AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Team India New Coach: ಕುಂಬ್ಳೆ ಅಲ್ಲ: ಟೀಮ್ ಇಂಡಿಯಾ ಮುಂದಿನ ಕೋಚ್ ಇವರಂತೆ: ಹಿಂಟ್ ಕೊಟ್ಟ ಎಂಎಸ್​ಕೆ ಪ್ರಸಾದ್

MSK Prasad: ಎಂಎಸ್‌ಕೆ ಪ್ರಸಾದ್ ಪ್ರಕಾರ, ಟೀಮ್ ಇಂಡಿಯಾದ ಮುಂದಿನ ಮುಖ್ಯ ಕೋಚ್‌ ಆಗಲು ರಾಹುಲ್ ದ್ರಾವಿಡ್‌ ಸೂಕ್ತ ವ್ಯಕ್ತಿ ಎಂದು ಹೇಳಿದ್ದಾರೆ. ಅಲ್ಲದೆ ಆಟಗಾರರಿಗೆ ಮಾರ್ಗದರ್ಶನದ ಕೆಲಸವನ್ನು ಎಂಎಸ್‌ ಧೋನಿ ವಹಿಸಿಕೊಳ್ಳಬೇಕು ಎಂದಿದ್ದಾರೆ.

Team India New Coach: ಕುಂಬ್ಳೆ ಅಲ್ಲ: ಟೀಮ್ ಇಂಡಿಯಾ ಮುಂದಿನ ಕೋಚ್ ಇವರಂತೆ: ಹಿಂಟ್ ಕೊಟ್ಟ ಎಂಎಸ್​ಕೆ ಪ್ರಸಾದ್
MSK Prasad Team India Coach
TV9 Web
| Updated By: Vinay Bhat|

Updated on: Oct 01, 2021 | 9:12 AM

Share

ಐಸಿಸಿ ಟಿ-20 ವಿಶ್ವಕಪ್ (ICC T20 World Cup) ಮುಗಿದ ಬೆನ್ನಲ್ಲೇ ಭಾರತ ಕ್ರಿಕೆಟ್ ತಂಡದಲ್ಲಿ (Indian Cricket Team) ಬಹುದೊಡ್ಡ ಬದಲಾವಣೆ ಆಗಲಿದೆ. ಈಗಾಗಲೇ ಟೀಮ್ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ (Virat Kohli) ಟಿ-20  ವಿಶ್ವಕಪ್ ಬಳಿಕ ಚುಟುಕು ಮಾದರಿಯ ಕ್ರಿಕೆಟ್​ನ ಕ್ಯಾಪ್ಟನ್ಸಿಯಿಂದ ನಿವೃತ್ತಿ ಪಡೆಯಲಿದ್ದೇನೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಭಾರತ ತಂಡದ ಮುಖ್ಯ ಕೋಚ್​ ರವಿ ಶಾಸ್ತ್ರಿ (Ravi Shastri) ಸೇವಾವಧಿ ಕೂಡ ಅಂತ್ಯವಾಗಲಿದೆ. ಹೀಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಂದಿನ ಕೋಚ್​ನ ಹುಡುಕಾಟದಲ್ಲಿದೆ. ಈಗಾಗಲೇ ಅನಿಲ್ ಕುಂಬ್ಳೆ (Anil Kumble), ವಿವಿಎಸ್ ಲಕ್ಷ್ಮಣ್ (VVS Laxman), ಮಹೇಲಾ ಜಯವರ್ಧನೆ ಸೇರಿದಂತೆ ಕೆಲ ಮಾಜಿ ಅನುಭವಿ ಆಟಗಾರರ ಹೆಸರು ಕೇಳಿಬರುತ್ತಿದೆ. ಇದರ ಬೆನ್ನಲ್ಲೆ ಸದ್ಯ ಬಿಸಿಸಿಐ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್ (MSK Prasad) ಭಾರತ ತಂಡದ ಮುಂದಿನ ಕೋಚ್ (Team India Coach) ಇವರಾದರೆ ಉತ್ತಮ ಎಂದು ಹೇಳಿದ್ದಾರೆ.

ಎಂಎಸ್‌ಕೆ ಪ್ರಸಾದ್ ಪ್ರಕಾರ, ಟೀಮ್ ಇಂಡಿಯಾದ ಮುಂದಿನ ಮುಖ್ಯ ಕೋಚ್‌ ಆಗಲು ರಾಹುಲ್ ದ್ರಾವಿಡ್‌ ಅವರು ಸೂಕ್ತ ವ್ಯಕ್ತಿ ಎಂದು ಹೇಳಿದ್ದಾರೆ. ಅಲ್ಲದೆ ಆಟಗಾರರಿಗೆ ಮಾರ್ಗದರ್ಶನದ ಕೆಲಸವನ್ನು ಎಂಎಸ್‌ ಧೋನಿ ವಹಿಸಿಕೊಳ್ಳಬೇಕು ಎಂದಿದ್ದಾರೆ. “ನನ್ನ ಹೃದಯ ಹೇಳುತ್ತಿದೆ. ನನ್ನ ಭಾವನೆಗಳ ಪ್ರಕಾರ ದ್ರಾವಿಡ್ ಮುಂದಿನ ಕೋಚ್‌ ಆಗಬೇಕು ಎಂದು. ನನ್ನ ಸಯೋದ್ಯೋಗಿಗಳ ಬಳಿ ನಾನು ಸವಾಲು ಕೂಡ ಹಾಕಿದ್ದೇನೆ. ರವಿ ಶಾಸ್ತ್ರಿ ಯುಗಾಂತ್ಯದ ಬಳಿಕ ಎಂಎಸ್‌ ಧೋನಿ ಟೀಮ್ ಇಂಡಿಯಾ ಮೆಂಟರ್‌ ಆಗಿ, ದ್ರಾವಿಡ್‌ ಮುಖ್ಯ ಕೋಚ್‌ ಆಗಿ ನೇಮಕವಾಗಬೇಕು ಎಂದು ಹೇಳಿದ್ದೇನೆ. ಐಪಿಎಲ್‌ ಕಾಮೆಂಟರಿ ವೇಳೆ ಈ ಬಗ್ಗೆ ಚರ್ಚೆ ಕೂಡ ಮಾಡಿದ್ದೇನೆ” ಎಂದು ಪ್ರಸಾದ್ ಹೇಳಿದ್ದಾರೆ.

“ರಾಹುಲ್‌ ಅವರಂತಹ ಶಿಸ್ತಿನ ವ್ಯಕ್ತಿ ಭಾರತ ತಂಡದ ಕೋಚ್‌ ಸ್ಥಾನಕ್ಕೆ ಸೂಕ್ತವಾಗಿದ್ದಾರೆ. ಮುಖ್ಯ ಕೋಚ್‌ ಆಗಿ ದ್ರಾವಿಡ್‌ ಕೆಲಸ ಮಾಡಿ, ಆಟಗಾರರಿಗೆ ಮಾರ್ಗದರ್ಶನದ ಕೆಲಸವನ್ನು ಎಂಎಸ್‌ ಧೋನಿ ವಹಿಸಿಕೊಳ್ಳಬೇಕು. ಇಬ್ಬರೂ ಕೂಡ ಶಾಂತ ಸ್ವಭಾವದವರು. ಎಲ್ಲಕ್ಕಿಂತಲೂ ಮಿಗಿಲಾಗಿ ಇಂದು ಪ್ರತಿಭಾವಂತ ಆಟಗಾರರಾಗಿ ಗುರುತಿಸಿಕೊಂಡ ಬಹುತೇಕ ಆಟಗಾರರನ್ನು ರೂಪಿಸಿದ್ದೇ ದ್ರಾವಿಡ್‌. ಭಾರತ ‘ಎ’ ತಂಡದಲ್ಲಿ ಕೋಚ್‌ ಕೆಲಸ ಮಾಡಿದಾಗ ಅವರು ಹಲವು ಅದ್ಭುತ ಯೋಜನೆಗಳೊಂದಿಗೆ ಆಟಗಾರರ ಅಭಿವೃದ್ಧಿ ಮಾಡಿದ್ದಾರೆ. ಹೀಗಾಗಿ ಕೋಚ್‌ ಸ್ಥಾನಕ್ಕೆ ದ್ರಾವಿಡ್‌ ಮತ್ತು ಮೆಂಟರ್‌ ಸ್ಥಾನಕ್ಕೆ ಧೋನಿ ನೇಮಕವಾಗದೇ ಇದ್ದರೆ ನನಗಂತೂ ಖಂಡಿತಾ ಬಹಳಾ ನಿರಾಶೆ ಆಗಲಿದೆ” ಎಂದು ಎಂಎಸ್​ಎಸ್​ಕೆ ಪ್ರಸಾದ್ ಹೇಳಿದ್ದಾರೆ.

ನವೆಂಬರ್​ನಲ್ಲಿ ಟಿ-20 ವಿಶ್ವಕಪ್​ ಮುಗಿಯುತ್ತಿದ್ದಂತೆ ಮುಖ್ಯ ಕೋಚ್​ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್​, ಫೀಲ್ಡಿಂಗ್ ಕೋಚ್​ ಆರ್​ ಶ್ರೀಧರ್​ ಅವರ ಅವಧಿ ಮುಗಿಯಲಿದೆ. ಈ ಹಿಂದೆ 2014 ಮತ್ತು 2016 ರ ಟಿ-20 ವಿಶ್ವಕಪ್‌ಗಳಲ್ಲಿ ರವಿಶಾಸ್ತ್ರಿ ಟೀಮ್ ಇಂಡಿಯಾದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅದರ ನಂತರ ಅನಿಲ್ ಕುಂಬ್ಳೆ ಭಾರತ ತಂಡದ ಕೋಚ್ ಆಗಿದ್ದರು. 2017 ರಲ್ಲಿ ಅನಿಲ್ ಕುಂಬ್ಳೆ ನಂತರ, ರವಿಶಾಸ್ತ್ರಿ ಅವರಿಗೆ ಪೂರ್ಣಕಾಲಿಕ ಕೋಚ್ ಹುದ್ದೆ ನೀಡಲಾಯಿತು. 2017 ರಿಂದ ರವಿಶಾಸ್ತ್ರಿ ಭಾರತ ತಂಡದ ಕೋಚ್ ಆಗಿದ್ದಾರೆ.

Chirs Gayle: ಪಂಜಾಬ್ ಕಿಂಗ್ಸ್​ಗೆ ಬಿಗ್ ಶಾಕ್: ತಂಡದಿಂದ ದಿಢೀರ್ ಹೊರ ನಡೆದ ಕ್ರಿಸ್ ಗೇಲ್, ಯಾಕೆ ಗೊತ್ತಾ?

KKR vs PBKS, IPL 2021: ಇಂದು ಕೋಲ್ಕತ್ತಾಕ್ಕೆ ಪಂಜಾಬ್ ಸವಾಲು: ರಾಹುಲ್ ಪಡೆಗೆ ಗೆದ್ದರಷ್ಟೆ ಉಳಿಗಾಲ

(MSK Prasad feels that the Rahul Dravid as a Team India coach and MS Dhoni as mentor afetr T20 World Cup)

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್