AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹೇಂದ್ರ ಸಿಂಗ್ ಧೋನಿಯನ್ನು ಮೆಂಟರ್ ಆಗಿ ನೇಮಕ ಮಾಡಿರುವುದು ಒಳ್ಳೆಯ ಕ್ರಮವೆಂದ ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್

ಧೋನಿ ಕೇವಲ ಒಂದು ವರ್ಷದ ಹಿಂದೆ ಮಾತ್ರ ಅಂತರರಾಷ್ಟ್ರೀಯ ಸೀಮಿತ ಓವರ್ಗಳ ಕ್ರಿಕೆಟ್ ಗೆ ವಿದಾಯ ಹೇಳಿ ಈಗ ಪುನಃ ರಾಷ್ಟ್ರೀಯ ಕ್ರಿಕೆಟ್ ಸೆಟಪ್​ಗೆ  ವಾಪಸ್ಸಾಗಿರುವುದರಿಂದ ಅವರನ್ನು ಮೆಂಟರ್ ಅಗಿ ನೇಮಕ ಮಾಡಿರುವುದು ವಿಶೇಷ ಪ್ರಕರಣವಾಗಿದೆ ಎಂದು ಕಪಿಲ್ ದೇವ್ ಹೇಳಿದ್ದಾರೆ.

ಮಹೇಂದ್ರ ಸಿಂಗ್ ಧೋನಿಯನ್ನು ಮೆಂಟರ್ ಆಗಿ ನೇಮಕ ಮಾಡಿರುವುದು ಒಳ್ಳೆಯ ಕ್ರಮವೆಂದ ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್
ಕಪಿಲ್ ದೇವ್ ಮತ್ತು ಎಮ್​ ಎಸ್​ ಧೋನಿ
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Sep 11, 2021 | 1:45 AM

Share

ಭಾರತೀಯ ಕ್ರಿಕೆಟ್ ಟೀಮಿನ ಮಾಜಿ ನಾಯಕ ಮತ್ತು ಇಂಡಿಯನ್ ಪ್ರಿಮೀಯರ್ ಲೀಗ್ ಫ್ರಾಂಚೈಸಿ ಚೆನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇದ್ರ ಸಿಂಗ್ ಧೋನಿ ಅವರನ್ನು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ಭಾರತೀಯ ಟೀಮಿನ ಮೆಂಟರ್ ಆಗಿ ಆಯ್ಕೆ ಮಾಡಿರುವುದು ಕೆಲವರು ಹುಬ್ಬೇರಿಸುವಂತೆ ಮಾಡಿದ್ದರೆ, ಮತ್ತೇ ಕೆಲವರು ಈ ನಡೆಯನ್ನು ಸ್ವಾಗತಿಸಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕ್ರಮವನ್ನು ಸ್ವಾಗತಿಸಿದವರಲ್ಲಿ ಭಾರತಕ್ಕೆ ಮೊಟ್ಟಮೊದಲ ಬಾರಿಗೆ ವಿಶ್ವಕಪ್ ಗೆದ್ದುಕೊಟ್ಟ ಕಪಿಲ್ ದೇವ್ ನಿಖಂಜ್ ಒಬ್ಬರಾಗಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಕೇವಲ ಒಂದು ವರ್ಷದ ಹಿಂದೆ ಮಾತ್ರ ಅಂತರರಾಷ್ಟ್ರೀಯ ಸೀಮಿತ ಓವರ್ಗಳ ಕ್ರಿಕೆಟ್ ಗೆ ವಿದಾಯ ಹೇಳಿ ಈಗ ಪುನಃ ರಾಷ್ಟ್ರೀಯ ಕ್ರಿಕೆಟ್ ಸೆಟಪ್​ಗೆ  ವಾಪಸ್ಸಾಗಿರುವುದರಿಂದ ಅವರನ್ನು ಮೆಂಟರ್ ಅಗಿ ನೇಮಕ ಮಾಡಿರುವುದು ವಿಶೇಷ ಪ್ರಕರಣವಾಗಿದೆ ಎಂದು ಕಪಿಲ್ ದೇವ್ ಹೇಳಿದ್ದಾರೆ.

ಶುಕ್ರವಾರ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಗವಹಿಸಿ ಮಾತಾಡಿದ ಕಪಿಲ್ ದೇವ್ ಅವರು, ‘ಭಾರತಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಸೇವೆ ಸಲ್ಲಿಸಿದ ಆಟಗಾರನೊಬ್ಬನನ್ನು ಪುನಃ ರಾಷ್ಟ್ರೀಯ ಸೆಟಪ್​ನಲ್ಲಿ ಯಾವುದಾದರೊಂದು ಜವಾಬ್ದಾರಿ ನೀಡಿ ವಾಪಸ್ಸು ತರಬೇಕಾದರೆ ಕನಿಷ್ಟ ಮೂರ್ನಾಲ್ಕು ವರ್ಷಗಳ ಅಂತರವಿರಬೇಕು. ಅದರೆ ಧೋನಿಯನ್ನು ಕೇವಲ ಒಂದು ವರ್ಷದ ನಂತರ ವಾಪಸ್ಸು ತಂದಿರೋದು ಒಂದು ವಿಶೇಷ ಪ್ರಕರಣವಾಗಿದೆ ಅಂತ ನಾನು ಹೇಳುತ್ತಿದ್ದೇನೆ,’ ಅಂತ ಹಿಂದೊಮ್ಮೆ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಎನಿಸಿಕೊಂಡಿದ್ದ ಕಪಿಲ್ ಹೇಳಿದರು.

‘ಆದರೆ, ಕ್ರಿಕೆಟ್ ಮಂಡಳಿಯ ನಿರ್ಧಾರ ಸ್ವಾಗತಾರ್ಹವಾಗಿದೆ. ವಿಶ್ವಕಪ್ ಬಹಳ ದೂರವೇನೂ ಇಲ್ಲ ಮತ್ತು ಹೆಡ್ ಕೋಚ್ ರವಿ ಶಾಸ್ತ್ರಿ ಸಹ ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಧೋನಿ ಅವರನ್ನು ಮೆಂಟರ್ ಆಗಿ ನೇಮಕ ಮಾಡಿರುವುದು, ಒಂದು ಉತ್ತಮ ಕ್ರಮ’ ಎಂದು ಕಪಿಲ್ ಹೇಳಿದರು.

ಸೌರವ್ ಗಂಗೂಲಿ ಅಧ್ಯಕ್ಷರಾಗಿರುವ ಬಿಸಿಸಿಯ ಬುಧವಾರದಂದು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಹವಹಿಸುವ ಟೀಮಿನ ಆಟಗಾರರ ಹೆಸರನ್ನು ಪ್ರಕಟಿಸಿದ ನಂತರ ಧೋನಿ ಅವರು ಮೆಂಟರ್ ಅಗಿ ಟೀಮಿನೊಂದಿಗೆ ಹೋಗಲಿದ್ದಾರೆ ಎಂದು ಘೋಷಿಸಿ ಕ್ರಿಕೆಟ್ ಪ್ರೇಮಿಗಳನ್ನು ಆಶ್ಚರ್ಯಚಕಿತರನ್ನಾಗಿಸಿತು.

ಧೋನಿ ಅವರನ್ನು ಆಯ್ಕೆ ಮಾಡಿರುವುದಕ್ಕೆ ಕಾರಣಗಳು ಹಲವಿರಬಹುದು. ಅದರೆ, ಅವರ ಜವಾಬ್ದಾರಿಯ ಸ್ವರೂಪ ಹೇಗಿರುತ್ತದೆ ಅನ್ನೋದು ಗೊಂದಲ ಹುಟ್ಟಿಸುತ್ತಿದೆ. ಯಾಕೆಂದರೆ ಟೀಮಿನ ಹೆಡ್ ಕೋಚ್ ರವಿ ಶಾಸ್ತ್ರೀ ಅವರಿರುತ್ತಾರೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ವಿಭಾಗಗಳಿಗೆ ಬೇರೆ ಬೇರೆ ಕೋಚ್ಗಳಿದ್ದಾರೆ. ಕೋಚ್ ಗಳಾಗಲೀ, ಮೆಂಟರ್ಗಳಾಗಲೀ ಮೈದಾನದ ಹೊರಗಡೆ ಮಾತ್ರ ಕರ್ತವ್ಯ ನಿರ್ವಹಿಸಬೇಕು. ಈ ಹಿನ್ನೆಲೆಯಲ್ಲಿ ಮೆಂಟರ್ ಮತ್ತು ಹೆಡ್ ಕೋಚ್ ನಡುವೆ ಹೆಚ್ಚಿನ ಸಮನ್ವಯತೆ ಬೇಕಾಗುತ್ತದೆ. ಹೆಡ್ ಕೋಚ್ ಮತ್ತು ಮೆಂಟರ್-ಈ ಜವಾಬ್ದಾರಿಗಳು ಹೇಗೆ ಒಂದು ಮತ್ತೊಂದಕ್ಕಿಂತ ಭಿನ್ನ ಅನ್ನೋದರ ಬಗ್ಗೆಯೂ ಗೊಂದಲವಿದೆ.

ವಿರಾಟ್ ಕೊಹ್ಲಿ- ರವಿ ಶಾಸ್ತ್ರೀ ನಡುವೆ ಒಳ್ಳೆಯ ಹೊಂದಾಣಿಕೆ ಇದೆ. ಅದರಲ್ಲೇನೂ ಸಂಶಯವಿಲ್ಲ. ಹಾಗೆಯೇ, ಕೊಹ್ಲಿ ಮತ್ತು ಧೋನಿ ನಡುವೆಯೂ ಅದ್ಭುತವಾದ ಕೆಮಿಸ್ಟ್ರಿ ಇದೆ. ಹಾಗಾಗಿ, ಯಾವುದೋ ಸಂದರ್ಭದಲ್ಲಿ ರವಿ ಶಾಸ್ತ್ರೀ ಮತ್ತು ಧೋನಿ ಬೇರೆ ಬೇರೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೆ ಕೊಹ್ಲಿ ಇಬ್ಬಂದಿತನಕ್ಕೆ ಬೀಳಬೇಕಾಗುತ್ತದೆ. ಶಾಸ್ತ್ರೀ ಮತ್ತು ಧೋನಿಯ ನಡುವೆ ಸಂಬಂಧ ಚೆನ್ನಾಗಿಯೇ ಇದ್ದೀತು, ಅದರೆ ನಿರ್ಧಾರಗಳನ್ನು ತೆಗೆದುಕೊಳ್ಳವುವಾಗ ಒಮ್ಮತದ ಅಗತ್ಯವಿರುತ್ತದೆ. ನಾನು ಹೇಳಿದ್ದೇ ಸರಿ ಅಂತ ಇಬ್ಬರಲ್ಲಿ ಒಬ್ಬ ಹೇಳಿದರೆ ಅಂತ ಕೊಹ್ಲಿಗೆ ತಲೆನೋವಾಗಿ ಪರಿಣಮಿಸಲಿದೆ.

ಇಂಥದಕ್ಕೆಲ್ಲ ಅವಕಾಶ ನೀಡಬಾರದೆಂದರೆ, ಟೀಮಿನ ಜೊತೆ ಶಾಸ್ತ್ರೀ ಯನ್ನು ಕಳಿಸದೆ ಕೇವಲ ಧೋನಿಯನ್ನು ಮಾತ್ರ ಕಳಿಸಿದರೆ, ಟೀಮಿಗೆ ಒಳ್ಳೆಯದಾಗಬಹುದು.

ಇದನ್ನೂ ಓದಿ:  Rashid Khan: ಟಿ20 ವಿಶ್ವಕಪ್​ಗೆ ಅಫ್ಘಾನ್ ತಂಡ ಪ್ರಕಟ: ನಾಯಕತ್ವಕ್ಕೆ ರಶೀದ್ ಖಾನ್ ರಾಜೀನಾಮೆ

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?