AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೀಗೂ ಉಂಟೇ… ಒಂದೇ ಎಸೆತದಲ್ಲಿ 3 ರನೌಟ್ ಮಿಸ್

TNPL 2025: ತಮಿಳುನಾಡು ಪ್ರೀಮಿಯರ್ ಲೀಗ್​ನ 11ನೇ ಪಂದ್ಯದಲ್ಲಿ ದಿಂಡಿಗಲ್ ಡ್ರಾಗನ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಧುರೈ ಪ್ಯಾಂಥರ್ಸ್ ತಂಡವು 20 ಓವರ್​ಗಳಲ್ಲಿ 150 ರನ್ ಕಲೆಹಾಕಿತು.ಈ ಗುರಿಯನ್ನು 12.3 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ ದಿಂಡಿಗಲ್ ಡ್ರಾಗನ್ಸ್ 9 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿದೆ.

ಹೀಗೂ ಉಂಟೇ... ಒಂದೇ ಎಸೆತದಲ್ಲಿ 3 ರನೌಟ್ ಮಿಸ್
Tnpl 2025
ಝಾಹಿರ್ ಯೂಸುಫ್
|

Updated on: Jun 15, 2025 | 11:18 AM

Share

ಒಂದೇ ಎಸೆತದಲ್ಲಿ ಮೂರು ರನೌಟ್ ಚಾನ್ಸ್ ಮಿಸ್… ಇಂತಹದೊಂದು ಅಪರೂಪದ ಆಟಕ್ಕೆ ಸಾಕ್ಷಿಯಾಗಿದ್ದು ತಮಿಳುನಾಡು ಪ್ರೀಮಿಯರ್ ಲೀಗ್ (TNPL 2025). ಈ ಲೀಗ್​ನ 11ನೇ ಪಂದ್ಯದಲ್ಲಿ ದಿಂಡಿಗಲ್ ಡ್ರಾಗನ್ಸ್ ಮತ್ತು ಮಧುರೈ ಪ್ಯಾಂಥರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಸೇಲಂನ ಎಸ್​ಸಿಎಫ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ದಿಂಡಿಗಲ್ ಡ್ರಾಗನ್ಸ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಮಧುರೈ ಪ್ಯಾಂಥರ್ಸ್ 19 ಓವರ್​ಗಳಲ್ಲಿ ಕೇವಲ 131 ರನ್ ಕಲೆಹಾಕಿತ್ತು. ಆದರೆ ಕೊನೆಯ ಓವರ್​ನಲ್ಲಿ ದಿಂಡಿಗಲ್ ಡ್ರಾಗನ್ಸ್ ಫೀಲ್ಡರ್​ಗಳು ಮಾಡಿದ ಎಡವಟ್ಟಿನಿಂದಾಗಿ 18 ರನ್​ಗಳು ಮೂಡಿಬಂದವು. ಗಣೇಶ್ ಪೆರಿಯಸ್ವಾಮಿ ಎಸೆದ ಈ ಓವರ್​ನ 5ನೇ ಎಸೆತದಲ್ಲಿ ಗುಜರ್​ಪ್ನೀತ್ ಸಿಂಗ್ ಒಂದು ರನ್ ಕಲೆಹಾಕಿದರು.

ಆದರೆ ಈ ಒಂದು ರನ್​ ಕಲೆಹಾಕುವ ಮುನ್ನ ಡೈರೆಕ್ಟ್ ಹಿಟ್ ಮೂಲಕ ಗುಜರ್​ಪ್ನೀತ್ ಸಿಂಗ್ ಅವರನ್ನು ರನೌಟ್ ಮಾಡುವ ಅವಕಾಶ ಅಶ್ವಿನ್ ಅವರ ಮುಂದಿತ್ತು. ಆದರೆ ಅಶ್ವಿನ್ ಎಸೆದ ಚೆಂಡು ವಿಕೆಟ್​ಗೆ ತಾಗಲಿಲ್ಲ. ಅತ್ತ ಬೌಲರ್​ ಕೂಡ ಚೆಂಡನ್ನು ಹಿಡಿಯುವ ಪ್ರಯತ್ನ ಮಾಡಲಿಲ್ಲ.

ಚೆಂಡು ವಿಕೆಟ್ ದಾಟಿ ಹೋಗುತ್ತಿದ್ದಂತೆ ಗುಜರ್​ಪ್ನೀತ್ ಸಿಂಗ್ ಹಾಗೂ ರಾಜಲಿಂಗಂ 2ನೇ ರನ್ ಓಡಿದರು. ಈ ವೇಳೆ ಮತ್ತೊಮ್ಮೆ ರನೌಟ್ ಮಾಡುವ ಅವಕಾಶ ಒದಗಿತ್ತು. ಆದರೆ ವಿಕೆಟ್ ಕೀಪರ್ ಬರುವ ಮುನ್ನವೇ ಚೆಂಡು ವಿಕೆಟ್ ದಾಟಿಯಾಗಿತ್ತು.

ಚೆಂಡು ಬೌಂಡರಿಯತ್ತ ಸಾಗುತ್ತಿದ್ದಂತೆ ಗುಜರ್​ಪ್ನೀತ್ ಸಿಂಗ್ ಹಾಗೂ ರಾಜಲಿಂಗಂ 3ನೇ ರನ್ ಓಡಲಾರಂಭಿಸಿದರು. ಬೌಂಡರಿ ಲೈನ್​ನಿಂದ ಚೆಂಡು ನೇರವಾಗಿ ಬೌಲರ್​ನತ್ತ ತೂರಿ ಬಂತು. ಈ ವೇಳೆಯೂ ರನೌಟ್ ಮಾಡುವ ಅವಕಾಶವಿತ್ತು. ಆದರೆ ಬೌಲರ್ ಚೆಂಡನ್ನು ಹಿಡಿಯುವಲ್ಲಿ ವಿಫಲರಾದರು.

ಈ ಮೂಲಕ ಗುಜರ್​ಪ್ನೀತ್ ಸಿಂಗ್ ಹಾಗೂ ರಾಜಲಿಂಗಂ ಒಂದೇ ಎಸೆತದಲ್ಲಿ ಮೂರು ರನ್ ಓಡುವ ಮೂಲಕ 20 ಓವರ್​ಗಳಲ್ಲಿ  ಮಧುರೈ ಪ್ಯಾಂಥರ್ಸ್ ತಂಡದ ಮೊತ್ತವನ್ನು 150 ಕ್ಕೆ ತಂದು ನಿಲ್ಲಿಸಿದರು.

ರನೌಟ್ ಚಾನ್ಸ್ ಮಿಸ್ ವಿಡಿಯೋ:

ಗೆದ್ದು ಬೀಗಿದ ಅಶ್ವಿನ್ ಪಡೆ:

ಒಂದೇ ಎಸೆತದಲ್ಲಿ ಮೂರು ಬಾರಿ ರನೌಟ್ ಮಿಸ್ ಮಾಡಿ ನಗೆಪಾಟಲಿಗೀಡಾಗಿದ್ದ ದಿಂಡಿಗಲ್ ಡ್ರಾಗನ್ಸ್ ತಂಡವು ಬ್ಯಾಟಿಂಗ್​​ನಲ್ಲಿ ಭರ್ಜರಿ ಪ್ರದರ್ಶನ ನೀಡಿತು. ಮಧುರೈ ಪ್ಯಾಂಥರ್ಸ್ ನೀಡಿದ 150 ರನ್​ಗಳ ಗುರಿಯನ್ನು 12.3 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಇದನ್ನೂ ಓದಿ: ಸೋಲಿನ ಸರಪಳಿ ಬ್ರೇಕ್… 3 ತಂಡಗಳಿಗೆ ಒಲಿದ ಚಾಂಪಿಯನ್ ಪಟ್ಟ

ದಿಂಡಿಗಲ್ ಡ್ರಾಗನ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ರವಿಚಂದ್ರನ್ ಅಶ್ವಿನ್ 29 ಎಸೆತಗಳಲ್ಲಿ 49 ರನ್ ಬಾರಿಸಿದರೆ, ಶಿವಂ ಸಿಂಗ್ 41 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ ಅಜೇಯ 86 ರನ್ ಚಚ್ಚಿ ಮಿಂಚಿದರು.

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?