AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Emerging Asia Cup 2023: ಕೇವಲ 42 ರನ್​ಗಳಿಗೆ ಆಲೌಟ್: ಶ್ರೀಲಂಕಾಗೆ ಭರ್ಜರಿ ಜಯ

Emerging Teams Asia Cup 2023: ಶ್ರೀಲಂಕಾ ಪರ ಚಾಮಿಕಾ ಕರುಣಾರತ್ನೆ 3 ವಿಕೆಟ್ ಪಡೆದು ಮಿಂಚಿದರೆ, ದುನಿತ್ ವೆಲ್ಲಲಾಗೆ, ಪ್ರಮೋದ್ ಮದುಶನ್ ಹಾಗೂ ಲಹಿರು ಸಮರಕೋನ್ ತಲಾ 2 ವಿಕೆಟ್ ಕಬಳಿಸಿದರು.

Emerging Asia Cup 2023: ಕೇವಲ 42 ರನ್​ಗಳಿಗೆ ಆಲೌಟ್: ಶ್ರೀಲಂಕಾಗೆ ಭರ್ಜರಿ ಜಯ
Sri Lanka A vs Oman A
TV9 Web
| Edited By: |

Updated on: Jul 19, 2023 | 2:59 PM

Share

Emerging Teams Asia Cup 2023: ಉದಯೋನ್ಮುಖ ತಂಡಗಳ ಏಷ್ಯಾ ಕಪ್​ ಟೂರ್ನಿಯ 10 ಪಂದ್ಯದಲ್ಲಿ ಶ್ರೀಲಂಕಾ ಎ ತಂಡವು 217 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಇಲ್ಲಿ ಲಂಕಾ ತಂಡ ಅಮೋಘ ಗೆಲುವಿಗಿಂತ ಹೆಚ್ಚು ಸುದ್ದಿಯಾಗಿರುವುದು ಒಮಾನ್ ಎ ತಂಡದ ಪ್ರದರ್ಶನ. ಏಕೆಂದರೆ ಈ ಪಂದ್ಯದಲ್ಲಿ ಟಾಸ್ ಗೆದ್ದ ಒಮಾನ್ ತಂಡವು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಅದರಂತೆ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಎ ತಂಡದ ಪರ ಪಸಿಂದು ಸೂರಿಯಬಂಡಾರ (60) ಅರ್ಧಶತಕ ಬಾರಿಸಿ ಮಿಂಚಿದರೆ, ಸಹನ್ ಅರಚ್ಚಿಗೆ 48 ರನ್​ಗಳ ಕಾಣಿಕೆ ನೀಡಿದರು. ಈ ಮೂಲಕ ಶ್ರೀಲಂಕಾ ತಂಡವು ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 259 ರನ್ ಕಲೆಹಾಕಿತು.

260 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಒಮಾನ್ ತಂಡವು ಮೊದಲ ಓವರ್​ನಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ಅಲ್ಲಿಂದ ಶುರುವಾದ ಪೆವಿಲಿಯನ್ ಪೆರೇಡ್ ಬಂದು ನಿಂತಿದ್ದು 42 ರನ್​ಗಳಿಗೆ. ಅಂದರೆ 17.1 ಓವರ್​ಗಳಲ್ಲಿ ಕೇವಲ 42 ರನ್​ಗಳಿಸಿ ಒಮಾನ್ ತಂಡವು ಆಲೌಟ್ ಆಗಿತ್ತು.

ಒಮಾನ್ ಪರ ಕಶ್ಯಪ್ ಪ್ರಜಾಪತಿ 18 ರನ್​ಗಳಿಸಿದರೆ, ಸೂರಜ್ ಕುಮಾರ್ 10 ರನ್ ಕಲೆಹಾಕಿದರು. ಇನ್ನುಳಿದವರ ಸ್ಕೋರ್​ ಕಾರ್ಡ್​…0, 1, 1, 0, 6, 2, 0, 2, 1. ಅಂದರೆ 9 ಬ್ಯಾಟರ್​ಗಳು ಜೊತೆಗೂಡಿ ಕಲೆಹಾಕಿದ್ದು ಕೇವಲ 13 ರನ್​ಗಳು ಮಾತ್ರ.

ಇನ್ನು ಶ್ರೀಲಂಕಾ ಪರ ಚಾಮಿಕಾ ಕರುಣಾರತ್ನೆ 3 ವಿಕೆಟ್ ಪಡೆದು ಮಿಂಚಿದರೆ, ದುನಿತ್ ವೆಲ್ಲಲಾಗೆ, ಪ್ರಮೋದ್ ಮದುಶನ್ ಹಾಗೂ ಲಹಿರು ಸಮರಕೋನ್ ತಲಾ 2 ವಿಕೆಟ್ ಕಬಳಿಸಿದರು.

ಶ್ರೀಲಂಕಾ ಪ್ಲೇಯಿಂಗ್ 11: ಅವಿಷ್ಕ ಫೆರ್ನಾಂಡೋ , ಲಸಿತ್ ಕ್ರೂಸ್ಪುಲ್ಲೆ , ಮಿನೋದ್ ಭಾನುಕ (ವಿಕೆಟ್ ಕೀಪರ್) , ಪಸಿಂದು ಸೂರಿಯಬಂಡಾರ , ಸಹನ್ ಅರಚ್ಚಿಗೆ , ಅಶೇನ್ ಬಂಡಾರ , ದುನಿತ್ ವೆಲ್ಲಲಾಗೆ (ನಾಯಕ) , ಚಾಮಿಕ ಕರುಣಾರತ್ನೆ , ದುಶನ್ ಹೇಮಂತ , ಪ್ರಮೋದ್ ಮಧುಶನ್ , ಲಹಿರು ಸಮರಕೋನ್.

ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾಗೆ 3 ಗುಡ್​ ನ್ಯೂಸ್

ಒಮಾನ್ ಪ್ಲೇಯಿಂಗ್ 11: ಕಶ್ಯಪ್ ಪ್ರಜಾಪತಿ , ಜತೀಂದರ್ ಸಿಂಗ್ , ಅಕಿಬ್ ಇಲ್ಯಾಸ್ (ನಾಯಕ) , ಅಯಾನ್ ಖಾನ್ , ಶೋಯೆಬ್ ಖಾನ್ , ವಾಸಿಂ ಅಲಿ , ಸೂರಜ್ ಕುಮಾರ್ (ವಿಕೆಟ್ ಕೀಪರ್) , ರಫಿಯುಲ್ಲಾ , ಸಮಯ್ ಶ್ರೀವಾಸ್ತವ , ಜೇ ಒಡೆದ್ರಾ , ಕಲೀಮುಲ್ಲಾ.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ