AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs West In The 2nd ODI: ರಿಷಭ್ ಪಂತ್ ಆರಂಭಿಕನಾಗಿ ಕಣಕ್ಕಿಳಿಯಲು ಇದುವೇ ಕಾರಣ

India vs West In The 2nd ODI: ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕವನ್ನು ಕೆಎಲ್ ರಾಹುಲ್ ಮೂಲಕ ಬಲಪಡಿಸಬಹುದು. ಏಕೆಂದರೆ ರಾಹುಲ್ ಸಂಯಮದಿಂದ ಬ್ಯಾಟ್ ಬೀಸುವ ಆಟಗಾರ. ಅದರಲ್ಲೂ ಸಂದರ್ಭಕ್ಕೆ ತಕ್ಕಂತೆ ಬ್ಯಾಟಿಂಗ್ ಶೈಲಿ ಬದಲಿಸುತ್ತಾರೆ.

India vs West In The 2nd ODI: ರಿಷಭ್ ಪಂತ್ ಆರಂಭಿಕನಾಗಿ ಕಣಕ್ಕಿಳಿಯಲು ಇದುವೇ ಕಾರಣ
Rishabh Pant
TV9 Web
| Updated By: ಝಾಹಿರ್ ಯೂಸುಫ್|

Updated on: Feb 09, 2022 | 3:11 PM

Share

ವೆಸ್ಟ್ ಇಂಡೀಸ್ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ (India vs West In The 2nd ODI) ಭಾರತ ತಂಡವು ಮೊದಲು ಬ್ಯಾಟ್ ಮಾಡಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ ಜೊತೆ ರಿಷಭ್ ಪಂತ್ ಆರಂಭಿಕರಾಗಿ ಕಣಕ್ಕಿಳಿದು ಅಚ್ಚರಿ ಮೂಡಿಸಿದ್ದರು. ತಂಡದಲ್ಲಿ ಅನುಭವಿ ಆರಂಭಿಕ ಆಟಗಾರ ಕೆಎಲ್ ರಾಹುಲ್ ಇದ್ದರೂ, ಪಂತ್ ಯಾಕೆ ಓಪನರ್ ಆಗಿ ಕಣಕ್ಕಿಳಿದರು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ. ಇದಕ್ಕೆ ಸದ್ಯ ಸಿಗುತ್ತಿರುವ ಉತ್ತರ, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಪ್ರಯೋಗ. ಟೀಮ್ ಇಂಡಿಯಾ ಮುಂದಿನ ವಿಶ್ವಕಪ್​ಗಳನ್ನು ಗಮನದಲ್ಲಿರಿಸಿ ಪ್ರಯೋಗ ಮಾಡಲು ಮುಂದಾಗಿದೆ. ಅದರಂತೆ ಟೀಮ್ ಇಂಡಿಯಾಗೆ ಸ್ಪೋಟಕ ಆರಂಭಿಕನನ್ನು ಸಜ್ಜುಗೊಳಿಸಲು ಪ್ಲ್ಯಾನ್ ರೂಪಿಸಿದೆ.

ರಿಷಬ್ ಪಂತ್‌ ಅವರಲ್ಲೂ ಆಸ್ಟ್ರೇಲಿಯಾ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆ್ಯಡಂ ಗಿಲ್‌ಕ್ರಿಸ್ಟ್‌ ಅವರಲ್ಲಿನ ಸಾಮ್ಯತೆ ಹೆಚ್ಚಿದೆ. ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ಗಿಲ್​ಕ್ರಿಸ್ಟ್​ ಆಸ್ಟ್ರೇಲಿಯಾ ಪರ ಆರಂಭಿಕರಾಗಿ ಆಡಿದ್ದರು. ಪಂತ್ ಕೂಡ ಸ್ಪೋಟಕ ಬ್ಯಾಟಿಂಗ್​ ಮೂಲಕ ಹಲವು ಬಾರಿ ಅಬ್ಬರಿಸಿದ್ದಾರೆ. ಹೀಗಾಗಿ ಪಂತ್ ಅವರನ್ನು ಗಿಲ್​ಕ್ರಿಸ್ಟ್​ ಅವರಂತೆ ರೂಪಿಸಲು ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಎದುರು ನೋಡುತ್ತಿದೆ.

ಇನ್ನೊಂದೆಡೆ ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕವನ್ನು ಕೆಎಲ್ ರಾಹುಲ್ ಮೂಲಕ ಬಲಪಡಿಸಬಹುದು. ಏಕೆಂದರೆ ರಾಹುಲ್ ಸಂಯಮದಿಂದ ಬ್ಯಾಟ್ ಬೀಸುವ ಆಟಗಾರ. ಅದರಲ್ಲೂ ಸಂದರ್ಭಕ್ಕೆ ತಕ್ಕಂತೆ ಬ್ಯಾಟಿಂಗ್ ಶೈಲಿ ಬದಲಿಸುತ್ತಾರೆ. ಆದರೆ ಪಂತ್ ಸ್ಪೋಟಕ ಬ್ಯಾಟಿಂಗ್​ಗೆ ಹೆಚ್ಚು ಒತ್ತು ನೀಡುತ್ತಾರೆ. ಹೀಗಾಗಿ ಪವರ್​ಪ್ಲೇನ ಸಂಪೂರ್ಣ ಲಾಭ ಪಡೆದುಕೊಳ್ಳಲು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಇಂತಹದೊಂದು ಪ್ರಯೋಗಕ್ಕೆ ಮುಂದಾಗಿದೆ.

ಟೀಮ್ ಇಂಡಿಯಾದ ಈ ಪ್ರಯೋಗದಲ್ಲಿ ರಿಷಬ್ ಪಂತ್ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕು. ಆದರೆ ಆರಂಭಿಕನಾಗಿ ಸಿಕ್ಕ ಮೊದಲ ಅವಕಾಶದಲ್ಲೇ ಪಂತ್ ವಿಫಲರಾಗಿದ್ದಾರೆ. 34 ಎಸೆತಗಳನ್ನು ಎದುರಿಸಿದ ರಿಷಭ್ ಪಂತ್ ಕಲೆಹಾಕಿದ್ದು ಕೇವಲ 18 ಮಾತ್ರ. ಹೀಗಾಗಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್​ನ ಈ ಪ್ರಯೋಗದ ಬಗ್ಗೆ ಟೀಕೆಗಳು ಕೇಳಿ ಬರುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ

ಇದನ್ನೂ ಓದಿ: Yuzvendra Chahal: ವಿಕೆಟ್​ಗಳ ಶತಕ ಪೂರೈಸಿದ ಚಹಾಲ್

ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ

ಇದನ್ನೂ ಓದಿ: Lata Mangeshkar: ಎಲ್ಲರೂ ಕೈಬಿಟ್ಟಾಗ ಟೀಮ್ ಇಂಡಿಯಾ ಕೈ ಹಿಡಿದಿದ್ದ ಲತಾ ಮಂಗೇಶ್ಕರ್..!

(India vs West In The 2nd ODI: Why Rishabh Pant Is Opening With Rohit Sharma)

ಸಂಪುಟ ಪುನಾರಚನೆ ಬಗ್ಗೆ ಸಚಿವ ಜಿ ಪರಮೇಶ್ವರ್ ಶಾಕಿಂಗ್ ಪ್ರತಿಕ್ರಿಯೆ!
ಸಂಪುಟ ಪುನಾರಚನೆ ಬಗ್ಗೆ ಸಚಿವ ಜಿ ಪರಮೇಶ್ವರ್ ಶಾಕಿಂಗ್ ಪ್ರತಿಕ್ರಿಯೆ!
ಇಂದಿನಿಂದ ಹಾಸನಾಂಬೆಯ ದರ್ಶನ
ಇಂದಿನಿಂದ ಹಾಸನಾಂಬೆಯ ದರ್ಶನ
ಮುಂಬೈ ಎಕ್ಸ್​​ಪ್ರೆಸ್​ ವೇನಲ್ಲಿ ಡಿವೈಡರ್​ಗೆ ಡಿಕ್ಕಿ ಹೊಡೆದ ಪೋಷೆ ಕಾರು
ಮುಂಬೈ ಎಕ್ಸ್​​ಪ್ರೆಸ್​ ವೇನಲ್ಲಿ ಡಿವೈಡರ್​ಗೆ ಡಿಕ್ಕಿ ಹೊಡೆದ ಪೋಷೆ ಕಾರು
Video: 4 ನಿಮಿಷದಲ್ಲಿ 24 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ ಮಾಡಿದ ಶ್ವಾನಗಳು!
Video: 4 ನಿಮಿಷದಲ್ಲಿ 24 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ ಮಾಡಿದ ಶ್ವಾನಗಳು!
ಈಗಲ್​​ಟನ್ ರೆಸಾರ್ಟ್​​ನಿಂದ ಬಿಗ್​​ಬಾಸ್ ಮನೆಗೆ ಬಂದ ಸ್ಪರ್ಧಿಗಳು: ವಿಡಿಯೋ
ಈಗಲ್​​ಟನ್ ರೆಸಾರ್ಟ್​​ನಿಂದ ಬಿಗ್​​ಬಾಸ್ ಮನೆಗೆ ಬಂದ ಸ್ಪರ್ಧಿಗಳು: ವಿಡಿಯೋ
13 ಭರ್ಜರಿ ಸಿಕ್ಸ್​... 29 ಎಸೆತಗಳಲ್ಲಿ ವಿಸ್ಫೋಟಕ ಶತಕ
13 ಭರ್ಜರಿ ಸಿಕ್ಸ್​... 29 ಎಸೆತಗಳಲ್ಲಿ ವಿಸ್ಫೋಟಕ ಶತಕ
ಸರಿಯಾಗಿ ಔಟ್ ಮಾಡದೇ ಅಂಪೈರ್​ ಜೊತೆ ಜಗಳಕ್ಕಿಳಿದ ಪಾಕ್ ಆಟಗಾರ್ತಿಯರು
ಸರಿಯಾಗಿ ಔಟ್ ಮಾಡದೇ ಅಂಪೈರ್​ ಜೊತೆ ಜಗಳಕ್ಕಿಳಿದ ಪಾಕ್ ಆಟಗಾರ್ತಿಯರು
ಹಾಸನಾಂಬೆ ದೇಗುಲದ ಮಹತ್ವ ಹಾಗೂ ಇತಿಹಾಸವೇನು ಗೊತ್ತಾ? ಇಲ್ಲಿದೆ ಮಾಹಿತಿ
ಹಾಸನಾಂಬೆ ದೇಗುಲದ ಮಹತ್ವ ಹಾಗೂ ಇತಿಹಾಸವೇನು ಗೊತ್ತಾ? ಇಲ್ಲಿದೆ ಮಾಹಿತಿ
ಶುಕ್ರ ಗ್ರಹ ಸಿಂಹದಿಂದ ಕನ್ಯಾ ರಾಶಿಗೆ ಪ್ರವೇಶಿಸುವ ಇಂದಿನ ರಾಶಿ ಭವಿಷ್ಯ
ಶುಕ್ರ ಗ್ರಹ ಸಿಂಹದಿಂದ ಕನ್ಯಾ ರಾಶಿಗೆ ಪ್ರವೇಶಿಸುವ ಇಂದಿನ ರಾಶಿ ಭವಿಷ್ಯ
ಬೆಂಗಾವಲು ವಾಹನ ಡ್ರೈವರ್ ಆತ್ಮಹತ್ಯೆ: ಆಸ್ಪತ್ರೆಗೆ ಬಂದು ಕಣ್ಣೀರಿಟ್ಟ ಅಶೋಕ್
ಬೆಂಗಾವಲು ವಾಹನ ಡ್ರೈವರ್ ಆತ್ಮಹತ್ಯೆ: ಆಸ್ಪತ್ರೆಗೆ ಬಂದು ಕಣ್ಣೀರಿಟ್ಟ ಅಶೋಕ್