AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia Cup 2022: ಏಷ್ಯಾಕಪ್ ಆರಂಭದಲ್ಲೇ ವಿವಾದ; ಥರ್ಡ್​ ಅಂಪೈರ್ ತೀರ್ಪಿಗೆ ಕಿಡಿಕಾರಿದ ಲಂಕಾ ತಂಡ! ವಿಡಿಯೋ

Asia Cup 2022: ದ್ಯಾವಳಿಯ ಆರಂಭದಲ್ಲಿಯೇ ದೊಡ್ಡ ವಿವಾದ ಹುಟ್ಟಿಕೊಂಡಿದೆ. ದುಬೈನಲ್ಲಿ ನಡೆದ ಈ ಶ್ರೀಲಂಕಾ-ಅಫ್ಘಾನಿಸ್ತಾನ ಪಂದ್ಯದ ಎರಡನೇ ಓವರ್‌ನಲ್ಲಿ ಅಂಪೈರ್ ನಿರ್ಧಾರದ ಬಗ್ಗೆ ಈ ವಿವಾದ ಎದಿದ್ದು, ಇದು ಇಡೀ ಶ್ರೀಲಂಕಾ ತಂಡವನ್ನು ಕೆರಳಿಸಿತು.

Asia Cup 2022: ಏಷ್ಯಾಕಪ್ ಆರಂಭದಲ್ಲೇ ವಿವಾದ; ಥರ್ಡ್​ ಅಂಪೈರ್ ತೀರ್ಪಿಗೆ ಕಿಡಿಕಾರಿದ ಲಂಕಾ ತಂಡ! ವಿಡಿಯೋ
TV9 Web
| Updated By: ಪೃಥ್ವಿಶಂಕರ|

Updated on:Aug 27, 2022 | 8:40 PM

Share

ಹಲವು ವಾರಗಳ ಕಾಯುವಿಕೆಯ ನಂತರ, ಅಂತಿಮವಾಗಿ ಏಷ್ಯಾಕಪ್ 2022 (Asia Cup 2022) ಪ್ರಾರಂಭವಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದೊಂದಿಗೆ ಟಿ20 ವಿಶ್ವಕಪ್ (T20 World Cup) ತಯಾರಿ ಪಂದ್ಯಾವಳಿ ಪ್ರಾರಂಭವಾಯಿತು, ಆದರೆ ಪಂದ್ಯಾವಳಿಯ ಆರಂಭದಲ್ಲಿಯೇ ದೊಡ್ಡ ವಿವಾದ ಹುಟ್ಟಿಕೊಂಡಿದೆ. ದುಬೈನಲ್ಲಿ ನಡೆದ ಈ ಶ್ರೀಲಂಕಾ-ಅಫ್ಘಾನಿಸ್ತಾನ (Sri Lanka-Afghanistan) ಪಂದ್ಯದ ಎರಡನೇ ಓವರ್‌ನಲ್ಲಿ ಅಂಪೈರ್ ನಿರ್ಧಾರದ ಬಗ್ಗೆ ಈ ವಿವಾದ ಎದಿದ್ದು, ಇದು ಇಡೀ ಶ್ರೀಲಂಕಾ ತಂಡವನ್ನು ಕೆರಳಿಸಿತು.

ಶನಿವಾರ ಆಗಸ್ಟ್ 27 ರಂದು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವೆ ಪಂದ್ಯಾವಳಿಯ ಮೊದಲ ಪಂದ್ಯ ಪ್ರಾರಂಭವಾಯಿತು. ಅಫ್ಘಾನಿಸ್ತಾನ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿ ಎಡಗೈ ವೇಗದ ಬೌಲರ್ ಫಜ್ಲ್ಹಾಕ್ ಫಾರೂಕಿ ಐದು ಮತ್ತು ಆರನೇ ಎಸೆತದಲ್ಲಿ ಸತತ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಎಲ್‌ಬಿಡಬ್ಲ್ಯೂ ಮಾಡುವ ಮೂಲಕ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು. ನಂತರ ಬಂದ ಎರಡನೇ ಓವರ್​ನಲ್ಲೇ ಈ ವಿವಾದ ಉಂಟಾಯಿತು.

ವಿವಾದಿತ ತೀರ್ಪು

ಶ್ರೀಲಂಕಾದ ಬ್ಯಾಟ್ಸ್‌ಮನ್ ಪಾಥುಮ್ ನಿಸಂಕಾ ಈ ಓವರ್‌ನ ಕೊನೆಯ ಚೆಂಡನ್ನು ಕವರ್ಸ್​ ಮೇಲೆ ಆಡಲು ಪ್ರಯತ್ನಿಸಿದರು. ಆದರೆ ಆಡುವಲ್ಲಿ ವಿಫಲರಾದರು, ವಿಕೆಟ್ ಕೀಪರ್ ಚೆಂಡನ್ನು ಕ್ಯಾಚ್ ಮಾಡಿದರು. ಅಫ್ಘಾನಿಸ್ತಾನ ತಂಡ ಬಲವಾದ ಮನವಿಯನ್ನು ಮಾಡಿತು, ಆದರೆ ಅಂಪೈರ್ ಅದನ್ನು ಔಟ್ ನೀಡಲಿಲ್ಲ. ಬಳಿಕ ಅಫ್ಘಾನಿಸ್ತಾನ ಡಿಆರ್‌ಎಸ್‌ ತೆಗೆದುಕೊಂಡಿತು. ಆದರೆ ಥರ್ಡ್​ ಅಂಪೈರ್ ನೀಡಿದ ತೀರ್ಪು ಎಲ್ಲರಲ್ಲೂ ಅಚ್ಚರಿ ಮೂಡಿಸಿತು. ಮೂರನೇ ಅಂಪೈರ್ ಹಲವಾರು ಬಾರಿ ರಿವ್ಯೂ ವೀಕ್ಷಿಸಿದರು, ಬಳಿಕ ಸ್ನಿಕೋಮೀಟರ್‌ನ ಸಹಾಯವನ್ನು ತೆಗೆದುಕೊಂಡರು. ಆದರೆ ಸ್ನಿಕೋಮೀಟರ್‌ನಲ್ಲಿ ಬಾಲ್, ಬ್ಯಾಟಿಗೆ ತಾಗಿರುವ ಬಗ್ಗೆ ಯಾವುದೇ ಸುಳಿವು ಇರಲಿಲ್ಲ.

ಆದರೆ ಚೆಂಡು ಬ್ಯಾಟ್‌ನ ಮೂಲಕ ಹಾದುಹೋಗುವಾಗ ಸ್ನಿಕೋಮೀಟರ್‌ನಲ್ಲಿ ಸ್ವಲ್ಪವೇ ಸ್ವಲ್ಪ ಚಲನೆ ಇತ್ತು. ಇದನ್ನು ನೋಡಿದವರೆಲ್ಲ ಇದು ನಾಟೌಟ್ ಅಂತಲೇ ಅಂದುಕೊಂಡಿದ್ದರು. ಆದರೆ ಮೂರನೇ ಅಂಪೈರ್ ಜಯರಾಮನ್ ಮದನಗೋಪಾಲ್ ಅದನ್ನು ಔಟ್ ಎಂದು ತೀರ್ಪು ನೀಡಿದರು.

ಮೈದಾನದಲ್ಲಿ ಇದನ್ನು ನೋಡಿದವರೆಲ್ಲ ಬೆಚ್ಚಿಬಿದ್ದರು. ಅಫ್ಘಾನಿಸ್ತಾನದ ಆಟಗಾರರು ಮತ್ತು ಅವರ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಮಗ್ನರಾಗಿದ್ದರು. ಆದರೆ ಶ್ರೀಲಂಕಾದ ಕೋಚ್ ಕ್ರಿಸ್ ಸಿಲ್ವರ್‌ವುಡ್, ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತು ಕೋಪದಿಂದ ತನ್ನ ಎರಡೂ ಕೈಗಳನ್ನು ಮೇಲಕ್ಕೆತ್ತಿದರು. ಡಗೌಟ್‌ನಲ್ಲಿ ಕುಳಿತಿದ್ದ ಶ್ರೀಲಂಕಾ ನಾಯಕ ದಸುನ್ ಶನಕಾ ಅವರ ಪ್ರತಿಕ್ರಿಯೆಯೂ ಭಿನ್ನವಾಗಿರಲಿಲ್ಲ, ಅವರೂ ಸಹ ಕೋಪಗೊಂಡವರಂತೆ ಕಾಣುತ್ತಿದ್ದರು.

Published On - 8:28 pm, Sat, 27 August 22

ಜ 6ರಂದು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್
ಜ 6ರಂದು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್
ಸರಿ ನಿರ್ಧಾರ ಯಾವುದು? ತಪ್ಪು ಯಾವುದು? ಪಂಚಾಯ್ತಿ ವಿಷಯ ಹೇಳಿದ ಸುದೀಪ್
ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್​​ಗೆ ಗುದ್ದಿದ BMTC ಬಸ್
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಆಳಂದ ಮತಗಳ್ಳತನ: ಚಾರ್ಜ್​ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ಆಳಂದ ಮತಗಳ್ಳತನ: ಚಾರ್ಜ್​ಶೀಟ್ ಬಗ್ಗೆ ಸುಭಾಷ್ ಗುತ್ತೇದಾರ್ ಮಗ ಹೇಳಿದ್ದೇನು?
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ
ರಾಶಿಕಾ ಕ್ಯಾಪ್ಟನ್ ಆಗಿದ್ದು ಇಷ್ಟ ಆಗಿಲ್ಲ ಎಂದ ಸೂರಜ್; ಆಪ್ತರಲ್ಲೇ ಕಿತ್ತಾಟ