AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

220 ರ ಸ್ಟ್ರೈಕ್ ರೇಟ್‌ನಲ್ಲಿ 55 ರನ್ ಚಚ್ಚಿದ ಅಭಿನವ್; ಮನೀಶ್ ಅಬ್ಬರದ ನಡುವೆಯೂ ಸೋತ ಗುಲ್ಬರ್ಗಾ

Maharaja Trophy: ಅಭಿನವ್ ಮನೋಹರ್ ಕೇವಲ 25 ಎಸೆತಗಳಲ್ಲಿ 220 ಸ್ಟ್ರೈಕ್ ರೇಟ್‌ನಲ್ಲಿ 55 ರನ್ ಗಳಿಸಿದರು. ಈ ಅಜೇಯ ಮತ್ತು ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಅವರು 5 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದರು.

220 ರ ಸ್ಟ್ರೈಕ್ ರೇಟ್‌ನಲ್ಲಿ 55 ರನ್ ಚಚ್ಚಿದ ಅಭಿನವ್; ಮನೀಶ್ ಅಬ್ಬರದ ನಡುವೆಯೂ ಸೋತ ಗುಲ್ಬರ್ಗಾ
TV9 Web
| Edited By: |

Updated on: Aug 15, 2022 | 3:19 PM

Share

ಮೈಸೂರಿನಲ್ಲಿ ನಡೆಯುತ್ತಿರುವ ಮಹಾರಾಜ ಟಿ20 ಲೀಗ್‌ (Maharaja Trophy) ದಿನ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಆಗಸ್ಟ್ 14 ರಂದು ನಡೆದ ಗುಲ್ಬರ್ಗಾ ಮಿಸ್ಟಿಕ್ಸ್ ಮತ್ತು ಮಂಗಳೂರು ಯುನೈಟೆಡ್ ನಡುವಿನ ಈ ಪಂದ್ಯದಲ್ಲಿ ಮಂಗಳೂರು ಯುನೈಟೆಡ್ 3 ವಿಕೆಟ್‌ಗಳ ಜಯ ಸಾಧಿಸಿತು. ಗುಲ್ಬರ್ಗ್ ಮಿಸ್ಟಿಕ್ಸ್ ತಂಡದ ನಾಯಕ ಮನೀಶ್ ಪಾಂಡೆ (Manish Pandey) ತಮ್ಮ ತಂಡದ ಪರವಾಗಿ ನಾಯಕತ್ವದ ಇನ್ನಿಂಗ್ಸ್‌ ಆಡಿದರು. ಆದರೆ ಮನಿಶ್ ತ್ವರಿತವಾಗಿ ರನ್ ಗಳಿಸಿದರಾದರೂ ಮಂಗಳೂರು ಯುನೈಟೆಡ್‌ ತಂಡದ 27 ವರ್ಷದ ಬ್ಯಾಟ್ಸ್‌ಮನ್ ಅಭಿನವ್ ಮನೋಹರ್ (Abhinav Manohar) ಅವರ ಮುಂದೆ ಮಂಡಿಯೂರಬೇಕಾಯಿತು.

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಲ್ಬರ್ಗ ಮಿಸ್ಟಿಕ್ಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 192 ರನ್ ಗಳಿಸಿತು. ಉತ್ತರವಾಗಿ ಮಂಗಳೂರು ಯುನೈಟೆಡ್ 2 ಎಸೆತಗಳು ಉಳಿದಿರುವಂತೆಯೇ 7 ವಿಕೆಟ್ ಕಳೆದುಕೊಂಡು ಗುರಿ ಬೆನ್ನಟ್ಟಿತು. ಮಂಗಳೂರು ಯುನೈಟೆಡ್ ತಂಡವನ್ನು ಗೆಲ್ಲುವಲ್ಲಿ 27 ವರ್ಷದ ಅಭಿನವ್ ಮನೋಹರ್ ಪಾತ್ರ ಪ್ರಮುಖವಾಗಿತ್ತು.

ಮನೀಶ್ ಪಾಂಡೆ ಸ್ಫೋಟಕ ಇನ್ನಿಂಗ್ಸ್ ವ್ಯರ್ಥ

ಗುಲ್ಬರ್ಗ್ ಮಿಸ್ಟಿಕ್ಸ್ ಪರ ಮನೀಶ್ ಪಾಂಡೆ ಅತ್ಯಧಿಕ ರನ್ ಗಳಿಸಿದರು. ಅವರು 45 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 192 ಸ್ಟ್ರೈಕ್ ರೇಟ್‌ನಲ್ಲಿ 86 ರನ್ ಗಳಿಸಿದರು. ನಾಯಕ ಮನೀಶ್ ಪಾಂಡೆ ಅವರ ಈ ಅಜೇಯ ಇನ್ನಿಂಗ್ಸ್‌ನಿಂದಾಗಿ ಗುಲ್ಬರ್ಗ್ ಮಿಸ್ಟಿಕ್ಸ್ ಮಂಗಳೂರು ಯುನೈಟೆಡ್ ಎದುರು 193 ರನ್‌ಗಳ ಗುರಿಯನ್ನು ನೀಡಿತು.

220 ಸ್ಟ್ರೈಕ್ ರೇಟ್‌ನಲ್ಲಿ ಅರ್ಧಶತಕ ಗಳಿಸಿದ ಅಭಿನವ್ ಮನೋಹರ್

ಮಂಗಳೂರು ಯುನೈಟೆಡ್ ಗುರಿ ಬೆನ್ನತ್ತಲು ಆರಂಭಿಸಿದಾಗ ಅದರ ಮೊದಲ ವಿಕೆಟ್ ಶೂನ್ಯಕ್ಕೆ ಪತನವಾಯಿತು. 50 ರನ್‌ಗಳ ಅಂತರದಲ್ಲಿ ತಂಡದ 3 ವಿಕೆಟ್‌ಗಳು ಪತನಗೊಂಡವು. ಆದರೆ ಇದರ ನಂತರ ಅಭಿನವ್ ಮನೋಹರ್ ಅವರ ಆಕ್ರಮಣಕಾರಿ ಶೈಲಿಯು ಮನೀಷ್ ಪಾಂಡೆ ಅವರ ತಂಡ ಗುಲ್ಮಾರ್ಗ್ ಮಿಸ್ಟಿಕ್ಸ್ ತಂಡದ ಗೆಲುವಿಗೆ ಕೊಡಲಿ ಹಾಕಿತು.

ಅಭಿನವ್ ಮನೋಹರ್ ಕೇವಲ 25 ಎಸೆತಗಳಲ್ಲಿ 220 ಸ್ಟ್ರೈಕ್ ರೇಟ್‌ನಲ್ಲಿ 55 ರನ್ ಗಳಿಸಿದರು. ಈ ಅಜೇಯ ಮತ್ತು ಸ್ಫೋಟಕ ಇನ್ನಿಂಗ್ಸ್‌ನಲ್ಲಿ ಅವರು 5 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದರು. ಈ ಮೂಲಕ ಮನಿಶ್ ಪಾಂಡೆ ಅಬ್ಬರದ ನಡುವೆಯೂ ತಂಡಕ್ಕೆ ಗೆಲುವು ದಕ್ಕಲಿಲ್ಲ

Follow Us
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್
‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ
‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ
ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರಾ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ
ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರಾ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ
3 ವರ್ಷಗಳಲ್ಲಿ 1,000 ರೋಬೋಟಿಕ್ ಸರ್ಜರಿ ಯಶಸ್ವಿ
3 ವರ್ಷಗಳಲ್ಲಿ 1,000 ರೋಬೋಟಿಕ್ ಸರ್ಜರಿ ಯಶಸ್ವಿ
ದಿನೇಶ್ ಗುಂಡೂರಾವ್​​ಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ
ದಿನೇಶ್ ಗುಂಡೂರಾವ್​​ಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ
ಎಒ, ಎಎಒ ನೇಮಕಾತಿ ಸಮಸ್ಯೆ: ವಿದ್ಯಾರ್ಥಿಗಳ ಜೊತೆ ಡಿಕೆಶಿ ಚರ್ಚೆ
ಎಒ, ಎಎಒ ನೇಮಕಾತಿ ಸಮಸ್ಯೆ: ವಿದ್ಯಾರ್ಥಿಗಳ ಜೊತೆ ಡಿಕೆಶಿ ಚರ್ಚೆ
ರಾಜೀನಾಮೆ ಬೆದರಿಕೆ ಹಾಕಿದವರ ಮಾಹಿತಿ ಕೋರಿದ ಕಾಂಗ್ರೆಸ್ ಹೈಕಮಾಂಡ್
ರಾಜೀನಾಮೆ ಬೆದರಿಕೆ ಹಾಕಿದವರ ಮಾಹಿತಿ ಕೋರಿದ ಕಾಂಗ್ರೆಸ್ ಹೈಕಮಾಂಡ್