AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mohammed Siraj: ಸಿ-ರಾಜ…ಗೆಟೌಟ್ ಅಂದವರೇ ಕಟೌಟ್ ನಿಲ್ಲಿಸಿದ್ರು

Mohammed Siraj's Cutout: ಟೀಕಾಕಾರರಿಗೆರ ಬಾಯಿ ಮುಚ್ಚಿಕೊಳ್ಳುವಂತೆ ಸಂಭ್ರಮಿಸುವ ಸಿರಾಜ್ ಅವರ ಕಟೌಟ್ ಅನ್ನು ನಿಲ್ಲಿಸಿ ಅಭಿಮಾನಿಗಳು ಸಂಭ್ರಮ ಪಟ್ಟಿದ್ದಾರೆ. ಇದೇ ಕಟೌಟ್ ನಿಲ್ಲಿಸಲು ಕಾರಣ ಆತನನ್ನು ಕೆಲ ನೆಟ್ಟಿಗರು ಹಾಗೂ ಟ್ರೋಲ್ ಪೇಜ್​ಗಳು ಆರಂಭದಿಂದಲೂ ಕಾಲೆಳೆಯುತ್ತಾ ಬಂದಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್|

Updated on: Aug 21, 2021 | 2:52 PM

Share
ಸೌತ್ ಸಿನಿರಂಗದಲ್ಲಿ ಕಟೌಟ್ ಸಂಪ್ರದಾಯ ಇಂದು ನಿನ್ನೆಯದಲ್ಲ. ಸೂಪರ್ ಸ್ಟಾರ್​ಗಳ ಚಿತ್ರಗಳು ತೆರೆ ಕಾಣುತ್ತಿದ್ದಂತೆ ಎಲ್ಲೆಂದ್ರಲ್ಲಿ ದೊಡ್ಡ ದೊಡ್ಡ ಕಟೌಟ್​ಗಳು ರಾರಾಜಿಸುತ್ತವೆ. ಇತ್ತೀಚೆಗೆ ಈ ಸಂಪ್ರದಾಯ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೂ ವಿಸ್ತರಿಸಿಕೊಂಡಿದೆ. ಇದಾಗ್ಯೂ ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಕಟೌಟ್ ಪ್ರೀತಿಗೆ ಪಾತ್ರವಾದ ಆಟಗಾರ ಎಂದರೆ ಮಹೇಂದ್ರ ಸಿಂಗ್ ಧೋನಿ ಎನ್ನಬಹುದು.

ಸೌತ್ ಸಿನಿರಂಗದಲ್ಲಿ ಕಟೌಟ್ ಸಂಪ್ರದಾಯ ಇಂದು ನಿನ್ನೆಯದಲ್ಲ. ಸೂಪರ್ ಸ್ಟಾರ್​ಗಳ ಚಿತ್ರಗಳು ತೆರೆ ಕಾಣುತ್ತಿದ್ದಂತೆ ಎಲ್ಲೆಂದ್ರಲ್ಲಿ ದೊಡ್ಡ ದೊಡ್ಡ ಕಟೌಟ್​ಗಳು ರಾರಾಜಿಸುತ್ತವೆ. ಇತ್ತೀಚೆಗೆ ಈ ಸಂಪ್ರದಾಯ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೂ ವಿಸ್ತರಿಸಿಕೊಂಡಿದೆ. ಇದಾಗ್ಯೂ ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಕಟೌಟ್ ಪ್ರೀತಿಗೆ ಪಾತ್ರವಾದ ಆಟಗಾರ ಎಂದರೆ ಮಹೇಂದ್ರ ಸಿಂಗ್ ಧೋನಿ ಎನ್ನಬಹುದು.

1 / 6
ಈ ಹಿಂದೆ ತಮಿಳುನಾಡು ಹಾಗೂ ಕೇರಳದಲ್ಲಿ ಧೋನಿ ಕಟೌಟ್ ಎಲೆ ಎತ್ತಿದ್ದವು. ಇದಾಗ್ಯೂ ಅಭಿಮಾನಿಗಳಿಂದ ಮತ್ಯಾವ ಟೀಮ್ ಇಂಡಿಯಾ ಆಟಗಾರನಿಗೂ ಇಂತಹ ಗೌರವ ದಕ್ಕಿರಲಿಲ್ಲ. ಆದರೀಗ ಹೈದರಾಬಾದ್​​ ಕುವರನಿಗೆ ಅಲ್ಲಿನ ಜನ ಕಟೌಟ್ ನಿಲ್ಲಿಸಿದ್ದಾರೆ.

ಈ ಹಿಂದೆ ತಮಿಳುನಾಡು ಹಾಗೂ ಕೇರಳದಲ್ಲಿ ಧೋನಿ ಕಟೌಟ್ ಎಲೆ ಎತ್ತಿದ್ದವು. ಇದಾಗ್ಯೂ ಅಭಿಮಾನಿಗಳಿಂದ ಮತ್ಯಾವ ಟೀಮ್ ಇಂಡಿಯಾ ಆಟಗಾರನಿಗೂ ಇಂತಹ ಗೌರವ ದಕ್ಕಿರಲಿಲ್ಲ. ಆದರೀಗ ಹೈದರಾಬಾದ್​​ ಕುವರನಿಗೆ ಅಲ್ಲಿನ ಜನ ಕಟೌಟ್ ನಿಲ್ಲಿಸಿದ್ದಾರೆ.

2 / 6
ಹೌದು, ಲಾರ್ಡ್ಸ್​​ನಲ್ಲಿ  ಇಂಗ್ಲೆಂಡ್​ ವಿರುದ್ದ ನಡೆದ 2ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿತ್ತು. ಕ್ರಿಕೆಟ್ ಕಾಶಿ ಎಂದು ಕರೆಯಲ್ಪಡುವ ಮೈದಾನದಲ್ಲಿ ಆಂಗ್ಲರನ್ನು 151 ರನ್​ಗಳಿಂದ ಬಗ್ಗು ಬಡಿದು ಐದು ಟೆಸ್ಟ್ ಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿತು. ಈ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಯುವ ವೇಗಿ ಮೊಹಮ್ಮದ್ ಸಿರಾಜ್.  ಒಟ್ಟು 8 ವಿಕೆಟ್​ ಉರುಳಿಸಿ ಗೆಲುವಿಗೆ ತಮ್ಮದೆಯಾದ ಕೊಡುಗೆ ನೀಡಿದ್ದರು.

ಹೌದು, ಲಾರ್ಡ್ಸ್​​ನಲ್ಲಿ ಇಂಗ್ಲೆಂಡ್​ ವಿರುದ್ದ ನಡೆದ 2ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿತ್ತು. ಕ್ರಿಕೆಟ್ ಕಾಶಿ ಎಂದು ಕರೆಯಲ್ಪಡುವ ಮೈದಾನದಲ್ಲಿ ಆಂಗ್ಲರನ್ನು 151 ರನ್​ಗಳಿಂದ ಬಗ್ಗು ಬಡಿದು ಐದು ಟೆಸ್ಟ್ ಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿತು. ಈ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಯುವ ವೇಗಿ ಮೊಹಮ್ಮದ್ ಸಿರಾಜ್. ಒಟ್ಟು 8 ವಿಕೆಟ್​ ಉರುಳಿಸಿ ಗೆಲುವಿಗೆ ತಮ್ಮದೆಯಾದ ಕೊಡುಗೆ ನೀಡಿದ್ದರು.

3 / 6
ಮೈದಾನದಲ್ಲಿನ ಸಿರಾಜ್ ಅವರ ಈ ಅಮೋಘ ಸಾಧನೆಯ ಬೆನ್ನಲ್ಲೇ ಇತ್ತ ಹುಟ್ಟೂರಿನಲ್ಲಿ ಸಂಭ್ರಮ ಮನೆ ಮಾಡಿದೆ. ಅತ್ತ ಸಿರಾಜ್ ಕೊನೆಯ ವಿಕೆಟ್ ಉರುಳಿಸಿ ಜಯ ತಂದುಕೊಡುತ್ತಿದ್ದಂತೆ ಇತ್ತ ಹೈದರಾಬಾದಿನಲ್ಲಿನ ಸಿರಾಜ್ ಅವರ ನೆರೆಹೊರೆಯವರು ತಮ್ಮ ರಸ್ತೆಯಲ್ಲಿ ಬೃಹತ್ ಕಟೌಟ್ ನಿಲ್ಲಿಸಿದ್ದಾರೆ.

ಮೈದಾನದಲ್ಲಿನ ಸಿರಾಜ್ ಅವರ ಈ ಅಮೋಘ ಸಾಧನೆಯ ಬೆನ್ನಲ್ಲೇ ಇತ್ತ ಹುಟ್ಟೂರಿನಲ್ಲಿ ಸಂಭ್ರಮ ಮನೆ ಮಾಡಿದೆ. ಅತ್ತ ಸಿರಾಜ್ ಕೊನೆಯ ವಿಕೆಟ್ ಉರುಳಿಸಿ ಜಯ ತಂದುಕೊಡುತ್ತಿದ್ದಂತೆ ಇತ್ತ ಹೈದರಾಬಾದಿನಲ್ಲಿನ ಸಿರಾಜ್ ಅವರ ನೆರೆಹೊರೆಯವರು ತಮ್ಮ ರಸ್ತೆಯಲ್ಲಿ ಬೃಹತ್ ಕಟೌಟ್ ನಿಲ್ಲಿಸಿದ್ದಾರೆ.

4 / 6
ಟೀಕಾಕಾರರಿಗೆರ ಬಾಯಿ ಮುಚ್ಚಿಕೊಳ್ಳುವಂತೆ ಸಂಭ್ರಮಿಸುವ ಸಿರಾಜ್ ಅವರ ಕಟೌಟ್ ಅನ್ನು ನಿಲ್ಲಿಸಿ ಅಭಿಮಾನಿಗಳು ಸಂಭ್ರಮ ಪಟ್ಟಿದ್ದಾರೆ. ಇದೇ ಕಟೌಟ್ ನಿಲ್ಲಿಸಲು ಕಾರಣ ಆತನನ್ನು ಕೆಲ ನೆಟ್ಟಿಗರು ಹಾಗೂ ಟ್ರೋಲ್ ಪೇಜ್​ಗಳು ಆರಂಭದಿಂದಲೂ ಕಾಲೆಳೆಯುತ್ತಾ ಬಂದಿದ್ದಾರೆ.

ಟೀಕಾಕಾರರಿಗೆರ ಬಾಯಿ ಮುಚ್ಚಿಕೊಳ್ಳುವಂತೆ ಸಂಭ್ರಮಿಸುವ ಸಿರಾಜ್ ಅವರ ಕಟೌಟ್ ಅನ್ನು ನಿಲ್ಲಿಸಿ ಅಭಿಮಾನಿಗಳು ಸಂಭ್ರಮ ಪಟ್ಟಿದ್ದಾರೆ. ಇದೇ ಕಟೌಟ್ ನಿಲ್ಲಿಸಲು ಕಾರಣ ಆತನನ್ನು ಕೆಲ ನೆಟ್ಟಿಗರು ಹಾಗೂ ಟ್ರೋಲ್ ಪೇಜ್​ಗಳು ಆರಂಭದಿಂದಲೂ ಕಾಲೆಳೆಯುತ್ತಾ ಬಂದಿದ್ದಾರೆ.

5 / 6
ಅಷ್ಟೊಂದು ಟೀಕೆ ಟಿಪ್ಪಣಿಗಳನ್ನು ಮಾಡಿದರೂ ಸಿರಾಜ್ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಗೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಇಂಗ್ಲೆಂಡ್ ತಂಡವನ್ನು ಲಾರ್ಡ್ಸ್​ನಲ್ಲಿ ಸಿರಾಜ್ ತಮ್ಮ ಬೌಲಿಂಗ್ ಅಸ್ತ್ರದಿಂದ ಬಗ್ಗು ಬಡಿದಿದ್ದಾರೆ. ಹೀಗಾಗಿ ತಂಡದಿಂದ ಗೆಟೌಟ್ ನೀಡಬೇಕು ಎನ್ನುವವರು  ಬಾಯಿ ಮುಚ್ಚಿಕೊಳ್ಳಿ ಎಂದು ತಿಳಿಸಲು ಸಿರಾಜ್ ಅವರ 'ಬಾಯ್ತುಚ್ಚು ಕಟೌಟ್' ನಿಲ್ಲಿಸಿ ಹೂಮಾಲೆ ಹಾಕಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಅಷ್ಟೊಂದು ಟೀಕೆ ಟಿಪ್ಪಣಿಗಳನ್ನು ಮಾಡಿದರೂ ಸಿರಾಜ್ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಸರಣಿಗೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಇಂಗ್ಲೆಂಡ್ ತಂಡವನ್ನು ಲಾರ್ಡ್ಸ್​ನಲ್ಲಿ ಸಿರಾಜ್ ತಮ್ಮ ಬೌಲಿಂಗ್ ಅಸ್ತ್ರದಿಂದ ಬಗ್ಗು ಬಡಿದಿದ್ದಾರೆ. ಹೀಗಾಗಿ ತಂಡದಿಂದ ಗೆಟೌಟ್ ನೀಡಬೇಕು ಎನ್ನುವವರು ಬಾಯಿ ಮುಚ್ಚಿಕೊಳ್ಳಿ ಎಂದು ತಿಳಿಸಲು ಸಿರಾಜ್ ಅವರ 'ಬಾಯ್ತುಚ್ಚು ಕಟೌಟ್' ನಿಲ್ಲಿಸಿ ಹೂಮಾಲೆ ಹಾಕಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

6 / 6
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ