AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2021: 3 ಇನ್ನಿಂಗ್ಸ್​ನಲ್ಲಿ ಕೇವಲ 5 ರನ್; ಒಂದು ಬಾಲ್​ ಕೂಡ ಆಡದೇ ವಿಕೆಟ್ ಒಪ್ಪಿಸಿದ ರಸೆಲ್!

T20 World Cup 2021: ಬಾಂಗ್ಲಾದೇಶದ ವಿರುದ್ಧ ಆಂಡೆ ರಸೆಲ್ ಅವರ ಸ್ಕೋರ್ 0 ಎಸೆತಗಳಲ್ಲಿ 0 ರನ್ ಆಗಿತ್ತು. ಇದು ಸೇರಿದಂತೆ ಟೂರ್ನಿಯಲ್ಲಿ ಆಡಿದ 3 ಪಂದ್ಯಗಳಲ್ಲಿ ಕೇವಲ 5 ರನ್ ಗಳಿಸಿದ್ದಾರೆ.

T20 World Cup 2021: 3 ಇನ್ನಿಂಗ್ಸ್​ನಲ್ಲಿ ಕೇವಲ 5 ರನ್; ಒಂದು ಬಾಲ್​ ಕೂಡ ಆಡದೇ ವಿಕೆಟ್ ಒಪ್ಪಿಸಿದ ರಸೆಲ್!
ಆಂಡ್ರೆ ರಸೆಲ್
TV9 Web
| Edited By: |

Updated on: Oct 29, 2021 | 6:05 PM

Share

ಆಂಡ್ರೆ ರಸೆಲ್ ತನ್ನ ಪವರ್ ಹಿಟ್ಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಆದರೆ 2021ರ ಟಿ20 ವಿಶ್ವಕಪ್‌ನಲ್ಲಿ ಅವರ ಈ ಕಲೆ ತುಕ್ಕು ಹಿಡಿದಂತಿದೆ. ಅವರ ಬ್ಯಾಟ್‌ನಲ್ಲಿ ಜೀವವೇ ಇರಲಿಲ್ಲ. ಈಗ ಅದು ಕಾಣಿಸುತ್ತಿಲ್ಲ. ಅವರ ಫೈರ್‌ಪವರ್‌ನಿಂದಾಗಿ ಇಡೀ ಕ್ರಿಕೆಟ್ ಜಗತ್ತಲ್ಲಿ ಹೆಸರುವಾಸಿಯಾದವರು. ಆದರೆ ಅವರ ಬ್ಯಾಟ್​ನಿಂದ ಒಂದೇ ಒಂದು ಸಿಕ್ಸರ್ ಬಾರಿಸಿಲ್ಲ.

ವಾಸ್ತವವಾಗಿ, ಪೊಲಾರ್ಡ್ 13 ನೇ ಓವರ್‌ನ ಮೂರನೇ ಎಸೆತದಲ್ಲಿ ಗಾಯಗೊಂಡಾಗ, ಆಂಡ್ರೆ ರಸೆಲ್ ಕ್ರೀಸ್‌ಗೆ ಬಂದರು. ಅವರು ನಾನ್ ಸ್ಟ್ರೈಕರ್ ತುದಿಯಲ್ಲಿ ನಿಂತಿದ್ದರು. ರೋಸ್ಟನ್ ಚೇಸ್ ಬ್ಯಾಟಿಂಗ್​ನಲ್ಲಿದ್ದರು. ಬಾಂಗ್ಲಾದೇಶದ ಬೌಲರ್ ತಸ್ಕಿನ್ ಅಹ್ಮದ್ ಓವರ್‌ನ ನಾಲ್ಕನೇ ಎಸೆತವನ್ನು ಬೌಲ್ ಮಾಡಿದರು. ಚೇಸ್ ನಾನ್-ಸ್ಟ್ರೈಕರ್‌ ಕಡೆಗೆ ಆಡಿದರು. ಬೌಲಿಂಗ್ ಮಾಡಿ ನಿಂತಿದ್ದ ತಸ್ಕಿನ್ ತಮ್ಮ ಕಾಲ್​ನಿಂದ ಬಾಲನ್ನು ಟಚ್ ಮಾಡಿದ್ದರು. ಈ ವೇಳೆ ರಸೆಲ್ ಕ್ರೀಸ್‌ನಿಂದ ಹೊರಗಿದ್ದರು. ಪರಿಣಾಮ ಅವರು ರನ್ ಔಟ್ ಆದರು ಮತ್ತು ಯಾವುದೇ ಚೆಂಡನ್ನು ಆಡದೆ ಡಗೌಟ್‌ಗೆ ಮರಳಬೇಕಾಯಿತು.

5 ರನ್ ಗಳಿಸಿ 3 ಬಾರಿ ಔಟ್ ಬಾಂಗ್ಲಾದೇಶದ ವಿರುದ್ಧ ಆಂಡೆ ರಸೆಲ್ ಅವರ ಸ್ಕೋರ್ 0 ಎಸೆತಗಳಲ್ಲಿ 0 ರನ್ ಆಗಿತ್ತು. ಇದು ಸೇರಿದಂತೆ ಟೂರ್ನಿಯಲ್ಲಿ ಆಡಿದ 3 ಪಂದ್ಯಗಳಲ್ಲಿ ಕೇವಲ 5 ರನ್ ಗಳಿಸಿದ್ದಾರೆ. ಈ 5 ರನ್ ಮಾಡಲು, ಅವರು ಕೇವಲ 5 ಎಸೆತಗಳನ್ನು ಎದುರಿಸಿದ್ದಾರೆ. ವಿಶೇಷವೆಂದರೆ 3 ತಂಡಗಳ ವಿರುದ್ಧ ಆಡುವ ಮೂಲಕ ಈ 5 ರನ್ ಕಲೆಹಾಕಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು 1 ಎಸೆತವನ್ನು ಎದುರಿಸಿದರು, ಯಾವುದೇ ರನ್ ಗಳಿಸಲಿಲ್ಲ. ಇದಾದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಪಂದ್ಯದಲ್ಲಿ 4 ಎಸೆತಗಳನ್ನು ಆಡಿ 1 ಬೌಂಡರಿ ಸಹಿತ 5 ರನ್ ಗಳಿಸಿದ್ದರು. ಬಾಂಗ್ಲಾದೇಶದ ವಿರುದ್ಧ ಆಡುವಾಗ ಚೆಂಡನ್ನು ಸ್ಪರ್ಶಿಸುವುದು ಕೂಡ ಅವರಿಗೆ ಕಷ್ಟವಾಯಿತು.

ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ
ಜಿಬಿಎ ನಿರ್ಲಕ್ಷ್ಯ! ಇಂದಿರಾ ಕ್ಯಾಂಟೀನ್​ನಲ್ಲಿ ಅಧ್ವಾನ
ಜಿಬಿಎ ನಿರ್ಲಕ್ಷ್ಯ! ಇಂದಿರಾ ಕ್ಯಾಂಟೀನ್​ನಲ್ಲಿ ಅಧ್ವಾನ