AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GT vs RCB: ಆರ್​ಸಿಬಿ ಪ್ಲೇಯಿಂಗ್ XIಗೆ ಹೊಸ ಆಟಗಾರ ಎಂಟ್ರಿ: ಓಪನಿಂಗ್​ನಲ್ಲಿ ಮತ್ತೆ ಬದಲಾವಣೆ

Predicted Playing XI GT vs RCB: ಐಪಿಎಲ್​ನಲ್ಲಿಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಮತ್ತು ಪಾಫ್ ಡುಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳು ಮುಖಾಮುಖಿ ಆಗಲಿದೆ. ಹಾಗಾದ್ರೆ ಆರ್​ಸಿಬಿಯ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೇಗಿರಬಹುದು ಎಂಬುದನ್ನು ನೋಡೋಣ.

GT vs RCB: ಆರ್​ಸಿಬಿ ಪ್ಲೇಯಿಂಗ್ XIಗೆ ಹೊಸ ಆಟಗಾರ ಎಂಟ್ರಿ: ಓಪನಿಂಗ್​ನಲ್ಲಿ ಮತ್ತೆ ಬದಲಾವಣೆ
RCB Playing XI vs GT IPL 2022
TV9 Web
| Updated By: Vinay Bhat|

Updated on: Apr 30, 2022 | 10:30 AM

Share

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು ದಬಲ್ ಧಮಾಕ. ಒಟ್ಟು ಎರಡು ಪಂದ್ಯಗಳನ್ನು ಆಯೋಜಿಸಲಾಗಿದೆ. ಬ್ರಬೌರ್ನ್​​ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಮತ್ತು ಪಾಫ್ ಡುಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು (GT vs RCB) ತಂಡಗಳು ಮುಖಾಮುಖಿ ಆಗಲಿದೆ. ಡಾ. ಡಿವೈ ಪಾಟಿಲ್ ಸ್ಫೋರ್ಟ್ಸ್​​ ಅಕಾಡೆಮಿಯಲ್ಲಿ ಜರುಗಲಿರುವ ದ್ವಿತೀಯ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನಾಯಕನಾಗಿರುವ ರಾಜಸ್ಥಾನ್ ರಾಯಲ್ಸ್​ ತಂಡವನ್ನು ಬರ್ತ್​ ಡೇ ಬಾಯ್ ರೋಹಿತ್ ಶರ್ಮಾ ಅವರ ಮುಂಬೈ ಇಂಡಿಯನ್ಸ್ (RR vs MI) ಎದುರಲಿಸಲಿದೆ. ಇದರಲ್ಲಿ ಆರ್​ಆರ್​​ ಹಾಗೂ ಜಿಟಿ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದರೆ ಇತ್ತ ಆರ್​ಸಿಬಿ ಸೋಲಿನಿಂದ ಹೊರಬರಬೇಕಾದ ಒತ್ತಡದಲ್ಲಿದೆ. ಈ ಪಂದ್ಯವನ್ನೂ ಬೆಂಗಳೂರು ಸೋತರೆ ಮುಂದಿನ ಹಾದಿ ಕಷ್ಟವಾಗಿರಲಿದೆ. ಇತ್ತ ಇದುವರೆಗೆ ಗೆಲುವಿನ ಮುಖವನ್ನೇ ನೋಡದ ಮುಂಬೈ ಈ ಪಂದ್ಯ ಸೋತರೆ ಟೂರ್ನಿಯಿಂದ ಹೊರಬೀಳಲಿದೆ. ಇಂದು ರೋಹಿತ್ ಶರ್ಮಾ (Rohit Sharma) ಹುಟ್ಟುಹಬ್ಬವಾಗಿದ್ದು ಈ ಶುಭದಿನದಂದು ಗೆಲುವಿನ ಲಯಕ್ಕೆ ಮರಳುತ್ತಾ ನೋಡಬೇಕಿದೆ.

ಟೂರ್ನಿಯಲ್ಲಿ 9 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಆರ್ ಸಿಬಿಗೆ ಇನ್ನುಳಿದಿರೋದು ಕೇವಲ 5 ಪಂದ್ಯಗಳು ಮಾತ್ರ. ಬೆಂಗಳೂರು ತಂಡ ಪ್ಲೇ ಆಫ್ಸ್ ಪ್ರವೇಶಿಸಬೇಕು ಅಂದ್ರೆ ಈ ಐದು ಪಂದ್ಯಗಳಲ್ಲಿ ಕನಿಷ್ಠ ಮೂರು ಪಂದ್ಯಗಳಲ್ಲಿ ಗೆಲುವು ದಾಖಲಿಸಲೇಬೇಕು. ಆರ್​ಸಿಬಿಗೆ ಮೊದಲಾರ್ಧ ಹಾಗೂ ದ್ವಿತೀಯಾರ್ಧದಲ್ಲಿ ಕಾಡುತ್ತಿರುವ ಸಮಸ್ಯೆ ಓಪನರ್ಸ್​. ಒಂದೆರೆಡು ಪಂದ್ಯಗಳಲ್ಲಿ ಬಿಟ್ಟರೆ, ಯಾವೊಂದು ಪಂದ್ಯದಲ್ಲೂ ಆರಂಭಿಕರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಕಳೆದ ಪಂದ್ಯದಲ್ಲಿ ಸ್ವತಃ ಕೊಹ್ಲಿ ಹಾಗೂ ಫಾಫ್ ಡುಪ್ಲಿಸಿಯೇ ಇನ್ನಿಂಗ್ಸ್​ ಆರಂಭಿಸಿದರೂ ನಿರೀಕ್ಷಿತ ಪ್ರದರ್ಶನ ಬರಲಿಲ್ಲ.

ಟೂರ್ನಿಯಲ್ಲಿ ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 128 ರನ್ ಮಾತ್ರ ಗಳಿಸಿರುವ ವಿರಾಟ್ ಕೊಹ್ಲಿ ಅವರ ಫಾರ್ಮ್ ಆರ್‌ಸಿಬಿ ತಂಡಕ್ಕೆ ಕಳವಳ ಮೂಡಿಸಿದೆ. ಇದುವರೆಗೆ ಒಂದೂ ಅರ್ಧಶತಕ ಬಾರಿಸದಿರುವ ಕೊಹ್ಲಿ, 48 ರನ್ ಗಳಿಸಿದ್ದೇ ಗರಿಷ್ಠವೆನಿಸಿದೆ. ಇದಲ್ಲದೆ 2 ಬಾರಿ ಶೂನ್ಯ ಸುತ್ತಿದ್ದಾರೆ. ಮ್ಯಾಕ್ಸ್​​ ವೆಲ್​​ ವೈಫಲ್ಯ ಮಿಡಲ್​​ ಆರ್ಡರ್​​ಗೆ ಸಮಸ್ಯೆ ತಂದಿದೆ. ರಜತ್​​ ಪಾಟಿದಾರ್​​ ಹಾಗೂ ಸುಯೇಶ್​ ಪ್ರಭುದೇಸಾಯಿ ಕಡೆಯಿಂದ ತಂಡಕ್ಕೆ ಯಾವುದೇ ಕಾಣಿಕೆ ಸಿಗುತ್ತಿಲ್ಲ. ಹೀಗಾಗಿ ಇವರಿಬ್ಬರಲ್ಲಿ ಒಬ್ಬರನ್ನು ಹೊರಗಿಟ್ಟು ಹೊಸ ಆಟಗಾರ ಮಹಿಪಾಲ್​​ ಲೊಮ್ರೊರ್​ಗೆ ಅವಕಾಶ ಮಾಡಿಕೊಡುವುದು ಬಹುತೇಕ ಖಚಿತ. ಅಲ್ಲದೆ ಇವರು ಓಪನರ್ ಆಗಿ ಕಣಕ್ಕಿಳಿದರೆ ಅಚ್ಚರಿ ಪಡಬೇಕಿಲ್ಲ. ದಿನೇಶ್​ ಕಾರ್ತಿಕ್​​ ಮತ್ತು ಶಹಬಾಜ್​ ಅಹ್ಮದ್​​ ಕಳೆದೆರಡು ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದಾರೆ.

ಆರ್​​ಸಿಬಿ ಬೌಲಿಂಗ್​ ಕೂಡ ಸಂಘಟಿತವಾಗಿಲ್ಲ. ಹರ್ಷಲ್​​ ಪಟೇಲ್​​ ವಿಕೆಟ್​​ ಕಬಳಿಸುತ್ತಿಲ್ಲ. ಜೋಶ್​​ ಹ್ಯಾಜಲ್​​ವುಡ್​​ ಒತ್ತಡ ಹಾಕುತ್ತಿದ್ದರೂ ಮೊಹಮ್ಮದ್​​ ಸಿರಾಜ್​​ ರನ್​​ ಲೀಕ್​​ ಮಾಡುತ್ತಿದ್ದಾರೆ. ವನಿಂದು ಹಸರಂಗ ವಿಕೆಟ್​​ ಪಡೆದರೆ ಪಡೆದರು ಇಲ್ಲದಿದ್ದರೆ ದುಬಾರಿ ಅನ್ನುವ ಹಾಗಾಗಿದೆ. ಗ್ಲೆನ್​​ ಮ್ಯಾಕ್ಸ್​​ ವೆಲ್​ ಮತ್ತು ಶಹಬಾಸ್​ ಅಹ್ಮದ್​​ ಟೈಟ್​​ ಬೌಲಿಂಗ್​​ ಮಾಡಿದರೂ ವಿಕೆಟ್​​ ಸಿಗುತ್ತಿಲ್ಲ.

ಇತ್ತ ಸತತ 4 ಗೆಲುವಿನ ಲಯದಲ್ಲಿರುವ ಟೈಟಾನ್ಸ್ ತಂಡದ 11ರ ಬಳಗ ಬಲಿಷ್ಠವಾಗಿಯೇ ಇದೆ. ಆದರೂ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಲಾಕಿ ರ್ಗ್ಯುಸನ್ ಬದಲಿಗೆ ವಿಂಡೀಸ್ ಆಲ್ರೌಂಡರ್ ಡೊಮಿನಿಕ್ ಡ್ರೇಕ್ಸ್, ವರುಣ್ ಆರನ್ ಅಥವಾ ಪ್ರದೀಪ್ ಸಂಗ್ವಾನ್‌ಗೆ ಅವಕಾಶ ನೀಡುವ ಚಿಂತನೆ ನಡೆಸಬಹುದು. ಶುಭ್ಮನ್​​ ಗಿಲ್​​​ ಇತ್ತೀಚಿನ ಪಂದ್ಯಗಳಲ್ಲಿ ವೈಫಲ್ಯ ಕಂಡರೂ, ವೃದ್ಧಿಮಾನ್​​ ಸಾಹಾ ಮಿಂಚಿದ್ದಾರೆ. ಹಾರ್ದಿಕ್​​ ಪಾಂಡ್ಯಾ, ಡೇವಿಡ್​​ ಮಿಲ್ಲರ್​​ ಮತ್ತು ರಾಹುಲ್​​ ತೇವಾಟಿಯಾ ಬ್ಯಾಟಿಂಗ್​​ ನಲ್ಲಿ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ. ರಶೀದ್​ ಖಾನ್​​ ಅಬ್ಬರದ ಆಟದ ಮೂಲಕ ಸೋಲುತ್ತಿದ್ದ ಪಂದ್ಯಗಳನ್ನು ಗೆಲ್ಲಿಸಿದ್ದು ಒಟ್ಟಾರೆ ಜಿಟಿ ಬಲಿಷ್ಠದಿಂದ ಕೂಡಿದೆ.

ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್ XI: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್​​ ಲೊಮ್ರೊರ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್​​ ಹ್ಯಾಜಲ್​​ವುಡ್, ಮೊಹಮ್ಮದ್ ಸಿರಾಜ್.

KL Rahul: ಗೆದ್ದರೂ ಸಿಟ್ಟಾದ ಕೆಎಲ್ ರಾಹುಲ್: ಪಂದ್ಯ ಮುಗಿದ ಬಳಿಕ ಏನಂದ್ರು ಕೇಳಿ

PBKS vs LSG: ಲಖನೌ ಬೌಲರ್​ಗಳ ಕಠಿಣ ಶ್ರಮಕ್ಕೆ ಸಿಕ್ಕ ಫಲ: ರಾಹುಲ್ ಪಡೆಯ ಪ್ಲೇ ಆಫ್ ಹಾದಿ ಕೊಂಚ ಸುಗಮ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ