Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England : ಚೆಂಡಿಗೆ ಎಂಜಲು ಮೆತ್ತಿ ಅಂಪೈರ್​ನಿಂದ ಎಚ್ಚರಿಕೆ ಪಡೆದ ಬೆನ್ ಸ್ಟೋಕ್ಸ್

ಸ್ಟೋಕ್ಸ್ ಆಕಸ್ಮಿಕವಾಗಿ ಎಸೆಗಿದ ಪ್ರಮಾದವನ್ನು ಗಮನಿಸಿದ ಆನ್-ಫಿಲ್ಡ್ ಅಂಪೈರ್ ವಿರೇಂದ್ರ ಶರ್ಮ ಆಂಗ್ಲರ ಆಗ್ರಮಾನ್ಯ ಆಲ್​ರೌಂಡರ್​ಗೆ ಎಚ್ಚರಿಕೆ ನೀಡಿದರು. ನೀತಿಸಂಹಿತೆ ಪ್ರಕಾರ ಆ ಬಾಲನ್ನು ಸ್ಯಾನಿಟೈಸ್ ಮಾಡಿದ ನಂತರವೇ ಪುನಃ ಉಪಯೋಗಿಸಲಾಯಿತು.

India vs England : ಚೆಂಡಿಗೆ ಎಂಜಲು ಮೆತ್ತಿ ಅಂಪೈರ್​ನಿಂದ ಎಚ್ಚರಿಕೆ ಪಡೆದ ಬೆನ್ ಸ್ಟೋಕ್ಸ್
ಚೆಂಡಿಗೆ ಎಂಜಲು ಮೆತ್ತಿ ವಿವಾದಕ್ಕೊಳಗಾದ ಇಂಗ್ಲೆಂಡ್ ಆಲ್​ರೌಂಡರ್ ಬೆನ್ ಸ್ಟೋಕ್ಸ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Mar 26, 2021 | 8:45 PM

ಪುಣೆ: ಕೊವಿಡ್-19 ಪಿಡುಗು ವಿಶ್ವದಾದ್ಯಂತ ಹಬ್ಬಿದ ನಂತರ ಕ್ರಿಕೆಟ್​ ಪಂದ್ಯಗಳಲ್ಲಿ ಚೆಂಡಿಗೆ ಆಟಗಾರರು ತಮ್ಮ ಬಾಯಿ ಎಂಜಲನ್ನು (saliva) ಹಚ್ಚಿ ಹೊಳಪು ತರುವ ಪ್ರಯತ್ನ ಮಾಡಬಾರದೆಂದು ಅಂತರರಾಷ್ಟ್ರಿಯ ಕ್ರಿಕೆಟ್ ಕೌನ್ಸಿಲ್ ಅಂತ ಎಲ್ಲಾ ಸದಸ್ಯರ ರಾಷ್ಟ್ರಗಳಿಗೆ ನಿರ್ದೇಶನ ಜಾರಿ ಮಾಡಿತು. ಆ ನಿಯಮವನ್ನು ಕೇವಲ ಅಂತರರಾಷ್ಟ್ರೀಯ ಪಂದ್ಯಗಳಲ್ಲಷ್ಟೇ ಅಲ್ಲ ಆಯಾ ದೇಶಗಳಲ್ಲಿ ನಡೆಯುವ ಡೊಮೆಸ್ಟಿಕ್ ಕ್ರಿಕೆಟ್​ನಲ್ಲೂ ಆ ನಿಯಮವನ್ನು ಆನೂಚಾನಾಗಿ ಪಾಲಿಸಲಾಗುತ್ತಿದೆ. ಆದರೆ, ಈ ನಿಯಮವನ್ನು ಉಲ್ಲಂಘಿಸುವ ಸಂದರ್ಭಗಳು ಕ್ರಿಕೆಟ್​ ಮೈದಾನಗಳಲ್ಲಿ ಆಗಾಗ ಘಟಿಸುತ್ತಿವೆ. ಇಂದು (ಶುಕ್ರವಾರ) ಭಾರತ ಮತ್ತು ಇಂಗ್ಲೆಂಡ್​ ಮಧ್ಯೆ ಪುಣೆಯಲ್ಲಿ ನಡೆಯುತ್ತಿರುವ ಎರಡನೇ ಒಂದು ದಿನದ ಪಂದ್ಯದ ಆರಂಭಿಕ ಹಂತದಲ್ಲಿ ನಡೆದ ಘಟನೆಯನ್ನೇ ಗಮನಿಸಿ. ಭಾರತದ ಇನ್ನಿಂಗ್ಸ್​ನ 4ನೇ ಓವರ್​ನಲ್ಲಿ ಇಂಗ್ಲೆಂಡ್ ಟೀಮಿನ ಆಲ್​ರೌಂಡರ್ ಬೆನ್ ಸ್ಟೋಕ್ಸ್ ಚೆಂಡಿಗೆ ಎಂಜಲನ್ನು ಹಚ್ಚಿ ಫೀಲ್ಡ್​ ಅಂಪೈರ್​ನಿಂದ ಎಚ್ಚರಿಕೆಗೊಳಗಾದರು.

ಸ್ಟೋಕ್ಸ್ ಆಕಸ್ಮಿಕವಾಗಿ ಎಸೆಗಿದ ಪ್ರಮಾದವನ್ನು ಗಮನಿಸಿದ ಆನ್-ಫಿಲ್ಡ್ ಅಂಪೈರ್ ವಿರೇಂದ್ರ ಶರ್ಮ ಆಂಗ್ಲರ ಆಗ್ರಮಾನ್ಯ ಆಲ್​ರೌಂಡರ್​ಗೆ ಎಚ್ಚರಿಕೆ ನೀಡಿದರು. ನೀತಿಸಂಹಿತೆ ಪ್ರಕಾರ ಆ ಬಾಲನ್ನು ಸ್ಯಾನಿಟೈಸ್ ಮಾಡಿದ ನಂತರವೇ ಪುನಃ ಉಪಯೋಗಿಸಲಾಯಿತು. ಅಂಪೈರ್ ಶರ್ಮ, ಸ್ಟೋಕ್ಸ್​ಗೆ ವಾರ್ನ್​ ಮಾಡಿದ ನಂತರ ಇಂಗ್ಲೆಂಡ್​ನ ಸ್ಟ್ಯಾಂಡ್-ಇನ್ ನಾಯಕ ಜೊಸ್ ಬಟ್ಲರ್ ಅವರೊಂದಿಗೆ ಸಮಾಲೋಚನೆ ನಡೆಸಿ, ಮತ್ತೊಮ್ಮೆ ಅಂಥ ಘಟನೆ ಪುನರಾವರ್ತನೆಗೊಂಡರೆ ಅವರ ತಂಡಕ್ಕೆ 5 ರನ್​ಗಳ ದಂಡ ವಿಧಿಸಲಾಗುವುದೆಂದು ಹೇಳಿದರು.

ಇಂಗ್ಲೆಂಡ್ ಎಡಗೈ ವೇಗದ ಬೌಲರ್​ ರೀಸ್ ಟಾಪ್ಲೀ ಅವರು ಭಾರತದ ಇನ್ನಿಂಗ್ಸ್​ನ 4ನೇ ಓವರ್ ಎಸೆಯುತ್ತಿದ್ದಾಗ ಮತ್ತು ಅತಿಥೇಯರ ಸ್ಕೋರ್ ವಿಕೆಟ್​ ನಷ್ಟವಿಲ್ಲದೆ 8 ಆಗಿದ್ದಾಗ ಎಂಜಲು ಹಚ್ಚುವ ಘಟನೆ ನಡೆಯಿತು. ಆದರೆ, ಸ್ಟೋಕ್ಸ್​ ಚೆಂಡಿಗೆ ಎಂಜಲು ಹಚ್ಚಿ ಸಿಕ್ಕಿ ಬಿದ್ದರೋದು ಇದೇ ಮೊದಲ ಸಲವೇನಲ್ಲ. ಭಾರತ ಮತ್ತು ಇಂಗ್ಲೆಂಡ್​ ನಡುವೆ ಅಹಮದಾಬಾದಿನಲ್ಲಿ ನಡೆದ ಪಿಂಕ್-ಬಾಲ್​ ಟೆಸ್ಟ್​ನಲ್ಲೂ ಅವರು ಹಾಗೆ ಮಾಡಿದ್ದರು.

Eoin Morgan

ಅಂಗೈಗೆ ಗಾಯ ಮಾಡಿಕೊಂಡಯ ಸರಣಯಿಂದ ಹೊರಬಿದ್ದಿರುವ ಇಂಗ್ಲೆಂಡ್​ ನಾಯಕ ಅಯಾನ್ ಮೊರ್ಗನ್

ಪುಣೆಯಲ್ಲಿ ಶುಕ್ರವಾರ ನಡೆಯುತ್ತಿರುವ ಎರಡನೇ ಒಡಿಐ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮತ್ತೊಮ್ಮೆ ಮೊದಲು ಫೀಲ್ಡ್​ ಮಾಡುವ ನಿರ್ಧಾರ ತೆಗೆದುಕೊಂಡಿತು.

ಇದೇ ಮೈದಾನದಲ್ಲಿ ನಡೆದ ಮೊದಲ ಒಡಿಐ ಪಂದ್ಯದಲ್ಲಿ ಫೀಲ್ಡ್​ ಮಾಡುವಾಗ ಹೆಬ್ಬೆರಳು ಮತ್ತು ತೋರು ಬೆರಳಿನ ಮಧ್ಯದ ಭಾಗವನ್ನು ಹರಿದುಕೊಂಡ ಇಂಗ್ಲೆಂಡ್​ ನಾಯಕ ಆಯಾನ್ ಮೊರ್ಗನ್ ಎರಡನೇ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಅವರ ಅಂಗೈಯಲ್ಲಿ ನಾಲ್ಕು ಹೊಲಿಗೆಗಳು ಬಿದ್ದಿವೆ. ಗಮನಾರ್ಹ ಸಂಗತಿಯೆಂದರೆ, ಆ ಪರಿ ಗಾಯಗೊಂಡಿದ್ದರೂ ಅವರು ಬ್ಯಾಟಿಂಗ್ ಮಾಡಲು ಆಗಮಿಸಿದ್ದರು.

ಅದೇ ಪಂದ್ಯದಲ್ಲಿ ಸ್ಯಾಮ್ ಬಿಲ್ಲಿಂಗ್ಸ್ ಸಹ ಭುಜದ ಸಮಸ್ಯೆಗೊಳಗಾಗಿದ್ದಿರಿಂದ ಅವರ ಸ್ಥಾನದಲ್ಲಿ ಲಿಯಾಮ್ ಲಿವಿಂಗ್​ಸ್ಟೋನ್​ಗೆ ಪದಾರ್ಪಣೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ, ವೇಗದ ಬೌಲರ್ ಮಾರ್ಕ್​ ವುಡ್​ ಅವರ ಸ್ಥಾನದಲ್ಲಿ ಟಾಪ್ಲೀ ಆಡುತ್ತಿದ್ದಾರೆ.

ಭಾರತದ ತಂಡದಲ್ಲೂ ಒಂದು ಅನಿವಾರ್ಯತೆಯ ಬದಲಾವಣೆ ಮಾಡಲಾಗಿದೆ. ಫೀಲ್ಡಿಂಗ್ ಮಾಡುವಾಗ ಭುಜದ ಮೂಳೆ ಡಿಸ್​ಪ್ಲೇಸ್ ಮಾಡಿಕೊಂಡ ಶ್ರೇಯಸ್ ಅಯ್ಯರ್ ಚೇತರಿಸಿಕೊಳ್ಳಲು ಕನಿಷ್ಠ 4-5 ವಾರಗಳು ಬೇಕೆಂದು ಹೇಳಲಾಗುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಕೂಡ ಆಗಿರುವ ಅಯ್ಯರ್ ಇಂಡಿಯನ್ ಪ್ರಿಮೀಯರ್ ಲೀಗ್​ನ ಮೊದಲಾರ್ಧವನ್ನು ತಪ್ಪಿಸಿಕೊಳ್ಳಲಿದ್ದಾರೆ. ಅಯ್ಯರ್ ಸ್ಥಾನದಲ್ಲಿ ವಿಕೆಟ್​-ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್ ಅವರಿಗೆ ಆಡುವ ಇಲೆವೆನ್​ನಲ್ಲಿ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: India vs England | ಸ್ಟೋಕ್ಸ್ ಆಡುವ ಉತ್ಸುಕತೆ ತೋರಿದ್ದರಿಂದ ಅವರಿಗೆ ವಿಶ್ರಾಂತಿ ನೀಡಿಲ್ಲ: ಅಯಾನ್ ಮೊರ್ಗನ್

Published On - 5:06 pm, Fri, 26 March 21

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ