AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vijay Hazare Trophy: ಧವನ್ ಇಲ್ಲದ ಡೆಲ್ಲಿಗೆ ಸೋಲಿನ ಬರೆ; ಸತತ 4ನೇ ಗೆಲುವು ಸಾಧಿಸಿದ ಕರ್ನಾಟಕ..!

Vijay Hazare Trophy: ಈ ಬಾರಿಯ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡ ಅದ್ಭುತ ಪ್ರದರ್ಶನ ತೋರುತ್ತಿದೆ. ಎಲೈಟ್ ಬಿ ನಲ್ಲಿ ಆಡಿರುವ 4 ಪಂದ್ಯಗಳಲ್ಲಿ ನಾಲ್ಕರಲ್ಲೂ ಜಯ ಗಳಿಸಿರುವ ಕರ್ನಾಟಕ ತಂಡ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದೆ.

Vijay Hazare Trophy: ಧವನ್ ಇಲ್ಲದ ಡೆಲ್ಲಿಗೆ ಸೋಲಿನ ಬರೆ; ಸತತ 4ನೇ ಗೆಲುವು ಸಾಧಿಸಿದ ಕರ್ನಾಟಕ..!
ಕರ್ನಾಟಕ ತಂಡ
TV9 Web
| Updated By: ಪೃಥ್ವಿಶಂಕರ|

Updated on:Nov 18, 2022 | 2:37 PM

Share

ಈ ಬಾರಿಯ ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy) ಕರ್ನಾಟಕ ತಂಡ ಅದ್ಭುತ ಪ್ರದರ್ಶನ ತೋರುತ್ತಿದೆ. ಎಲೈಟ್ ಬಿ ನಲ್ಲಿ ಆಡಿರುವ 4 ಪಂದ್ಯಗಳಲ್ಲಿ ನಾಲ್ಕರಲ್ಲೂ ಜಯ ಗಳಿಸಿರುವ ಕರ್ನಾಟಕ ತಂಡ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದೆ. ತನ್ನ ನಾಲ್ಕನೇ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಎದುರಿಸಿದ್ದ ಸಮರ್ಥ್​ ಪಡೆ 4 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಕಳೆದ ತಿಂಗಳು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಕೊನೆಯ ಪಂದ್ಯದಲ್ಲಿ ವಿದರ್ಭ ವಿರುದ್ಧ ಸೋತಿದ್ದ ಡೆಲ್ಲಿ, ಸತತ ಗೆಲುವುಗಳ ಮೂಲಕ ವಿಜಯ್ ಹಜಾರೆ ಟ್ರೋಫಿಯನ್ನು ಪ್ರಾರಂಭಿಸಿತ್ತು. ಆದರೆ ಸತತ ಎರಡು ಗೆಲುವಿನೊಂದಿಗೆ ಅಭಿಯಾನ ಆರಂಭಿಸಿರುವ ಡೆಲ್ಲಿ ಇದೀಗ ಹಳಿ ತಪ್ಪುತ್ತಿರುವಂತೆ ಕಾಣುತ್ತಿದೆ. ಇದರಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ಶಿಖರ್ ಧವನ್ (Shikhar Dhawan) ಅನುಪಸ್ಥಿತಿಯು ತಂಡದ ಕಳಪೆ ಪ್ರದರ್ಶನಕ್ಕೆ ಕಾರಣವಾಗಿದೆ.

ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ 47 ಮತ್ತು 54 ರನ್ ಗಳಿಸಿ ದೆಹಲಿ ತಂಡವನ್ನು ಗೆಲುವಿನ ದಡ ಸೇರಿಸಿದ್ದ ಅನುಭವಿ ಆರಂಭಿಕ ಆಟಗಾರ ಧವನ್ ಟೂರ್ನಿಯ ಮಧ್ಯದಲ್ಲೇ ತಂಡವನ್ನು ತೊರೆಯಬೇಕಾಯಿತು. ಮುಂದಿನ ವಾರ ನ್ಯೂಜಿಲೆಂಡ್​ನಲ್ಲಿ ನಡೆಯಲಿರುವ ಏಕದಿನ ಸರಣಿಗೆ ಧವನ್ ತೆರಳಿದ್ದು, ಇಂತಹ ಪರಿಸ್ಥಿತಿಯಲ್ಲಿ ಅವರಿಲ್ಲದೇ ಸತತ 2ನೇ ಸೋಲು ಕಂಡಿರುವ ಡೆಲ್ಲಿ ತಂಡದ ಎರಡೂ ಪಂದ್ಯಗಳ ಸೋಲಿಗೆ ಕಳಪೆ ಬ್ಯಾಟಿಂಗ್​ಗೆ ಕಾರಣವಾಗಿದೆ.

ಧವನ್ ಇಲ್ಲದ ಬ್ಯಾಟಿಂಗ್ ಫ್ಲಾಪ್

ರಾಜಸ್ಥಾನದ ವಿರುದ್ಧ ಕೇವಲ 166 ರನ್‌ಗಳಿಗೆ ಆಲೌಟ್ ಆಗಿದ್ದ ದೆಹಲಿ ತಂಡ ಎಲೈಟ್ ಗ್ರೂಪ್ ಬಿ ಪಂದ್ಯದಲ್ಲಿ ನವೆಂಬರ್ 17, ಗುರುವಾರ ಕೋಲ್ಕತ್ತಾದಲ್ಲಿ ಕರ್ನಾಟಕ ವಿರುದ್ಧ ಕೇವಲ 159 ರನ್‌ಗಳಿಗೆ ಆಲೌಟ್ ಆಗಿತ್ತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡಕ್ಕೆ ಕೇವಲ 45.4 ಓವರ್​ಗಳನ್ನು ಮಾತ್ರ ಆಡಲು ಸಾಧ್ಯವಾಯಿತು. ಸಾಲ್ಟ್ ಲೇಕ್ ಮೈದಾನದಲ್ಲಿ ನಿಧಾನಗತಿಯ ಪಿಚ್‌ನಲ್ಲಿ ದೆಹಲಿಯ ಬ್ಯಾಟ್ಸ್‌ಮನ್‌ಗಳು ರನ್​ಗಳಿಸಲು ಹೋರಾಟ ನಡೆಸಿದರು. ಆದರೆ ಐಪಿಎಲ್ ಸ್ಟಾರ್​ಗಳಾದ ನಿತೀಶ್ ರಾಣಾ (43 ಎಸೆತಗಳಲ್ಲಿ 30) ಮತ್ತು ಲಲಿತ್ ಯಾದವ್ (100 ಎಸೆತಗಳಲ್ಲಿ 59) ಅವರ ಹೋರಾಟದಿಂದಾಗಿ ತಂಡ ಮುಜುಗರದಿಂದ ಪಾರಾಯಿತು.

ಒಂದು ಹಂತದಲ್ಲಿ 66 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ದೆಹಲಿ ತಂಡಕ್ಕೆ ಲಲಿತ್ ಮತ್ತು ಲಕ್ಷ್ಯ ಥರೇಜಾ (15) ಏಳನೇ ವಿಕೆಟ್‌ಗೆ 44 ರನ್ ಸೇರಿಸಿ ನೆರವಾದರು. ಕರ್ನಾಟಕದ ವೇಗಿ ವಾಸುಕಿ ಕೌಶಿಕ್ 10 ಓವರ್‌ಗಳಲ್ಲಿ 23 ರನ್ ನೀಡಿ ಮೂರು ವಿಕೆಟ್ ಪಡೆದರೆ, ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ 25 ರನ್‌ಗಳಿಗೆ ಮೂರು ವಿಕೆಟ್ ಪಡೆದು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು.

ಗೆಲುವು ತಂದುಕೊಟ್ಟ ಸಮರ್ಥ್ ಮತ್ತು ಮನೀಶ್

ಈ ಗುರಿ ಬೆನ್ನಟ್ಟಿದ ಕರ್ನಾಟಕಕ್ಕೆ ನಾಯಕ ಸಮರ್ಥ್​ ಉತ್ತಮ ಆರಂಭವನ್ನೇ ನೀಡಿದರು. ಆದರೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಶರತ್ 12 ರನ್​ಗಳಿಗೆ ಸುಸ್ತಾದರೆ, ನಿಖಿನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಹೀಗಾಗಿ ಕರ್ನಾಟಕ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿತು. ಆರಂಭಿಕ ರವಿಕುಮಾರ್ ಸಮರ್ಥ್ ಅವರ 73 ಎಸೆತಗಳಲ್ಲಿ 59 ರನ್ ಮತ್ತು ಅನುಭವಿ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ ಅವರ 37 ಎಸೆತಗಳಲ್ಲಿ 4 ಸಿಕ್ಸರ್‌ಗಳೊಂದಿಗೆ 48 ರನ್‌ಗಳ ನೆರವಿನಿಂದ ಕರ್ನಾಟಕ 6 ವಿಕೆಟ್ ಕಳೆದುಕೊಂಡು ಈ ಗುರಿಯನ್ನು ಸಾಧಿಸಿತು.

Published On - 2:37 pm, Fri, 18 November 22