AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England | ಸ್ಟೋಕ್ಸ್ ಆಡುವ ಉತ್ಸುಕತೆ ತೋರಿದ್ದರಿಂದ ಅವರಿಗೆ ವಿಶ್ರಾಂತಿ ನೀಡಿಲ್ಲ: ಅಯಾನ್ ಮೊರ್ಗನ್

ಪುಣೆ: ಕ್ರಿಕೆಟ್​ ಸಮುದಾಯದ ಹಲವಾರು ತಜ್ಞರು ಮತ್ತು ಮಾಜಿ ಆಟಗಾರರ ವಿರೋಧ ಮತ್ತು ಟೀಕೆಯ ಹೊರತಾಗಿಯೂ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಈಸಿಬಿ) ಇತ್ತೀಚಿಗೆ ಭಾರತದ ವಿರುದ್ಧ ಕೊನೆಗೊಂಡ ಟೆಸ್ಟ್ ಸರಣಿಯಲ್ಲಿ ರೋಟೇಶನ್ ಪಾಲಿಸಿಯನ್ನು ಅನೂಚಾನಾಗಿ ಪಾಲಿಸಿತು. ಜಾನಿ ಬೇರ್​ಸ್ಟೋ, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್, ಮೊಯೀನ್ ಅಲಿ ಮತ್ತು ಜೊಸ್ ಬಟ್ಲರ್ ಅವರನ್ನು ಟೆಸ್ಟ್​ ಪಂದ್ಯಗಳು ನಡೆಯುವಾಗ ರೆಸ್ಟ್ ನೀಡಲಾಯಿತು. ಆದರೆ, ಇಂಗ್ಲೆಂಡ್​ನ ಅಲ್​ರೌಂಡರ್ ಬೆನ್​ ಸ್ಟೋಕ್ಸ್ ಮಾತ್ರ ಎಲ್ಲ 4 ಟೆಸ್ಟ್ ಮತ್ತು […]

India vs England | ಸ್ಟೋಕ್ಸ್ ಆಡುವ ಉತ್ಸುಕತೆ ತೋರಿದ್ದರಿಂದ ಅವರಿಗೆ ವಿಶ್ರಾಂತಿ ನೀಡಿಲ್ಲ: ಅಯಾನ್ ಮೊರ್ಗನ್
ಅಯಾನ್ ಮೊರ್ಗನ್ ಮತ್ತು ಬೆನ್ ಸ್ಟೋಕ್ಸ್
ಅರುಣ್​ ಕುಮಾರ್​ ಬೆಳ್ಳಿ
|

Updated on:Mar 22, 2021 | 9:59 PM

Share

ಪುಣೆ: ಕ್ರಿಕೆಟ್​ ಸಮುದಾಯದ ಹಲವಾರು ತಜ್ಞರು ಮತ್ತು ಮಾಜಿ ಆಟಗಾರರ ವಿರೋಧ ಮತ್ತು ಟೀಕೆಯ ಹೊರತಾಗಿಯೂ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಈಸಿಬಿ) ಇತ್ತೀಚಿಗೆ ಭಾರತದ ವಿರುದ್ಧ ಕೊನೆಗೊಂಡ ಟೆಸ್ಟ್ ಸರಣಿಯಲ್ಲಿ ರೋಟೇಶನ್ ಪಾಲಿಸಿಯನ್ನು ಅನೂಚಾನಾಗಿ ಪಾಲಿಸಿತು. ಜಾನಿ ಬೇರ್​ಸ್ಟೋ, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್, ಮೊಯೀನ್ ಅಲಿ ಮತ್ತು ಜೊಸ್ ಬಟ್ಲರ್ ಅವರನ್ನು ಟೆಸ್ಟ್​ ಪಂದ್ಯಗಳು ನಡೆಯುವಾಗ ರೆಸ್ಟ್ ನೀಡಲಾಯಿತು.

ಆದರೆ, ಇಂಗ್ಲೆಂಡ್​ನ ಅಲ್​ರೌಂಡರ್ ಬೆನ್​ ಸ್ಟೋಕ್ಸ್ ಮಾತ್ರ ಎಲ್ಲ 4 ಟೆಸ್ಟ್ ಮತ್ತು ಟಿ20ಐ ಸರಣಿಯ 5 ಪಂದ್ಯಗಳಲ್ಲೂ ಅಡಿದರು. ಅಷ್ಟು ಮಾತ್ರವಲ್ಲ ನಾಳೆಯಿಂದ ಆರಂಭವಾಗಲಿರುವ 3-ಪಂದ್ಯಗಳ ಒಡಿಐ ಸರಣಿಗೂ ಅವರಿಗೆ ವಿಶ್ರಾಂತಿ ನೀಡಿಲ್ಲ. ಸೋಮವಾರದಂದು ವರ್ಚ್ಯುಯಲ್ ಸುದ್ದಿಗೋಷ್ಠಿಯಲ್ಲಿ, ಸ್ಟೋಕ್ಸ್​ಗೆ ಒಂದು ದಿನದ ಪಂದ್ಯಗಳಿಗೆ ಯಾಕೆ ರೆಸ್ಟ್​ ನೀಡುತ್ತಿಲ್ಲ ಎಂದು ಮಾಧ್ಯಮವೊಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಇಂಗ್ಲೆಂಡ್​ ಟೀಮಿನ ಸೀಮಿತ ಓವರ್​ಗಳ ತಂಡದ ನಾಯಕ ಅಯಾನ್ ಮೊರ್ಗನ್, ಸ್ಟೋಕ್ಸ್ ಒಡಿಐಗಳಲ್ಲೂ ಆಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರಿಂದ ಅವರಿಗೆ ರೆಸ್ಟ್​ ಒದಗಿಸುವ ಅಂಶವನ್ನು ಪರಿಗಣಿಸಿಲಿಲ್ಲ ಎಂದು ಹೇಳಿದರು.

‘ಬೇರೆಬೇರೆ ಹಂತಗಳಲ್ಲಿ ನಾವು ಬೆನ್​ಗೆ ರೆಸ್ಟ್​ ನೀಡುವ ಆಯಾಮದ ಬಗ್ಗೆ ಯೋಚಿಸಿದೆವು. ಆದರೆ ಒಂದು ದಿನದ ಪಂದ್ಯಗಳಿಗೆ ಅದನ್ನು ಪರಿಗಣಿಸಲಿಲ್ಲ ಯಾಕೆಂದರೆ ಅವರು ಈ ಸರಣಿಯಲ್ಲೂ ಆಡಲು ಉತ್ಸುಕರಾಗಿದ್ದಾರೆ. ನಾವು ಈ ಪ್ರವಾಸದ ನಂತರ ಸ್ವದೇಶಕ್ಕೆ ವಾಪಸ್ಸು ಹೋದ ನಂತರವೇ ಅವರು ವಿಶ್ರಾಂತಿ ಪಡೆಯಲಿದ್ದಾರೆ. ರೆಸ್ಟ್ ವಿಷಯ ಬಯೊ-ಬಬಲ್ ಮತ್ತು ಅವರು ಯಾವಾಗ ತಮ್ಮ ಕುಟುಂಬವನ್ನು ನೋಡಲು ಇಚ್ಛಿಸುತ್ತಾರೆ ಎನ್ನುವುದರ ಮೇಲೆ ಅವಲಂಬಿತವಾಗಿದೆ,’ ಎಂದು ಮೊರ್ಗನ್ ಹೇಳಿದರು.

‘ನಾವು ಮುಂದಿನ 5 ದಿನಗಳಲ್ಲಿ 3 ಪಂದ್ಯಗಳನ್ನು ಆಡಬೇಕಿದೆ, ಬೆನ್​ಗೆ ವಿಶ್ರಾಂತ ನೀಡಿದರೆ ಇಷ್ಟರಲ್ಲೇ ಐಪಿಎಲ್ ಶುರುವಾಗಲಿರುವುದರಿಂದ ಮುಂಬಯಿ ಅಥವಾ ಪುಣೆಯ ಹೋಟೆಲ್ ರೂಮಿನಲ್ಲಿ ಅವರನ್ನು ಅಕ್ಷರಶ: ಕೂಡಿಹಾಕಿದಂತಾಗುತಿತ್ತು. ಆದರೆ ಬೆನ್ ಒಂದು ದಿನದ ಪಂದ್ಯಗಳಲ್ಲಿ ಆಡಲು ಇಚ್ಛಿಸಿದ್ದರಿಂದ ರೆಸ್ಟ್ ನೀಡುವ ಆಪ್ಷನ್ ಪರಿಗಣಿಸಲಿಲ್ಲ’ ಎಂದು ಮೊರ್ಗನ್ ಹೇಳಿದರು.

ಟೆಸ್ಟ್ ಪಂದ್ಯಗಳಿಗೆ ಇಂಗ್ಲೆಂಡ್ ನಾಯಕನಾಗಿರುವ ಜೋ ರೂಟ್​ ಅವರಿಗೆ ಒಡಿಐ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಆದರೆ, ವಿಶ್ವದ ಅತ್ಯುತ್ತಮ ಆಟಗಾರರರಲ್ಲಿ ಒಬ್ಬರಾಗಿರುವ ರೂಟ್ ಅವರನ್ನು ತಂಡ ಮಿಸ್​ ಮಾಡಿಕೊಳ್ಳಲಿದೆ ಎಂದು ಮೊರ್ಗನ್ ಹೇಳಿದರು. ‘ಪ್ರತಿಬಾಲಿಗೆ ಒಂದು ರನ್​ನಂತೆ ಸ್ಕೋರ್ ಮಾಡುವ ಮತ್ತು ಈ ಆವೃತ್ತ್ತಿಯಲ್ಲಿ 50ರಷ್ಟು ಸರಾಸರಿ ಹೊಂದಿರುವ ರೂಟ್ ಅವರ ಸೇವೆಯನ್ನು ನಾವು ಮಿಸ್ ಮಾಡಿಕೊಳ್ಳಲಿದ್ದೇವೆ. ಅವರ ಬದಲಿಗೆ ಮೂರನೇ ಕ್ರಮಾಂಕದಲ್ಲಿ ಯಾರನ್ನು ಆಡಿಸುವುದು ಎಂಬ ಯೋಚನೆ ನಮ್ಮನ್ನು ಕಾಡುತ್ತಿದೆ,’ ಎಂದು ಮೊರ್ಗನ್ ಹೇಳಿದರು.

ಟೆಸ್ಟ್​ ಮತ್ತು ಟಿ20ಐ ಸರಣಿಗಳೆರಡನ್ನೂ ಸೋತಿರುವ ಇಂಗ್ಲೆಂಡ್​ ತಂಡಕ್ಕೆ ಭಾರತ ಪ್ರವಾಸವನ್ನು ಪಾಸಿಟಿವ್ ನೋಟ್​ನೊಂದಿಗೆ ಮುಗಿಸಬೇಕಾದರೆ, ನಾಳೆಯಿಂದ ಶುರುವಾಗಲಿರುವ ಒಡಿಐ ಸರಣಿ ಕೊನೆಯ ಅವಕಾಶ.

ಇದನ್ನೂ ಓದಿ: India vs England: T20 ಸರಣಿಯಲ್ಲಿದ್ದ ಉಭಯ ತಂಡಗಳ ಈ ಐದು ಆಟಗಾರರು ಮುಂಬರುವ T20 ವಿಶ್ವಕಪ್​ನಲ್ಲಿ ಆಡುವುದು ಡೌಟ್

Published On - 9:50 pm, Mon, 22 March 21

ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ: ಸ್ಥಳೀಯರಿಂದ ಬಿತ್ತು ಗೂಸಾ
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ಸುಜಾತಾ ಹಂಡಿ ಕ್ರೂರತೆಯ ಮತ್ತಷ್ಟು ವಿಡಿಯೋ ವೈರಲ್
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ನಾನು ಸತ್ತು 47 ವರ್ಷವಾಗಿದೆ ಎಂದು ಕೂಗುತ್ತಾ ಪ್ರತಿಭಟಿಸಿದ ಇರಾನ್ ಮಹಿಳೆ
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್
ಬೆಂಗಳೂರು ಹೊಸೂರು ಹೆದ್ದಾರಿಯಲ್ಲಿ ಕಿಮೀಗಟ್ಟಲೆ ಟ್ರಾಫಿಕ್ ಜಾಮ್