥವಾ ಮಹತ್ವಾಕಾಂಕ್ಷೆ ಅಂದರೂ ಆದೀತು; ಲೆಜೆಂಡರಿ ಆಟಗಾರನ ವಿಕೆಟ್​ ಪಡೆಯುವುದಾಗಿರುತ್ತಿತ್ತು. ಆದರೆ ಪ್ರಥಮ ದರ್ಜೆ ಪಂದ್ಯಗಳಲ್ಲಿ ಭಾರತದ ಬೌಲರ್​ನೊಬ್ಬ ಲಿಟ್ಲ್ ಮಾಸ್ಟರ್ ಅವರನ್ನು ಸೊನ್ನೆಗೆ ಔಟ್​ ಮಾಡಿ ದೇಶದೆಲ್ಲೆಡೆ ಹೆಸರಾಗಿದ್ದು ನಿಮಗೆ ನೆನಪಿದೆಯೇ? ಕ್ರಿಕೆಟ್ ದೇವರನ್ನು ಸೊನ್ನೆಗೆ ಔಟ್​ ಮಾಡಿದ್ದಕ್ಕೆ ಕೆಲವರು ಆ ಬೌಲರ್​ನನ್ನು ಶಪಿಸಿದರೆ ಇನ್ನುಳಿದವರು ಅವರ ಪ್ರತಿಭೆಯನ್ನು ಕೊಂಡಾಡಿದರು. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅದು ಸಚಿನ್ ಅವರ ಮೊಟ್ಟ ಮೊದಲ ಸೊನ್ನೆಯಾಗಿತ್ತು. ಅಂದಹಾಗೆ ಅ ಬೌಲರ್​ ಯಾರೆನ್ನುವುದು ನಿಮಗೆ ನೆನಪಾಯಿತೇ? ಹೌದು, 2008-09 ಸಾಲಿನ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮಾಸ್ಟರ್ ಬ್ಲಾಸ್ಟರನ್ನು ಖಾತೆ ತೆರೆಯುವ ಮೊದಲೇ ಔಟ್​ ಮಾಡಿದ್ದು ಆಗಿನ್ನೂ ತನ್ನ ಕೇವಲ 11ನೇ ಪ್ರಥಮ ದರ್ಜೆ ಪಂದ್ಯವಾಡುತ್ತಿದ್ದ ಉತ್ತರ ಪ್ರದೇಶದ ಭುವನೇಶ್ವರ್ ಕುಮಾರ್.

ಉತ್ತರ ಪ್ರದೇಶದ ಕೆಲ ವೇಗದ ಬೌಲರ್​ಗಳು ರಾಷ್ಟ್ರೀಯ ತಂಡಕ್ಕೆ ಅಡಿದ್ದಾರೆ. ರುದ್ರಪ್ರತಾಪ್ ಸಿಂಗ್ ಮತ್ತು ಪ್ರವೀಣ್ ಕುಮಾರ್ ಅಲ್ಪಾವಧಿಗಾದರೂ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದರು. ನಿಮಗೆ ಆಶ್ಚರ್ಯವಾಗಬಹುದು, ಭುವಿ 2008ರಲ್ಲೇ ತೆಂಡೂಲ್ಕರ್ ವಿಕೆಟ್ ಪಡೆದರೂ ರಾಷ್ಟ್ರೀಯ ತಂಡದಿಂದ ಬುಲಾವ್​​ಗಾಗಿ ಮೂರು ವರ್ಷ ಕಾಯಬೇಕಾಯಿತು. ಒಂದು ದಿನದ ಪಂದ್ಯ ಮತ್ತು ಟಿ20ಐ ಗಳಲ್ಲಿ ಅವರ ಪದಾರ್ಪಣೆ ಸ್ಮರಣೀಯವಾಗಿವೆ. ಎರಡೂ ಆವೃತ್ತಿಗಳಲ್ಲಿ ಅವರು ತಾವೆಸೆದ ಮೊದಲ ಓವರ್​ನಲ್ಲೇ ವಿಕೆಟ್ ಪಡೆದರು!

ನೀಳಕಾಯದ ಭುವಿ ಟೆಸ್ಟ್​ ಕ್ರಿಕೆಟ್​ಗೆ 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಸ್ವದೇಶದ ಸರಣಿಯಲ್ಲಿ ಪದಾರ್ಪಣೆ ಮಾಡಿದರು. ಆವರ ಅರಂಗ್ರೇಟಂ ಹೇಳಿಕೊಳ್ಳವಂಥದ್ದೇನೂ ಆಗಿರಲಿಲ್ಲ. ಆದರೆ, ಮರುವರ್ಷ ಭಾರತವು ಇಂಗ್ಲೆಂಡ್​ ಪ್ರವಾಸ ತೆರಳಿದಾಗ ಅವರು ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದರು. ಎರಡು ಬಾರಿ 5 ವಿಕೆಟ್​ಗಳನ್ನು ಸಾಧನೆ ಮಾಡಿದ್ದಲ್ಲದೆ, ಸರಣಿಯಲ್ಲಿ ಬ್ಯಾಟ್​ನಿಂದಲೂ ಮಿಂಚಿ ಮೂರು ಅರ್ಧ ಶತಕಗಳನ್ನು ಬಾರಿಸಿದರು. ಹಾಗಂತ ಅವರನ್ನು ಆಲ್​ರೌಂಡರ್​ ಅಂತ ಕರೆಯಲಾಗದಾದರೂ ಲೇಟ್ ಆರ್ಡರ್​ನಲ್ಲಿ ಉಪಯುಕ್ತ ಬಾಟ್ಸ್​ಮನ್ ಎನ್ನುವುದು ಮಾತ್ರ ನಿಜ. ನಿಮಗೆ ಗೊತ್ತಿರಲಿ, ಆ ಸರಣಿಯಲ್ಲಿ ಅವರು 19 ವಿಕೆಟ್​ ಪಡೆಯುವುದರ ಜೊತೆಗೆ 247 ರನ್​ಗಳನ್ನೂ ಗಳಿಸಿದರು.

Bhuvneshwar Kumar

ಭುವನೇಶ್ವರ್ ಕುಮಾರ್

ಭುವಿಯ ಸ್ಪೆಷಾಲಿಟ ಅಂದರೆ ಉತ್ತಮ ವೇಗದಲ್ಲಿ ಎರಡೂ ಕಡೆ ಚೆಂಡನ್ನು ಸ್ವಿಂಗ್ ಮಾಡುವುದು. ಹಾಗೆಯೇ, ಸೀಮಿತ ಓವರ್​ಗಳ ಕ್ರಿಕೆಟ್​​ನಲ್ಲಿ ನಿಖರವಾದ ಲೈನ್ ಮತ್ತು ಕಾಯ್ದುಕೊಳ್ಳುವುದರ ಜೊತೆಗೆ ಕರಾರುವಕ್ಕಾದ ಯಾರ್ಕರ್​ಗಳನ್ನು ಎಸೆಯಬಲ್ಲರು. ಟೆಸ್ಟ್​ ಕ್ರಿಕೆಟ್​ನಲ್ಲಿ ಅವರು ಭಾರತೀಯ ತಂಡದ ಖಾಯಂ ಸದಸ್ಯರಾದರು ಅಂತ ಎಲ್ಲರೂ ಅಂದುಕೊಂಡಾಗಲೇ ಅಂತರರಾಷ್ಟ್ರೀಯ ಕ್ರಿಕೆಟ್​ನ ಒತ್ತಡಕ್ಕೆ ಒಗ್ಗಿಕೊಳ್ಳವುದು ಅವರಿಗೆ ಸಾಧ್ಯವಾಗಲಿಲ್ಲ. ನಿರಂತರವಾಗಿ ಉತ್ತಮ ಪ್ರದರ್ಶನಗಳನು ನೀಡಬೇಕಾದ ಪ್ರೆಶರ್ ಅವರ ಬೌಲಿಂಗ್​ ಮೇಲೆ ಪ್ರಭಾವ ಬೀರಲಾರಂಭಿಸಿತು. ಮೊದಲಿನಂತೆ ವಿಕೆಟ್​​ಗಳು ದೊರೆಯದಾದವು. ಅವರು ಕೇವಲ ಹೊಸ ಚೆಂಡಿನಿಂದ ಮಾತ್ರ ವಿಕೆಟ್​ ಪಡೆಯಬಲ್ಲರು ಎಂಬ ಮಾತುಗಳು ಕೇಳಿಬಂದವು.

ಬೌಲಿಂಗ್​ನಲ್ಲಿ ವೇಗ ವೃದ್ಧಿಸಿಕೊಳ್ಳುವ ಪ್ರಯತ್ನದಲ್ಲಿ ಭುವಿ ತಮ್ಮ ಪ್ರಮುಖ ಆಯುಧವಾಗಿದ್ದ ಸ್ವಿಂಗ್ ಕಳೆದುಕೊಂಡರು. ಬೌಲರ್​ನೊಬ್ಬ ಎಷ್ಟೇ ವೇಗದಲ್ಲಿ ಬೌಲ್ ಮಾಡಲಿ, ಅದರಲ್ಲಿ ಸ್ವಿಂಗ್ ಅಂಶವಿಲ್ಲದೆ ಹೋದರೆ, ಬ್ಯಾಟ್ಸ್​ಮನ್​ಗಳು ಎಸೆತಗಳನ್ನು ನಿರಾಯಾಸವಾಗಿ ಚಚ್ಚುತ್ತಾರೆ. ಹಾಗಾಗಿ ಅವರು ತನ್ನ ಬೌಲಿಂಗ್​ನಲ್ಲಿ ಸ್ವಿಂಗ್ ವಾಪಸ್ಸು ತಂದುಕೊಳ್ಳಲು ಶ್ರಮಿಸಲೇಬೇಕಾಯಿತು.

ಅವರ ಐಪಿಎಲ್ ಪಯಣ ಶುರುವಾಗಿದ್ದು 2011ರಲ್ಲಿ ರಾಯಲ್ ಚಾಲಂಜರ್ಸ್ ಬೆಂಗಳೂರು ತಂಡದಿಂದ. ಈ ಫ್ರಾಂಚೈಸಿಗೆ ಎರಡು ಸೀಸನ್​ ಅಡಿದ ನಂತರ ಅವರು ಒಂದು ಸೀಸನನ್ನು ಪುಣೆ ವಾರಿಯರ್ಸ್ ಪರ ಆಡಿದರು. ಆದರೆ, 2014 ರಲ್ಲಿ ಸನ್​ರೈಸರ್ಸ್ ತಂಡಕ್ಕೆ ಆಡಲಾರಂಭಿಸಿದ ನಂತರವೇ ಅವರ ತಮ್ಮನ್ನು ತಾವು ಎಸ್ಟ್ಯಾಬ್ಲಿಷ್ ಮಾಡಿಕೊಳ್ಳಲಾರಂಭಿಸಿದರು.

ಹೈದರಾಬಾದ ತಂಡಕ್ಕೆ ಭುವಿ ಲೀಡಿಂಗ್ ವಿಕೆಟ್ ಟೇಕರ್ ಆಗಿದ್ದಾರೆ. ಅವರ ಮತ್ತು ರಶೀದ್ ಖಾನ್ ಜೋಡಿಯು ತಂಡಕ್ಕೆ ಹಲವಾರು ಗೆಲುವುಗಳನ್ನು ಕೊಡಿಸಿದ್ದಾರೆ. ನಿಮಗೆ ಆಶ್ಚರ್ಯವಾಗಬಹುದು ದಕ್ಷಿಣದ ಭಾರತದ ಈ ಟೀಮಿಗೆ ಭುವಿ 133 ವಿಕೆಟ್​ಗಳನ್ನು ಪಡೆದಿದ್ದಾರೆ. 2017ರ ಸೀಸನ್​ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್​ ವಿರುದ್ಧ ಅವರು ದಾಳಿಯಲ್ಲಿ ಅಮೋಘ ಲಯ ಮತ್ತು ನಿಯಂತ್ರಣ ತೋರಿ 19ರನ್​ಗಳಿಗೆ 5 ವಿಕೆಟ್ ಪಡೆದರು.

ಐಪಿಎಲ್​ನಲ್ಲಿ ಎದುರಾಳಿ ತಂಡದ ಆರಂಭ ಆಟಗಾರರು ಯಾರೇ ಅಗಿರಲಿ, ಭುವಿಯ ಆರಂಭಿಕ ದಾಳಿಯನ್ನು ಎಚ್ಚರಿಕೆಯಿಂದ ಆಡುತ್ತಾರೆ. ಐಪಿಲ್​​ನಲ್ಲಿ ಇದುವರೆಗೆ ಒಟ್ಟು 121 ಪಂದ್ಯಗಳನ್ನಾಡಿರುವ ಭುವಿ 23.91 ಸರಾಸರಿಯಲ್ಲಿ 136 ವಿಕೆಟ್​ಗ​ಳನ್ನು ಪಡೆದಿದ್ದಾರೆ. ಅವರ ಬೆಸ್ಟ್​ ಬೌಲಿಂಗ್ ಫರ್ಫಾರ್ಮನ್ಸ್ 5/19 ಆಗಿದ್ದು 19.83 ಸ್ಟ್ರೈಕ್​ರೇಟ್​ನಲ್ಲಿ ವಿಕೆಟ್​ಗಳನ್ನು ಪಡೆದಿದ್ದಾರೆ. ಅವರು 2014 ರಲ್ಲಿ 20 ವಿಕೆಟ್​, 2015ರಲ್ಲಿ 18, 2016ರಲ್ಲಿ 23 ಮತ್ತು 2017ರಲ್ಲಿ 26 ವಿಕೆಟ್​ ಪಡೆದಿದ್ದಾರೆ.

ಎಂದಿನಂತೆ 2021 ರ ಸೀಸನಲ್ಲೂ ಹೈದರಾಬಾದ ನಾಯಕ ಡೇವಿಡ್ ವಾರ್ನರ್ ಬ್ರೇಕ್​ಥ್ರೂಗಳಿಗಾಗಿ ಭುವಿಯವರತ್ತ ಚೆಂಡೆಸೆಯಲಿದ್ದಾರೆ.

ಇದನ್ನೂ ಓದಿ: IPL 2021: ಡೆಲ್ಲಿ ಕ್ಯಾಪಿಟಲ್ಸ್​ಗೆ ಆಘಾತ! ಕೊರೊನಾಗೆ ತುತ್ತಾದ ಅಕ್ಷರ್​ ಪಟೇಲ್​.. ಆತಂಕದಲ್ಲಿ ಧವನ್, ಪಂತ್

Published On - 10:40 am, Sun, 11 April 21

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು