AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಲು ಸನಿಹವಾಗುತ್ತಿದ್ದಂತೆ ಕ್ರೀಡಾಸ್ಫೂರ್ತಿ ಮರೆತ ವೇಡ್! ಛೀಮಾರಿ ಹಾಕಿದ ನೆಟ್ಟಿಗರು; ವಿಡಿಯೋ ನೋಡಿ

AUS vs ENG: ಒಂದು ವೇಳೆ ಇಂಗ್ಲೆಂಡ್ ಈ ಕ್ರಮಕ್ಕೆ ಮುಂದಾಗಿದ್ದರೆ, ವೇಡ್‌ ಖಂಡಿತವಾಗಿಯೂ ಔಟಾಗಿ ಪೆವಿಲಿಯನ್​ಗೆ ಸೇರುತ್ತಿದ್ದರು. ಆದರೆ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಹಾಗೆ ಮಾಡದೆ ವೇಡ್​ಗೆ ಬ್ಯಾಟಿಂಗ್ ಮುಂದುವರೆಸಲು ಅವಕಾಶ ನೀಡಿದರು.

ಸೋಲು ಸನಿಹವಾಗುತ್ತಿದ್ದಂತೆ ಕ್ರೀಡಾಸ್ಫೂರ್ತಿ ಮರೆತ ವೇಡ್! ಛೀಮಾರಿ ಹಾಕಿದ ನೆಟ್ಟಿಗರು; ವಿಡಿಯೋ ನೋಡಿ
TV9 Web
| Edited By: |

Updated on: Oct 09, 2022 | 8:45 PM

Share

ಟಿ20 ವಿಶ್ವಕಪ್‌ಗೂ (T20 World Cup) ಮುನ್ನ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ (Australia and England) ನಡುವೆ ಟಿ20 ಸರಣಿ ನಡೆಯುತ್ತಿದೆ. ಮೂರು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯದಲ್ಲಿಯೇ ಭಾರಿ ರೋಚಕತೆ ಕಂಡುಬಂದಿದ್ದು, ಅಂತಿಮವಾಗಿ ಇಂಗ್ಲೆಂಡ್​ ತಂಡ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೆಲ್ಲದರ ನಡುವೆ ನಡೆದ ಅದೊಂದು ಘಟನೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.ಇದರಿಂದಾಗಿ ಆಸ್ಟ್ರೇಲಿಯದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಮ್ಯಾಥ್ಯೂ ವೇಡ್​ಗೆ (Matthew Wade) ಇಡೀ ಕ್ರಿಕೆಟ್​ ಜಗತ್ತೆ ಛೀಮಾರಿ ಹಾಕುತ್ತಿದೆ. ಪಂದ್ಯವನ್ನು ಗೆಲ್ಲುವ ಪ್ರಯತ್ನದಲ್ಲಿ, ಮ್ಯಾಥ್ಯೂ ವೇಡ್ ಇಂಗ್ಲೆಂಡ್ ಬೌಲರ್ ಕ್ಯಾಚ್ ತೆಗೆದುಕೊಳ್ಳುವ ಪ್ರಯತ್ನಕ್ಕೆ ಕಲ್ಲುಹಾಕಿದ್ದಾರೆ. ವೇಡ್ ಮಾಡಿದ ಕೆಲಸದಿಂದ ವಾರ್ನರ್ ಔಟಾಗುವುದರಿಂದ ಬಚಾವ್ ಆದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

ಎರಡು ತಂಡಗಳ ನಡುವಿನ ಈ ಮೊದಲ ಟಿ20 ಪಂದ್ಯವು ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಭಾನುವಾರ ಅಕ್ಟೋಬರ್ 9 ರಂದು ನಡೆಯಿತು. ಈ ಪಂದ್ಯದಲ್ಲಿ 209 ರನ್‌ಗಳ ಗುರಿ ಬೆನ್ನತ್ತಿ ಆತಿಥೇಯ ಆಸ್ಟ್ರೇಲಿಯಾ ತಂಡ ಕೊನೆಯ ಹಂತದವರೆಗೂ ಗೆಲುವಿಗಾಗಿ ಪ್ರಯತ್ನಿಸಿತು. ಈ ವೇಳೆ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ತಂಡವನ್ನು ಗೆಲ್ಲಿಸಲು ಹರಸಾಹಸ ಪಡುತ್ತಿದ್ದ ಡೇವಿಡ್ ವಾರ್ನರ್​ಗೆ ಮ್ಯಾಥ್ಯೂ ವೇಡ್ ಸಾಥ್ ಕೊಡಲು ಆರಂಭಿಸಿದರು. ಈ ಇಬ್ಬರ ಜೊತೆಯಾಟದ ನಡುವೆ ಇನ್ನಿಂಗ್ಸ್‌ನ 17 ನೇ ಓವರ್‌ನಲ್ಲಿ ನಡೆದ ಘಟನೆಯೊಂದು ಆಸೀಸ್ ಆಟಗಾರನ ಮೇಲೆ ಕ್ರಿಕೆಟ್ ಅಭಿಮಾನಿಗಳು ಕೋಪಗೊಳ್ಳುವಂತೆ ಮಾಡಿತು.

ಬೌಲರ್ ಕ್ಯಾಚ್ ಹಿಡಿಯದಂತೆ ತಡೆದ ವೇಡ್

ಇಂಗ್ಲೆಂಡ್ ವೇಗಿ ಮಾರ್ಕ್​ವುಡ್ ಎಸೆದ 17ನೇ ಓವರ್​ನ ಮೂರನೇ ಎಸೆತ ಬೌನ್ಸರ್ ಆಗಿದ್ದು, ವಾರ್ನರ್​ಗೆ ಸರಿಯಾಗಿ ಆಡಲು ಸಾಧ್ಯವಾಗಲಿಲ್ಲ. ಚೆಂಡು ಅವರ ಬ್ಯಾಟ್‌ಗೆ ತಾಗಿ ಬಳಿಕ ಹೆಲ್ಮೆಟ್‌ಗೆ ಬಡಿದು ಮೇಲಕ್ಕೆ ಗಾಳಿಯಲ್ಲಿ ಹಾರಿತು. ಅದನ್ನು ಹಿಡಿಯುವ ಯತ್ನದಲ್ಲಿ ಮಾರ್ಕ್​ವುಡ್, ಚೆಂಡನ್ನು ನೋಡುತ್ತಾ ನಾನ್​ಸ್ಟ್ರೈಕ್ ಕಡೆ ಓಡಲು ಆರಂಭಿಸಿದರು. ಅಷ್ಟರಲ್ಲಾಗಲೇ ಓಡಲು ಆರಂಭಿಸಿದ ಮ್ಯಾಥ್ಯೂ ವೇಡ್, ಪುನಃ ನಾನ್ ಸ್ಟ್ರೇಕ್​ ಕಡೆಗೆ ಹಿಂದಿರುಗಲು ಯತ್ನಿಸಿದರು. ಈ ವೇಳೆ ಕ್ಯಾಚ್ ಹಿಡಿಯಲು ಬರುತ್ತಿದ್ದ ಆಂಗ್ಲ ಬೌಲರ್​ ವುಡ್​ಗೆ ತನ್ನ ಕೈಯನ್ನು ಅಡ್ಡತಂದು ಕ್ಯಾಚ್ ಹಿಡಿಯದಂತೆ ಮಾಡಿದರು.

ವೇಡ್ ಮಾಡಿದ ಈ ಕೃತ್ಯದಿಂದಾಗಿ ವುಡ್​ಗೆ ಕ್ಯಾಚ್ ಹಿಡಿಯಲು ಸಾಧ್ಯವಾಗಲಿಲ್ಲ. ಇದರಿಂದ ವಾರ್ನರ್ ಔಟಾಗುವುದರಿಂದ ಪಾರಾದರು. ಈ ವೇಳೆ ವೇಡ್‌, ‘ಫೀಲ್ಡ್‌ಗೆ ಅಡ್ಡಿಪಡಿಸಿದ್ದಕ್ಕಾಗಿ’ ಮೇಲ್ಮನವಿ ಸಲ್ಲಿಸಲು ಇಂಗ್ಲೆಂಡ್‌ಗೆ ಅವಕಾಶವಿತ್ತು. ಒಂದು ವೇಳೆ ಇಂಗ್ಲೆಂಡ್ ಈ ಕ್ರಮಕ್ಕೆ ಮುಂದಾಗಿದ್ದರೆ, ವೇಡ್‌ ಖಂಡಿತವಾಗಿಯೂ ಔಟಾಗಿ ಪೆವಿಲಿಯನ್​ಗೆ ಸೇರುತ್ತಿದ್ದರು. ಆದರೆ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಹಾಗೆ ಮಾಡದೆ ವೇಡ್​ಗೆ ಬ್ಯಾಟಿಂಗ್ ಮುಂದುವರೆಸಲು ಅವಕಾಶ ನೀಡಿದರು. ಆದಾಗ್ಯೂ, ಅದೇ ಓವರ್‌ನ ಕೊನೆಯ ಎಸೆತದಲ್ಲಿ ವಾರ್ನರ್ ಔಟಾದರು. ಅಂತಿಮವಾಗಿ ವೇಡ್​ಗೂ ಕೂಡ ಆಸ್ಟ್ರೇಲಿಯಾಕ್ಕೆ ಗಲುವು ತಂದುಕೊಡಲು ಸಾಧ್ಯವಾಗಲಿಲ್ಲ.

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ