AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ENG vs SA: ರಾಷ್ಟ್ರಗೀತೆಯಲ್ಲಿ ಬದಲಾವಣೆ; ಒಂದು ನಿಮಿಷದ ಮೌನಾಚರಣೆ ಬಳಿಕ 3 ದಿನಗಳ ಟೆಸ್ಟ್ ಆರಂಭ

ENG vs SA: ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ದಿನಗಳ ಟೆಸ್ಟ್ ಪಂದ್ಯ ಶನಿವಾರ ಆರಂಭವಾಗಿದೆ. ಈ ಸಮಯದಲ್ಲಿ ಇಡೀ ಇಂಗ್ಲೆಂಡ್ ರಾಣಿ ಎಲಿಜಬೆತ್ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸುತ್ತಿದೆ.

ENG vs SA: ರಾಷ್ಟ್ರಗೀತೆಯಲ್ಲಿ ಬದಲಾವಣೆ; ಒಂದು ನಿಮಿಷದ ಮೌನಾಚರಣೆ ಬಳಿಕ 3 ದಿನಗಳ ಟೆಸ್ಟ್ ಆರಂಭ
TV9 Web
| Edited By: |

Updated on: Sep 10, 2022 | 7:44 PM

Share

ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ದಿನಗಳ ಟೆಸ್ಟ್ ಪಂದ್ಯ (Test match) ಶನಿವಾರ ಆರಂಭವಾಗಿದೆ. ಈ ಸಮಯದಲ್ಲಿ ಇಡೀ ಇಂಗ್ಲೆಂಡ್ ರಾಣಿ ಎಲಿಜಬೆತ್ (Queen Elizabeth) ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸುತ್ತಿದೆ. ಇದೇ ವೇಳೆ ಪಂದ್ಯದಲ್ಲಿ ಆಟಗಾರರು ಕೂಡ ತಮ್ಮದೇ ಶೈಲಿಯಲ್ಲಿ ರಾಣಿಗೆ ನಮನ ಸಲ್ಲಿಸಿದರು. ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಿರ್ಣಾಯಕ ಕ್ರಿಕೆಟ್ ಟೆಸ್ಟ್ ಮೂರು ದಿನಗಳ ಪಂದ್ಯವಾಗಿ ಬದಲಾಗಿದೆ. ಮಳೆಯ ನಂತರ ಎರಡನೇ ದಿನ (ಶುಕ್ರವಾರ) ರಾಣಿ ಎಲಿಜಬೆತ್ II ನಿಧನದ ನಂತರ ಮೊದಲ ದಿನ (ಗುರುವಾರ) ಪಂದ್ಯವನ್ನು ರದ್ದುಗೊಳಿಸಲಾಯಿತು. ದಕ್ಷಿಣ ಆಫ್ರಿಕಾ ತಂಡಕ್ಕೆ ಸಮಯಕ್ಕೆ ಸರಿಯಾಗಿ ದೇಶಕ್ಕೆ ಮರಳುವ ಶರತ್ತು ವಿಧಿಸಿದ್ದರಿಂದ ಪಂದ್ಯವನ್ನು ಮೂರು ದಿನಕ್ಕೆ ನಿಗದಿಪಡಿಸಲಾಗಿದೆ.

ಕಪ್ಪು ಪಟ್ಟಿ ಧರಿಸಿದ ಆಟಗಾರರು

ರಾಣಿಯ ಗೌರವಾರ್ಥ ಆಟಗಾರರು ಮತ್ತು ತರಬೇತುದಾರರು ಕಪ್ಪು ಬ್ಯಾಂಡ್ ಧರಿಸುತ್ತಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಈಗಾಗಲೇ ತಿಳಿಸಿತ್ತು. ಪಂದ್ಯದಲ್ಲಿ ಸಮಯದಲ್ಲಿ ಹಾಗೆಯೇ ಆಯಿತು. ಇದೇ ವೇಳೆ ಎಲ್ಲರೂ ಒಂದು ನಿಮಿಷ ಮೌನ ಆಚರಿಸಿದರು. ಇದಾದ ನಂತರ ಕಾರ್ಯಕ್ರಮದಲ್ಲಿ ಗಾಡ್ ಸೇವ್ ದಿ ಕಿಂಗ್ ಎಂಬ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ರಾಣಿಯ ಮರಣದ ನಂತರ, ದೇಶದ ರಾಷ್ಟ್ರಗೀತೆಯನ್ನು ಬದಲಾಯಿಸಲಾಗಿದ್ದು, ಇದಕ್ಕೂ ಮುನ್ನ ಇದ್ದ ‘ಗಾಡ್ ಸೇವ್ ಕ್ವೀನ್’ ಸಾಲನ್ನು ‘ಗಾಡ್ ಸೇವ್ ಕಿಂಗ್’ ಎಂದು ಬದಲಾಯಿಸಲಾಗಿದೆ. ಈ ವೇಳೆ ಎರಡೂ ತಂಡಗಳ ಆಟಗಾರರು ಹೆಗಲ ಮೇಲೆ ಕೈಹೊತ್ತು ನಿಂತಿರುವುದು ಕಂಡು ಬಂತು.

ಎಲ್ಲಾ ಕ್ರೀಡಾಕೂಟಗಳನ್ನು ರದ್ದುಗೊಳಿಸಿದ ಇಂಗ್ಲೆಂಡ್

ರಾಣಿ ಎಲಿಜಬೆತ್ II ತನ್ನ 96 ನೇ ವಯಸ್ಸಿನಲ್ಲಿ ನಿಧನರಾದ ನಂತರ ಬ್ರಿಟನ್‌ನಲ್ಲಿ ಅನೇಕ ಕ್ರೀಡಾಕೂಟಗಳನ್ನು ರದ್ದುಗೊಳಿಸಲಾಯಿತು. ರಾಣಿಯ ಸಾವಿನ ಸುದ್ದಿ ಹೊರಬಿದ್ದ ಕೂಡಲೇ BMW PGA ಚಾಂಪಿಯನ್‌ಶಿಪ್‌ನಲ್ಲಿ ದಿನದ ಆಟವನ್ನು ನಿಲ್ಲಿಸಲಾಯಿತು. ಈ ಗಾಲ್ಫ್ ಕೋರ್ಸ್ ಶುಕ್ರವಾರವೂ ಆಟವನ್ನು ರದ್ದುಗೊಳಿಸಿದೆ. ಓವಲ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯವನ್ನು ಸಹ ಶುಕ್ರವಾರ ನಿಲ್ಲಿಸಲಾಗುವುದು ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ತಿಳಿಸಿತ್ತು.

ಇದಲ್ಲದೆ, ಬ್ರಿಟನ್‌ನಲ್ಲಿ ಕುದುರೆ ರೇಸಿಂಗ್ ಮತ್ತು ರಗ್ಬಿ ಪಂದ್ಯಗಳನ್ನು ಸಹ ರದ್ದುಗೊಳಿಸಲಾಗಿದೆ. ಶುಕ್ರವಾರದ ರೇಸ್ ಅನ್ನು ರದ್ದುಗೊಳಿಸಲಾಗಿದೆ ಎಂದು ಬ್ರಿಟನ್‌ನಲ್ಲಿ ಸೈಕ್ಲಿಂಗ್ ಪ್ರವಾಸದ ಸಂಘಟಕರು ತಿಳಿಸಿದ್ದಾರೆ. ಪ್ರೀಮಿಯರ್ ಲೀಗ್‌ನ ಕೆಳಗೆ ಮೂರು ವಿಭಾಗಗಳನ್ನು ನಿರ್ವಹಿಸುವ ಇಂಗ್ಲಿಷ್ ಫುಟ್‌ಬಾಲ್ ಲೀಗ್ ಶುಕ್ರವಾರ ಸಂಜೆ ನಿಗದಿಯಾಗಿದ್ದ ಪಂದ್ಯಗಳನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದೆ.

ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ