AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧೋನಿಗಾಗಿ ಕಾದು ಕುಳಿತಿದ್ದ ಫ್ಯಾನ್ಸ್​ಗೆ ಚಮಕ್ ಕೊಟ್ಟ ಜಡೇಜಾ; ನಂತರ ಆಗಿದ್ದೇನು ನೋಡಿ..

ಧೋನಿ ಫೀಲ್ಡ್​ಗೆ ಇಳಿಯಲಿ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು. ಎಲ್ಲರೂ ಧೋನಿ ಧೋನಿ ಎಂದು ಕೂಗೋಕೆ ಆರಂಭಿಸಿದರು. ಆದರೆ ಬ್ಯಾಟ್ ಹಿಡಿದು ರವೀಂದ್ರ ಜಡೇಜಾ ಫೀಲ್ಡ್​ಗೆ ಇಳಿಯೋಕೆ ಹೊರಟರು. ಇದನ್ನು ನೋಡಿ ಧೋನಿ ಫ್ಯಾನ್ಸ್ ಬೇಸರಗೊಂಡರು.

ಧೋನಿಗಾಗಿ ಕಾದು ಕುಳಿತಿದ್ದ ಫ್ಯಾನ್ಸ್​ಗೆ ಚಮಕ್ ಕೊಟ್ಟ ಜಡೇಜಾ; ನಂತರ ಆಗಿದ್ದೇನು ನೋಡಿ..
ಧೋನಿ
ರಾಜೇಶ್ ದುಗ್ಗುಮನೆ
|

Updated on:Apr 09, 2024 | 10:53 AM

Share

ಚೆನ್ನೈ ಸೂಪರ್ ಕಿಂಗ್ಸ್  (CSK) ಹಾಗೂ ಕೆಕೆಆರ್​ ಪಂದ್ಯದಲ್ಲಿ ಸಿಎಸ್​​ಕೆ ತಂಡ ಗೆದ್ದು ಬೀಗಿದೆ. ಹೋಂ ಗ್ರೌಂಡ್​ನಲ್ಲಿ ಸಿಎಸ್​ಕೆ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ನಡೆದ ಒಂದು ಘಟನೆ ಗಮನ ಸೆಳೆದಿದೆ. ಈ ಪಂದ್ಯದಲ್ಲಿ ಧೋನಿಗಾಗಿ ಫ್ಯಾನ್ಸ್ ಕಾದಿದ್ದರು. ಈ ವೇಳೆ ಜಡೇಜಾ ಅವರು ಧೋನಿ ಫ್ಯಾನ್ಸ್​ಗೆ ಚಮಕ್ ಕೊಟ್ಟಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು ಸಿಎಸ್​ಕೆ ತಂಡ. ಈ ತಂತ್ರ ಸಹಕಾರಿ ಆಗಿತ್ತು. ಕೇವಲ 137 ರನ್​ಗೆ ಕೆಕೆಆರ್​ ತಂಡವನ್ನು ಚೆನ್ನೈ ಕಟ್ಟಿ ಹಾಕಿತು. ಆ ಬಳಿಕ ಚೆನ್ನೈ ಸುಲಭ ಮೊತ್ತದ ಬೆನ್ನು ಹತ್ತಿತ್ತು. ಕೇವಲ 15 ರನ್​ಗೆ ರಚಿನ್ ರವೀಂದ್ರ ಅವರು ವಿಕೆಟ್ ಒಪ್ಪಿಸಿದರು. ನಂತರ ರುತುರಾಜ್​ ಗಾಯಕ್​ವಾಡ್ ಹಾಗೂ ಮಿಚೆಲ್ ಉತ್ತಮ ಆಟ ಆಡಿದರು. 25 ರನ್​ಗೆ ಮಿಚೆಲ್ ಔಟ್ ಆದ ಬಳಿಕ ಶಿವಮ್ ದೂಬೆ ಕಣಕ್ಕೆ ಇಳಿದರು. ಅವರು 18 ಬಾಲ್​ಗೆ 28 ರನ್ ಹೊಡೆದು ಔಟ್ ಆದರು. 135 ರನ್​ಗಳಿಗೆ ಚೆನ್ನೈ ಮೂರು ವಿಕೆಟ್ ಕಳೆದುಕೊಂಡಿತ್ತು. ಗೆಲುವಿಗೆ ಬೇಕಾಗಿದ್ದು ಕೇವಲ 3 ರನ್ ಆಗಿತ್ತು.

ಆಗ ಧೋನಿ ಫೀಲ್ಡ್​ಗೆ ಇಳಿಯಲಿ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು. ಎಲ್ಲರೂ ಧೋನಿ ಧೋನಿ ಎಂದು ಕೂಗೋಕೆ ಆರಂಭಿಸಿದರು. ಆದರೆ ಬ್ಯಾಟ್ ಹಿಡಿದು ರವೀಂದ್ರ ಜಡೇಜಾ ಫೀಲ್ಡ್​ಗೆ ಇಳಿಯೋಕೆ ಹೊರಟರು. ಇದನ್ನು ನೋಡಿ ಧೋನಿ ಫ್ಯಾನ್ಸ್ ಬೇಸರಗೊಂಡರು. ನಂತರ ಅವರು ಮರಳಿ ಡ್ರೆಸ್ಸಿಂಗ್ ರೂಂಗೆ ಹೋದರು. ನಂತರ ಧೋನಿ ಫೀಲ್ಡ್​ಗೆ ಬಂದರು. ಇದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟರು. ಧೋನಿ ವಿನ್ನಿಂಗ್ ರನ್ ಬಾರಿಸಿದರು. ಇದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟರು.

ಇದನ್ನೂ ಓದಿ: MS Dhoni: ಧೋನಿನ ಪ್ರೀತಿಯಿಂದ ಹಗ್ ಮಾಡಿದ ಗೌತಮ್ ಗಂಭೀರ್; ವಿಡಿಯೋ ವೈರಲ್

ಚೆನ್ನೈ ಸೈಪರ್ ಕಿಂಗ್ಸ್ ತಂಡ ಪಾಯಿಂಟ್ ಟೇಬಲ್​ನಲ್ಲಿ ನಾಲ್ಕನೇ ಸ್ಥಾನದಲ್ಲಿ ಇದೆ. ಐದು ಪಂದ್ಯಗಳಲ್ಲಿ ಇದು ಅವರ ಮೂರನೇ ಜಯ. ದೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ಜೊತೆ ಇವರು ಸೋತಿದ್ದಾರೆ. ಕೆಕೆಆರ್ ತಂಡ ಈ ಸೀಸನ್​ನ ಮೊದಲ ಸೋಲು ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:52 am, Tue, 9 April 24

Follow Us
ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ