AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Abhimanyu Easwaran: ಭರ್ಜರಿ ಶತಕದೊಂದಿಗೆ ವಿಶೇಷ ಸಾಧನೆ ಮಾಡಿದ ಅಭಿಮನ್ಯು ಈಶ್ವರನ್

Deodhar Trophy 2023: ಲೀಸ್ಟ್ ಎ ಕ್ರಿಕೆಟ್​ನಲ್ಲಿ 8ನೇ ಶತಕ ಸಿಡಿಸುವ ಮೂಲಕ ಅಭಿಮನ್ಯು ಈಶ್ವರನ್ 3500 ರನ್​ಗಳನ್ನು ಪೂರೈಸಿದ್ದಾರೆ.

Abhimanyu Easwaran: ಭರ್ಜರಿ ಶತಕದೊಂದಿಗೆ ವಿಶೇಷ ಸಾಧನೆ ಮಾಡಿದ ಅಭಿಮನ್ಯು ಈಶ್ವರನ್
(ಸಾಂದರ್ಭಿಕ ಚಿತ್ರ)
TV9 Web
| Edited By: |

Updated on: Jul 27, 2023 | 3:15 PM

Share

Deodhar Trophy 2023: ಪುದುಚೇರಿಯಲ್ಲಿ ನಡೆಯುತ್ತಿರುವ ದೇವಧರ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಅಭಿಮನ್ಯು ಈಶ್ವರನ್ ಶತಕ ಬಾರಿಸಿದ್ದಾರೆ. ಈ ಶತಕದೊಂದಿಗೆ ಲೀಸ್ಟ್ ಎ ಕ್ರಿಕೆಟ್​ನಲ್ಲಿ 3500 ರನ್​ ಕಲೆಹಾಕಿದ ವಿಶೇಷ ಸಾಧನೆ ಮಾಡಿದ್ದಾರೆ. ಈಶಾನ್ಯ ವಲಯ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪೂರ್ವ ವಲಯ ತಂಡ ಬೌಲಿಂಗ್ ಆಯ್ದುಕೊಂಡಿತು. ಇತ್ತ ಮೊದಲು ಬ್ಯಾಟ್ ಮಾಡಿದ ಪೂರ್ವ ವಲಯ ತಂಡವು ರಿಯಾನ್ ಪರಾಗ್ ಅವರ ಸ್ಪಿನ್ ಮೋಡಿ ಮುಂದೆ ಮುಂಡಿಯೂರಿದ್ದರು. ಕೇವಲ 68 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಈಶಾನ್ಯ ವಲಯ ತಂಡಕ್ಕೆ ಈ ಹಂತದಲ್ಲಿ ರೆಕ್ಸ್ ಸಿಂಗ್ ಆಸರೆಯಾದರು.

74 ಎಸೆತಗಳನ್ನು ಎದುರಿಸಿದ ರೆಕ್ಸ್​ ಸಿಂಗ್ 10 ಫೋರ್​ಗಳೊಂದಿಗೆ ಅಜೇಯ 65 ರನ್ ಬಾರಿಸಿದರು. ಇದರಿಂದ ಈಶಾನ್ಯ ವಲಯ ತಂಡವು 169 ರನ್​ಗಳಿಸಲು ಸಾಧ್ಯವಾಯಿತು. ಪೂರ್ವ ವಲಯ ಪರ 10 ಓವರ್​ಗಳಲ್ಲಿ 30 ರನ್ ನೀಡಿ ರಿಯಾನ್ ಪರಾಗ್ 4 ವಿಕೆಟ್ ಪಡೆದರೆ, ಶಹಬಾಝ್ ಅಹ್ಮದ್, ಮುಖ್ತಾರ್ ಹುಸೇನ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.

170 ರನ್​ಗಳ ಸುಲಭ ಗುರಿ ಪಡೆದ ಪೂರ್ವ ವಲಯ ತಂಡಕ್ಕೆ ಆರಂಭಿಕ ಆಟಗಾರ ಅಭಿಮನ್ಯು ಈಶ್ವರನ್ ಭರ್ಜರಿ ಆರಂಭ ಒದಗಿಸಿದ್ದರು. ಆರಂಭದಿಂದಲೇ ಎಚ್ಚರಿಕೆಯ ಆಟದೊಂದಿಗೆ ರನ್​ಗಳಿಸುತ್ತಾ ಸಾಗಿದ ಈಶ್ವರನ್ 102 ಎಸೆತಗಳಲ್ಲಿ 13 ಫೋರ್​ಗಳೊಂದಿಗೆ ಅಜೇಯ ಶತಕ ಬಾರಿಸಿದರು. ಪರಿಣಾಮ 31.3 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 170 ರನ್ ಕಲೆಹಾಕಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಈಶ್ವರನ್ ವಿಶೇಷ ಸಾಧನೆ:

ಅಭಿಮನ್ಯು ಈಶ್ವರನ್ ಲೀಸ್ಟ್​ ಎ ಕ್ರಿಕೆಟ್​ನಲ್ಲಿ ಇದುವರೆಗೆ 8 ಶತಕ ಬಾರಿಸಿದ್ದಾರೆ. ಇದೀಗ ಮೂಡಿಬಂದ ಶತಕದೊಂದಿಗೆ  ಲೀಸ್ಟ್​ ಎ ಕ್ರಿಕೆಟ್​ನಲ್ಲಿ 3,514 ರನ್‌ಗಳನ್ನು ಪೂರೈಸಿದ್ದಾರೆ.

ಪೂರ್ವ ವಲಯ ಪ್ಲೇಯಿಂಗ್ 11: ಅಭಿಮನ್ಯು ಈಶ್ವರನ್ , ಉತ್ಕರ್ಷ್ ಸಿಂಗ್ , ವಿರಾಟ್ ಸಿಂಗ್ , ಸುಭ್ರಾಂಶು ಸೇನಾಪತಿ , ರಿಯಾನ್ ಪರಾಗ್ , ಸೌರಭ್ ತಿವಾರಿ (ನಾಯಕ) , ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್) , ಶಹಬಾಝ್ ಅಹ್ಮದ್ , ಮುಖ್ತಾರ್ ಹುಸೇನ್ , ಆಕಾಶ್ ದೀಪ್ , ಮಣಿಶಂಕರ್ ಮುರಸಿಂಗ್.

ಇದನ್ನೂ ಓದಿ: Harry Brook: ಬೂಮ್ ಬೂಮ್ ಬ್ರೂಕ್: ಹೊಸ ವಿಶ್ವ ದಾಖಲೆ ನಿರ್ಮಿಸಿದ ಸ್ಪೋಟಕ ದಾಂಡಿಗ

ಈಶಾನ್ಯ ವಲಯ ಪ್ಲೇಯಿಂಗ್ 11: ಅನುಪ್ ಅಹ್ಲಾವತ್ , ನಿಲೇಶ್ ಲಾಮಿಚಾನೆ , ಜೆಹು ಅಂಡರ್ಸನ್ (ವಿಕೆಟ್ ಕೀಪರ್) , ಲ್ಯಾಂಗ್ಲೋನ್ಯಾಂಬಾ ಕಿಶನ್​ಗ್ಬಾಮ್ (ನಾಯಕ) , ರೆಕ್ಸ್ ರಾಜ್ ಕುಮಾರ್ , ಪಲ್ಜೋರ್ ತಮಾಂಗ್ , ಲ್ಯಾರಿ ಸಂಗ್ಮಾ , ಇಮ್ಲಿವಾಟಿ ಲೆಮ್ತೂರ್ , ಲೀ ಯೋಂಗ್ ಲೆಪ್ಚಾ , ನಬಮ್ ಅಬೋ , ಕ್ರಿವಿಟ್ಸೊ ಕೆನ್ಸೆ.

ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ