AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಇತಿಹಾಸ… ಒಂದೇ ಒಂದು ರನ್ ನೀಡದೇ 5 ವಿಕೆಟ್ ಕಬಳಿಸಿದ ಅಮಿತ್..!

Amit Shukla: ರಣಜಿ ಟೂರ್ನಿಯಲ್ಲಿ 22 ವರ್ಷದ ಯುವ ಸ್ಪಿನ್ನರ್ ಅಮಿತ್ ಶುಕ್ಲಾ ಹೊಸ ಇತಿಹಾಸವನ್ನು ರಚಿಸಿದ್ದಾರೆ. ಅದು ಸಹ 4 ಓವರ್​ಗಳಲ್ಲೇ 5 ವಿಕೆಟ್ ಕಬಳಿಸುವ ಮೂಲಕ. ಆದರೆ ಈ ನಾಲ್ಕು ಓವರ್​ಗಳು ಕೂಡ ಮೇಡನ್ ಆಗಿತ್ತು ಎಂಬುದು ವಿಶೇಷ. ಅಂದರೆ ಯಾವುದೇ ರನ್ ನೀಡದೇ ಅಮಿತ್ ಶುಕ್ಲಾ 5 ವಿಕೆಟ್​ಗಳನ್ನು ಕಬಳಿಸಿದ್ದಾರೆ.

ಹೊಸ ಇತಿಹಾಸ... ಒಂದೇ ಒಂದು ರನ್ ನೀಡದೇ 5 ವಿಕೆಟ್ ಕಬಳಿಸಿದ ಅಮಿತ್..!
Amit Shukla
ಝಾಹಿರ್ ಯೂಸುಫ್
|

Updated on: Nov 18, 2025 | 11:53 AM

Share

ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯಲ್ಲಿ ಅಮಿತ್ ಶುಕ್ಲಾ ಹೊಸ ಇತಿಹಾಸ ರಚಿಸಿದ್ದಾರೆ. ಅದು ಸಹ ಒಂದೇ ಒಂದು ರನ್ ನೀಡದೇ 5 ವಿಕೆಟ್ ಕಬಳಿಸುವ ಮೂಲಕ. ರೋಹ್ಟಕ್​ನಲ್ಲಿ ನಡೆಯುತ್ತಿರುವ ಎಲೈಟ್ ಗ್ರೂಪ್-ಸಿ ಪಂದ್ಯದಲ್ಲಿ ಸರ್ವೀಸಸ್ ಮತ್ತು ಹರ್ಯಾಣ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸರ್ವೀಸಸ್ ತಂಡವು ಕೇವಲ 211 ರನ್​​ಗಳಿಸಿ ಆಲೌಟ್ ಆಗಿತ್ತು.

ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಶುರು ಮಾಡಿದ ಹರ್ಯಾಣ ತಂಡಕ್ಕೆ ಯುವ ಸ್ಪಿನ್ನರ್ ಅಮಿತ್ ಶುಕ್ಲಾ ಆಘಾತದ ಮೇಲೆ ಆಘಾತ ನೀಡಿದರು. 2ನೇ ಓವರ್​ನಲ್ಲಿ ದಾಳಿಗಿಳಿದ ಅಮಿತ್ ತನ್ನ ದ್ವಿತೀಯ ಎಸೆತದಲ್ಲೇ ಮೊದಲ ವಿಕೆಟ್ ಪಡೆದರು. ಈ ಓವರ್​ನಲ್ಲಿ ಅವರು ಯಾವುದೇ ರನ್ ನೀಡಿರಲಿಲ್ಲ.

ಇದಾದ ಬಳಿಕ ನಾಲ್ಕನೇ ಓವರ್​ನ ಮೊದಲ ಎಸೆತದಲ್ಲೇ 2ನೇ ವಿಕೆಟ್ ಕಬಳಿಸಿದರು. ಈ ಓವರ್​ನಲ್ಲೂ ಯಾವುದೇ ರನ್ ಬಿಟ್ಟು ಕೊಟ್ಟಿರಲಿಲ್ಲ. ಆನಂತರ 6ನೇ ಓವರ್​ನ 5ನೇ ಎಸೆತದಲ್ಲಿ ಮತ್ತೊಂದು ವಿಕೆಟ್ ಪಡೆದರು. ಈ ಓವರ್​ ಕೂಡ ಮೇಡನ್ ಆಗಿತ್ತು,

ಇನ್ನು 8ನೇ ಓವರ್​ನ ಮೊದಲ ಎಸೆತದಲ್ಲಿ ಧೀರು ಸಿಂಗ್ ವಿಕೆಟ್ ಪಡೆದ ಅಮಿತ್ ಶುಕ್ಲಾ, ಮೂರನೇ ಎಸೆತದಲ್ಲಿ ನಿಖಿಲ್ ಕಶ್ಯಪ್ ವಿಕೆಟ್ ಕಬಳಿಸಿದರು. ಈ ಮೂಲಕ ಒಂದೇ ಒಂದು ರನ್ ನೀಡದೇ ಐದು ವಿಕೆಟ್​ಗಳ ಸಾಧನೆ ಮಾಡಿದರು.

8 ವಿಕೆಟ್​​ ಕಬಳಿಸಿದ ಅಮಿತ್ ಶುಕ್ಲಾ:

ಯಾವುದೇ ರನ್ ನೀಡದೇ ಮೊದಲ 5 ವಿಕೆಟ್ ಕಬಳಿಸಿದ ಅಮಿತ್ ಶುಕ್ಲಾ ಆ ಬಳಿಕ ಕೂಡ ತನ್ನ ಸ್ಪಿನ್ ಮೋಡಿ ತೋರಿಸಿದರು. ಈ ಮೂಲಕ 20 ಓವರ್​ಗಳನ್ನು ಎಸೆದ ಅವರು 8 ಮೇಡನ್​ ಜೊತೆ ಕೇವಲ 27 ರನ್ ನೀಡಿ 8 ವಿಕೆಟ್ ಕಬಳಿಸಿದರು.

ಅಮಿತ್ ಶುಕ್ಲಾ ಅವರ ಈ ಭರ್ಜರಿ ಬೌಲಿಂಗ್​ನಿಂದಾಗಿ ಹರ್ಯಾಣ ತಂಡವು ಮೊದಲ ಇನಿಂಗ್ಸ್​ನಲ್ಲಿ ಕೇವಲ 111 ರನ್​ಗಳಿಸಿ ಆಲೌಟ್ ಆಗಿದೆ.

ಇದೀಗ ಸರ್ವೀಸಸ್ ತಂಡವು ದ್ವಿತೀಯ ಇನಿಂಗ್ಸ್ ಆಡುತ್ತಿದ್ದು, 67 ಓವರ್​ಗಳ ಮುಕ್ತಾಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 157 ರನ್ ಕಲೆಹಾಕಿದೆ.

ಹರ್ಯಾಣ ಪ್ಲೇಯಿಂಗ್ 11: ಅಂಕಿತ್ ಕುಮಾರ್ (ನಾಯಕ) , ಯುವರಾಜ್ ಯೋಗೇಂದರ್ ಸಿಂಗ್ , ಮಾಯಾಂಕ್ ಶಾಂಡಿಲ್ಯ , ಯಶವರ್ಧನ್ ದಲಾಲ್ (ವಿಕೆಟ್ ಕೀಪರ್ ) ಧೀರು ಸಿಂಗ್ , ಪಾರ್ಥ್ ವ್ಯಾಟ್ಸ್ , ಕಪಿಲ್ ಹೂಡಾ , ಅನುಜ್ ಥಕ್ರಾಲ್ , ರಾಹುಲ್ ರಾಥೀ , ಅನ್ಶುಲ್ ಕಂಬೋಜ್ , ನಿಖಿಲ್ ಕಶ್ಯಪ್.

ಇದನ್ನೂ ಓದಿ: ಟೆಸ್ಟ್​ ಇತಿಹಾಸದಲ್ಲೇ ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ಬರೆದ ಟೆಂಬಾ ಬವುಮಾ

ಸರ್ವೀಸಸ್ ಪ್ಲೇಯಿಂಗ್ 11: ರಜತ್ ಪಲಿವಾಲ್ (ನಾಯಕ) , ಶಿವಂ ಕುಮಾರ್ ,ಶುಭಂ ರೋಹಿಲ್ಲಾ , ಮೋಹಿತ್ ಅಹ್ಲಾವತ್ (ವಿಕೆಟ್ ಕೀಪರ್ ), ರವಿ ಚೌಹಾಣ್ , ನಕುಲ್ ಶರ್ಮಾ , ಮೋಹಿತ್ ಜಾಂಗ್ರಾ , ಪುಲ್ಕಿತ್ ನಾರಂಗ್ , ಅಮಿತ್ ಶುಕ್ಲಾ , ಜಯಂತ್ ಗೋಯತ್ , ವಿನೀತ್ ಧಂಖರ್.

ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಹೊರಗೆ ಬಂದಮೇಲೆ ಬಿಗ್ ಬಾಸ್ ಬಗ್ಗೆ ವಿಡಿಯೋ ಮಾಡಲು ನಿರ್ಧರಿಸಿದ ರಘು
ಹೊರಗೆ ಬಂದಮೇಲೆ ಬಿಗ್ ಬಾಸ್ ಬಗ್ಗೆ ವಿಡಿಯೋ ಮಾಡಲು ನಿರ್ಧರಿಸಿದ ರಘು
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ