AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಇತಿಹಾಸ… ಒಂದೇ ಒಂದು ರನ್ ನೀಡದೇ 5 ವಿಕೆಟ್ ಕಬಳಿಸಿದ ಅಮಿತ್..!

Amit Shukla: ರಣಜಿ ಟೂರ್ನಿಯಲ್ಲಿ 22 ವರ್ಷದ ಯುವ ಸ್ಪಿನ್ನರ್ ಅಮಿತ್ ಶುಕ್ಲಾ ಹೊಸ ಇತಿಹಾಸವನ್ನು ರಚಿಸಿದ್ದಾರೆ. ಅದು ಸಹ 4 ಓವರ್​ಗಳಲ್ಲೇ 5 ವಿಕೆಟ್ ಕಬಳಿಸುವ ಮೂಲಕ. ಆದರೆ ಈ ನಾಲ್ಕು ಓವರ್​ಗಳು ಕೂಡ ಮೇಡನ್ ಆಗಿತ್ತು ಎಂಬುದು ವಿಶೇಷ. ಅಂದರೆ ಯಾವುದೇ ರನ್ ನೀಡದೇ ಅಮಿತ್ ಶುಕ್ಲಾ 5 ವಿಕೆಟ್​ಗಳನ್ನು ಕಬಳಿಸಿದ್ದಾರೆ.

ಹೊಸ ಇತಿಹಾಸ... ಒಂದೇ ಒಂದು ರನ್ ನೀಡದೇ 5 ವಿಕೆಟ್ ಕಬಳಿಸಿದ ಅಮಿತ್..!
Amit Shukla
ಝಾಹಿರ್ ಯೂಸುಫ್
|

Updated on: Nov 18, 2025 | 11:53 AM

Share

ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯಲ್ಲಿ ಅಮಿತ್ ಶುಕ್ಲಾ ಹೊಸ ಇತಿಹಾಸ ರಚಿಸಿದ್ದಾರೆ. ಅದು ಸಹ ಒಂದೇ ಒಂದು ರನ್ ನೀಡದೇ 5 ವಿಕೆಟ್ ಕಬಳಿಸುವ ಮೂಲಕ. ರೋಹ್ಟಕ್​ನಲ್ಲಿ ನಡೆಯುತ್ತಿರುವ ಎಲೈಟ್ ಗ್ರೂಪ್-ಸಿ ಪಂದ್ಯದಲ್ಲಿ ಸರ್ವೀಸಸ್ ಮತ್ತು ಹರ್ಯಾಣ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸರ್ವೀಸಸ್ ತಂಡವು ಕೇವಲ 211 ರನ್​​ಗಳಿಸಿ ಆಲೌಟ್ ಆಗಿತ್ತು.

ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಶುರು ಮಾಡಿದ ಹರ್ಯಾಣ ತಂಡಕ್ಕೆ ಯುವ ಸ್ಪಿನ್ನರ್ ಅಮಿತ್ ಶುಕ್ಲಾ ಆಘಾತದ ಮೇಲೆ ಆಘಾತ ನೀಡಿದರು. 2ನೇ ಓವರ್​ನಲ್ಲಿ ದಾಳಿಗಿಳಿದ ಅಮಿತ್ ತನ್ನ ದ್ವಿತೀಯ ಎಸೆತದಲ್ಲೇ ಮೊದಲ ವಿಕೆಟ್ ಪಡೆದರು. ಈ ಓವರ್​ನಲ್ಲಿ ಅವರು ಯಾವುದೇ ರನ್ ನೀಡಿರಲಿಲ್ಲ.

ಇದಾದ ಬಳಿಕ ನಾಲ್ಕನೇ ಓವರ್​ನ ಮೊದಲ ಎಸೆತದಲ್ಲೇ 2ನೇ ವಿಕೆಟ್ ಕಬಳಿಸಿದರು. ಈ ಓವರ್​ನಲ್ಲೂ ಯಾವುದೇ ರನ್ ಬಿಟ್ಟು ಕೊಟ್ಟಿರಲಿಲ್ಲ. ಆನಂತರ 6ನೇ ಓವರ್​ನ 5ನೇ ಎಸೆತದಲ್ಲಿ ಮತ್ತೊಂದು ವಿಕೆಟ್ ಪಡೆದರು. ಈ ಓವರ್​ ಕೂಡ ಮೇಡನ್ ಆಗಿತ್ತು,

ಇನ್ನು 8ನೇ ಓವರ್​ನ ಮೊದಲ ಎಸೆತದಲ್ಲಿ ಧೀರು ಸಿಂಗ್ ವಿಕೆಟ್ ಪಡೆದ ಅಮಿತ್ ಶುಕ್ಲಾ, ಮೂರನೇ ಎಸೆತದಲ್ಲಿ ನಿಖಿಲ್ ಕಶ್ಯಪ್ ವಿಕೆಟ್ ಕಬಳಿಸಿದರು. ಈ ಮೂಲಕ ಒಂದೇ ಒಂದು ರನ್ ನೀಡದೇ ಐದು ವಿಕೆಟ್​ಗಳ ಸಾಧನೆ ಮಾಡಿದರು.

8 ವಿಕೆಟ್​​ ಕಬಳಿಸಿದ ಅಮಿತ್ ಶುಕ್ಲಾ:

ಯಾವುದೇ ರನ್ ನೀಡದೇ ಮೊದಲ 5 ವಿಕೆಟ್ ಕಬಳಿಸಿದ ಅಮಿತ್ ಶುಕ್ಲಾ ಆ ಬಳಿಕ ಕೂಡ ತನ್ನ ಸ್ಪಿನ್ ಮೋಡಿ ತೋರಿಸಿದರು. ಈ ಮೂಲಕ 20 ಓವರ್​ಗಳನ್ನು ಎಸೆದ ಅವರು 8 ಮೇಡನ್​ ಜೊತೆ ಕೇವಲ 27 ರನ್ ನೀಡಿ 8 ವಿಕೆಟ್ ಕಬಳಿಸಿದರು.

ಅಮಿತ್ ಶುಕ್ಲಾ ಅವರ ಈ ಭರ್ಜರಿ ಬೌಲಿಂಗ್​ನಿಂದಾಗಿ ಹರ್ಯಾಣ ತಂಡವು ಮೊದಲ ಇನಿಂಗ್ಸ್​ನಲ್ಲಿ ಕೇವಲ 111 ರನ್​ಗಳಿಸಿ ಆಲೌಟ್ ಆಗಿದೆ.

ಇದೀಗ ಸರ್ವೀಸಸ್ ತಂಡವು ದ್ವಿತೀಯ ಇನಿಂಗ್ಸ್ ಆಡುತ್ತಿದ್ದು, 67 ಓವರ್​ಗಳ ಮುಕ್ತಾಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 157 ರನ್ ಕಲೆಹಾಕಿದೆ.

ಹರ್ಯಾಣ ಪ್ಲೇಯಿಂಗ್ 11: ಅಂಕಿತ್ ಕುಮಾರ್ (ನಾಯಕ) , ಯುವರಾಜ್ ಯೋಗೇಂದರ್ ಸಿಂಗ್ , ಮಾಯಾಂಕ್ ಶಾಂಡಿಲ್ಯ , ಯಶವರ್ಧನ್ ದಲಾಲ್ (ವಿಕೆಟ್ ಕೀಪರ್ ) ಧೀರು ಸಿಂಗ್ , ಪಾರ್ಥ್ ವ್ಯಾಟ್ಸ್ , ಕಪಿಲ್ ಹೂಡಾ , ಅನುಜ್ ಥಕ್ರಾಲ್ , ರಾಹುಲ್ ರಾಥೀ , ಅನ್ಶುಲ್ ಕಂಬೋಜ್ , ನಿಖಿಲ್ ಕಶ್ಯಪ್.

ಇದನ್ನೂ ಓದಿ: ಟೆಸ್ಟ್​ ಇತಿಹಾಸದಲ್ಲೇ ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ಬರೆದ ಟೆಂಬಾ ಬವುಮಾ

ಸರ್ವೀಸಸ್ ಪ್ಲೇಯಿಂಗ್ 11: ರಜತ್ ಪಲಿವಾಲ್ (ನಾಯಕ) , ಶಿವಂ ಕುಮಾರ್ ,ಶುಭಂ ರೋಹಿಲ್ಲಾ , ಮೋಹಿತ್ ಅಹ್ಲಾವತ್ (ವಿಕೆಟ್ ಕೀಪರ್ ), ರವಿ ಚೌಹಾಣ್ , ನಕುಲ್ ಶರ್ಮಾ , ಮೋಹಿತ್ ಜಾಂಗ್ರಾ , ಪುಲ್ಕಿತ್ ನಾರಂಗ್ , ಅಮಿತ್ ಶುಕ್ಲಾ , ಜಯಂತ್ ಗೋಯತ್ , ವಿನೀತ್ ಧಂಖರ್.

ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!