Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England | ಸ್ಟೋಕ್ಸ್ ಆಡುವ ಉತ್ಸುಕತೆ ತೋರಿದ್ದರಿಂದ ಅವರಿಗೆ ವಿಶ್ರಾಂತಿ ನೀಡಿಲ್ಲ: ಅಯಾನ್ ಮೊರ್ಗನ್

ಪುಣೆ: ಕ್ರಿಕೆಟ್​ ಸಮುದಾಯದ ಹಲವಾರು ತಜ್ಞರು ಮತ್ತು ಮಾಜಿ ಆಟಗಾರರ ವಿರೋಧ ಮತ್ತು ಟೀಕೆಯ ಹೊರತಾಗಿಯೂ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಈಸಿಬಿ) ಇತ್ತೀಚಿಗೆ ಭಾರತದ ವಿರುದ್ಧ ಕೊನೆಗೊಂಡ ಟೆಸ್ಟ್ ಸರಣಿಯಲ್ಲಿ ರೋಟೇಶನ್ ಪಾಲಿಸಿಯನ್ನು ಅನೂಚಾನಾಗಿ ಪಾಲಿಸಿತು. ಜಾನಿ ಬೇರ್​ಸ್ಟೋ, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್, ಮೊಯೀನ್ ಅಲಿ ಮತ್ತು ಜೊಸ್ ಬಟ್ಲರ್ ಅವರನ್ನು ಟೆಸ್ಟ್​ ಪಂದ್ಯಗಳು ನಡೆಯುವಾಗ ರೆಸ್ಟ್ ನೀಡಲಾಯಿತು. ಆದರೆ, ಇಂಗ್ಲೆಂಡ್​ನ ಅಲ್​ರೌಂಡರ್ ಬೆನ್​ ಸ್ಟೋಕ್ಸ್ ಮಾತ್ರ ಎಲ್ಲ 4 ಟೆಸ್ಟ್ ಮತ್ತು […]

India vs England | ಸ್ಟೋಕ್ಸ್ ಆಡುವ ಉತ್ಸುಕತೆ ತೋರಿದ್ದರಿಂದ ಅವರಿಗೆ ವಿಶ್ರಾಂತಿ ನೀಡಿಲ್ಲ: ಅಯಾನ್ ಮೊರ್ಗನ್
ಅಯಾನ್ ಮೊರ್ಗನ್ ಮತ್ತು ಬೆನ್ ಸ್ಟೋಕ್ಸ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Mar 22, 2021 | 9:59 PM

ಪುಣೆ: ಕ್ರಿಕೆಟ್​ ಸಮುದಾಯದ ಹಲವಾರು ತಜ್ಞರು ಮತ್ತು ಮಾಜಿ ಆಟಗಾರರ ವಿರೋಧ ಮತ್ತು ಟೀಕೆಯ ಹೊರತಾಗಿಯೂ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಈಸಿಬಿ) ಇತ್ತೀಚಿಗೆ ಭಾರತದ ವಿರುದ್ಧ ಕೊನೆಗೊಂಡ ಟೆಸ್ಟ್ ಸರಣಿಯಲ್ಲಿ ರೋಟೇಶನ್ ಪಾಲಿಸಿಯನ್ನು ಅನೂಚಾನಾಗಿ ಪಾಲಿಸಿತು. ಜಾನಿ ಬೇರ್​ಸ್ಟೋ, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್, ಮೊಯೀನ್ ಅಲಿ ಮತ್ತು ಜೊಸ್ ಬಟ್ಲರ್ ಅವರನ್ನು ಟೆಸ್ಟ್​ ಪಂದ್ಯಗಳು ನಡೆಯುವಾಗ ರೆಸ್ಟ್ ನೀಡಲಾಯಿತು.

ಆದರೆ, ಇಂಗ್ಲೆಂಡ್​ನ ಅಲ್​ರೌಂಡರ್ ಬೆನ್​ ಸ್ಟೋಕ್ಸ್ ಮಾತ್ರ ಎಲ್ಲ 4 ಟೆಸ್ಟ್ ಮತ್ತು ಟಿ20ಐ ಸರಣಿಯ 5 ಪಂದ್ಯಗಳಲ್ಲೂ ಅಡಿದರು. ಅಷ್ಟು ಮಾತ್ರವಲ್ಲ ನಾಳೆಯಿಂದ ಆರಂಭವಾಗಲಿರುವ 3-ಪಂದ್ಯಗಳ ಒಡಿಐ ಸರಣಿಗೂ ಅವರಿಗೆ ವಿಶ್ರಾಂತಿ ನೀಡಿಲ್ಲ. ಸೋಮವಾರದಂದು ವರ್ಚ್ಯುಯಲ್ ಸುದ್ದಿಗೋಷ್ಠಿಯಲ್ಲಿ, ಸ್ಟೋಕ್ಸ್​ಗೆ ಒಂದು ದಿನದ ಪಂದ್ಯಗಳಿಗೆ ಯಾಕೆ ರೆಸ್ಟ್​ ನೀಡುತ್ತಿಲ್ಲ ಎಂದು ಮಾಧ್ಯಮವೊಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಇಂಗ್ಲೆಂಡ್​ ಟೀಮಿನ ಸೀಮಿತ ಓವರ್​ಗಳ ತಂಡದ ನಾಯಕ ಅಯಾನ್ ಮೊರ್ಗನ್, ಸ್ಟೋಕ್ಸ್ ಒಡಿಐಗಳಲ್ಲೂ ಆಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರಿಂದ ಅವರಿಗೆ ರೆಸ್ಟ್​ ಒದಗಿಸುವ ಅಂಶವನ್ನು ಪರಿಗಣಿಸಿಲಿಲ್ಲ ಎಂದು ಹೇಳಿದರು.

‘ಬೇರೆಬೇರೆ ಹಂತಗಳಲ್ಲಿ ನಾವು ಬೆನ್​ಗೆ ರೆಸ್ಟ್​ ನೀಡುವ ಆಯಾಮದ ಬಗ್ಗೆ ಯೋಚಿಸಿದೆವು. ಆದರೆ ಒಂದು ದಿನದ ಪಂದ್ಯಗಳಿಗೆ ಅದನ್ನು ಪರಿಗಣಿಸಲಿಲ್ಲ ಯಾಕೆಂದರೆ ಅವರು ಈ ಸರಣಿಯಲ್ಲೂ ಆಡಲು ಉತ್ಸುಕರಾಗಿದ್ದಾರೆ. ನಾವು ಈ ಪ್ರವಾಸದ ನಂತರ ಸ್ವದೇಶಕ್ಕೆ ವಾಪಸ್ಸು ಹೋದ ನಂತರವೇ ಅವರು ವಿಶ್ರಾಂತಿ ಪಡೆಯಲಿದ್ದಾರೆ. ರೆಸ್ಟ್ ವಿಷಯ ಬಯೊ-ಬಬಲ್ ಮತ್ತು ಅವರು ಯಾವಾಗ ತಮ್ಮ ಕುಟುಂಬವನ್ನು ನೋಡಲು ಇಚ್ಛಿಸುತ್ತಾರೆ ಎನ್ನುವುದರ ಮೇಲೆ ಅವಲಂಬಿತವಾಗಿದೆ,’ ಎಂದು ಮೊರ್ಗನ್ ಹೇಳಿದರು.

‘ನಾವು ಮುಂದಿನ 5 ದಿನಗಳಲ್ಲಿ 3 ಪಂದ್ಯಗಳನ್ನು ಆಡಬೇಕಿದೆ, ಬೆನ್​ಗೆ ವಿಶ್ರಾಂತ ನೀಡಿದರೆ ಇಷ್ಟರಲ್ಲೇ ಐಪಿಎಲ್ ಶುರುವಾಗಲಿರುವುದರಿಂದ ಮುಂಬಯಿ ಅಥವಾ ಪುಣೆಯ ಹೋಟೆಲ್ ರೂಮಿನಲ್ಲಿ ಅವರನ್ನು ಅಕ್ಷರಶ: ಕೂಡಿಹಾಕಿದಂತಾಗುತಿತ್ತು. ಆದರೆ ಬೆನ್ ಒಂದು ದಿನದ ಪಂದ್ಯಗಳಲ್ಲಿ ಆಡಲು ಇಚ್ಛಿಸಿದ್ದರಿಂದ ರೆಸ್ಟ್ ನೀಡುವ ಆಪ್ಷನ್ ಪರಿಗಣಿಸಲಿಲ್ಲ’ ಎಂದು ಮೊರ್ಗನ್ ಹೇಳಿದರು.

ಟೆಸ್ಟ್ ಪಂದ್ಯಗಳಿಗೆ ಇಂಗ್ಲೆಂಡ್ ನಾಯಕನಾಗಿರುವ ಜೋ ರೂಟ್​ ಅವರಿಗೆ ಒಡಿಐ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಆದರೆ, ವಿಶ್ವದ ಅತ್ಯುತ್ತಮ ಆಟಗಾರರರಲ್ಲಿ ಒಬ್ಬರಾಗಿರುವ ರೂಟ್ ಅವರನ್ನು ತಂಡ ಮಿಸ್​ ಮಾಡಿಕೊಳ್ಳಲಿದೆ ಎಂದು ಮೊರ್ಗನ್ ಹೇಳಿದರು. ‘ಪ್ರತಿಬಾಲಿಗೆ ಒಂದು ರನ್​ನಂತೆ ಸ್ಕೋರ್ ಮಾಡುವ ಮತ್ತು ಈ ಆವೃತ್ತ್ತಿಯಲ್ಲಿ 50ರಷ್ಟು ಸರಾಸರಿ ಹೊಂದಿರುವ ರೂಟ್ ಅವರ ಸೇವೆಯನ್ನು ನಾವು ಮಿಸ್ ಮಾಡಿಕೊಳ್ಳಲಿದ್ದೇವೆ. ಅವರ ಬದಲಿಗೆ ಮೂರನೇ ಕ್ರಮಾಂಕದಲ್ಲಿ ಯಾರನ್ನು ಆಡಿಸುವುದು ಎಂಬ ಯೋಚನೆ ನಮ್ಮನ್ನು ಕಾಡುತ್ತಿದೆ,’ ಎಂದು ಮೊರ್ಗನ್ ಹೇಳಿದರು.

ಟೆಸ್ಟ್​ ಮತ್ತು ಟಿ20ಐ ಸರಣಿಗಳೆರಡನ್ನೂ ಸೋತಿರುವ ಇಂಗ್ಲೆಂಡ್​ ತಂಡಕ್ಕೆ ಭಾರತ ಪ್ರವಾಸವನ್ನು ಪಾಸಿಟಿವ್ ನೋಟ್​ನೊಂದಿಗೆ ಮುಗಿಸಬೇಕಾದರೆ, ನಾಳೆಯಿಂದ ಶುರುವಾಗಲಿರುವ ಒಡಿಐ ಸರಣಿ ಕೊನೆಯ ಅವಕಾಶ.

ಇದನ್ನೂ ಓದಿ: India vs England: T20 ಸರಣಿಯಲ್ಲಿದ್ದ ಉಭಯ ತಂಡಗಳ ಈ ಐದು ಆಟಗಾರರು ಮುಂಬರುವ T20 ವಿಶ್ವಕಪ್​ನಲ್ಲಿ ಆಡುವುದು ಡೌಟ್

Published On - 9:50 pm, Mon, 22 March 21

ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
ಹತ್ಯೆಯಾದ ಮಹಿಳೆಯ ಮೂರನೇ ಗಂಡ ಪತ್ನಿ ಮತ್ತು ಇತರರನ್ನು ಕೊಂದನೇ?
ಹತ್ಯೆಯಾದ ಮಹಿಳೆಯ ಮೂರನೇ ಗಂಡ ಪತ್ನಿ ಮತ್ತು ಇತರರನ್ನು ಕೊಂದನೇ?