AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧೋನಿಗಾಗಿ ಕಾದು ಕುಳಿತಿದ್ದ ಫ್ಯಾನ್ಸ್​ಗೆ ಚಮಕ್ ಕೊಟ್ಟ ಜಡೇಜಾ; ನಂತರ ಆಗಿದ್ದೇನು ನೋಡಿ..

ಧೋನಿ ಫೀಲ್ಡ್​ಗೆ ಇಳಿಯಲಿ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು. ಎಲ್ಲರೂ ಧೋನಿ ಧೋನಿ ಎಂದು ಕೂಗೋಕೆ ಆರಂಭಿಸಿದರು. ಆದರೆ ಬ್ಯಾಟ್ ಹಿಡಿದು ರವೀಂದ್ರ ಜಡೇಜಾ ಫೀಲ್ಡ್​ಗೆ ಇಳಿಯೋಕೆ ಹೊರಟರು. ಇದನ್ನು ನೋಡಿ ಧೋನಿ ಫ್ಯಾನ್ಸ್ ಬೇಸರಗೊಂಡರು.

ಧೋನಿಗಾಗಿ ಕಾದು ಕುಳಿತಿದ್ದ ಫ್ಯಾನ್ಸ್​ಗೆ ಚಮಕ್ ಕೊಟ್ಟ ಜಡೇಜಾ; ನಂತರ ಆಗಿದ್ದೇನು ನೋಡಿ..
ಧೋನಿ
Follow us
ರಾಜೇಶ್ ದುಗ್ಗುಮನೆ
|

Updated on:Apr 09, 2024 | 10:53 AM

ಚೆನ್ನೈ ಸೂಪರ್ ಕಿಂಗ್ಸ್  (CSK) ಹಾಗೂ ಕೆಕೆಆರ್​ ಪಂದ್ಯದಲ್ಲಿ ಸಿಎಸ್​​ಕೆ ತಂಡ ಗೆದ್ದು ಬೀಗಿದೆ. ಹೋಂ ಗ್ರೌಂಡ್​ನಲ್ಲಿ ಸಿಎಸ್​ಕೆ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ನಡೆದ ಒಂದು ಘಟನೆ ಗಮನ ಸೆಳೆದಿದೆ. ಈ ಪಂದ್ಯದಲ್ಲಿ ಧೋನಿಗಾಗಿ ಫ್ಯಾನ್ಸ್ ಕಾದಿದ್ದರು. ಈ ವೇಳೆ ಜಡೇಜಾ ಅವರು ಧೋನಿ ಫ್ಯಾನ್ಸ್​ಗೆ ಚಮಕ್ ಕೊಟ್ಟಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು ಸಿಎಸ್​ಕೆ ತಂಡ. ಈ ತಂತ್ರ ಸಹಕಾರಿ ಆಗಿತ್ತು. ಕೇವಲ 137 ರನ್​ಗೆ ಕೆಕೆಆರ್​ ತಂಡವನ್ನು ಚೆನ್ನೈ ಕಟ್ಟಿ ಹಾಕಿತು. ಆ ಬಳಿಕ ಚೆನ್ನೈ ಸುಲಭ ಮೊತ್ತದ ಬೆನ್ನು ಹತ್ತಿತ್ತು. ಕೇವಲ 15 ರನ್​ಗೆ ರಚಿನ್ ರವೀಂದ್ರ ಅವರು ವಿಕೆಟ್ ಒಪ್ಪಿಸಿದರು. ನಂತರ ರುತುರಾಜ್​ ಗಾಯಕ್​ವಾಡ್ ಹಾಗೂ ಮಿಚೆಲ್ ಉತ್ತಮ ಆಟ ಆಡಿದರು. 25 ರನ್​ಗೆ ಮಿಚೆಲ್ ಔಟ್ ಆದ ಬಳಿಕ ಶಿವಮ್ ದೂಬೆ ಕಣಕ್ಕೆ ಇಳಿದರು. ಅವರು 18 ಬಾಲ್​ಗೆ 28 ರನ್ ಹೊಡೆದು ಔಟ್ ಆದರು. 135 ರನ್​ಗಳಿಗೆ ಚೆನ್ನೈ ಮೂರು ವಿಕೆಟ್ ಕಳೆದುಕೊಂಡಿತ್ತು. ಗೆಲುವಿಗೆ ಬೇಕಾಗಿದ್ದು ಕೇವಲ 3 ರನ್ ಆಗಿತ್ತು.

ಆಗ ಧೋನಿ ಫೀಲ್ಡ್​ಗೆ ಇಳಿಯಲಿ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು. ಎಲ್ಲರೂ ಧೋನಿ ಧೋನಿ ಎಂದು ಕೂಗೋಕೆ ಆರಂಭಿಸಿದರು. ಆದರೆ ಬ್ಯಾಟ್ ಹಿಡಿದು ರವೀಂದ್ರ ಜಡೇಜಾ ಫೀಲ್ಡ್​ಗೆ ಇಳಿಯೋಕೆ ಹೊರಟರು. ಇದನ್ನು ನೋಡಿ ಧೋನಿ ಫ್ಯಾನ್ಸ್ ಬೇಸರಗೊಂಡರು. ನಂತರ ಅವರು ಮರಳಿ ಡ್ರೆಸ್ಸಿಂಗ್ ರೂಂಗೆ ಹೋದರು. ನಂತರ ಧೋನಿ ಫೀಲ್ಡ್​ಗೆ ಬಂದರು. ಇದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟರು. ಧೋನಿ ವಿನ್ನಿಂಗ್ ರನ್ ಬಾರಿಸಿದರು. ಇದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟರು.

ಇದನ್ನೂ ಓದಿ: MS Dhoni: ಧೋನಿನ ಪ್ರೀತಿಯಿಂದ ಹಗ್ ಮಾಡಿದ ಗೌತಮ್ ಗಂಭೀರ್; ವಿಡಿಯೋ ವೈರಲ್

ಚೆನ್ನೈ ಸೈಪರ್ ಕಿಂಗ್ಸ್ ತಂಡ ಪಾಯಿಂಟ್ ಟೇಬಲ್​ನಲ್ಲಿ ನಾಲ್ಕನೇ ಸ್ಥಾನದಲ್ಲಿ ಇದೆ. ಐದು ಪಂದ್ಯಗಳಲ್ಲಿ ಇದು ಅವರ ಮೂರನೇ ಜಯ. ದೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ಜೊತೆ ಇವರು ಸೋತಿದ್ದಾರೆ. ಕೆಕೆಆರ್ ತಂಡ ಈ ಸೀಸನ್​ನ ಮೊದಲ ಸೋಲು ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:52 am, Tue, 9 April 24

ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ