AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ವಿಕೆಟ್​ ಪಡೆದ ಸಂಭ್ರಮದಲ್ಲಿ.. ಡಬಲ್​ ‘ಸ್ಪಿನ್​’ ಪಲ್ಟಿ ಹೊಡೆದ ಬೌಲರ್​

ಕ್ರಿಕೆಟ್​ ಮ್ಯಾಚ್​ನಲ್ಲಿ ಎದುರಾಳಿ ಬ್ಯಾಟ್ಸ್​ಮನ್​ನ​ ವಿಕೆಟ್​ ಪಡೆಯುವುದೇ ಪ್ರತಿ ಬೌಲರ್​ನ ಗುರಿ. ಬ್ಯಾಟ್ಸ್​ಮನ್​ನ​ ಯಾವ ರೀತಿಯ ಎಸೆತದಿಂದ ಮಣಿಸಿ ಆತನ ವಿಕೆಟ್​ ಎಗರಿಸಬಹುದು ಅನ್ನೋ ಯೋಚನೆಯನ್ನ ಎಲ್ಲಾ ಬೌಲರ್​ಗಳು ಮಾಡುತ್ತಾರೆ. ಅಂತೆಯೇ, ಬೌಲ್​ ಮಾಡಿದ ಇನ್​ಸ್ವಿಂಗ್​, ಔಟ್​ಸ್ವಿಂಗ್​ ಮತ್ತು ಗೂಗ್ಲಿಗೆ ಬ್ಯಾಟ್ಸ್​ಮನ್​ ವಿಕೆಟ್​ ಬಿದ್ರೆ ಸಾಕು. ಬೌಲರ್​ನ ಸಂತೋಷಕ್ಕೆ ಪಾರವೇ ಇರಲ್ಲ. ಹೀಗೆ, ವಿಕೆಟ್​ ಪಡೆದಾಗ ಬೌಲರ್ ಹಾಗೂ ಆತನ ಟೀಂ ಸಂಭ್ರಮಿಸುವುದನ್ನ ನೋಡಿದ್ದೇವೆ. ಕೆಲವೊಂದು ಬಾರಿ ಈ ಸಂಭ್ರಮಾಚರಣೆ ಕೊಂಚ ವಿಭಿನ್ನವಾಗಿಯೇ ಇರುತ್ತದೆ. ಹಾಗೆಯೇ, ಎದುರಾಳಿ […]

Video: ವಿಕೆಟ್​ ಪಡೆದ ಸಂಭ್ರಮದಲ್ಲಿ.. ಡಬಲ್​ ‘ಸ್ಪಿನ್​’ ಪಲ್ಟಿ ಹೊಡೆದ ಬೌಲರ್​
KUSHAL V
|

Updated on: Sep 05, 2020 | 7:42 PM

Share

ಕ್ರಿಕೆಟ್​ ಮ್ಯಾಚ್​ನಲ್ಲಿ ಎದುರಾಳಿ ಬ್ಯಾಟ್ಸ್​ಮನ್​ನ​ ವಿಕೆಟ್​ ಪಡೆಯುವುದೇ ಪ್ರತಿ ಬೌಲರ್​ನ ಗುರಿ. ಬ್ಯಾಟ್ಸ್​ಮನ್​ನ​ ಯಾವ ರೀತಿಯ ಎಸೆತದಿಂದ ಮಣಿಸಿ ಆತನ ವಿಕೆಟ್​ ಎಗರಿಸಬಹುದು ಅನ್ನೋ ಯೋಚನೆಯನ್ನ ಎಲ್ಲಾ ಬೌಲರ್​ಗಳು ಮಾಡುತ್ತಾರೆ. ಅಂತೆಯೇ, ಬೌಲ್​ ಮಾಡಿದ ಇನ್​ಸ್ವಿಂಗ್​, ಔಟ್​ಸ್ವಿಂಗ್​ ಮತ್ತು ಗೂಗ್ಲಿಗೆ ಬ್ಯಾಟ್ಸ್​ಮನ್​ ವಿಕೆಟ್​ ಬಿದ್ರೆ ಸಾಕು. ಬೌಲರ್​ನ ಸಂತೋಷಕ್ಕೆ ಪಾರವೇ ಇರಲ್ಲ.

ಹೀಗೆ, ವಿಕೆಟ್​ ಪಡೆದಾಗ ಬೌಲರ್ ಹಾಗೂ ಆತನ ಟೀಂ ಸಂಭ್ರಮಿಸುವುದನ್ನ ನೋಡಿದ್ದೇವೆ. ಕೆಲವೊಂದು ಬಾರಿ ಈ ಸಂಭ್ರಮಾಚರಣೆ ಕೊಂಚ ವಿಭಿನ್ನವಾಗಿಯೇ ಇರುತ್ತದೆ. ಹಾಗೆಯೇ, ಎದುರಾಳಿ ಬ್ಯಾಟ್ಸ್​ಮನ್​ನ ವಿಕೆಟ್​ ಪಡೆದ ಆನಂದದಲ್ಲಿ ಆಫ್​ ಸ್ಪಿನ್ನರ್​ ಒಬ್ಬ ಡಬಲ್​ ಪಲ್ಟಿ ಹೊಡೆದಿರುವ ರೋಚಕ ಪ್ರಸಂಗ ವೆಸ್ಟ್​ ಇಂಡೀಸ್​ನ ಕ್ಯಾರಿಬಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ನಡೆದಿದೆ.

ಗಯಾನಾ ಅಮೆಜಾನ್​ ತಂಡದ ಆಫ್ ಸ್ಪಿನ್ನರ್​ ಆದ 20 ವರ್ಷದ ಕೆವಿನ್​ ಸಿನ್​ಕ್ಲೇರ್​ ಪಂದ್ಯದ ವೇಳೆ ಎದುರಾಳಿ ತಂಡವಾದ ಬಾರ್ಬೇಡೋಸ್​ ಟ್ರೈಡೆಂಟ್ಸ್​ನ ಬ್ಯಾಟ್ಸ್​ಮನ್​ ಮಿಚ್ಚೆಲ್​ ಸ್ಯಾಂಟ್ನರ್​ನ ವಿಕೆಟ್​ ಪಡೆದನು. ಅದೇ ಖುಷಿಯಲ್ಲಿ ಕುಣಿದು ಕುಪ್ಪಳಿಸುವ ಜೊತೆಗೆ ಕೆವಿನ್​ ಡಬಲ್​ ಪಲ್ಟಿ ಸಹ ಹೊಡೆದಿದ್ದಾನೆ. ಕೆವಿನ್​ನ ಈ ಸ್ಟಂಟ್​ ಈಗ ಸಿಕ್ಕಾಪಟ್ಟೆ ವೈರಲ್​ ಆಗಿದ್ದು ಜನರು ವಾವ್​ ಅನ್ನುತ್ತಿದ್ದಾರೆ. ಆದರೆ, ಮತ್ತೊಂದೆಡೆ, ಈ ಥರದ ಅಪಾಯಕಾರಿ ಸ್ಟಂಟ್​ಗಳನ್ನ ಮಾಡಲು ಅವಕಾಶ ಕೊಡಬೇಡಿ ಎಂದು ಪಂದ್ಯಾವಳಿಯ ಕೆಲ ಅಭಿಮಾನಿಗಳು ಕಾಳಜಿ ತೋರಿದ್ದಾರೆ.

ಆಫೀಸರ್ಸ್ ಮನೆಯಲ್ಲಿ ಕಂತೆ ಕಂತೆ ಹಣ ನೋಡಿ ಶಾಕ್
ಆಫೀಸರ್ಸ್ ಮನೆಯಲ್ಲಿ ಕಂತೆ ಕಂತೆ ಹಣ ನೋಡಿ ಶಾಕ್
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ