AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lakshya Sen: ಗುರಿ ತಪ್ಪದ ಲಕ್ಷ್ಯ: ಭಾರತಕ್ಕೆ ಮತ್ತೊಂದು ಚಿನ್ನ

CWG 2022 Men's Singles Badminton: ಸೆಮಿಫೈನಲ್​ನಲ್ಲಿ ಸಿಂಗಾಪುರದ ಜಿಯಾ ಹೆಂಗ್‌ ತೇಹ್‌ ಅವರನ್ನು 21-10, 18-21, 21-16 ವಿರುದ್ದ ಕಠಿಣ ಜಯ ಸಾಧಿಸಿ ಲಕ್ಷ್ಯ ಫೈನಲ್​ಗೆ ಎಂಟ್ರಿ ಕೊಟ್ಟಿದ್ದರು.

Lakshya Sen: ಗುರಿ ತಪ್ಪದ ಲಕ್ಷ್ಯ: ಭಾರತಕ್ಕೆ ಮತ್ತೊಂದು ಚಿನ್ನ
Lakshya Sen
TV9 Web
| Edited By: |

Updated on:Aug 08, 2022 | 4:41 PM

Share

ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್ ಗೇಮ್ಸ್​ನ (CWG 2022) ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್​ ಭಾರತದ ಲಕ್ಷ್ಯ ಸೇನ್ (Lakshya Sen) ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಫೈನಲ್​ನಲ್ಲಿ ಮಲೇಷ್ಯಾದ ಎನ್‌ಜಿ ತ್ಸೆ ಯೋಂಗ್ ಅವರನ್ನು 21-191, 21-9, 21-16 ಸೆಟ್​ಗಳಿಂದ ಮಣಿಸುವ ಮೂಲಕ ಭಾರತೀಯ ಬ್ಯಾಡ್ಮಿಂಟನ್ ತಾರೆ ಈ ಸಾಧನೆ ಮಾಡಿದರು. ಆರಂಭದಿಂದಲೇ ಭರ್ಜರಿ ಪೈಪೋಟಿಗೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಇಬ್ಬರು ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಮೊದಲ 7 ಪಾಯಿಂಟ್​ಗಳವರೆಗೆ ಸಮಬಲ ಸಾಧಿಸಿದ್ದ ಈ ಪಂದ್ಯದಲ್ಲಿ ಆ ಬಳಿಕ ಎನ್‌ಜಿ ತ್ಸೆ ಯೋಂಗ್ ಕಾಯ್ದುಕೊಂಡರು. ಇದಾಗ್ಯೂ ಕಂಬ್ಯಾಕ್ ಮಾಡಿದ ಲಕ್ಷ್ಯ ಸೇನ್ ಮೊದಲ ಸುತ್ತಿನ ಅಂತ್ಯದವರೆಗೆ ಪೈಪೋಟಿ ನೀಡಿದರು. ಪರಿಣಾಮ ಕೇವಲ 2 ಪಾಯಿಂಟ್​ಗಳ ಅಂತರದಿಂದ ಲಕ್ಷ್ಯ ಸೇನ್ ಸೋಲನುಭವಿಸಬೇಕಾಯಿತು. ಅದರಂತೆ ಯೋಂಗ್ ಮೊದಲ ಸುತ್ತನ್ನು 21-19 ಅಂತರದಿಂದ ಗೆದ್ದುಕೊಂಡರು.

ಇನ್ನು 2ನೇ ಸುತ್ತಿನಲ್ಲಿ ಲಕ್ಷ್ಯ ಸೇನ್ ಆರಂಭದಲ್ಲಿ ಮುನ್ನಡೆ ಪಡೆದರೂ, ಮಲೇಷ್ಯಾ ಆಟಗಾರರಿಂದ ತೀವ್ರ ಪೈಪೋಟಿ ಎದುರಿಸಿದ್ದರು. ಆದರೆ ಈ ಹಂತದಲ್ಲಿ ತಮ್ಮ ಅನುಭವವನ್ನು ಧಾರೆಯೆರೆದ ಲಕ್ಷ್ಯ ಎನ್‌ಜಿ ತ್ಸೆ ಯೋಂಗ್ ವಿರುದ್ದ ಸಂಪೂರ್ಣ ಹಿಡಿತ ಸಾಧಿಸಿದರು. ಅಲ್ಲದೆ ಬ್ಯಾಕ್ ಟು ಬ್ಯಾಕ್ ಪಾಯಿಂಟ್​ಗಳನ್ನು ಕಲೆಹಾಕುವ ಮೂಲಕ ಒತ್ತಡ ಹೇರಿದರು. ಈ ಮೂಲಕ 2ನೇ ಸೆಟ್​ ಅನ್ನು 21-9 ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡರು.

ಭರ್ಜರಿ ಪೈಪೋಟಿಗೆ ಕಾರಣವಾಗಿದ್ದ ಮೊದಲ ಎರಡು ಸುತ್ತಿನ ಸಮಬಲದ ಬಳಿಕ ಫೈನಲ್​ ರೌಂಡ್​ಗೆ ಪಂದ್ಯ ಸಾಗಿತು. ಮೊದಲ ಲೆಮನ್ ಬ್ರೇಕ್​ ವೇಳೆಗೆ 11 ಪಾಯಿಂಟ್ ಕಲೆಹಾಕುವ ಮೂಲಕ ಲಕ್ಷ್ಯ ಸೇನ್ ಮುನ್ನಡೆ ಕಾಯ್ದುಕೊಂಡರು. ಈ ವೇಳೆ ಎನ್‌ಜಿ ತ್ಸೆ ಯೋಂಗ್ ಗಳಿಸಿದ್ದು ಕೇವಲ 7 ಪಾಯಿಂಟ್ ಮಾತ್ರ. 11-7 ಅಂತರದಿಂದ ಮತ್ತೆ ಶುರುವಾದ ಪಂದ್ಯದಲ್ಲಿ ಲಕ್ಷ್ಯ ಸೇನ್ ಫಾರ್ವಡ್ ಶಾಟ್​ಗಳ ಮೂಲಕ ಗಮನ ಸೆಳೆದರು. ಈ ಮೂಲಕ ಮರು ಆರಂಭದಲ್ಲೇ 6 ಪಾಯಿಂಟ್​ಗಳನ್ನು ಕಲೆಹಾಕಿದರು. ಅಂತಿಮವಾಗಿ ಮೂರನೇ ಸೆಟ್​ ಅನ್ನು 21-16 ಪಾಯಿಂಟ್​ಗಳ ಅಂತರದಿಂದ ಗೆಲ್ಲುವ ಮೂಲಕ ಲಕ್ಷ್ಯ ಸೇನ್ ಭಾರತಕ್ಕೆ ಮತ್ತೊಂದು ಬಂಗಾರದ ತಂದುಕೊಟ್ಟರು.

ಇದನ್ನೂ ಓದಿ
Image
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
Image
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Image
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಇದಕ್ಕೂ ಮುನ್ನ ಸೆಮಿಫೈನಲ್​ನಲ್ಲಿ ಸಿಂಗಾಪುರದ ಜಿಯಾ ಹೆಂಗ್‌ ತೇಹ್‌ ಅವರನ್ನು 21-10, 18-21, 21-16 ವಿರುದ್ದ ಕಠಿಣ ಜಯ ಸಾಧಿಸಿ ಲಕ್ಷ್ಯ ಫೈನಲ್​ಗೆ ಎಂಟ್ರಿ ಕೊಟ್ಟಿದ್ದರು. ಸೆಮಿಫೈನಲ್​ನಲ್ಲಿ 10ನೇ ಶ್ರೇಯಾಂಕಿತ ಲಕ್ಷ್ಯ ಸೇನ್​ಗೆ 87ನೇ ಶ್ರೇಯಾಂಕಿತ ಜಿಯಾ ಹೆಂಗ್ ಪ್ರಬಲ ಪೈಪೋಟಿ ನೀಡಿದ್ದರು. ಹೀಗಾಗಿಯೇ ಫೈನಲ್ ಪಂದ್ಯದ ಫಲಿತಾಂಶದಲ್ಲೂ ರೋಚಕತೆಯನ್ನು ನಿರೀಕ್ಷಿಸಲಾಗಿತ್ತು. ಅದರಂತೆ ಮೂರು ಸುತ್ತಿನ ಹೋರಾಟದಲ್ಲಿ ಗೆಲ್ಲುವ ಮೂಲಕ ಲಕ್ಷ್ಯ ಸೇನ್ ಭಾರತ ಕೀರ್ತಿ ಪಾತಾಕೆಯನ್ನು ಎತ್ತಿ ಹಿಡಿದಿದ್ದಾರೆ,

ಇನ್ನು ಮಹಿಳಾ ಸಿಂಗಲ್ಸ್ ಫೈನಲ್​ನಲ್ಲಿ ಭಾರತೀಯ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು  ಕೆನಡಾದ ಮಿಶೆಲ್ ಲಿ ಅವರನ್ನು 21-15, 21-13 ನೇರ ಸೆಟ್​ಗಳಿಂದ ಸೋಲಿಸುವ ಮೂಲಕ ಸ್ವರ್ಣ ಪದಕಕ್ಕೆ ಕೊರೊಳೊಡ್ಡಿದ್ದರು. ಇದೀಗ ಲಕ್ಷ್ಯ ಸೇನ್ ಕೂಡ ಚಿನ್ನದ ಪದಕ ಗೆಲ್ಲುವ ಮೂಲಕ ಪುರುಷರ ಮತ್ತು ಮಹಿಳಾ ಬ್ಯಾಡ್ಮಿಂಟನ್​ ಸಿಂಗಲ್ಸ್​ನಲ್ಲಿ ಭಾರತೀಯ ಕ್ರೀಡಾಪಟುಗಳು ಪಾರುಪತ್ಯ ಮೆರೆದಿದ್ದಾರೆ.

ಕಾಮನ್​ವೆಲ್ತ್​ ಗೇಮ್ಸ್​ 2022 ಬ್ಯಾಡ್ಮಿಂಟನ್​ ಫೈನಲ್‌ವರೆಗಿನ ಲಕ್ಷ್ಯ ಸೇನ್ ಅವರ ಪ್ರಯಾಣದ ಸಂಕ್ಷಿಪ್ತ ನೋಟ:

  • 32 ರ ಸುತ್ತು: ಸೇಂಟ್ ಹೆಲೆನಾದ ಟ್ರಿಸ್ಟಾನ್ ಡ ಕುನ್ಹಾ ಅವರನ್ನು 21-4, 21-5 ಸೆಟ್​ಗಳಿಂದ ಸೋಲಿಸಿ ಅಭಿಯಾನ ಆರಂಭಿಸಿದ ಲಕ್ಷ್ಯ ಸೇನ್
  • 16 ರ ಸುತ್ತು: ಆಸ್ಟ್ರೇಲಿಯಾದ ಲಿನ್ ಯಿಂಗ್ ಕ್ಸಿಯಾಂಗ್ ವಿರುದ್ಧ 21-9, 16-21 ಭರ್ಜರಿ ಜಯ.
  • ಕ್ವಾರ್ಟರ್ ಫೈನಲ್: ಮಾರಿಷಸ್‌ನ ಪೌಲ್ ಜೂಲಿಯನ್ ಜಾರ್ಜಸ್ ವಿರುದ್ಧ 21-12, 21-11 ವಿರುದ್ದ ಭರ್ಜರಿ ಜಯ.
  • ಸೆಮಿಫೈನಲ್: ತೆಹ್ ಜಿಯಾ ಹೆಂಗ್ ವಿರುದ್ಧ 21-10, 18-21, 21-16 ಸೆಟ್​ಗಳ ರೋಚಕ ಹೋರಾಟದ ಜಯದೊಂದಿಗೆ ಫೈನಲ್​ಗೆ​ ಎಂಟ್ರಿ.

Published On - 4:38 pm, Mon, 8 August 22

Follow Us
Web contact
Web contact

TV9 Kannada

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?