AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: 3ನೇ ಪಂದ್ಯದಲ್ಲೂ ಅದೇ ಕಥೆ; ಕ್ಯಾಚ್ ಹಿಡಿಯುವುದನ್ನು ಮರೆತಿರುವ ಟೀಂ ಇಂಡಿಯಾ

Team India's Dropped Catches: ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ಕ್ರಿಕೆಟ್ ತಂಡದ ಫೀಲ್ಡಿಂಗ್ ದೋಷಗಳು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದುವರೆಗೆ ಆಡಿರುವ ಮೂರು ಇನ್ನಿಂಗ್ಸ್‌ಗಳಲ್ಲಿ 13 ಕ್ಯಾಚ್‌ಗಳು ಕೈಚೆಲ್ಲಲ್ಪಟ್ಟಿವೆ. ಲೀಡ್ಸ್‌ನಲ್ಲಿನ ಸೋಲು ಕಳಪೆ ಫೀಲ್ಡಿಂಗ್‌ನ ಪರಿಣಾಮವೇ ಆಗಿತ್ತು. ಇದೀಗ ಮೂರನೇ ಟೆಸ್ಟ್​ನಲ್ಲೂ ಟೀಂ ಇಂಡಿಯಾ ಕ್ಯಾಚ್ ಕೈಚೆಲ್ಲುವ ಕಯಾಲಿಯನ್ನು ಮುಂದುವರೆಸಿದೆ.

IND vs ENG: 3ನೇ ಪಂದ್ಯದಲ್ಲೂ ಅದೇ ಕಥೆ; ಕ್ಯಾಚ್ ಹಿಡಿಯುವುದನ್ನು ಮರೆತಿರುವ ಟೀಂ ಇಂಡಿಯಾ
Team India
ಪೃಥ್ವಿಶಂಕರ
|

Updated on:Jul 11, 2025 | 6:17 PM

Share

ಕ್ರಿಕೆಟ್​ನಲ್ಲಿ ಕ್ಯಾಚ್ ಹಿಡಿಯುವುದು ಎಷ್ಟು ಮುಖ್ಯ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. 1983 ರ ವಿಶ್ವಕಪ್​ನಲ್ಲಿ ಕಪಿಲ್ ದೇವ್ ಹಿಡಿದಿದ್ದ ಅದೊಂದು ಕ್ಯಾಚ್ ಟೀಂ ಇಂಡಿಯಾಕ್ಕೆ (Team India) ಮೊದಲ ವಿಶ್ವಕಪ್ ತಂದುಕೊಟ್ಟಿದ್ದನ್ನು ನಾವ್ಯಾರು ಮರೆಯುವಂತಿಲ್ಲ. ಅದೇ ವೇಳೆ ಕೈಚೆಲ್ಲಿದ ಕ್ಯಾಚ್​ನಿಂದಾಗಿ ಅದೇಷ್ಟೋ ಪಂದ್ಯಗಳಲ್ಲಿ ತಂಡಗಳು ಸೋತಿರುವುದನ್ನು ನಾವು ನೋಡಿದ್ದೇವೆ. ಹೀಗಿರುವಾಗ ಇಂಗ್ಲೆಂಡ್‌ ನೆಲದಲ್ಲಿ ಟೀಂ ಇಂಡಿಯಾ ಆಟಗಾರರು ಕೈಗೆ ಎಣ್ಣೆ ಹಚ್ಚಿಕೊಂಡು ಫೀಲ್ಡಿಂಗ್ ಮಾಡುತ್ತಿದ್ದಾರಾ ಎಂಬ ಅನುಮಾನ ಅಭಿಮಾನಿಗಳದ್ದು, ಇದಕ್ಕೆ ಕಾರಣವೂ ಇದೇ. ಇಂಗ್ಲೆಂಡ್‌ ಪ್ರವಾಸದಲ್ಲಿ (England tour 2025) ಇದುವರೆಗೆ ಮೂರು ಪಂದ್ಯಗಳನ್ನಾಡಿರುವ (ಲಾರ್ಡ್ಸ್‌ ಟೆಸ್ಟ್ ಸೇರಿ) ಟೀಂ ಇಂಡಿಯಾ ಮೂರು ಇನ್ನಿಂಗ್ಸ್​ಗಳಲ್ಲಿ ಫೀಲ್ಡಿಂಗ್ ಮಾಡಿದೆ. ಈ ಮೂರು ಇನ್ನಿಂಗ್ಸ್​ಗಳಲ್ಲಿ ಟೀಂ ಇಂಡಿಯಾ ಕೈಬಿಟ್ಟಿದ್ದು, ಬರೋಬ್ಬರಿ 13 ಕ್ಯಾಚ್. ಇದರಲ್ಲಿ ಒಂದೆರೆಡು ಕ್ಯಾಚ್​ಗಳು ಕಷ್ಟಕರವಾಗಿದ್ದೋ ಎನ್ನುವುದನ್ನು ಬಿಟ್ಟರೆ, ಉಳಿದ ಕ್ಯಾಚ್​ಗಳು ಒಬ್ಬ ವೃತ್ತಿಪರ ಕ್ರಿಕೆಟಿಗನ ಕೈನಿಂದ ಜಾರುವ ಕ್ಯಾಚ್​ಗಳಾಗಿರಲಿಲ್ಲ. ಹೀಗಿರುವಾಗ ಟೀಂ ಇಂಡಿಯಾದ ಫೀಲ್ಡರ್​ಗಳು ಮಾತ್ರ ಪದೇ ಪದೇ ಒಂದೇ ತಪ್ಪನ್ನು ಮಾಡುತ್ತಾ ಬೌಲರ್​ಗಳ ತಾಳ್ಮೆ ಪರೀಕ್ಷಿಸುತ್ತಿದ್ದಾರೆ.

ಮೊದಲ ಟೆಸ್ಟ್​ನಲ್ಲಿ 8 ಕ್ಯಾಚ್ ಡ್ರಾಪ್

ಲೀಡ್ಸ್​ ಟೆಸ್ಟ್​ನಿಂದ ಟೀಂ ಇಂಡಿಯಾದ ಇಂಗ್ಲೆಂಡ್‌ ಪ್ರವಾಸ ಶುರುವಾಯಿತು. ಅದೃಷ್ಟವೆಂಬಂತೆ ಈ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್‌ ವಿಭಾಗ ಭರ್ಜರಿ ಪ್ರದರ್ಶನ ನೀಡಿತ್ತು. ಆದರೆ ಬೌಲಿಂಗ್​ ವಿಭಾಗದಲ್ಲಿ ಬುಮ್ರಾರನ್ನು ಬಿಟ್ಟರೆ ಉಳಿದವರಿಂದ ಪರಿಣಾಮಕಾರಿ ಬೌಲಿಂಗ್ ಮೂಡಿಬರಲಿಲ್ಲ. ಇನ್ನು ಫೀಲ್ಡಿಂಗ್ ವಿಚಾರಕ್ಕೆ ಬರುವುದಾದರೆ, ಭಾರತ ಲೀಡ್ಸ್ ಟೆಸ್ಟ್ ಸೋಲುವುದಕ್ಕೆ ಕಳಪೆ ಫೀಲ್ಡಿಂಗ್‌ ಕಾರಣ ಎಂದರೆ ತಪ್ಪಾಗಲಾರದು. ಮೊದಲ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಏಳರಿಂದ ಎಂಟು ಕ್ಯಾಚ್​ಗಳನ್ನು ಕೈಚೆಲ್ಲಿತು. ಇದರ ಜೀವದಾನ ಪಡೆದ ಇಂಗ್ಲೆಂಡ್​ನ ಅಷ್ಟೂ ಬ್ಯಾಟ್ಸ್‌ಮನ್​ಗಳ ರನ್​ಗಳ ಗುಡ್ಡೆ ಹಾಕಿದ್ದರು. ಇದರ ಫಲವಾಗಿ ಇಂಗ್ಲೆಂಡ್‌ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದರೆ, ಇತ್ತ ಟೀಂ ಇಂಡಿಯಾ ಸೋಲಿಗೆ ಕೊರಳೊಡ್ಡಬೇಕಾಯಿತು.

ಎರಡನೇ ಟೆಸ್ಟ್​ನಲ್ಲಿ 3 ಕ್ಯಾಚ್ ಮಿಸ್

ಮೊದಲ ಟೆಸ್ಟ್ ಕಥೆ ಮುಗಿಯಿತು, ಎರಡನೇ ಟೆಸ್ಟ್​ನಲ್ಲಾದರೂ ಆಟಗಾರರು ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ 2ನೇ ಟೆಸ್ಟ್​ನಲ್ಲಿ ಕೈಚೆಲ್ಲಿದ ಕ್ಯಾಚ್​ಗಳ ಸಂಖ್ಯೆ ಕಡಿಮೆಯಾಗಿತ್ತೇ ಹೊರತು, ಅಲ್ಲೂ ಕೂಡ ಕ್ಯಾಚ್ ಬಿಡುವ ಪ್ರವೃತ್ತಿ ಮುಂದುವರೆದಿತ್ತು. 2ನೇ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಮೂರು ಕ್ಯಾಚ್​ಗಳನ್ನು ಕೈಬಿಟ್ಟಿತ್ತು. ಇಲ್ಲೂ ಸಹ ಜೀವದಾನದ ಲಾಭ ಪಡೆದ ಆಂಗ್ಲ ಆಟಗಾರರು ಬಿಗ್ ಇನ್ನಿಂಗ್ಸ್ ಆಡಿದರಾದರೂ, ಬೌಲಿಂಗ್ ವಿಭಾಗ ತಂಡದ ಕೈಹಿಡಿಯಿತು. ಅಂತಿಮವಾಗಿ ಟೀಂ ಇಂಡಿಯಾ ಜಯದ ನಗೆ ಬೀರಿತು.

IND vs ENG: ನಿಮಿಷಗಳ ಅಂತರದಲ್ಲಿ 3 ವಿಕೆಟ್ ಉರುಳಿಸಿದ ಬೂಮ್ ಬೂಮ್ ಬುಮ್ರಾ; ವಿಡಿಯೋ ನೋಡಿ

3ನೇ ಟೆಸ್ಟ್​ನಲ್ಲಿ ಇದುವರೆಗೆ 2 ಕ್ಯಾಚ್ ಡ್ರಾಪ್

ಇದೀಗ ಲಾರ್ಡ್ಸ್‌ನಲ್ಲಿ ಮೂರನೇ ಟೆಸ್ಟ್ ಆರಂಭವಾಗಿದ್ದು, ಮೊದಲ ಎರಡು ದಿನಗಳಲ್ಲಿ ಟೀಂ ಇಂಡಿಯಾ ಈಗಾಗಲೇ 2 ಕ್ಯಾಚ್‌ಗಳನ್ನು ಕೈಚೆಲ್ಲಿದೆ. ಇದರಲ್ಲಿ ಮೊದಲನೆಯ ದಿನ ನಾಯಕ ಗಿಲ್, ಓಲಿ ಪೋಪ್ ಅವರ ಕ್ಯಾಚ್ ಕೈಚೆಲ್ಲಿದರು. ವಾಸ್ತವವಾಗಿ ಪೋಪ್ ತಾವು ಎದುರಿಸಿದ ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದ್ದರು. ಆದರೆ ಗಿಲ್ ನೀಡಿದ ಜೀವದಾನದ ಲಾಭ ಪಡೆದಿದ್ದ ಪೋಪ್ 44 ರನ್​ಗಳ ಇನ್ನಿಂಗ್ಸ್ ಆಡಿದಲ್ಲದೆ, ರೂಟ್​ ಜೊತೆ ಉತ್ತಮ ಜೊತೆಯಾಟವನ್ನು ಕಟ್ಟಿದರು. ಇದೀಗ ಎರಡನೇ ದಿನದಾಟದಲ್ಲಿ ಜೇಮೀ ಸ್ಮಿತ್ ನೀಡಿದ್ದ ಸುಲಭವಾದ ಕ್ಯಾಚ್ ಅನ್ನು ಸ್ಲಿಪ್‌ನಲ್ಲಿ ನಿಂತಿದ್ದ ರಾಹುಲ್ ಕೈಬಿಟ್ಟಿದ್ದಾರೆ. ರಾಹುಲ್ ಕ್ಯಾಚ್ ಬಿಟ್ಟಾಗ ಒಂದಂಕಿಯಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದ ಸ್ಮಿತ್ ಇದೀಗ, ಊಟದ ವಿರಾಮದ ವೇಳೆಗೆ ಅಜೇಯ ಅರ್ಧಶತಕ ಚಚ್ಚಿದ್ದಾರೆ. ರಾಹುಲ್ ಬಿಟ್ಟ ಕ್ಯಾಚ್ ಎಷ್ಟು ದುಬಾರಿಯಾಗುತ್ತೆ ಎಂಬುದು ಪಂದ್ಯದ ಫಲಿತಾಂಶದ ಬಳಿಕ ನಿರ್ಧಾರವಾಗಲಿದೆ. ಹೀಗಾಗಿ ಪ್ರತಿ ಟೆಸ್ಟ್ ಪಂದ್ಯದಲ್ಲೂ ಕ್ಯಾಚ್ ಬಿಡುವುದನ್ನೇ ಕಾಯಕ ಮಾಡಿಕೊಂಡಿರುವ ಟೀಂ ಇಂಡಿಯಾ ಆಟಗಾರರು ಈ ವಿಭಾಗದ ಮೇಲೆ ಹೆಚ್ಚು ಗಮನ ಹರಿಸಿದರೆ ಒಳಿತು ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:10 pm, Fri, 11 July 25

Follow Us
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ