AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ರೋಚಕ ಗೆಲುವಿನ ಖುಷಿಯಲ್ಲಿ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಆಡಿದ ಮಾತು ಕೇಳಿ

RCB vs DC, IPL 2021: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯ ಮುಗಿದ ಬಳಿಕ ಈ ರೋಚಕ ಗೆಲುವಿನ ಬಗ್ಗೆ ಮಾತನಾಡಿರುವ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Virat Kohli: ರೋಚಕ ಗೆಲುವಿನ ಖುಷಿಯಲ್ಲಿ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಆಡಿದ ಮಾತು ಕೇಳಿ
Virat Kohli RCB vs DC
TV9 Web
| Updated By: Vinay Bhat|

Updated on: Oct 09, 2021 | 8:37 AM

Share

ಐಪಿಎಲ್ 2021ರ (IPL 2021) ಕೊನೇಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೇಬಲ್ ಟಾಪರ್ ಡೆಲ್ಲಿ ಕ್ಯಾಟಪಿಲ್ಸ್ (RCB vs DC) ವಿರುದ್ಧ ರೋಚಕ ಜಯ ಸಾಧಿಸಿ ಟೂರ್ನಿಯಲ್ಲಿ ಒಂಬತ್ತನೇ ಗೆಲುವು ದಾಖಲಿಸಿತು. ಶ್ರೀಕರ್ ಭರತ್ (KS Bharat) ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ಅವರ ಶತಕದ ಜೊತೆಯಾಟದ ನೆರವಿನಿಂದ ಕೊನೇಯ ಎಸೆತದ ವರೆಗೂ ನಡೆದ ಪಂದ್ಯದಲ್ಲಿ ಆರ್​ಸಿಬಿ 7 ವಿಕೆಟ್​ಗಳಿಂದ ಗೆದ್ದು ಬೀಗಿತು. ಪಂದ್ಯವನ್ನು ಬಹುತೇಕ ಕೈ ಚೆಲ್ಲಿದ್ದ ಕೊಹ್ಲಿ ಪಡೆಗೆ ಅಂತಿಮ ಒಂದು ಎಸೆತದಲ್ಲಿ 5 ರನ್​ಗಳು ಬೇಕಾಗಿದ್ದವು. ಈ ಸಂದರ್ಭ ಕ್ರೀಸ್​ನಲ್ಲಿದ್ದ ಭರತ್ ಆವೇಶ್ ಖಾನ್ (Avesh Khan) ಅವರ ಪುಲ್​ಟ್ರಾಸ್ ಬಾಲ್ ಅನ್ನು ಸಿಕ್ಸರ್​ಗೆ ಕನ್ವರ್ಟ್ ಮಾಡಿದರು. ಇದಾಗಿದ್ದೇ ತಡ ಡಗೌಟ್​ನಲ್ಲಿದ್ದ ಆರ್​ಸಿಬಿ ಆಟಗಾರರು ಖುಷಿಯಿಂದ ಮೈದಾನಕ್ಕೆ ಓಡಿ ಬಂದರು. ಅದರಲ್ಲೂ ನಾಯಕ ವಿರಾಟ್ ಕೊಹ್ಲಿ (Virat Kohli) ಓಡಿ ಬಂದು ಭರತ್ ಅವರನ್ನ ತಬ್ಬಿಕೊಂಡರು.

ಪಂದ್ಯ ಮುಗಿದ ಬಳಿಕ ಈ ರೋಚಕ ಗೆಲುವಿನ ಬಗ್ಗೆ ಮಾತನಾಡಿರುವ ವಿರಾಟ್ ಕೊಹ್ಲಿ ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. “ಇದೊಂದು ಊಹೆಗೂ ಸಿಲುಕದ ಪಂದ್ಯ. ಈ ಪಂದ್ಯದಲ್ಲಿ ಕಳೆದುಕೊಳ್ಳಲು ಏನೂ ಇರಲಿಲ್ಲ. ಆದರೆ, ಇದೊಂದು ಸ್ಪರ್ಧಾತ್ಮಕ ಆಟ. ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಅದರಲ್ಲೂ ಟೇಬಲ್ ಟಾಪ್​ನಲ್ಲಿರುವ ತಂಡವನ್ನು ಸೋಲಿಸಿರುವುದು ಖುಷಿ ನೀಡಿದೆ. ನಾವೀಗ ಅವರನ್ನು ಎರಡು ಬಾರಿ ಸೋಲಿಸಿದ್ದೇವೆ. ಕೆ. ಎಸ್ ಭರತ್ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ ಪಂದ್ಯವನ್ನು ಮುಗಿಸಿದ್ದು ಊಹೆಗೂ ಮೀರಿದ್ದು” ಎಂದು ಕೊಹ್ಲಿ ಹೇಳಿದ್ದಾರೆ.

“ನಾವು 160+ ರನ್ ಚೇಸ್ ಮಾಡಬೇಕಿತ್ತು. ಒಂದಾ ಆಲೌಟ್ ಆಗುತ್ತೇವೆ ಅಥವಾ ಗೆಲ್ಲಲು ಸಾಧ್ಯವಿಲ್ಲ ಎಂದು ಭಾವಿಸಿದ್ದೆ. ಆದರೆ, ನಮ್ಮೆಲ್ಲ ಯೋಚನೆಯನ್ನು ಇವರಿಬ್ಬರು (ಭರತ್-ಮ್ಯಾಕ್ಸ್​ವೆಲ್) ಸುಳ್ಳು ಮಾಡಿದರು. ಈ ಗೆಲುವಿನಿಂದ ನಮ್ಮಲ್ಲಿ ತುಂಬಾ ಆತ್ಮವಿಶ್ವಾಸ ಬಂದಿದೆ. ಯಾವುದೇ ಸಂದರ್ಭದಲ್ಲಿ ಪಂದ್ಯವನ್ನು ಹಿಡಿತಕ್ಕೆ ತರುವ ಕಲೆ ಗೊತ್ತಾಗಿದೆ. ಈ ಟೂರ್ನಿಯಲ್ಲಿ ನಾವು ಟಾರ್ಗೆಟ್ ಬೆನ್ನಟ್ಟಿದ್ದು ಕೆಲವು ಪಂದ್ಯಗಳಲ್ಲಿ ಮಾತ್ರ. ನಂಬರ್ 3 ನಮ್ಮ ತಂಡದಲ್ಲಿ ದೊಡ್ಡ ಸಮಸ್ಯೆಯೇ ಅಲ್ಲ. ಈ ಹಿಂದೆ ಈ ಜಾಗದಲ್ಲಿ ಕ್ರಿಸ್ಟಿಯನ್ ಅವರನ್ನು ಆಡಿಸಿದೆವು. ಅವರು ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ನಡೆಸುತ್ತಾರೆ. ಆದರೆ, ಈ ಬಾರಿ ಅದು ಕಾರ್ಯರೂಪಕ್ಕೆ ಬರಲಿಲ್ಲ. ಭರತ್ ನಂ. 3 ಮಾತ್ರವಲ್ಲ, ಅವರು ಯಾವುದೇ ಕ್ರಮಾಂಕದಲ್ಲಿ ಬೇಕಾದರು ಆಡುವ ಸಾಮರ್ಥ್ಯ ಹೊಂದಿದ್ದಾರೆ” ಎಂಬುದು ಕೊಹ್ಲಿ ಮಾತು.

ಇನ್ನು ಡೆಲ್ಲಿ ತಂಡದ ನಾಯಕ ರಿಷಭ್ ಪಂತ್ ಮಾತನಾಡಿ ನಾವು ಈ ಪಂದ್ಯದಲ್ಲಿ ಫೀಲ್ಡಿಂಗ್ ವಿಭಾಗದಲ್ಲಿ ಸಾಕಷ್ಟು ತಪ್ಪು ಮಾಡಿದೆವು ಎಂದು ಹೇಳಿದ್ದಾರೆ. “ಆರ್​ಸಿಬಿ ತಂಡ ಗೆಲುವಿಗೆ ಅರ್ಹವಾಗಿದೆ. ನಾವು ಬ್ಯಾಟಿಂಗ್ ಇನ್ನಿಂಗ್ಸ್​ನ ಮಧ್ಯದಲ್ಲಿ ಸಾಕಷ್ಟು ವಿಕೆಟ್​ಗಳನ್ನು ಕಳೆದುಕೊಂಡೆವು. ಇದರಿಂದ ಸವಾಲಿನ ಟಾರ್ಗೆಟ್ ನೀಡಲು ಸಾಧ್ಯವಾಗಲಿಲ್ಲ. ಡ್ಯೂ ಇದ್ದ ಕಾರಣ ಬೌಲರ್​ಗಳಿಗೂ ಕಷ್ಟವಾಯಿತು. ಮುಂದಿನ ಪಂದ್ಯದಲ್ಲಿ ಶೇ. 100 ರಷ್ಟು ಪರಿಶ್ರಮ ಹಾಕುತ್ತೇವೆ” ಎಂದು ಹೇಳಿದ್ದಾರೆ.

IPL 2021: 56 ಲೀಗ್ ಪಂದ್ಯಗಳಿಗೆ ತೆರೆ: ಡೆಲ್ಲಿ-ಚೆನ್ನೈ ಕ್ವಾಲಿಫೈಯರ್​ಗೆ, ಆರ್​ಸಿಬಿ-ಕೆಕೆಆರ್ ಎಲಿಮಿನೇಟರ್​ನಲ್ಲಿ ಮುಖಾಮುಖಿ

SRH vs MI: ಮನೀಶ್ ಪಾಂಡೆ ಏಕಾಂಗಿ ಹೋರಾಟ ವ್ಯರ್ಥ; ಗೆಲುವಿನೊಂದಿಗೆ ಐಪಿಎಲ್ ಪಯಣ ಮುಗಿಸಿದ ಮುಂಬೈ

(RCB Captain Virat Kohli said A last-ball six Unbelievable after win over table-toppers Delhi Capitals)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ