AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs IRE 3rd T20 Live Score: ಭಾರತ-ಐರ್ಲೆಂಡ್ 3ನೇ ಟಿ20 ಪಂದ್ಯ ರದ್ದು

India vs Ireland T20 Cricket Match Livescore Updates: ಈ ಸರಣಿಯ ಮೊದಲ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ 2 ರನ್​ಗಳಿಂದ ಜಯ ಸಾಧಿಸಿತ್ತು. ಇನ್ನು 2ನೇ ಪಂದ್ಯದಲ್ಲಿ 33 ರನ್​ಗಳಿಂದ ಗೆಲುವು ದಾಖಲಿಸಿ ಸರಣಿ ವಶಪಡಿಸಿಕೊಂಡಿತು. ಇದೀಗ ಮೂರನೇ ಪಂದ್ಯ ರದ್ದಾದ ಕಾರಣ 2-0 ಅಂತರದಿಂದ ಟೀಮ್ ಇಂಡಿಯಾ ಸರಣಿ ಗೆದ್ದುಕೊಂಡಿದೆ.

IND vs IRE 3rd T20 Live Score: ಭಾರತ-ಐರ್ಲೆಂಡ್ 3ನೇ ಟಿ20 ಪಂದ್ಯ ರದ್ದು
IND vs IRE
TV9 Web
| Edited By: |

Updated on:Aug 23, 2023 | 11:11 PM

Share

IND vs IRE 3rd T20: ಡಬ್ಲಿನ್​ ಮಲಾಹೈಡ್​ನಲ್ಲಿ ನಡೆಯಬೇಕಿದ್ದ ಭಾರತ-ಐರ್ಲೆಂಡ್ ನಡುವಣ ಮೂರನೇ ಟಿ20 ಪಂದ್ಯ ಮಳೆಯ ಕಾರಣ ರದ್ದಾಗಿದೆ. ಮೂರು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ 2 ರನ್​ಗಳಿಂದ ಜಯ ಸಾಧಿಸಿತ್ತು. ಇನ್ನು 2ನೇ ಪಂದ್ಯದಲ್ಲಿ 33 ರನ್​ಗಳಿಂದ ಗೆಲುವು ದಾಖಲಿಸಿ ಸರಣಿ ವಶಪಡಿಸಿಕೊಂಡಿತು. ಇದೀಗ ಮೂರನೇ ಪಂದ್ಯ ರದ್ದಾದ ಕಾರಣ 2-0 ಅಂತರದಿಂದ ಟೀಮ್ ಇಂಡಿಯಾ ಸರಣಿ ಗೆದ್ದುಕೊಂಡಿದೆ.

ಐರ್ಲೆಂಡ್ ತಂಡ: ಆಂಡ್ರ್ಯೂ ಬಾಲ್ಬಿರ್ನಿ, ಪಾಲ್ ಸ್ಟಿರ್ಲಿಂಗ್ (ನಾಯಕ), ಲೋರ್ಕನ್ ಟಕರ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಬ್ಯಾರಿ ಮೆಕ್​ಕಾರ್ಥಿ, ಕ್ರೇಗ್ ಯಂಗ್, ಜೋಶುವಾ ಲಿಟಲ್, ಬೆಂಜಮಿನ್ ವೈಟ್, ಫಿಯಾನ್ ಹ್ಯಾಂಡ್, ಥಿಯೋ ವ್ಯಾನ್ ವೋರ್ಕಾಮ್, ಗೆರೆತ್ ಡೆಲಾನಿ, ರಾಸ್ ಅಡೈರ್.

ಭಾರತ ತಂಡ: ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ(ನಾಯಕ), ರವಿ ಬಿಷ್ಣೋಯ್, ಅವೇಶ್ ಖಾನ್, ಜಿತೇಶ್ ಶರ್ಮಾ, ಮುಖೇಶ್ ಕುಮಾರ್ , ಶಹಬಾಝ್ ಅಹಮದ್.

LIVE NEWS & UPDATES

The liveblog has ended.
  • 23 Aug 2023 10:30 PM (IST)

    ಭಾರತ-ಐರ್ಲೆಂಡ್ 3ನೇ ಟಿ20 ಪಂದ್ಯ ರದ್ದು

    ಮಳೆಯ ಕಾರಣ ಭಾರತ-ಐರ್ಲೆಂಡ್ ನಡುವಣ 3ನೇ ಟಿ20 ಪಂದ್ಯವನ್ನು ರದ್ದುಗೊಳಿಸಲಾಗಿದೆ. 3 ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿದ್ದ ಭಾರತ ತಂಡವು ಸರಣಿ ಗೆದ್ದುಕೊಂಡಿದೆ.

  • 23 Aug 2023 10:16 PM (IST)

    ಸ್ಥಗಿತಗೊಂಡ ಮಳೆ

    ಡಬ್ಲಿನ್​ನಲ್ಲಿ ಮಳೆ ನಿಂತಿದ್ದು, ಇದೀಗ ಮೈದಾನದಲ್ಲಿ ಹಾಕಲಾದ ಟರ್ಪಲ್​ನ್ನು ಸರಿಸಲಾಗುತ್ತಿದೆ. ಅಲ್ಲದೆ ಅಂಪೈರ್ ಪಿಚ್ ಪರಿಶೀಲಿಸಿ ಪಂದ್ಯ ಆಯೋಜಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

  • 23 Aug 2023 09:32 PM (IST)

    ನಿರಂತರ ಮಳೆ

    ಡಬ್ಲಿನ್​ನಲ್ಲಿ ಮಳೆ ಮುಂದುವರೆದಿದ್ದು, ಪಂದ್ಯ ಆಯೋಜನೆ ಸಾಧ್ಯನಾ ಎಂದು ಪರಿಶೀಲಿಸಲು ಅಂಪೈರ್ ನಿರ್ಧರಿಸಿದ್ದಾರೆ. 20 ನಿಮಿಷಗಳ ಬಳಿಕ ಮೈದಾನದ ಮೇಲ್ಮೈ ಪರಿಶೀಲು ಅಂಪೈರ್​ಗಳು ಮುಂದಾಗಲಿದ್ದಾರೆ ಎಂದು ಐರ್ಲೆಂಡ್ ಕ್ರಿಕೆಟ್ ಟ್ವೀಟ್ ಮಾಡಿದೆ.

  • 23 Aug 2023 09:12 PM (IST)

    ಕಟ್​ ಆಫ್ ಟೈಮ್ 9.15

    ಭಾರತೀಯ ಕಾಲಮಾನ ರಾತ್ರಿ 9.25 ರೊಳಗೆ ಪಂದ್ಯ ಶುರುವಾಗದಿದ್ದರೆ ಓವರ್​ ಕಡಿತ ಪ್ರಾರಂಭವಾಗಲಿದೆ. ಅಂದರೆ 9.15 ರ ಬಳಿಕ ಪ್ರತಿ 5 ನಿಮಿಷಗಳಿಗೆ ಇಂತಿಷ್ಟು ಓವರ್​ಗಳನ್ನು ಕಡಿಮೆಗೊಳಿಸಲಾಗುತ್ತದೆ. ಹೀಗಾಗಿ ಇನ್ನು ಪಂದ್ಯ ಶುರುವಾದರೂ ಕಡಿಮೆ ಓವರ್​ನ ಮ್ಯಾಚ್ ನಡೆಯಲಿದೆ.

  • 23 Aug 2023 08:37 PM (IST)

    ಪಂದ್ಯಕ್ಕೆ ಮಳೆ ಅಡ್ಡಿ

    ಭಾರತ-ಐರ್ಲೆಂಡ್ ನಡುವಣ ಮೂರನೇ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಭಾರತೀಯ ಕಾಲಮಾನ 7.30 ರಿಂದ ಶುರುವಾಗಬೇಕಿದ್ದ ಪಂದ್ಯವು ಮಳೆಯ ಕಾರಣ ವಿಳಂಬವಾಗಿದೆ. ಇನ್ನು ಮಳೆ ನಿಂತ ಬಳಿಕ ಪಂದ್ಯ ಆರಂಭಿಸಿದರೆ ಓವರ್ ಕಡಿತ ಮಾಡುವ ಸಾಧ್ಯತೆಯಿದೆ.

  • 23 Aug 2023 08:12 PM (IST)

    ಮುಂದುವರೆದ ತುಂತುರು ಮಳೆ

  • 23 Aug 2023 07:02 PM (IST)

    ಭಾರತ-ಐರ್ಲೆಂಡ್ 3ನೇ ಟಿ20: ಟಾಸ್ ಪ್ರಕ್ರಿಯೆ ವಿಳಂಬ

    ಡಬ್ಲಿನ್ ಭಾಗದಲ್ಲಿ ಮಳೆಯಾಗುತ್ತಿದ್ದು, ಹೀಗಾಗಿ ಭಾರತ-ಐರ್ಲೆಂಡ್ ನಡುವಣ ಪಂದ್ಯದ ಟಾಸ್ ಪ್ರಕ್ರಿಯೆ ವಿಳಂಬವಾಗಿದೆ.

  • 23 Aug 2023 06:24 PM (IST)

    ಚಂದ್ರಯಾನ-3ರ ಯಶಸ್ಸನ್ನು ಸಂಭ್ರಮಿಸಿದ ಟೀಮ್ ಇಂಡಿಯಾ

    ಚಂದ್ರಯಾನ ಮಿಷನ್ ಚಂದ್ರನ ಮೇಲೆ ಕಾಲಿಟ್ಟ ಸುದ್ದಿಯನ್ನು ನೋಡಿ ಸಂಭ್ರಮಿಸಿದ ಭಾರತ ತಂಡ

  • 23 Aug 2023 06:19 PM (IST)

    ಮಲಾಹೈಡ್ ಮೈದಾನಕ್ಕೆ ಸ್ವಾಗತ

  • 23 Aug 2023 05:38 PM (IST)

    ಭಾರತ-ಐರ್ಲೆಂಡ್ 3ನೇ ಟಿ20 ಪಂದ್ಯ

    ಇಂಡಿಯಾ-ಐರ್ಲೆಂಡ್ ನಡುವಣ 3ನೇ ಟಿ20 ಪಂದ್ಯ ಡಬ್ಲಿನ್​ನ ಮಲಾಹೈಡ್ ಮೈದಾನದಲ್ಲಿ ನಡೆಯಲಿದೆ.

    ರಾತ್ರಿ 7.30 ರಿಂದ ಪಂದ್ಯ ಶುರುವಾಗಲಿದ್ದು, 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.

Published On - Aug 23,2023 5:36 PM

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ