AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vaibhav Suryavanshi Net Worth: 14 ವರ್ಷದ ವೈಭವ್ ಸೂರ್ಯವಂಶಿ ನಿವ್ವಳ ಮೌಲ್ಯ ಎಷ್ಟು ಕೋಟಿ ಗೊತ್ತೇ?

18 ನೇ ಸೀಸನ್‌ನಲ್ಲಿ ಅವರ ಪ್ರದರ್ಶನವನ್ನು ನೋಡಿದರೆ, ಮುಂದಿನ ಸೀಸನ್‌ಗೂ ಫ್ರಾಂಚೈಸ್ ಅವರನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಇದರ ಹೊರತಾಗಿ, ಅವರು ದೇಶೀಯ ಕ್ರಿಕೆಟ್‌ನಿಂದಲೂ ಹಣ ಗಳಿಸುತ್ತಾರೆ. ಅವರು ಪಂದ್ಯದ ಶುಲ್ಕ ಮತ್ತು ಜಾಹೀರಾತುಗಳಿಂದಲೂ ಹಣವನ್ನು ಪಡೆಯುತ್ತಾರೆ. ಅವರ ಪ್ರಮುಖ ಆದಾಯದ ಮೂಲ ಐಪಿಎಲ್, ದೇಶೀಯ ಪಂದ್ಯ ಶುಲ್ಕ ಮತ್ತು ಜಾಹೀರಾತುಗಳು.

Vaibhav Suryavanshi Net Worth: 14 ವರ್ಷದ ವೈಭವ್ ಸೂರ್ಯವಂಶಿ ನಿವ್ವಳ ಮೌಲ್ಯ ಎಷ್ಟು ಕೋಟಿ ಗೊತ್ತೇ?
Vaibhav Suryavanshi Net Worth
ಪ್ರೀತಿ ಭಟ್​, ಗುಣವಂತೆ
| Updated By: Vinay Bhat|

Updated on:Jul 16, 2025 | 6:33 PM

Share

ಬೆಂಗಳೂರು (ಜು. 09): ಐಪಿಎಲ್ 2025 ಮುಗಿದು ಹಲವು ತಿಂಗಳುಗಳು ಕಳೆದಿವೆ, ಆದರೆ ವೈಭವ್ ಸೂರ್ಯವಂಶಿ (Vaibhav Suryavanshi) ಹೆಸರು ಪ್ರತಿದಿನ ಕೇಳಿ ಬರುತ್ತಲೇ ಇದೆ. ವೈಭವ್ ಐಪಿಎಲ್ 2025 ರಲ್ಲಿ ತಮ್ಮ ಬ್ಯಾಟ್‌ನಿಂದ ಅದ್ಭುತ ಪ್ರದರ್ಶನ ನೀಡಿದರು, ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಾ 35 ಎಸೆತಗಳಲ್ಲಿ ಬಿರುಗಾಳಿಯ ಶತಕ ಸಿಡಿಸಿ ಪ್ರಸಿದ್ಧಿ ಪಡೆದರು. ಐಪಿಎಲ್ ನಂತರವೂ ಅವರ ಫಾರ್ಮ್ ಮುಂದುವರೆದಿದೆ. ವೈಭವ್ ಪ್ರಸ್ತುತ ಇಂಗ್ಲೆಂಡ್‌ನಲ್ಲಿ 19 ವರ್ಷದೊಳಗಿನವರ ಯುವ ಏಕದಿನ ಸರಣಿಯನ್ನು ಆಡುತ್ತಿದ್ದಾರೆ. ಅಲ್ಲಿಯೂ ಅವರು ಬ್ಯಾಟ್‌ನಿಂದ ಸ್ಥಿರವಾಗಿ ರನ್ ಬರುತ್ತಿದೆ.

ಇಂಗ್ಲೆಂಡ್ ವಿರುದ್ಧದ ಯೂತ್ ಏಕದಿನ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಆರ್ಭಟ:

ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧ ನಡೆಯುತ್ತಿರುವ ಯೂತ್ ಏಕದಿನ ಸರಣಿಯಲ್ಲಿ, ವೈಭವ್ ಸೂರ್ಯವಂಶಿ ಇದುವರೆಗೆ ಆಡಿದ 4 ಪಂದ್ಯಗಳಲ್ಲಿ 80.50 ಸರಾಸರಿ ಮತ್ತು 198.76 ಸ್ಟ್ರೈಕ್ ರೇಟ್‌ನಲ್ಲಿ 322 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ, ಅವರು 1 ಶತಕ ಮತ್ತು 1 ಅರ್ಧಶತಕವನ್ನು ಸಿಡಿಸಿದ್ದಾರೆ. ಶನಿವಾರ ನಡೆದ ನಾಲ್ಕನೇ ಪಂದ್ಯದಲ್ಲಿ, ಅವರು 52 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದರು. ಇದರ ನಂತರ, ವೈಭವ್ ಮತ್ತೊಮ್ಮೆ ಸುದ್ದಿ ಆದರು. ಈ ಮಧ್ಯೆ, 14 ವರ್ಷದ ವೈಭವ್ ಸೂರ್ಯವಂಶಿಯ ನಿವ್ವಳ ಮೌಲ್ಯ ಎಷ್ಟು ಎಂಬುದು ನಿಮಗೆ ಗೊತ್ತೇ?.

ಇದನ್ನೂ ಓದಿ
Image
ಭಾರತಕ್ಕೆ ತಲೆನೋವಾದ ಲಾರ್ಡ್ಸ್ ಪಿಚ್: ಕೋಚ್​ನ ಮಾಸ್ಟರ್ ಪ್ಲ್ಯಾನ್ ಏ
Image
ಕ್ರಿಕೆಟ್ ತಂಡ ಖರೀದಿಸಿದ ಯುಜ್ವೇಂದ್ರ ಚಹಲ್ ಗೆಳತಿ
Image
ಜಸ್​ಪ್ರೀತ್ ಬುಮ್ರಾ ಇಲ್ಲದಿದ್ದಾಗ ಗೆಲ್ಲುವ ಟೀಮ್ ಇಂಡಿಯಾ
Image
ಪಾಕಿಸ್ತಾನ್ ತಂಡದಿಂದ ಬಾಬರ್ ಆಝಂಗೆ ಗೇಟ್ ಪಾಸ್

ವೈಭವ್ ಸೂರ್ಯವಂಶಿ ಎಷ್ಟೊಂದು ಕೋಟಿಗಳ ಒಡೆಯ

ಐಪಿಎಲ್ 2025 ಕ್ಕಿಂತ ಮೊದಲು ನಡೆದ ಮೆಗಾ ಹರಾಜಿನಲ್ಲಿ ವೈಭವ್ ಸೂರ್ಯವಂಶಿ ಮೊದಲು ಸದ್ದು ಮಾಡಿದರು. ಅಲ್ಲಿ ರಾಜಸ್ಥಾನ್ ರಾಯಲ್ಸ್ ವೈಭವ್ ಅವರನ್ನು 1.1 ಕೋಟಿಗೆ ಖರೀದಿಸಿತು. ಮಾಧ್ಯಮಗಳಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಬಿಹಾರದ ಸಮಷ್ಟಿಪುರ ನಿವಾಸಿ ವೈಭವ್ ಅವರ ನಿವ್ವಳ ಮೌಲ್ಯ 1 ರಿಂದ 1.5 ಕೋಟಿ ರೂ. ಗಳ ನಡುವೆ ಇದೆ. ರಾಜಸ್ಥಾನ್ ರಾಯಲ್ಸ್ ಅವರನ್ನು 1 ಕೋಟಿ 10 ಲಕ್ಷ ರೂ. ಗಳಿಗೆ ಖರೀದಿಸಿತ್ತು.

IND vs ENG: ಟೀಮ್ ಇಂಡಿಯಾಕ್ಕೆ ತಲೆನೋವಾದ ಲಾರ್ಡ್ಸ್ ಪಿಚ್: ಕೋಚ್​ನ ಮಾಸ್ಟರ್ ಪ್ಲ್ಯಾನ್ ಏನು?

18 ನೇ ಸೀಸನ್‌ನಲ್ಲಿ ಅವರ ಪ್ರದರ್ಶನವನ್ನು ನೋಡಿದರೆ, ಮುಂದಿನ ಸೀಸನ್‌ಗೂ ಫ್ರಾಂಚೈಸ್ ಅವರನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಇದರ ಹೊರತಾಗಿ, ಅವರು ದೇಶೀಯ ಕ್ರಿಕೆಟ್‌ನಿಂದಲೂ ಹಣ ಗಳಿಸುತ್ತಾರೆ. ಅವರು ಪಂದ್ಯದ ಶುಲ್ಕ ಮತ್ತು ಜಾಹೀರಾತುಗಳಿಂದಲೂ ಹಣವನ್ನು ಪಡೆಯುತ್ತಾರೆ. ಅವರ ಪ್ರಮುಖ ಆದಾಯದ ಮೂಲ ಐಪಿಎಲ್, ದೇಶೀಯ ಪಂದ್ಯ ಶುಲ್ಕ ಮತ್ತು ಜಾಹೀರಾತುಗಳು.

ವೈಭವ್ ಸೂರ್ಯವಂಶಿ ಮಾರ್ಚ್ 27, 2011 ರಂದು ಬಿಹಾರದ ಸಮಷ್ಟಿಪುರ ಜಿಲ್ಲೆಯ ತಾಜ್‌ಪುರ ಗ್ರಾಮದಲ್ಲಿ ಜನಿಸಿದರು. ವೈಭವ್ ಕೇವಲ ನಾಲ್ಕು ವರ್ಷದವನಿದ್ದಾಗ, ಅವರ ತಂದೆ ಸಂಜೀವ್ ಅವರಿಗೆ ಕ್ರಿಕೆಟ್ ಕಲಿಸಲು ಪ್ರಾರಂಭಿಸಿದರು. ಅವರ ತಂದೆ ಸ್ವತಃ ವೈಭವ್ ಅವರಿಗೆ ತರಬೇತಿ ನೀಡಿದರು. ನಂತರ, ವೈಭವ್ ಅವರನ್ನು ತಮ್ಮ ಹಳ್ಳಿಯಿಂದ ಸಾಕಷ್ಟು ದೂರದಲ್ಲಿರುವ ಸಮಷ್ಟಿಪುರದಲ್ಲಿರುವ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರು. ಬಳಿಕ ಅವರು ಪಾಟ್ನಾಗೆ ಹೋಗಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಚಿಕ್ಕ ವಯಸ್ಸಿನಲ್ಲಿ ವೈಭವ್ ಮಾಡಿದ ಕಠಿಣ ಪರಿಶ್ರಮ ಇಂದು ಅವರಿಗೆ ಫಲ ನೀಡುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:35 pm, Wed, 9 July 25

ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ