CWG 2022: ಕುಸ್ತಿಯಲ್ಲಿ ಭಾರತಕ್ಕೆ ಮತ್ತೊಂದು ಪದಕ; 50 ಕೆಜಿ ವಿಭಾಗದಲ್ಲಿ ಕಂಚು ಗೆದ್ದ ಪೂಜಾ ಗೆಹ್ಲೋಟ್

CWG 2022: ಭಾರತದ ಮಹಿಳಾ ಕುಸ್ತಿಪಟು ಪೂಜಾ ಗೆಹ್ಲೋಟ್ ಶನಿವಾರ ಮತ್ತೊಂದು ಪದಕವನ್ನು ದೇಶದ ಚೀಲದಲ್ಲಿ ಹಾಕಿದ್ದಾರೆ. 50 ಕೆಜಿ ತೂಕ ವಿಭಾಗದಲ್ಲಿ ಸ್ಕಾಟಿಷ್ ಕುಸ್ತಿಪಟುವನ್ನು 12-2 ರಿಂದ ತಾಂತ್ರಿಕ ದಕ್ಷತೆಯಲ್ಲಿ ಸೋಲಿಸುವ ಮೂಲಕ ಕಂಚಿನ ಪದಕವನ್ನು ಗೆದ್ದರು.

CWG 2022: ಕುಸ್ತಿಯಲ್ಲಿ ಭಾರತಕ್ಕೆ ಮತ್ತೊಂದು ಪದಕ; 50 ಕೆಜಿ ವಿಭಾಗದಲ್ಲಿ ಕಂಚು ಗೆದ್ದ ಪೂಜಾ ಗೆಹ್ಲೋಟ್
Follow us
| Updated By: ಪೃಥ್ವಿಶಂಕರ

Updated on:Aug 06, 2022 | 10:26 PM

ಭಾರತದ ಮಹಿಳಾ ಕುಸ್ತಿಪಟು ಪೂಜಾ ಗೆಹ್ಲೋಟ್ (Pooja Gehlot) ಶನಿವಾರ ಮತ್ತೊಂದು ಪದಕವನ್ನು ದೇಶದ ಚೀಲದಲ್ಲಿ ಹಾಕಿದ್ದಾರೆ. 50 ಕೆಜಿ ತೂಕ ವಿಭಾಗದಲ್ಲಿ ಸ್ಕಾಟಿಷ್ ಕುಸ್ತಿಪಟುವನ್ನು 12-2 ರಿಂದ ತಾಂತ್ರಿಕ ದಕ್ಷತೆಯಲ್ಲಿ ಸೋಲಿಸುವ ಮೂಲಕ ಕಂಚಿನ ಪದಕವನ್ನು ಗೆದ್ದರು. ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ (Commonwealth Games) ಭಾರತಕ್ಕೆ ಕುಸ್ತಿಯಲ್ಲಿ ಇದು ಏಳನೇ ಪದಕವಾಗಿದೆ. ಇದಕ್ಕೂ ಮುನ್ನ ಶುಕ್ರವಾರ ಆರು ಭಾರತೀಯ ಕುಸ್ತಿ ಆಟಗಾರರು ಮ್ಯಾಟ್‌ಗೆ ಇಳಿದ್ದಿದ್ದು ಎಲ್ಲರೂ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಕಾಟ್ಲೆಂಡ್‌ನ ಕ್ರಿಸ್ಟೆಲ್ಲೆ ಲೆಮೊಫೆಕ್ ಅವರು ಪೂಜಾಗೆ ಆರಂಭದಲ್ಲಿ ಉತ್ತಮ ಹೋರಾಟ ನೀಡಿದರು. ಕೆಳಗೆ ಹಾಕುವ ಮೂಲಕ ಎರಡು ಅಂಕಗಳನ್ನು ಪಡೆದು ಪೂಜಾ ಮೇಲೆ ಒತ್ತಡ ಹೇರಲು ಬಯಸಿದ್ದರು. ಇದರ ನಂತರ, ಪೂಜಾ ಅದ್ಭುತ ಪುನರಾಗಮನವನ್ನು ಮಾಡಿದರು ಮತ್ತು ಎದುರಾಳಿಗೆ ಯಾವುದೇ ಅವಕಾಶವನ್ನು ನೀಡದೆ 10-2 ರಿಂದ ಮುನ್ನಡೆ ಸಾಧಿಸಿದರು. ಇದಾದ ಬಳಿಕ ಇನ್ನೆರಡು ಅಂಕಗಳನ್ನು ಪಡೆದು 10 ಅಂಕಗಳ ವ್ಯತ್ಯಾಸ ಮಾಡಿ ತಾಂತ್ರಿಕ ದಕ್ಷತೆಯ ಆಧಾರದ ಮೇಲೆ ಜಯ ಸಾಧಿಸಿದರು.

ಇದನ್ನೂ ಓದಿ
Image
CWG 2022 Day 9 Schedule: ರಿಲೇ, ಕುಸ್ತಿ, ಬಾಕ್ಸಿಂಗ್‌, ಅಥ್ಲೆಟಿಕ್ಸ್‌; 9ನೇ ದಿನ ಹೀಗಿದೆ ಭಾರತದ ವೇಳಾಪಟ್ಟಿ
Image
CWG 2022 Results: ಕುಸ್ತಿಯಲ್ಲಿ ಸುಲಭವಾಗಿ ಗೆದ್ದ ಬಜರಂಗ್- ದೀಪಕ್; ಇತರೆ ಕ್ರೀಡೆಗಳ ವಿವರ ಹೀಗಿದೆ
Image
CWG 2022: ಮೈದಾನದಲ್ಲೇ ಪರಸ್ಪರ ಕುತ್ತಿಗೆ ಪಟ್ಟಿ ಹಿಡಿದು ಜಗಳಕ್ಕಿಳಿದ ಹಾಕಿ ಆಟಗಾರರು! ವಿಡಿಯೋ ನೋಡಿ

ಸೆಮಿಫೈನಲ್‌ನಲ್ಲಿ ಸೋಲು

ಮಹಿಳೆಯರ 50ಕೆಜಿ ವಿಭಾಗದಲ್ಲಿ ಪೂಜಾ ತಾಂತ್ರಿಕ ಶ್ರೇಷ್ಠತೆಯಿಂದ ಸ್ಕಾಟ್ಲೆಂಡ್‌ನ ಕ್ರಿಸ್ಟೆಲ್ಲೆ ಎಲ್ ಅವರನ್ನು ಸೋಲಿಸಿದರು. ಇದರ ನಂತರ ಕ್ಯಾಮರೂನ್‌ನ ರೆಬೆಕಾ ಆಂಡೊಲೊ ಮುವಾಂಬೊ ಮೇಲೆ ವಾಕ್‌ಓವರ್ ನೀಡಲಾಯಿತು. ಆದರೆ ಸೆಮಿ-ಫೈನಲ್‌ನಲ್ಲಿ ಕೆನಡಾದ ಮ್ಯಾಡಿಸನ್ ಬಿಯಾಂಕಾ ಪಾರ್ಕ್ಸ್‌ ಎದುರು ಪೂಜಾ ಸೋಲನುಭವಿಸಿದರು. ಮ್ಯಾಡಿಸನ್ ಫೈನಲ್‌ಗೆ ಪ್ರವೇಶಿಸಿದ್ದರಿಂದ ಪೂಜಾ ಅವರು ಗೆದ್ದ ಕಂಚಿನ ಪದಕದ ಪಂದ್ಯವನ್ನು ಆಡುವ ಅವಕಾಶವನ್ನು ಪಡೆದರು.

Published On - 9:54 pm, Sat, 6 August 22

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ