Asia Cup 2023: ಭಾರತದ ಈ ಆಟಗಾರ ಏಷ್ಯಾಕಪ್ ತಂಡದಲ್ಲಿರಬೇಕಿತ್ತು ಎಂದ ಹರ್ಭಜನ್ ಸಿಂಗ್

Asia Cup 2023: ಚಹಲ್ ತಂಡದಲ್ಲಿರಬೇಕು ಎಂಬುದನ್ನು ಪ್ರತಿಪಾದಿಸಿರುವ ಹರ್ಭಜನ್ ಸಿಂಗ್,‘ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಯುಜುವೇಂದ್ರ ಚಹಾಲ್ ಭಾರತದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರು. ಹೀಗಾಗಿ ಭಾರತ ತಂಡದ ಮ್ಯಾನೇಜ್‌ಮೆಂಟ್ ಅವರನ್ನು ಏಷ್ಯಾಕಪ್ ತಂಡದಲ್ಲಿ ಇರಿಸದೆ ತಪ್ಪು ಮಾಡಿದೆ ಎಂದಿದ್ದಾರೆ.

Asia Cup 2023: ಭಾರತದ ಈ ಆಟಗಾರ ಏಷ್ಯಾಕಪ್ ತಂಡದಲ್ಲಿರಬೇಕಿತ್ತು ಎಂದ ಹರ್ಭಜನ್ ಸಿಂಗ್
ಹರ್ಭಜನ್ ಸಿಂಗ್, ಟೀಂ ಇಂಡಿಯಾ
Follow us
|

Updated on:Aug 25, 2023 | 3:23 PM

ಏಷ್ಯಾಕಪ್‌ಗೆ (Asia Cup 2023) ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ವಿಶ್ವಕಪ್​ಗೂ ಮುನ್ನ ಈ ಈವೆಂಟ್ ನಡೆಯುತ್ತಿರುವುದರಿಂದ ಈ ಟೂರ್ನಿಗೆ ಆಯ್ಕೆಯಾದ ಆಟಗಾರರೇ ವಿಶ್ವಕಪ್​ನಲ್ಲೂ (ODI World Cup 2023) ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ಈಗ ಆಯ್ಕೆಯಾಗಿರುವ 17 ಸದಸ್ಯರ ತಂಡದಲ್ಲೂ ಕೂಡ ಬಹುಪಾಲು ನಿರೀಕ್ಷಿತ ಹೆಸರುಗಳೆ ಸೇರಿವೆ. ಆದರೆ ಇನ್ನೂ ಕೆಲವು ಆಟಗಾರರ ಹೆಸರು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಅಂತಹವರಲ್ಲಿ ಪ್ರಮುಖರು ಯುಜ್ವೇಂದ್ರ ಚಹಲ್ (Yuzvendra Chahal). ಈ ಮೊದಲು ಏಷ್ಯಾಕಪ್ ತಂಡದಲ್ಲಿ ಚಹಲ್​ಗೆ ಸ್ಥಾನ ಖಚಿತ ಎಂದೇ ಹೇಳಲಾಗಿತ್ತು. ಆದರೆ ತಂಡದಲ್ಲಿ ಸ್ಪಿನ್ ಜೊತೆಗೆ ಬ್ಯಾಟಿಂಗ್ ಮಾಡುವ ಆಟಗಾರನಿಗೆ ಮ್ಯಾನೆಜ್​ಮೆಂಟ್ ಮಣೆ ಹಾಕಿರುವುದರಿಂದ ಚಹಲ್​ಗೆ ಅವಕಾಶ ನೀಡಲಾಗಿಲ್ಲ.​ ಇದೀಗ ಚಹಲ್​ರನ್ನು ತಂಡದಿಂದ ಹೊರಗಿಟ್ಟಿರುವ ಬಗ್ಗೆ ಹಲವು ಮಾಜಿ ಆಟಗಾರರು ತಮ್ಮ ಅಸಮಾಧಾನ ಹೊರಹಾಕಿದ್ದು, ಟರ್ಬನೇಟರ್ ಖ್ಯಾತಿಯ ಹರ್ಭಜನ್ ಸಿಂಗ್ (Harbhajan Singh) ಕೂಡ ಚಹಲ್ ಪರ ಬ್ಯಾಟ್ ಬೀಸಿದ್ದಾರೆ.

ಅವರಿಗಿಂತ ಉತ್ತಮ ಸ್ಪಿನ್ನರ್ ಇಲ್ಲ

ಚಹಲ್ ತಂಡದಲ್ಲಿರಬೇಕು ಎಂಬುದನ್ನು ಪ್ರತಿಪಾದಿಸಿರುವ ಹರ್ಭಜನ್ ಸಿಂಗ್,‘ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಯುಜುವೇಂದ್ರ ಚಹಾಲ್ ಭಾರತದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರು. ಹೀಗಾಗಿ ಭಾರತ ತಂಡದ ಮ್ಯಾನೇಜ್‌ಮೆಂಟ್ ಅವರನ್ನು ಏಷ್ಯಾಕಪ್ ತಂಡದಲ್ಲಿ ಇರಿಸದೆ ತಪ್ಪು ಮಾಡಿದೆ. ಭಾರತ ತಂಡ ಅವರನ್ನು ಮಿಸ್ ಮಾಡಿಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ವೈಟ್ ಬಾಲ್ ಫಾರ್ಮ್ಯಾಟ್‌ನಲ್ಲಿ ಇದೀಗ ಭಾರತದಲ್ಲಿ ಅವರಿಗಿಂತ ಉತ್ತಮ ಸ್ಪಿನ್ನರ್ ಇದ್ದಾರೆ ಎಂಬುದು ನನ್ನ ಪ್ರಕಾರ ಅನುಮಾನವಾಗಿದೆ. ಹೌದು ಅವರು ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ ನಿಜ. ಆದರೆ ಕೆಲವು ಪಂದ್ಯಗಳಲ್ಲಿ ನೀಡಿದ ಕಳಪೆ ಪ್ರದರ್ಶನ ಅವರನ್ನು ಕೆಟ್ಟ ಬೌಲರ್ ಆಗಿ ಮಾಡುವುದಿಲ್ಲ’ ಎಂದಿದ್ದಾರೆ.

Asia Cup 2023: ಯುಜ್ವೇಂದ್ರ ಚಾಹಲ್​ರನ್ನು ತಂಡದಿಂದ ಕೈಬಿಟ್ಟಿದ್ಯಾಕೆ? ಕಾರಣ ನೀಡಿದ ರೋಹಿತ್

ಅವರು ಉತ್ತಮ ಫಾರ್ಮ್‌ನಲ್ಲಿಲ್ಲ

ಚಹಲ್ ತಂಡದಲ್ಲಿ ಇರಬೇಕಿತ್ತು. ಅದಾಗ್ಯೂ ಚಹಲ್​ಗೆ ತಂಡಕ್ಕೆ ಮರಳಲು ಬಾಗಿಲು ಮುಚ್ಚಿಲ್ಲ ಎಂದು ನಾನು ಭಾವಿಸುತ್ತೇನೆ. ಏಕದಿನ ವಿಶ್ವಕಪ್ ಭಾರತದ ನೆಲದಲ್ಲಿ ನಡೆಯಲಿದೆ. ಹಾಗಾಗಿ ಚಹಲ್ ವಿಶ್ವಕಪ್​ಗೆ ಖಂಡಿತವಾಗಿಯೂ ತಂಡಕ್ಕೆ ಅಗತ್ಯವಾಗಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಚಹಲ್ ಈಗಾಗಲೇ ತಾನೊಬ್ಬ ಮ್ಯಾಚ್ ವಿನ್ನರ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರು ಉತ್ತಮ ಫಾರ್ಮ್‌ನಲ್ಲಿಲ್ಲ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಹಾಗಾಗಿ ಅವರಿಗೆ ವಿಶ್ರಾಂತಿ ನೀಡಿರಬಹುದು. ಆದರೆ ಅವರು ತಂಡದಲ್ಲಿದ್ದರೆ, ಅವರ ಆತ್ಮವಿಶ್ವಾಸ ಹೆಚ್ಚಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಹರ್ಭಜನ್ ಹೇಳಿದ್ದಾರೆ.

ಅಗರ್ಕರ್ ಹೇಳಿದ್ದೇನು?

ಹರ್ಭಜನ್​ಗೂ ಮುನ್ನ, ಏಷ್ಯಾಕಪ್ ತಂಡವನ್ನು ಪ್ರಕಟಿಸಿದಾಗ ಯುಜ್ವೇಂದ್ರ ಚಹಲ್​ ತಂಡದಲ್ಲಿ ಇಲ್ಲದಿರುವ ಬಗ್ಗೆ ಪ್ರತಿಕ್ರಿಯಿಸಿದ್ದ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್, ‘ಚಹಲ್ ನಿಸ್ಸಂದೇಹವಾಗಿ ಅತ್ಯುತ್ತಮ ಕ್ರಿಕೆಟಿಗ. ನಮಗೆ ಸಮತೋಲಿತ ತಂಡ ಬೇಕು. ಹೀಗಾಗಿ ಇಬ್ಬರು ಮಣಿಕಟ್ಟಿನ ಸ್ಪಿನ್ನರ್‌ಗಳನ್ನು ತಂಡದಲ್ಲಿ ಆಯ್ಕೆ ಮಾಡುವುದು ಕಷ್ಟದ ವಿಚಾರ ಹೀಗಾಗಿ ನಾವು ಪ್ರಸ್ತುತ ಉತ್ತಮ ಫಾರ್ಮ್​ನಲ್ಲಿರುವ ಕುಲ್ದೀಪ್​ಗೆ ಅವಕಾಶ ನೀಡಿದ್ದೇವೆ’ ಎಂದಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:22 pm, Fri, 25 August 23