AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Duleep Trophy: 17 ದಿನ, 5 ಪಂದ್ಯ, 6 ತಂಡಗಳು; ದುಲೀಪ್ ಟ್ರೋಫಿ ಬಗ್ಗೆ ತಿಳಿದುಕೊಳ್ಳಬೇಕಾದ 10 ವಿಷಯಗಳಿವು

Duleep Trophy: ದುಲೀಪ್ ಟ್ರೋಫಿ 2022-23 ಸೆಪ್ಟೆಂಬರ್ 8 ರಿಂದ ಆರಂಭವಾಗಲಿದೆ. ಈ ಪಂದ್ಯಾವಳಿ ಸೆಪ್ಟೆಂಬರ್ 25 ರಂದು ಕೊನೆಗೊಳ್ಳಲಿದೆ. 17 ದಿನಗಳ ಈ ಟೂರ್ನಿಯಲ್ಲಿ 5 ಪಂದ್ಯಗಳು ನಡೆಯಲಿವೆ.

Duleep Trophy: 17 ದಿನ, 5 ಪಂದ್ಯ, 6 ತಂಡಗಳು; ದುಲೀಪ್ ಟ್ರೋಫಿ ಬಗ್ಗೆ ತಿಳಿದುಕೊಳ್ಳಬೇಕಾದ 10 ವಿಷಯಗಳಿವು
ಸಾಂದರ್ಭಿಕ ಚಿತ್ರ
TV9 Web
| Updated By: ಪೃಥ್ವಿಶಂಕರ|

Updated on: Sep 07, 2022 | 9:26 PM

Share

ಭಾರತೀಯ ಕ್ರಿಕೆಟ್‌ನ ಅಂತರಾಷ್ಟ್ರೀಯ ವೇಳಾಪಟ್ಟಿಯ ನಡುವೆ ದೇಶೀಯ ಪಂದ್ಯಾವಳಿ ಕೂಡ ಅಬ್ಬರಿಸಲಿದೆ. ಸೆಪ್ಟೆಂಬರ್ 8 ರಿಂದ ದುಲೀಪ್ ಟ್ರೋಫಿಯೊಂದಿಗೆ (Duleep Trophy) ಉಡಾವಣೆ ಪ್ರಾರಂಭವಾಗಲಿದೆ. ಈ ಪಂದ್ಯಾವಳಿ ಸೆಪ್ಟೆಂಬರ್ 25 ರವರೆಗೆ ನಡೆಯಲಿದೆ. ಅದೇನೆಂದರೆ, ಇಡೀ 17 ದಿನಗಳ ದೇಶಿ ಕ್ರಿಕೆಟ್ ದುಲೀಪ್ ಟ್ರೋಫಿಯ ರೋಚಕತೆಯನ್ನು ಕಾಣಲಿದೆ. ಏತನ್ಮಧ್ಯೆ 5 ಪಂದ್ಯಗಳಲ್ಲಿ 6 ತಂಡಗಳು ಸೆಣಸಲಿದ್ದು, ಅವುಗಳಲ್ಲಿ ಒಂದು ತಂಡ ಚಾಂಪಿಯನ್ ಆಗಲಿದೆ. ಈಗ ಯಾವ ತಂಡದ ಅದೃಷ್ಟದ ಬಾಗಿಲು ತೆರೆಯಲಿದೆ ಎಂಬುದು ಈ ಟೂರ್ನಿ ಅಂತಿಮ ಹಂತ ತಲುಪಿದಾಗ ಮಾತ್ರ ಗೊತ್ತಾಗಲಿದೆ. ಆದರೆ, 2 ವರ್ಷಗಳ ನಂತರ ವಾಪಸಾಗುತ್ತಿರುವ ಈ ಟೂರ್ನಿಗಾಗಿ ಎಲ್ಲರೂ ಕಾತುರರಾಗಿದ್ದಾರೆ.

ದುಲೀಪ್ ಟ್ರೋಫಿ: 17 ದಿನ, 5 ಪಂದ್ಯಗಳು, 6 ತಂಡಗಳು, 1 ಚಾಂಪಿಯನ್

ದುಲೀಪ್ ಟ್ರೋಫಿಯ ಹೊಸ ಚಾಂಪಿಯನ್ 17 ದಿನಗಳ ನಂತರ ಸೀಲ್ ಆಗಬಹುದು, ಆದರೆ ಈ ಸಮಯದಲ್ಲಿ ಈ ದೇಶೀಯ ಪಂದ್ಯಾವಳಿಯಲ್ಲಿ ಅನೇಕ ಆಟಗಾರರ ವೃತ್ತಿಜೀವನದ ಗ್ರಾಫ್ ಕೂಡ ಸೆಟ್ ಆಗುವುದನ್ನು ಕಾಣಬಹುದು. ಆದರೆ, ಅದಕ್ಕೂ ಮುನ್ನ ದುಲೀಪ್ ಟ್ರೋಫಿಯ ವೇಳಾಪಟ್ಟಿ ಹೇಗಿರುತ್ತದೆ, ಯಾವ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ, ಈ ಬಾರಿಯ ದುಲೀಪ್ ಟ್ರೋಫಿ ಏಕೆ ವಿಶೇಷ ಎಂಬುದನ್ನು ತಿಳಿಯಬೇಕಿದೆ.

– ಕೊನೆಯ ಬಾರಿ 2019 ರಲ್ಲಿ ದುಲೀಪ್ ಟ್ರೋಫಿಯನ್ನು ಆಯೋಜಿಸಲಾಗಿತ್ತು. ಅಂದರೆ, 2 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಈ ಪಂದ್ಯಾವಳಿಯನ್ನು ಮತ್ತೊಮ್ಮೆ ಆಡಲಾಗುತ್ತಿದೆ. ಕಳೆದ 2 ವರ್ಷಗಳಿಂದ ಕೊರೊನಾದಿಂದಾಗಿ ಈ ಪಂದ್ಯಾವಳಿಯನ್ನು ಆಯೋಜಿಸಿರಲಿಲ್ಲ.

– 2016 ಮತ್ತು 2019 ರ ನಡುವೆ, 3 ತಂಡಗಳು ದುಲೀಪ್ ಟ್ರೋಫಿಯಲ್ಲಿ ಭಾಗವಹಿಸಿದ್ದವು – ಇಂಡಿಯಾ ರೆಡ್, ಇಂಡಿಯಾ ಬ್ಲೂ ಮತ್ತು ಇಂಡಿಯಾ ಗ್ರೀನ್. ಆದರೆ, ಈ ಬಾರಿ ಅದರಲ್ಲಿ ಬದಲಾವಣೆಯಾಗಿದೆ. ಈ ಬಾರಿ ಅದನ್ನು ಸಂಘಟಿಸುವಲ್ಲಿ ಬಿಸಿಸಿಐ ಹಳೆಯ ತಂತ್ರವನ್ನೇ ಪ್ರಯೋಗಿಸಿದೆ. ಈ ಬಾರಿ 6 ತಂಡಗಳು ಇದರಲ್ಲಿ ಭಾಗವಹಿಸುತ್ತಿದ್ದು, ಇವುಗಳನ್ನು ವಲಯವಾರು ವಿಂಗಡಿಸಲಾಗಿದೆ.

– ದುಲೀಪ್ ಟ್ರೋಫಿ 2022-23 ರಲ್ಲಿ ಭಾಗವಹಿಸುವ ತಂಡಗಳೆಂದರೆ ಉತ್ತರ ವಲಯ, ದಕ್ಷಿಣ ವಲಯ, ಈಶಾನ್ಯ ವಲಯ, ಪೂರ್ವ ವಲಯ, ಪಶ್ಚಿಮ ವಲಯ ಮತ್ತು ಕೇಂದ್ರ ವಲಯ. ಪಂದ್ಯಾವಳಿಯಲ್ಲಿ ಈ ಎಲ್ಲಾ ತಂಡಗಳು ಪರಸ್ಪರ ಮುಖಾಮುಖಿಯಾಗುವುದನ್ನು ಕಾಣಬಹುದು.

– ಈಶಾನ್ಯ ವಲಯ ತಂಡ ದುಲೀಪ್ ಟ್ರೋಫಿಯಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು.

– ದುಲೀಪ್ ಟ್ರೋಫಿ 2022-23 ಭಾರತದ 4 ನಗರಗಳಲ್ಲಿ ಆಡಲಾಗುತ್ತದೆ – ಚೆನ್ನೈ, ಪುದುಚೇರಿ, ಸೇಲಂ ಮತ್ತು ಕೊಯಮತ್ತೂರು.

– ಎಲ್ಲ 6 ವಲಯಗಳ ತಂಡಗಳ ನಾಯಕರ ಆಯ್ಕೆಯನ್ನು ಆ ವಲಯದ ಆಯ್ಕೆ ಸಮಿತಿ ನಿರ್ಧರಿಸಿದೆ.

– ಹನುಮ ವಿಹಾರಿ – ದಕ್ಷಿಣ ವಲಯದ ನಾಯಕ. ಪಶ್ಚಿಮ ವಲಯದ ನಾಯಕತ್ವ ಅಜಿಂಕ್ಯ ರಹಾನೆ ಕೈಯಲ್ಲಿದೆ. ಉತ್ತರ ವಲಯದ ಕಮಾಂಡ್ ಮನ್ ದೀಪ್ ಸಿಂಗ್ ಕೈಯಲ್ಲಿದೆ. ಬಂಗಾಳದ ಕ್ರೀಡಾ ಸಚಿವ ಮನೋಜ್ ತಿವಾರಿ ಅವರು ಪೂರ್ವ ವಲಯದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಕೇಂದ್ರ ವಲಯಕ್ಕೆ ಕರಣ್ ಶರ್ಮಾ ನಾಯಕತ್ವ ವಹಿಸಲಿದ್ದು, ಈಶಾನ್ಯ ವಲಯ ಆಶಿಶ್ ಥಾಪಾ ಅವರ ಕೈಯಲ್ಲಿರಲಿದೆ.

– ದುಲೀಪ್ ಟ್ರೋಫಿ 2022-23 ರಲ್ಲಿ, ಎಲ್ಲಾ ಪಂದ್ಯಗಳು ನಾಕೌಟ್ ಆಗಿರುತ್ತವೆ. ಅಂದರೆ ಸೋತ ತಂಡದ ಪಯಣ ಅಲ್ಲಿಗೇ ನಿಲ್ಲುತ್ತದೆ. ಟೂರ್ನಿಯ ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಪಶ್ಚಿಮ ವಲಯವು ಈಶಾನ್ಯ ವಲಯವನ್ನು ಎದುರಿಸಲಿದೆ. ಈ ಪಂದ್ಯವು ಚೆನ್ನೈನಲ್ಲಿ ಸೆಪ್ಟೆಂಬರ್ 8 ರಿಂದ ಸೆಪ್ಟೆಂಬರ್ 11 ರವರೆಗೆ ನಡೆಯಲಿದೆ. ಅದೇ ಸಮಯದಲ್ಲಿ, ಉತ್ತರ ವಲಯ ಮತ್ತು ಪೂರ್ವ ವಲಯಗಳ ನಡುವೆ ಇದೇ ದಿನಾಂಕದಂದು ಪುದುಚೇರಿಯಲ್ಲಿ ಎರಡನೇ ಕ್ವಾರ್ಟರ್-ಫೈನಲ್ ಕೂಡ ನಡೆಯಲಿದೆ.

– ಕ್ವಾರ್ಟರ್-ಫೈನಲ್‌ನಿಂದ ಎರಡು ತಂಡಗಳು ಸೆಮಿ-ಫೈನಲ್‌ಗೆ ಮುನ್ನಡೆಯುತ್ತವೆ, ಅಲ್ಲಿ ಅವರು ಮೊದಲ ಸೆಮಿಫೈನಲ್‌ನಲ್ಲಿ ಕೇಂದ್ರ ವಲಯವನ್ನು ಮತ್ತು ಎರಡನೇ ಸೆಮಿಫೈನಲ್‌ನಲ್ಲಿ ದಕ್ಷಿಣ ವಲಯವನ್ನು ಎದುರಿಸಲಿದ್ದಾರೆ.

– ಸೆಮಿಫೈನಲ್ ಪಂದ್ಯಗಳು ಸೆಪ್ಟೆಂಬರ್ 15 ರಿಂದ 18 ರವರೆಗೆ ಕೊಯಮತ್ತೂರು ಮತ್ತು ಸೇಲಂನಲ್ಲಿ ನಡೆಯಲಿವೆ.

– ದುಲೀಪ್ ಟ್ರೋಫಿ 2022-23 ರ ಫೈನಲ್ ಪಂದ್ಯವು ಕೊಯಮತ್ತೂರಿನಲ್ಲಿ ಸೆಪ್ಟೆಂಬರ್ 21 ರಿಂದ 25 ರವರೆಗೆ ನಡೆಯಲಿದೆ.

– ಈ ದೇಶೀಯ ಪಂದ್ಯಾವಳಿಯ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಬೆಳಿಗ್ಗೆ 9.30 ರಿಂದ ಪ್ರಾರಂಭವಾಗಲಿದೆ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ