India vs England: ಬ್ಯಾಟ್ ಮಾಡುತ್ತಿದ್ದ ಪಂತ್​ಗೆ ಕೊಹ್ಲಿಯಿಂದ ಸಿಗ್ನಲ್: ದಿನದಾಟವನ್ನೇ ಅಂತ್ಯಗೊಳಿಸಿದ ಅಂಪೈರ್

ಇದಾದ ಮುಂದಿನ ಎಸೆತದಲ್ಲೇ ಅಂಪೈರ್ ನಾಲ್ಕನೇ ದಿನದಾಟವನ್ನು ಕೊನೆಗೊಳಿಸಿದರು. ಸದ್ಯ ಬಾಲ್ಕನಿಯಲ್ಲಿದ್ದ ಕೊಹ್ಲಿ ಮೈದಾನಕ್ಕೆ ಪಾಸ್ ಮಾಡಿದ ಮೆಸೇಜ್ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

India vs England: ಬ್ಯಾಟ್ ಮಾಡುತ್ತಿದ್ದ ಪಂತ್​ಗೆ ಕೊಹ್ಲಿಯಿಂದ ಸಿಗ್ನಲ್: ದಿನದಾಟವನ್ನೇ ಅಂತ್ಯಗೊಳಿಸಿದ ಅಂಪೈರ್
Virat Kohli
Follow us
| Updated By: Vinay Bhat

Updated on: Aug 16, 2021 | 7:22 AM

ವಿಶ್ವ ಪ್ರಸಿದ್ಧ ಲಾರ್ಡ್ಸ್ ಮೈದಾನದಲ್ಲಿ ಸಾಗುತ್ತಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಎರಡನೇ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ 154 ರನ್​ಗಳ ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ (Team India) 6 ವಿಕೆಟ್​ಗಳನ್ನು ಕಳೆದುಕೊಂಡಿದೆ. ಇಂದು ಅಂತಿಮ ದಿನವಾಗಿದ್ದು ಎಷ್ಟು ರನ್​ಗಳ ಟಾರ್ಗೆಟ್ ನೀಡುತ್ತೆ ಎಂಬುದು ಕುತೂಹಲ ಕೆರಳಿಸಿದೆ. ಅಥವಾ ಡ್ರಾ ಸಾಧಿಸಲು ಪ್ಲಾನ್ ಮಾಡುತ್ತಾ ಎಂಬುದು ನೋಡಬೇಕಿದೆ. ರಿಷಭ್ ಪಂತ್ (Rishabh Pant) ಹಾಗೂ ಇಶಾಂತ್ ಶರ್ಮಾ ಕ್ರೀಸ್​ನಲ್ಲಿದ್ದಾರೆ.

ಭಾನುವಾರ ಮಂದ ಬೆಳಕಿನಿಂದಾಗಿ ನಾಲ್ಕನೆ ದಿನದಾಟವನ್ನು ಕೊಂಚ ಬೇಗ ಅಂತ್ಯಗೊಳಿಸಲಾಯಿತು. ಆದರೆ, ಅಂಪೈರ್ ಇದನ್ನು ಘೋಷಿಸುವ ಮುನ್ನ ನಾಯಕ ವಿರಾಟ್ ಕೊಹ್ಲಿ ಹಾಗೂ ಬ್ಯಾಟಿಂಗ್ ಮಾಡುತ್ತಿದ್ದ ರಿಷಭ್ ಪಂತ್ ನಡುವಣ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಭಾರತ ಬ್ಯಾಟಿಂಗ್​ನ ಎರಡನೇ ಇನ್ನಿಂಗ್ಸ್​ನಲ್ಲಿ 82ನೇ ಓವರ್ ಬೌಲಿಂಗ್ ಮಾಡುತ್ತಿರುವಾಗ ಕೊಹ್ಲಿ ಅವರು ಬಾಲ್ಕನಿಯಲ್ಲಿ ಕೂತು ಪಂತ್ ಕಡೆ ಕೈ ಮೇಲೆ ಮಾಡಿ ಸಿಗ್ನಲ್ ಮಾಡುತ್ತಾರೆ, ಈ ಸಂದರ್ಭ ಅಲ್ಲೇ ಇದ್ದ ರೋಹಿತ್ ಶರ್ಮಾ ಕೂಡ ಇವರಿಗೆ ಸಾತ್ ನೀಡುತ್ತಾರೆ. ಮಂದ ಬೆಳಕು ಆವರಿಸಿದೆ ಲೈಟ್ ಇಲ್ಲದೆ ನೀವು ಹೇಗೆ ಆಡುತ್ತೀರಿ? ಅಂಪೈರ್ ಬಳಿ ಮಾತನಾಡು ಎಂದು ಪಂತ್​ಗೆ ಕೊಹ್ಲಿ ಕೈ ಸನ್ನೆಯಲ್ಲಿ ಹೇಳುತ್ತಿರುವಂತಿದೆ.

ಇದಾದ ಮುಂದಿನ ಎಸೆತದಲ್ಲೇ ಅಂಪೈರ್ ನಾಲ್ಕನೇ ದಿನದಾಟವನ್ನು ಕೊನೆಗೊಳಿಸಿದರು. ಸದ್ಯ ಬಾಲ್ಕನಿಯಲ್ಲಿದ್ದ ಕೊಹ್ಲಿ ಮೈದಾನಕ್ಕೆ ಪಾಸ್ ಮಾಡಿದ ಮೆಸೇಜ್ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ನಾಲ್ಕನೇ ದಿನ ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಭಾರತ ಮೊದಲ ಇನ್ನಿಂಗ್ಸ್​ನಂತೆ ಉತ್ತಮ ಆರಂಭ ಪಡೆದುಕೊಳ್ಳಿಲ್ಲ. ಓಪನರ್​ಗಳಾದ ಕೆ. ಎಲ್ ರಾಹುಲ್ 5 ಹಾಗೂ ರೋಹಿತ್ ಶರ್ಮಾ 21 ರನ್​ಗೆ ಬೇಗನೆ ಔಟ್ ಆದರು. ನಾಯಕ ವಿರಾಟ್ ಕೊಹ್ಲಿ ಕೂಡ 20 ರನ್​ಗೆ ಬ್ಯಾಟ್ ಕಳೆಗಿಟ್ಟರು.

ಈ ಸಂದರ್ಭ ಕಳಪೆ ಫಾರ್ಮ್​ನಿಂದ ಕಂಗೆಟ್ಟಿದ್ದ ಚೇತೇಶ್ವರ್ ಪೂಜಾರ ಹಾಗೂ ಉಪ ನಾಯಕ ಅಜಿಂಕ್ಯಾ ರಹಾನೆ ತಂಡಕ್ಕೆ ಆಸರೆಯಾಗಿ ನಿಂತರು. ಈ ಜೋಡಿ ಎಚ್ಚರಿಕೆಯ ಜೊತೆಯಾಟ ಆಡಿ 100 ರನ್​ಗಳ ಕಾಣಿಕೆ ನೀಡಿತು. ಪೂಜಾರ 206 ಎಸೆತಗಳಲ್ಲಿ 45 ರನ್ ಗಳಿಸಿದರೆ, ರಹಾನೆ 146 ಎಸೆತಗಳಲ್ಲಿ 61 ರನ್​ಗೆ ಔಟ್ ಆದರು, ರವೀಂದ್ರ ಜಡೇಜಾ 3 ರನ್​ಗೆ ಬೌಲ್ಡ್ ಆದರು.

ಹೀಗೆ ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ಕಳೆದುಕೊಂಡು 181 ರನ್ ಬಾರಿಸಿದೆ. 154 ರನ್​ಗಳ ಮುನ್ನಡೆಯಲ್ಲಿದೆ. ರಿಷಭ್ ಪಂತ್ 14 ರನ್ ಹಾಗೂ ಇಶಾಂತ್ ಶರ್ಮಾ 4 ರನ್ ಗಳಿಸಿ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್, 29 ಎಸೆತಗಳಲ್ಲಿ 93 ರನ್! ಮೈದಾನದಲ್ಲಿ ಬೌಂಡರಿ, ಸಿಕ್ಸರ್ ಸುನಾಮಿ ಎಬ್ಬಿಸಿದ ಕ್ರಿಕೆಟಿಗ ಯಾರು ಗೊತ್ತಾ?

IND vs ENG: ಕ್ಯಾಮರಾದಲ್ಲಿ ಸೆರೆಯಾಯ್ತು ಇಂಗ್ಲೆಂಡ್ ಕ್ರಿಕೆಟಿಗರ ಕಳ್ಳಾಟ! ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಕ್ಕಿಬೀಳ್ತಾರಾ ಆಂಗ್ಲರು?

(India vs England Captain Virat Kohli signaled Rishabh Pant from Lords balcony video goes viral )

ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ