AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Big news: ಟಿ 20 ವಿಶ್ವಕಪ್ ನಂತರ ಭಾರತದ ಹಿರಿಯ ಆಟಗಾರರಿಗೆ ತಂಡದಿಂದ ಕೋಕ್! ಕಾರಣವೇನು ಗೊತ್ತಾ?

Big news: ಹೆಚ್ಚಿನ ಭಾರತೀಯ ಆಟಗಾರರು, ಹಿರಿಯ ಆಟಗಾರರು ಕಳೆದ ನಾಲ್ಕು ತಿಂಗಳಲ್ಲಿ ಸತತ ಮೂರು ಬಯೋ-ಬಬಲ್ಸ್​ಗಳಲ್ಲಿದ್ದಾರೆ. ಟಿ 20 ವಿಶ್ವಕಪ್ ನಂತರ, ಅವರು ಡಿಸೆಂಬರ್ ಅಂತ್ಯದಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುಂಚಿತವಾಗಿ ವಿಶ್ರಾಂತಿ ಪಡೆಯಲಿದ್ದಾರೆ.

Big news: ಟಿ 20 ವಿಶ್ವಕಪ್ ನಂತರ ಭಾರತದ ಹಿರಿಯ ಆಟಗಾರರಿಗೆ ತಂಡದಿಂದ ಕೋಕ್! ಕಾರಣವೇನು ಗೊತ್ತಾ?
ರೋಹಿತ್, ಕೊಹ್ಲಿ
TV9 Web
| Updated By: ಪೃಥ್ವಿಶಂಕರ|

Updated on: Oct 14, 2021 | 6:52 PM

Share

2021 ರ ಟಿ 20 ವಿಶ್ವಕಪ್ ಮುಗಿದ ತಕ್ಷಣ, ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ 20 ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಿದೆ. ವಿಶ್ವಕಪ್ ಫೈನಲ್ ನಂತರ ಒಂದು ವಾರದೊಳಗೆ ಆರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಟಿ 20 ಸರಣಿಯ ವೇಳೆ ಭಾರತೀಯ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಬಹುದು ಎಂಬ ವರದಿಗಳಿವೆ. ಜೂನ್‌ನಲ್ಲಿ psr ಸೌತಾಂಪ್ಟನ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆರಂಭವಾದಾಗಿನಿಂದ ಭಾರತದ ಅಗ್ರ ಆಟಗಾರರಾದ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಮತ್ತು ವೇಗಿ ಜಸ್‌ಪ್ರೀತ್ ಬುಮ್ರಾ ಅವರು ಬಯೋ-ಬಬಲ್​ನಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಅವರಿಗೆಲ್ಲ ಕೊಂಚ ವಿಶ್ರಾಂತಿ ನೀಡಲಿದ್ದಾರೆ ಎಂದು ವರದಿಯಾಗಿದೆ.

ನ್ಯೂಜಿಲೆಂಡ್ ವಿರುದ್ಧದ ಟಿ 20 ಸರಣಿಯಲ್ಲಿ ಯುವಕರಿಗೆ ಅವಕಾಶ ಸಿಗಲಿದೆ ಪಿಟಿಐ ಸುದ್ದಿಯ ಪ್ರಕಾರ, ಹೆಚ್ಚಿನ ಭಾರತೀಯ ಆಟಗಾರರು, ಹಿರಿಯ ಆಟಗಾರರು ಕಳೆದ ನಾಲ್ಕು ತಿಂಗಳಲ್ಲಿ ಸತತ ಮೂರು ಬಯೋ-ಬಬಲ್ಸ್​ಗಳಲ್ಲಿದ್ದಾರೆ. ಟಿ 20 ವಿಶ್ವಕಪ್ ನಂತರ, ಅವರು ಡಿಸೆಂಬರ್ ಅಂತ್ಯದಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುಂಚಿತವಾಗಿ ವಿಶ್ರಾಂತಿ ಪಡೆಯಲಿದ್ದಾರೆ. ಕೊಹ್ಲಿ, ಬುಮ್ರಾ ಮತ್ತು ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗುವುದು ಎಂದು ಈಗಾಗಲೇ ನಿರ್ಧರಿಸಲಾಗಿದೆ. ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಯಿಂದಲೂ ಸತತವಾಗಿ ಆಡುತ್ತಿರುವ ರೋಹಿತ್ ಶರ್ಮಾ ಅವರಿಗೂ ವಿಶ್ರಾಂತಿ ಬೇಕಾಗುತ್ತದೆ ಆದರೆ ಕೊಹ್ಲಿ ಟಿ 20 ನಾಯಕತ್ವದಿಂದ ಕೆಳಗಿಳಿದ ನಂತರ ಕೆಲಸದ ಹೊರೆ ನಿರ್ವಹಣೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ರಿತುರಾಜ್ ಗಾಯಕ್ವಾಡ್, ಹರ್ಷಲ್ ಪಟೇಲ್, ಅವೇಶ್ ಖಾನ್ ಮತ್ತು ವೆಂಕಟೇಶ್ ಅಯ್ಯರ್ ಅವರಿಗೆ ಅವಕಾಶ ಸಿಗಬಹುದು.

ಮುಖ್ಯ ಕೋಚ್ ಜವಾಬ್ದಾರಿಯನ್ನು ದ್ರಾವಿಡ್ ಮತ್ತೊಮ್ಮೆ ವಹಿಸಿಕೊಳ್ಳುತ್ತಾರೆ! ನ್ಯೂಜಿಲ್ಯಾಂಡ್ ಸರಣಿಯಲ್ಲಿ ರಾಹುಲ್ ದ್ರಾವಿಡ್ ಹಂಗಾಮಿ ಕೋಚ್ ಆಗಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ರವಿಶಾಸ್ತ್ರಿಯವರ ಅಧಿಕಾರಾವಧಿ ಈ ತಿಂಗಳು ಟಿ 20 ವಿಶ್ವಕಪ್‌ನೊಂದಿಗೆ ಕೊನೆಗೊಳ್ಳಲಿದೆ. ಆದಾಗ್ಯೂ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾದ ದ್ರಾವಿಡ್ ಮುಂದಿನ ವರ್ಷದ ಅಂಡರ್ -19 ವಿಶ್ವಕಪ್‌ಗಾಗಿ ನೀಲನಕ್ಷೆಯನ್ನು ಸಿದ್ಧಪಡಿಸಬೇಕು. ಬಿಸಿಸಿಐ (ಭಾರತೀಯ ಕ್ರಿಕೆಟ್ ಮಂಡಳಿ) ಅವರು ಸಕಾಲದಲ್ಲಿ ಹೊಸ ತರಬೇತುದಾರರನ್ನು ನೇಮಿಸುವ ವಿಶ್ವಾಸವಿದೆ. ಭಾರತವು 17, 19 ಮತ್ತು 21 ನವೆಂಬರ್‌ನಲ್ಲಿ ಜೈಪುರ, ರಾಂಚಿ ಮತ್ತು ಕೋಲ್ಕತ್ತಾದಲ್ಲಿ ಮೂರು ಟಿ 20 ಪಂದ್ಯಗಳನ್ನು ಆಡಬೇಕಿದೆ.