AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧೋನಿಗಾಗಿ ಕಾದು ಕುಳಿತಿದ್ದ ಫ್ಯಾನ್ಸ್​ಗೆ ಚಮಕ್ ಕೊಟ್ಟ ಜಡೇಜಾ; ನಂತರ ಆಗಿದ್ದೇನು ನೋಡಿ..

ಧೋನಿ ಫೀಲ್ಡ್​ಗೆ ಇಳಿಯಲಿ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು. ಎಲ್ಲರೂ ಧೋನಿ ಧೋನಿ ಎಂದು ಕೂಗೋಕೆ ಆರಂಭಿಸಿದರು. ಆದರೆ ಬ್ಯಾಟ್ ಹಿಡಿದು ರವೀಂದ್ರ ಜಡೇಜಾ ಫೀಲ್ಡ್​ಗೆ ಇಳಿಯೋಕೆ ಹೊರಟರು. ಇದನ್ನು ನೋಡಿ ಧೋನಿ ಫ್ಯಾನ್ಸ್ ಬೇಸರಗೊಂಡರು.

ಧೋನಿಗಾಗಿ ಕಾದು ಕುಳಿತಿದ್ದ ಫ್ಯಾನ್ಸ್​ಗೆ ಚಮಕ್ ಕೊಟ್ಟ ಜಡೇಜಾ; ನಂತರ ಆಗಿದ್ದೇನು ನೋಡಿ..
ಧೋನಿ
ರಾಜೇಶ್ ದುಗ್ಗುಮನೆ
|

Updated on:Apr 09, 2024 | 10:53 AM

Share

ಚೆನ್ನೈ ಸೂಪರ್ ಕಿಂಗ್ಸ್  (CSK) ಹಾಗೂ ಕೆಕೆಆರ್​ ಪಂದ್ಯದಲ್ಲಿ ಸಿಎಸ್​​ಕೆ ತಂಡ ಗೆದ್ದು ಬೀಗಿದೆ. ಹೋಂ ಗ್ರೌಂಡ್​ನಲ್ಲಿ ಸಿಎಸ್​ಕೆ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ನಡೆದ ಒಂದು ಘಟನೆ ಗಮನ ಸೆಳೆದಿದೆ. ಈ ಪಂದ್ಯದಲ್ಲಿ ಧೋನಿಗಾಗಿ ಫ್ಯಾನ್ಸ್ ಕಾದಿದ್ದರು. ಈ ವೇಳೆ ಜಡೇಜಾ ಅವರು ಧೋನಿ ಫ್ಯಾನ್ಸ್​ಗೆ ಚಮಕ್ ಕೊಟ್ಟಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು ಸಿಎಸ್​ಕೆ ತಂಡ. ಈ ತಂತ್ರ ಸಹಕಾರಿ ಆಗಿತ್ತು. ಕೇವಲ 137 ರನ್​ಗೆ ಕೆಕೆಆರ್​ ತಂಡವನ್ನು ಚೆನ್ನೈ ಕಟ್ಟಿ ಹಾಕಿತು. ಆ ಬಳಿಕ ಚೆನ್ನೈ ಸುಲಭ ಮೊತ್ತದ ಬೆನ್ನು ಹತ್ತಿತ್ತು. ಕೇವಲ 15 ರನ್​ಗೆ ರಚಿನ್ ರವೀಂದ್ರ ಅವರು ವಿಕೆಟ್ ಒಪ್ಪಿಸಿದರು. ನಂತರ ರುತುರಾಜ್​ ಗಾಯಕ್​ವಾಡ್ ಹಾಗೂ ಮಿಚೆಲ್ ಉತ್ತಮ ಆಟ ಆಡಿದರು. 25 ರನ್​ಗೆ ಮಿಚೆಲ್ ಔಟ್ ಆದ ಬಳಿಕ ಶಿವಮ್ ದೂಬೆ ಕಣಕ್ಕೆ ಇಳಿದರು. ಅವರು 18 ಬಾಲ್​ಗೆ 28 ರನ್ ಹೊಡೆದು ಔಟ್ ಆದರು. 135 ರನ್​ಗಳಿಗೆ ಚೆನ್ನೈ ಮೂರು ವಿಕೆಟ್ ಕಳೆದುಕೊಂಡಿತ್ತು. ಗೆಲುವಿಗೆ ಬೇಕಾಗಿದ್ದು ಕೇವಲ 3 ರನ್ ಆಗಿತ್ತು.

ಆಗ ಧೋನಿ ಫೀಲ್ಡ್​ಗೆ ಇಳಿಯಲಿ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು. ಎಲ್ಲರೂ ಧೋನಿ ಧೋನಿ ಎಂದು ಕೂಗೋಕೆ ಆರಂಭಿಸಿದರು. ಆದರೆ ಬ್ಯಾಟ್ ಹಿಡಿದು ರವೀಂದ್ರ ಜಡೇಜಾ ಫೀಲ್ಡ್​ಗೆ ಇಳಿಯೋಕೆ ಹೊರಟರು. ಇದನ್ನು ನೋಡಿ ಧೋನಿ ಫ್ಯಾನ್ಸ್ ಬೇಸರಗೊಂಡರು. ನಂತರ ಅವರು ಮರಳಿ ಡ್ರೆಸ್ಸಿಂಗ್ ರೂಂಗೆ ಹೋದರು. ನಂತರ ಧೋನಿ ಫೀಲ್ಡ್​ಗೆ ಬಂದರು. ಇದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟರು. ಧೋನಿ ವಿನ್ನಿಂಗ್ ರನ್ ಬಾರಿಸಿದರು. ಇದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟರು.

ಇದನ್ನೂ ಓದಿ: MS Dhoni: ಧೋನಿನ ಪ್ರೀತಿಯಿಂದ ಹಗ್ ಮಾಡಿದ ಗೌತಮ್ ಗಂಭೀರ್; ವಿಡಿಯೋ ವೈರಲ್

ಚೆನ್ನೈ ಸೈಪರ್ ಕಿಂಗ್ಸ್ ತಂಡ ಪಾಯಿಂಟ್ ಟೇಬಲ್​ನಲ್ಲಿ ನಾಲ್ಕನೇ ಸ್ಥಾನದಲ್ಲಿ ಇದೆ. ಐದು ಪಂದ್ಯಗಳಲ್ಲಿ ಇದು ಅವರ ಮೂರನೇ ಜಯ. ದೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ಜೊತೆ ಇವರು ಸೋತಿದ್ದಾರೆ. ಕೆಕೆಆರ್ ತಂಡ ಈ ಸೀಸನ್​ನ ಮೊದಲ ಸೋಲು ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:52 am, Tue, 9 April 24

3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ
ನಟಿಯರ ಪರವಾಗಿ ಚಿತ್ರರಂಗಕ್ಕೆ ವಿಶೇಷ ಮನವಿ ಮಾಡಿದ ರಚಿತಾ ರಾಮ್
ನಟಿಯರ ಪರವಾಗಿ ಚಿತ್ರರಂಗಕ್ಕೆ ವಿಶೇಷ ಮನವಿ ಮಾಡಿದ ರಚಿತಾ ರಾಮ್