AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranji Trophy Final 2022: 4ನೇ ದಿನದಾಟ ಅಂತ್ಯ; ಚಾಂಪಿಯನ್ ಪಟ್ಟಕ್ಕೇರುವ ಸನಿಹದಲ್ಲಿ ಮಧ್ಯಪ್ರದೇಶ

Ranji Trophy Final 2022: ನಿನ್ನೆ ಮೂರು ವಿಕೆಟ್ ನಷ್ಟಕ್ಕೆ 368 ರನ್​ಗಳಿಂದ ಇನ್ನಿಂಗ್ಸ್ ಆರಂಭಿಸಿದ ಮಧ್ಯಪ್ರದೇಶ ಇಂದು ಮತ್ತೆ 168 ರನ್ ಸೇರಿಸಿತು. ಮಧ್ಯಪ್ರದೇಶ ಮೊದಲ ಇನಿಂಗ್ಸ್‌ನಲ್ಲಿ 536 ರನ್ ಗಳಿಸಿತ್ತು.

Ranji Trophy Final 2022: 4ನೇ ದಿನದಾಟ ಅಂತ್ಯ; ಚಾಂಪಿಯನ್ ಪಟ್ಟಕ್ಕೇರುವ ಸನಿಹದಲ್ಲಿ ಮಧ್ಯಪ್ರದೇಶ
Ranji Trophy Final
TV9 Web
| Updated By: ಪೃಥ್ವಿಶಂಕರ|

Updated on: Jun 25, 2022 | 7:59 PM

Share

ಮಧ್ಯಪ್ರದೇಶ ಮತ್ತು ಮುಂಬೈ (Mumbai vs Madhya pradesh) ನಡುವಿನ ರಣಜಿ ಟ್ರೋಫಿಯ ಫೈನಲ್ ಪಂದ್ಯ ಆರಂಭವಾಗಿದೆ. ನಾಲ್ಕನೇ ದಿನದ ಅಂತ್ಯಕ್ಕೆ ಮಧ್ಯಪ್ರದೇಶ ಬಲಿಷ್ಠ ಸ್ಥಾನದಲ್ಲಿ ಭದ್ರವಾಗಿ ಕೂತಿದೆ. ನಿನ್ನೆ ಮೂರು ವಿಕೆಟ್ ನಷ್ಟಕ್ಕೆ 368 ರನ್​ಗಳಿಂದ ಇನ್ನಿಂಗ್ಸ್ ಆರಂಭಿಸಿದ ಮಧ್ಯಪ್ರದೇಶ ಇಂದು ಮತ್ತೆ 168 ರನ್ ಸೇರಿಸಿತು. ಮಧ್ಯಪ್ರದೇಶ ಮೊದಲ ಇನಿಂಗ್ಸ್‌ನಲ್ಲಿ 536 ರನ್ ಗಳಿಸಿತ್ತು. ಈ ಮೂಲಕ ಮಧ್ಯಪ್ರದೇಶ ಮೊದಲ ಇನಿಂಗ್ಸ್‌ನಲ್ಲಿ ಮುಂಬೈಗಿಂತ 162 ರನ್‌ಗಳ ಮುನ್ನಡೆ ಸಾಧಿಸಿದೆ. ನಾಳೆಯ ಕೊನೆಯ ದಿನ ಬಾಕಿ ಉಳಿದಿದ್ದು, ಮಧ್ಯಪ್ರದೇಶ ಇನ್ನೂ 49 ರನ್ ಮುನ್ನಡೆ ಹೊಂದಿದೆ. ಇದರರ್ಥ ಮುಂಬೈ ಈ ಮುನ್ನಡೆಯನ್ನು ಮರುಪಾವತಿಸಿ, ಒಂದೇ ದಿನದಲ್ಲಿ ಹೊಸ ಸ್ಕೋರ್ ಹೊಂದಿಸಬೇಕು. ಆ ಬಳಿಕ ಮಧ್ಯಪ್ರದೇಶ ಆ ರನ್ ಗಳಿಸದೆ ಆಲೌಟ್ ಆಗಬೇಕಿದೆ.ಹಾಗಾದರೆ ಮಾತ್ರ ಮುಂಬೈಗೆ ಟ್ರೋಫಿ ಗೆಲ್ಲುವ ಅವಕಾಶ ಸಿಗಲಿದೆ. ಆದರೆ ಇದು ಹೇಳಿದಷ್ಟು ಸುಲಭವಾಗಿ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಈ ಸೀಸನ್​ನ ಹೊಸ ಚಾಂಪಿಯನ್ ಆಗುವತ್ತಾ ಮಧ್ಯಪ್ರದೇಶ ದಾಪುಗಾಲಿಡುತ್ತಿದೆ. ಆದರೆ IPL ಸ್ಟಾರ್ ರಜತ್ ಪಾಟಿದಾರ್ (Rajat Patidar) ಶತಕ ಇಂದಿನ ಆಟದ ವೈಶಿಷ್ಟ್ಯವಾಯಿತು. ಇಂದು ಬೆಳಗ್ಗೆ 67 ರನ್‌ಗಳೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಅವರು 219 ಎಸೆತಗಳಲ್ಲಿ 122 ರನ್ ಗಳಿಸಿದರು. ಅವರನ್ನು ದೇಶಪಾಂಡೆ ವಜಾಗೊಳಿಸಿದರು. ರಜತ್ ತಮ್ಮ ಶತಕದಲ್ಲಿ 20 ಬೌಂಡರಿಗಳನ್ನು ಬಾರಿಸಿದರು.

ಮಧ್ಯಪ್ರದೇಶದ ಪರ ಮೂರು ಶತಕ

ಇದನ್ನೂ ಓದಿ
Image
SL vs AUS: ಆಸೀಸ್ ವಿರುದ್ಧದ ಟೆಸ್ಟ್ ಸರಣಿಗೆ ಲಂಕಾ ತಂಡ ಪ್ರಕಟ; ನಿಷೇಧಕ್ಕೊಳಗಾಗಿದ್ದ ಸ್ಪಿನ್ನರ್​ಗೆ ಅವಕಾಶ
Image
1983 World Cup: ಕಪಿಲ್​ಗೆ ನಾನು ಸಾಥ್​ ನೀಡಿರದಿದ್ದರೆ? ಯಾರೂ ಕ್ರೆಡಿಟ್ ನೀಡಲಿಲ್ಲ! ಕಿರ್ಮಾನಿ ಮನದಾಳದ ನೋವಿದು

ಇಂದು, ಮುಂಬೈ ತನ್ನ ಮೊದಲ ಯಶಸ್ಸನ್ನು ಆದಿತ್ಯ ಶ್ರೀವಾಸ್ತವ ರೂಪದಲ್ಲಿ ಪಡೆದುಕೊಂಡಿತು. ತಂಡದ ಸ್ಕೋರ್ 401 ಆಗಿದ್ದಾಗ ಅವರು ಔಟಾದರು. ಅದರ ನಂತರ, ಮಧ್ಯಪ್ರದೇಶದ ಬ್ಯಾಟ್ಸ್‌ಮನ್‌ಗಳು ಒಬ್ಬೋಬ್ಬರಾಗಿ ವಿಕೆಟ್ ಒಪ್ಪಿಸಿದರು. ಕೆಳಗಿನ ಕ್ರಮಾಂಕದ ಬ್ಯಾಟ್ಸ್‌ಮನ್ ಸರನ್ಶ್ ಜೈನ್ 57 ರನ್‌ಗಳ ನಿರ್ಣಾಯಕ ಅರ್ಧಶತಕವನ್ನು ಬಾರಿಸಿದರು. ಮಧ್ಯಪ್ರದೇಶದಿಂದ ಯಶ್ ದುಬೆ (133), ಶುಭಂ ಶರ್ಮಾ (116) ಮತ್ತು ರಜತ್ ಪಾಟಿದಾರ್ (122) ಶತಕ ಗಳಿಸಿದರು. ಇವರಿಗೆ ಹೋಲಿಸಿದರೆ, ಮುಂಬೈ ಪರ ಸರ್ಫರಾಜ್ ಖಾನ್ (134) ಮಾತ್ರ ಶತಕ ಗಳಿಸಿದರು. ಹೀಗಾಗಿ ಮುಂಬೈಗೆ ದೊಡ್ಡ ಸ್ಕೋರ್ ಕಟ್ಟಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: Ranji Trophy: 23 ವರ್ಷಗಳ ನಂತರ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್‌ ಪ್ರವೇಶಿಸಿದ ಮಧ್ಯಪ್ರದೇಶ..!

ಮುಂಬೈನ ಎರಡು ವಿಕೆಟ್

ನಾಲ್ಕನೇ ದಿನದಾಟದ ಅಂತ್ಯಕ್ಕೆ ಮುಂಬೈ 2 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿದೆ. ಮುಂಬೈ ಇನ್ನೂ 49 ರನ್ ಹಿಂದಿದೆ. ನಾಯಕ ಪೃಥ್ವಿ ಶಾ (44) ರನ್ ಗಳಿಸಿ ಔಟಾದರು. ಅವರು ಯಶ್ ದುಬೇಕರ್ ಬೌಲಿಂಗ್​ನಲ್ಲಿ ಗೌರವ್ ಯಾದವ್​ಗೆ ಕ್ಯಾಚ್ ನೀಡಿದರು. ಪೃಥ್ವಿ 52 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ 2 ಸಿಕ್ಸರ್‌ಗಳಿಂದ 44 ರನ್ ಗಳಿಸಿದರು. ಹಾರ್ದಿಕ್ ತಮೆರೆಲಾ (25) ಕುಮಾರ್ ಕಾರ್ತಿಕೇಯ ಬೌಲಿಂಗ್​ನಲ್ಲಿ ಔಟಾದರು. ಈಗ ಅರ್ಮಾನ್ ಜಾಫರ್ (30) ಮತ್ತು ಸುವೇದ್ ಪರ್ಕರ್ (9) ರನ್ ಗಳಿಸಿ ಆಡುತ್ತಿದ್ದಾರೆ.

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ