AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup: ಕ್ಯಾಚ್ ಹಿಡಿದಿದ್ದರೂ ನಾವೇ ಗೆಲ್ಲುತ್ತಿದ್ದೆವು! ಪಾಕ್ ನಾಯಕ ಬಾಬರ್​ಗೆ ಟಾಂಗ್ ಕೊಟ್ಟ ಮ್ಯಾಥ್ಯೂ ವೇಡ್

PAK vs AUS: ನಾನು ಔಟಾದರೆ ನನ್ನ ಬಳಿಕ ಕಮ್ಮಿನ್ಸ್ ನನ್ನ ಹಿಂದೆ ಬರುತ್ತಾರೆ ಎಂಬುದು ಖಚಿತವಾಗಿತ್ತು. ಹೀಗಾಗಿ ನಾನು ಔಟಾಗಿದ್ದರೂ ನಾವು ಪಂದ್ಯ ಗೆಲ್ಲುತ್ತಿದ್ದೇವು.

T20 World Cup: ಕ್ಯಾಚ್ ಹಿಡಿದಿದ್ದರೂ ನಾವೇ ಗೆಲ್ಲುತ್ತಿದ್ದೆವು! ಪಾಕ್ ನಾಯಕ ಬಾಬರ್​ಗೆ ಟಾಂಗ್ ಕೊಟ್ಟ ಮ್ಯಾಥ್ಯೂ ವೇಡ್
ಮ್ಯಾಥ್ಯೂ ವೇಡ್
TV9 Web
| Updated By: ಪೃಥ್ವಿಶಂಕರ|

Updated on: Nov 12, 2021 | 3:40 PM

Share

2021 ರ ಟಿ 20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ, ಹಸನ್ ಅಲಿ ಮ್ಯಾಥ್ಯೂ ವೇಡ್ ಅವರ ಕ್ಯಾಚ್ ಅನ್ನು ಬಿಟ್ಟಿದ್ದು ಟರ್ನಿಂಗ್ ಪಾಯಿಂಟ್ ಎಂದು ಕರೆಯಲಾಗುತ್ತಿದೆ. ಈ ಅವಕಾಶದ ನಂತರ, ಆಸ್ಟ್ರೇಲಿಯಾ ಸ್ಕ್ರೂಗಳನ್ನು ಬಿಗಿಗೊಳಿಸಿ ಪಾಕಿಸ್ತಾನದಿಂದ ಪಂದ್ಯವನ್ನು ಕಸಿದುಕೊಂಡಿತು. ನಂತರ ವೇಡ್ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿ ಆಸ್ಟ್ರೇಲಿಯಾ ಎರಡನೇ ಬಾರಿಗೆ T20 ವಿಶ್ವಕಪ್‌ನ ಫೈನಲ್‌ಗೆ ತಲುಪುವಂತೆ ಮಾಡಿದರು. ಆದರೆ ಕ್ಯಾಚ್ ಹಿಡಿದಿದ್ದರೂ ನಾವೇ ಗೆಲ್ಲುತ್ತಿದ್ದವು ಎಂದು ಮ್ಯಾಥ್ಯೂ ವೇಡ್ ಅಭಿಪ್ರಾಯಪಟ್ಟಿದ್ದಾರೆ.

ಡೇವಿಡ್ ವಾರ್ನರ್ 30 ಎಸೆತಗಳಲ್ಲಿ 49 ರನ್ ಮತ್ತು ವೇಡ್ 17 ಎಸೆತಗಳಲ್ಲಿ 41 ರನ್ ಗಳಿಸಿ ಆಸ್ಟ್ರೇಲಿಯಾ ಗೆಲುವಿಗೆ ಕಾರಣರಾದರು. ವೇಡ್ 19ನೇ ಓವರ್‌ನಲ್ಲಿ ಶಾಹೀನ್ ಅಫ್ರಿದಿ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಪಂದ್ಯವನ್ನು ಅಂತ್ಯಗೊಳಿಸಿದರು. ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮ್ಯಾಥ್ಯೂ ವೇಡ್ ಕ್ಯಾಚ್ ಬಗ್ಗೆ ಹೇಳಿದ್ದು, ನನ್ನ ಪ್ರಕಾರ 12 ಅಥವಾ 14 ರನ್‌ಗಳ ಅಗತ್ಯವಿತ್ತು. ಆ ಹಂತದಲ್ಲಿ ಪಂದ್ಯವು ನಮ್ಮ ಕಡೆಗೆ ತಿರುಗಲು ಪ್ರಾರಂಭಿಸಿತು ಎಂದು ನಾನು ಭಾವಿಸುತ್ತೇನೆ. ನಾನು ಕ್ರೀಸ್​ಗೆ ಇಳಿದಾಗ ಪಂದ್ಯ ಏನಾಗಲಿದೆ ಎಂದು ನನಗೆ ತಿಳಿದಿರಲಿಲ್ಲ. ಆದರೆ ಸ್ಟೊಯಿನಿಸ್ ಮೈದಾನದಲ್ಲಿ ಪಾಸಿಟಿವ್ ಆಗಿ ಕಾಣ ತೊಡಗಿದರು. ಜೊತೆಗೆ ನಾನು ಔಟಾದರೆ ನನ್ನ ಬಳಿಕ ಕಮ್ಮಿನ್ಸ್ ನನ್ನ ಹಿಂದೆ ಬರುತ್ತಾರೆ ಎಂಬುದು ಖಚಿತವಾಗಿತ್ತು. ಹೀಗಾಗಿ ನಾನು ಔಟಾಗಿದ್ದರೂ ನಾವು ಪಂದ್ಯ ಗೆಲ್ಲುತ್ತಿದ್ದೇವು. ಆದ್ದರಿಂದ ಕ್ಯಾಚ್‌ನಿಂದಾಗಿ ನಾವು ಪಂದ್ಯವನ್ನು ಗೆದ್ದಿದ್ದೇವೆ ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ.

ಅಲಿಯನ್ನು ಶಪಿಸಿದ ಬಾಬರ್ ನಮ್ಮ ಫೀಲ್ಡಿಂಗ್ ಹಗುರವಾಗಿತ್ತು ಮತ್ತು ನಿರ್ಣಾಯಕ ಸಂದರ್ಭಗಳಲ್ಲಿ ಕ್ಯಾಚ್‌ಗಳನ್ನು ಕೈಬಿಡುವುದು ತಂಡಕ್ಕೆ ದುಬಾರಿಯಾಗಿದೆ ಎಂದು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಹೇಳಿದ್ದಾರೆ. ವೇಡ್‌ಗೆ ಹಸನ್ ಅಲಿ ಜೀವದಾನ ನೀಡಿದರು, ನಂತರ ಅವರು ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಈ ಬಗ್ಗೆ ಮಾತನಾಡಿದ ಬಾಬರ್, ಎಲ್ಲವೂ ನಮ್ಮ ತಂತ್ರದ ಪ್ರಕಾರ ನಡೆಯುತ್ತಿತ್ತು. ನಮ್ಮ ಸ್ಕೋರ್ ಕೂಡ ಉತ್ತಮವಾಗಿತ್ತು ಆದರೆ ನಮ್ಮ ಬೌಲಿಂಗ್ ಅಷ್ಟು ನಿಖರವಾಗಿರಲಿಲ್ಲ. ಇಂತಹ ಸಂದರ್ಭಗಳಲ್ಲಿ ಕ್ಯಾಚ್ ಕೈಬಿಟ್ಟರೆ ಪಂದ್ಯ ನಿಮ್ಮ ಕೈ ತಪ್ಪುತ್ತದೆ. ಇದು ಪಂದ್ಯದ ಮಹತ್ವದ ತಿರುವು ಕೂಡ ಆಗಿತ್ತು ಎಂದಿದ್ದಾರೆ.

ಕೊನೆಯ ಓವರ್‌ಗಳಲ್ಲಿ ಅಬ್ಬರಿಸಿದ ವೇಡ್ 33 ವರ್ಷದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್, ಕೊನೆಯ ಓವರ್‌ಗಳಲ್ಲಿ ಅನುಭವ ನೆರವಿಗೆ ಬಂದಿತು ಎಂದು ಹೇಳಿದರು. ಆದರೆ ಡ್ರೆಸ್ಸಿಂಗ್ ರೂಮಿನಲ್ಲಿ ಯಾವುದೇ ಗದ್ದಲ ಇರಲಿಲ್ಲ. ಕೊನೆಯ ಓವರ್‌ನಲ್ಲಿ ಬ್ಯಾಟಿಂಗ್ ಮಾಡಿದ ಅವರು, ಸ್ಟೋನಿಸ್ ಇನ್ನೊಂದು ತುದಿಯಲ್ಲಿನ ಒತ್ತಡವನ್ನು ತೆಗೆದುಹಾಕಿದರು. ಶಾಹೀನ್ ನಾನು ನಿರೀಕ್ಷಿಸಿದ್ದಕ್ಕಿಂತ ವೇಗವಾಗಿ ಬೌಲಿಂಗ್ ಮಾಡುತ್ತಿದ್ದರು. ಅಂತಿಮವಾಗಿ ತಂಡವನ್ನು ಗುರಿಯತ್ತ ಕೊಂಡೊಯ್ದಿರುವುದು ಸಂತಸ ತಂದಿದೆ. ಕೆಲ ಕಾಲ ತಂಡದಿಂದ ಹೊರಗಿದ್ದ ನನಗೆ ಮತ್ತೆ ಅವಕಾಶ ಸಿಕ್ಕಿದ್ದು ಖುಷಿ ತಂದಿದೆ ಎಂದಿದ್ದಾರೆ.

ಸಾಂಪ್ರದಾಯಿಕ ಡ್ರೆಸ್ ತೊಟ್ಟು ಓಣಂ ಹಬ್ಬದೂಟ ಮಾಡಿದ ಮುದ್ದು ನಾಯಿ
ಸಾಂಪ್ರದಾಯಿಕ ಡ್ರೆಸ್ ತೊಟ್ಟು ಓಣಂ ಹಬ್ಬದೂಟ ಮಾಡಿದ ಮುದ್ದು ನಾಯಿ
ಗಂಡನನ್ನು ನಿಮಗೆ ಒಪ್ಪಿಸಿದ್ದೇನೆ, 4 ತಿಂಗಳು ಲಾಕ್ ಮಾಡಿಕೊಳ್ಳಿ: ಹರ್ಷಿಕಾ
ಗಂಡನನ್ನು ನಿಮಗೆ ಒಪ್ಪಿಸಿದ್ದೇನೆ, 4 ತಿಂಗಳು ಲಾಕ್ ಮಾಡಿಕೊಳ್ಳಿ: ಹರ್ಷಿಕಾ
ಇಂದೋರ್​​ನ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಇಲಿ ಕಚ್ಚಿ 2 ಶಿಶುಗಳು ಸಾವು
ಇಂದೋರ್​​ನ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಇಲಿ ಕಚ್ಚಿ 2 ಶಿಶುಗಳು ಸಾವು
ದರ್ಶನ್ ಆ ರೀತಿ ವ್ಯಕ್ತಿ ಅಲ್ಲ, ಯಾಕೆ ಹೀಗಾಯ್ತೋ ಗೊತ್ತಿಲ್ಲ: ಎಂಡಿ ಶ್ರೀಧರ್
ದರ್ಶನ್ ಆ ರೀತಿ ವ್ಯಕ್ತಿ ಅಲ್ಲ, ಯಾಕೆ ಹೀಗಾಯ್ತೋ ಗೊತ್ತಿಲ್ಲ: ಎಂಡಿ ಶ್ರೀಧರ್
ಗಣೇಶ ವಿಸರ್ಜನೆ ವೇಳೆ DJ ಬಂದ್ ಮಾಡಿಸಿದ ಪೊಲೀಸರು, ಗ್ರಾಮಸ್ಥರು ಮಾಡಿದ್ದೇನು
ಗಣೇಶ ವಿಸರ್ಜನೆ ವೇಳೆ DJ ಬಂದ್ ಮಾಡಿಸಿದ ಪೊಲೀಸರು, ಗ್ರಾಮಸ್ಥರು ಮಾಡಿದ್ದೇನು
ಅಭಿಮಾನ್ ಸ್ಟುಡಿಯೋ ಜಾಗ ಮಾರಾಟ, ರಾಜಕಾರಣಿಗೂ ಲಾಭ: ಗೀತಾ ಬಾಲಿ
ಅಭಿಮಾನ್ ಸ್ಟುಡಿಯೋ ಜಾಗ ಮಾರಾಟ, ರಾಜಕಾರಣಿಗೂ ಲಾಭ: ಗೀತಾ ಬಾಲಿ
ಅಭಿಮಾನ್ ಸ್ಟುಡಿಯೋ 10 ಎಕರೆ ಮಾರಾಟ ಆಗಿದ್ದರಲ್ಲಿ ಸರ್ಕಾರದ್ದೇ ಕೈವಾಡ: ಗೀತಾ
ಅಭಿಮಾನ್ ಸ್ಟುಡಿಯೋ 10 ಎಕರೆ ಮಾರಾಟ ಆಗಿದ್ದರಲ್ಲಿ ಸರ್ಕಾರದ್ದೇ ಕೈವಾಡ: ಗೀತಾ
EVM ಬದಲಿಗೆ ಬ್ಯಾಲೆಟ್ ಪೇಪರ್: ಚುನಾವಣಾ ಆಯುಕ್ತರು ಹೇಳಿದ್ದೇನು?
EVM ಬದಲಿಗೆ ಬ್ಯಾಲೆಟ್ ಪೇಪರ್: ಚುನಾವಣಾ ಆಯುಕ್ತರು ಹೇಳಿದ್ದೇನು?
ರಾಜಕೀಯ ನಿವೃತ್ತಿ ಬಗ್ಗೆ ವಿ ಸೋಮಣ್ಣ ಮತ್ತೆ ಸ್ಪಷ್ಟನೆ: ಹೇಳಿದ್ದೇನು ನೋಡಿ
ರಾಜಕೀಯ ನಿವೃತ್ತಿ ಬಗ್ಗೆ ವಿ ಸೋಮಣ್ಣ ಮತ್ತೆ ಸ್ಪಷ್ಟನೆ: ಹೇಳಿದ್ದೇನು ನೋಡಿ
ಉಚಿತವಾಗಿ ಊಟ ವಿತರಿಸುವಾಗ ದುಡ್ಡು ಕೊಟ್ಟು ಊಟ ಪಡೆದ ಸ್ವಾಭಿಮಾನಿ ಬಾಲಕ
ಉಚಿತವಾಗಿ ಊಟ ವಿತರಿಸುವಾಗ ದುಡ್ಡು ಕೊಟ್ಟು ಊಟ ಪಡೆದ ಸ್ವಾಭಿಮಾನಿ ಬಾಲಕ